ಕೇರಳ ಭೂಕುಸಿತ ಸಂಭವಿಸಿ ಇಂದಿಗೆ 4 ದಿನ: ಅವಶೇಷದಡಿ ಜೀವಂತವಾಗಿ ಬದುಕುಳಿದ ನಾಲ್ವರು

newsics.com ಕೇರಳ: ವಯನಾಡಿನಲ್ಲಿ ಭೂಕುಸಿತ ಸಂಭವಿಸಿ ಇಂದಿಗೆ ನಾಲ್ಕು ದಿನ. ಆದರೆ ಅವಶೇಷದಡಿ ಜೀವಂತವಾಗಿ ನಾಲ್ವರು ಬದುಕುಳಿದಿದ್ದಾರೆ. ಭಾರತೀಯ ಸೇನೆ ನಾಲ್ಕು ದಿನಗಳ ಬಳಿಕ ಮನೆಯೊಂದರ ಅವಶೇಷದಡಿ ನಾಲ್ವರನ್ನು ಪತ್ತೆ ಮಾಡಿದ್ದು, ಅವರನ್ನು ರಕ್ಷಿಸುವ ಮೂಲಕ ಜೀವ ಉಳಿಸಿದೆ. ಪಟವೆಟ್ಟಿನ್ನುನ್ ಪ್ರದೇಶದಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಪತ್ತೆಯಾಗಿದ್ದಾರೆ. ಅವರನ್ನು ಕಂಜಿರಕಥೋಟೆ ಕುಟುಂಬದ ಜಾನಿ, ಜೋಮೋಲ್, ಅಬ್ರಹಾಂ ಮತ್ತು ಕ್ರಿಸ್ಟಿ ಎಂದು ಗುರುತಿಸಲಾಗಿದೆ. ಭಾರತೀಯ ಸೇನೆ ಅವರನ್ನು ರಕ್ಷಿಸಿ ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ. … Continue reading ಕೇರಳ ಭೂಕುಸಿತ ಸಂಭವಿಸಿ ಇಂದಿಗೆ 4 ದಿನ: ಅವಶೇಷದಡಿ ಜೀವಂತವಾಗಿ ಬದುಕುಳಿದ ನಾಲ್ವರು