ಚಾಮುಂಡೇಶ್ವರಿಗೆ 10 ಸಾವಿರ ಹೋಳಿಗೆಯ ಅಲಂಕಾರ

newsics.com ಮಂಡ್ಯ : ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯ್ತು. ಆಷಾಢ ಮಾಸದ ಮೂರನೇ ಶುಕ್ರವಾರದ ಹಿನ್ನೆಲೆ ಮಂಡ್ಯದ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಾಲಯದಲ್ಲಿ 10 ಸಾವಿರ ಹೋಳಿಗೆ , 1 ಸಾವಿರ ಕಜ್ಜಾಯದ ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡೇಶ್ವರಿಯನ್ನ ಕಂಡು ಭಕ್ತರು ಪುನೀತರಾದರು. ದೇವಿ ಅಲಂಕಾರಕ್ಕೆ ಬಳಸಿದ ಹೋಳಿಗೆಗಳನ್ನ ನಾಳೆ ಭಕ್ತರಿಗೆ ಪ್ರಸಾದವಾಗಿ ವಿತರಣೆ ಮಾಡಲಾಗುತ್ತದೆ..