newsics.com
ಮೈಸೂರು: ಕರ್ನಾಟಕ ಅರಣ್ಯ ಇಲಾಖೆ ಬರೀ ಸಸಿ ನೆಟ್ಟು ಸುಮ್ಮನೇ ಕೂರುವ ಹಾಗಿಲ್ಲ. ಇನ್ನು ಮುಂದೆ ಸಸಿಗಳನ್ನು ನೆಡುವ ಜೊತೆಗೆ ಜಿಯೋ ಟ್ಯಾಗಿಂಗ್ ಮತ್ತು ಆಡಿಟ್ ಅಳವಡಿಸಬೇಕು.
ಏಕೆಂದರೆ, ಸಸಿಗಳ ಬೆಳವಣಿಗೆ ಎಲ್ಲಾ ರೀತಿಯ ಮಾಹಿತಿಯನ್ನು ಜಿಯೋ ಟ್ಯಾಗಿಂಗ್ ಮತ್ತು ಆಡಿಟ್ ಕಲೆ ಹಾಕಲಾಗುತ್ತದೆ.ಅದರಲ್ಲೂ ನೆಟ್ಟ ಸಸಿಗಳ ಪೈಕಿ ಎಷ್ಟು ಬದುಕು ಉಳಿದಿದೆ ಎಷ್ಟು ಸತ್ತು ಹೋಗಿದೆ ನಿಖರವಾದ ಮಾಹಿತಿ ಈ ಜಿಯೋ ಟ್ಯಾಕ್ ನೀಡುತ್ತದೆ.
ಇನ್ನೂ ಈ ಕುರಿತಾದ ವರದಿಯನ್ನು ಮೂರು ತಿಂಗಳ ಒಳಕ್ಕೆ ಸಾರ್ವಜನಿಕ ಲಭ್ಯವಾಗುವಂತೆ ಮಾಡಲು ಕರ್ನಾಟಕ ಅರಣ್ಯ ಇಲಾಖೆ ಸೂಚಿಸಿದೆ.ಮೈಸೂರಿನ ಮುಕ್ತಗಂಗೋತ್ರೀಯ ಸಭಾಂಗಣದಲ್ಲಿ ಎಚ್.ವಿ.ರಾಜೀವ್ ಸ್ನೇಹ ಬಳಗ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಲಕ್ಷ ವೃಕ್ಷ ಯೋಜನಾ ಕಾರ್ಯಕ್ರಮದಲ್ಲಿ ಕರ್ನಾಟಕ ಅರಣ್ಯ ಇಲಾಖೆ , ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಸಚಿವ ಈಶ್ವರ ಖಂಡ್ರೆ ಈ ವಿಷಯವನ್ನು ತಿಳಿಸಿದರು.
5 ಕೋಟಿ ಸಸಿ ನೆಟ್ಟು ಪೋಷಿಸುವ ಸಂಕಲ್ಪ ಮಾಡಿ,5 ಕೋಟಿ 40 ಲಕ್ಷಕ್ಕೂ ಅಧಿಕ ಸಸಿ ನೆಟ್ಟು ಗುರಿ ಮಾಡಿದ ಸಾಧನೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಅವುಗಳ ಆಡಿಟಿಂಗ್ ಕೂಡ ನಡೆದಿದೆ. ಜಾಗತಿಕ ತಾಪಮಾನ ಏರಿಕೆಗೆ ಇಂಗಾಲದ ಡೈಆಕ್ಸೈಡ್, ಹಸಿರು ಮನೆ ಅನಿಲಗಳು ಕಾರಣ. ನಾವು ಹೆಚ್ಚು ಹೆಚ್ಚು ಗಿಡ, ಮರ ಬೆಳೆಸಿದರೆ ಮಾತ್ರವೇ ತಾಪಮಾನ ಏರಿಕೆ ತಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಮೈಸೂರಿನ ರಾಜೀವ್ ಸ್ನೇಹ ಬಳಗ ಮಾಡುತ್ತಿರುವ ಕಾರ್ಯ ಅಭಿನಂದನಾರ್ಹ ಮತ್ತು ಅನುಕರಣೀಯ ಎಂಬುದು ಖಂಡ್ರೆ ಹೇಳಿದ್ದಾರೆ.
ಬೆಂಗಳೂರಿನ ಕೈನಾ ಖರೆ ಈಗ ಜಗತ್ತಿನ ಅತಿ ಕಿರಿಯ ಮಹಿಳಾ ಮಾಸ್ಟರ್ ಸ್ಕೂಬಾ ಡೈವರ್! ವಿಡಿಯೋ ನೋಡಿ