newsics.com
ಹೈದರಾಬಾದ್ : ಟಾಲಿವುಡ್ ನಟ ರಾಜ್ ತರುಣ್ ಹಾಗೂ ನಟಿ ಲಾವಣ್ಯ ನಡುವಿನ ಭಿನ್ನಾಭಿಪ್ರಾಯವೀಗ ವಿಕೋಪಕ್ಕೆ ತಿರುಗಿದೆ.
ಖಾಸಗಿ ಟಿವಿಯ ಸಂದರ್ಶನದಲ್ಲಿ ಆಕೆ ಭಾಗಿಯಾಗಿದ್ದರು. ಇಲ್ಲಿ ರಾಜ್ ತರುಣ್ ಪರವಾಗಿ ಮಾತನಾಡಲು ಅವರ ಸ್ನೇಹಿತ ಶೇಖರ್ ಬಾಷಾ ಬಂದಿದ್ದರು. ಲೈವ್ ಡಿಬೇಟ್ನಲ್ಲಿ ವಾದ ವಿವಾದ ಯಾವ ಮಟ್ಟಕ್ಕೆ ಹೋಗಿತ್ತೆಂದರೆ, ಒಂದು ಹಂತದಲ್ಲಿ ಶೇಖರ್ ಬಾಷಾ ಮಾತಿಗೆ ಸಿಟ್ಟಾದ ಲಾವಣ್ಯಾ ಆನ್ ಕ್ಯಾಮೆರಾದಲ್ಲಿಯೇ ಶೇಖ್ ಪಾಶಾಗೆ ಕಾಲಲ್ಲಿದ್ದ ಚಪ್ಪಲಿ ತೆಗೆದು ಹೊಡೆದಿದ್ದರು.
ಈ ವಿಡಿಯೋವಿಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಝೀ ತೆಲುಗು ನ್ಯೂಸ್ನಲ್ಲಿ ನಡೆದ ಆಕ್ರೋಶದ ಡಿಬೇಟ್ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ, ಕಳೆದೆರಡು ವಾರಗಳಿಂದ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ತರುಣ್ ಅವರನ್ನು ಸಮರ್ಥಿಸಿಕೊಳ್ಳುತ್ತಿರುವ ಬಾಷಾ ಅವರನ್ನು ಲಾವಣ್ಯ ಅವರ ಪ್ರತಿ ಮಾತಿಗೂ ಉತ್ತರ ನೀಡುತ್ತಿದ್ದರು. ಈ ವೇಳೆ ಈ ಘಟನೆ ನಡೆದಿದೆ.