newsics.com
ಶುಭೋದಯ
04-08-2024, ಭಾನುವಾರ
ಈ ದಿನ- ನಿತ್ಯ ಪಂಚಾಂಗ
ದಿನ ವಿಶೇಷ:
– ಶ್ರಾವಣ ಅಮಾವಾಸ್ಯೆ
– ಅಂತಾರಾಷ್ಟ್ರೀಯ ಸ್ನೇಹ ದಿನ
—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ- ದಕ್ಷಿಣಾಯನ
ದಿನಾಂಕ – 04/08/2024
ತಿಂಗಳು – ಆಗಸ್ಟ್
ಬಣ್ಣ – ಕೆಂಪು
ವಾರ – ಭಾನುವಾರ
ತಿಥಿ – ಅಮಾವಾಸ್ಯೆ 16:41:57
ಪಕ್ಷ – ಕೃಷ್ಣ
ನಕ್ಷತ್ರ – ಪುಷ್ಯ 13:25:09
ಯೋಗ – ಸಿದ್ಧಿ 10:36:49
ಕರಣ – ನಾಗವ 16:41:57
ಕರಣ – ಕಿಂಸ್ತುಘ್ನ 29:18:45*
ತಿಂಗಳು (ಅಮಾವಾಸ್ಯಾಂತ್ಯ) ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಶ್ರಾವಣ
ಚಂದ್ರ ರಾಶಿ ಕರ್ಕಾಟಕ
ಸೂರ್ಯ ರಾಶಿ ಕರ್ಕಾಟಕ
ಋತು ಗ್ರೀಷ್ಮ
ಸೂರ್ಯೋದಯ 06:06:58
ಸೂರ್ಯಾಸ್ತ 18:44:16
ಹಗಲಿನ ಅವಧಿ 12:37:17
ರಾತ್ರಿಯ ಅವಧಿ 11:22:52
ಚಂದ್ರೋದಯ 06:26:36
ಚಂದ್ರಾಸ್ತ 18:54:56
ರಾಹು ಕಾಲ 17:10 – 18:44 ಅಶುಭ
ಯಮಗಂಡ ಕಾಲ 12:26 – 14:00 ಅಶುಭ
ಗುಳಿಕ ಕಾಲ 15:35 – 17:10
ಅಭಿಜಿತ್ 12:00 – 12:51 ಶುಭ
ದುರ್ಮುಹೂರ್ತ 17:03 – 17:54 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***
***
ಈ ದಿನದ ಮಾತು
ಒಳ್ಳೆಯ ಕೆಲಸ ಮಾಡಲಾರದೆ ಯಾರು ದೊಡ್ಡವರೆನಿಸಿಕೊಂಡಿಲ್ಲ. ಹಾಗೆಯೇ ಒಳ್ಳೆಯ ಕೆಲಸ ಮಾಡುವವರನ್ನು ಜಗತ್ತು ಯಾವತ್ತಿಗೂ ಚಿಕ್ಕವನೆಂದು ನಿರ್ಲಕ್ಷ್ಯ ಮಾಡುವುದಿಲ್ಲ.
***
ಇಂದಿನ ಇತಿಹಾಸ
ಆಗಸ್ಟ್ 04
ಅಂತಾರಾಷ್ಟ್ರೀಯ ಗೆಳೆತನದ ದಿನ (ಸ್ನೇಹ ದಿನ)
🎊
ಫ್ರೆಂಡ್ಶಿಪ್ ಡೇ ಆಚರಿಸಲು ಒಂದು ದಿನ. ಅನೇಕ ದಕ್ಷಿಣ ಅಮೆರಿಕದ ದೇಶಗಳಲ್ಲಿ ಹಲವು ವರ್ಷಗಳಿಂದ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ವಾರ್ಷಿಕವಾಗಿ ಜುಲೈ 30 ರಂದು ಆಚರಿಸಲಾಗುತ್ತದೆ. ಭಾರತ, ಸೇರಿದಂತೆ ಕೆಲವು ದೇಶಗಳು ಆಗಸ್ಟ್ ಮೊದಲ ಭಾನುವಾರ (ಆಗಸ್ಟ್ 04) ಅಂತಾರಾಷ್ಟ್ರೀಯ ಗೆಳೆತನದ ದಿನವನ್ನಾಗಿ ಆಚರಿಸುತ್ತವೆ.
ವಿಶೇಷವಾಗಿ ಪರುಗ್ವೆನಲ್ಲಿ, ಮೊದಲ ವಿಶ್ವ ಸ್ನೇಹ ದಿನ – ಅಂತಾರಾಷ್ಟ್ರೀಯ ಸ್ನೇಹ ದಿನವನ್ನು 1958 ರಲ್ಲಿ ಪ್ರಸ್ತಾಪಿಸಲಾಯಿತು. ಆರಂಭದಲ್ಲಿ ಶುಭಾಶಯ ಪತ್ರ ಉದ್ಯಮದಿಂದ ರಚಿಸಲ್ಪಟ್ಟಿದೆ. 1935 ರಲ್ಲಿ ಯು.ಎಸ್.ನಲ್ಲಿ ಹುಟ್ಟಿದ ಸ್ನೇಹಿತರ ಗೌರವಾರ್ಥವಾಗಿ ಒಂದು ದಿನವನ್ನು ಅರ್ಪಿಸುವ ಸಂಪ್ರದಾಯವನ್ನು ನಿರೂಪಿಸಲಾಯಿತು. ಆದರೆ ಇದು ನಿಜವಾಗಿ 1919ರಿಂದ ಆರಂಭವಾಯಿತು.
ಪ್ರಮುಖ ಘಟನೆಗಳು
* ಹ್ಯಾನ್ಸ್ ಕ್ರಿಶ್ಚಿಯನ್ ಆಂಡರ್ಸನ್ – ಡೆನ್ಮಾರ್ಕಿನ ಸಾಹಿತಿ, ಜಗತ್ಪ್ರಸಿದ್ಧ ಮಕ್ಕಳ ಕಥೆಗಳ ಲೇಖಕ. ಕಟ್ಟು ಕಥೆಗಳ ‘ಮಾಸ್ಟರ್’ ಹ್ಯಾನ್ಸ್ ಕ್ರಿಸ್ಟಿಯನ್ ಆಂಡರ್ಸನ್ ಅವರು ಆಗಸ್ಟ್ 04, 1875 ರಂದು ಕೊಪೆನ್ ಹೇಗನ್ ನಲ್ಲಿ ತಮ್ಮ 70ನೇ ವಯಸ್ಸಿನಲ್ಲಿ ನಿಧನರಾದರು. ಇವರು ರಚಿಸಿದ ಕಟ್ಟುಕಥೆಗಳು ಜಗತ್ತಿನಾದ್ಯಂತ ಜನಪ್ರಿಯವಾಗಿವೆ.
* ಕಿಶೋರ್ ಕುಮಾರ್ – ಆಗಸ್ಟ್ 04, 1929 ರಂದು ಜನಿಸಿದರು. ಒಬ್ಬ ಭಾರತದ ಚಲನಚಿತ್ರ ಹಿನ್ನೆಲೆ ಗಾಯಕ ಮತ್ತು ನಟ. ಅವರು ಒಬ್ಬ ಗೀತಕಾರ, ಸಂಗೀತ ರಚನೆಕಾರ, ನಿರ್ಮಾಪಕ, ನಿರ್ದೇಶಕ, ಚಲನಚಿತ್ರ ಬರಹಗಾರ, ಚಿತ್ರಸಾಹಿತ್ಯ ಲೇಖಕರಾಗಿ ಕೂಡ ಗಮನಾರ್ಹ ಯಶಸ್ಸು ಸಾಧಿಸಿದರು. ಕಿಶೋರ್ ಕುಮಾರ್ ಒಬ್ಬ ಸಮೃದ್ಧಭರಿತ ಗಾಯಕರಾಗಿದ್ದರು ಮತ್ತು ಹಿಂದಿ, ಬಂಗಾಳಿ, ಮರಾಠಿ, ಅಸ್ಸಾಮೀ, ಗುಜರಾತಿ, ಕನ್ನಡ, ಭೋಜ್ಪುರಿ, ಮಳಯಾಳಮ್ ಮತ್ತು ಒರಿಯಾ ಸಹಿತ ಹಲವಾರು ಭಾರತೀಯ ಭಾಷೆಗಳಲ್ಲಿ ಹಾಡಿದ್ದರು. ಮೊಹಮ್ಮದ್ ರಫೀ, ಮತ್ತು ಮುಕೇಶ್ರೊಂದಿಗೆ, ಅವರು ೧೯೫೦ರ ದಶಕದಿಂದ 1980ರ ದಶಕದ ಮಧ್ಯದವರೆಗೆ ಬಾಲಿವುಡ್ನ ಪ್ರಧಾನ ಪುರುಷ ಹಿನ್ನೆಲೆ ಗಾಯಕರಲ್ಲಿ ಒಬ್ಬರಾಗಿದ್ದರು.
* ಆಗಸ್ಟ್ 04, 1956 ರಂದು ಭಾರತದ ಮೊಟ್ಟ ಮೊದಲ ಪರಮಾಣು ಸಂಶೋಧನಾ ರಿಯಾಕ್ಟರ್ ‘ಅಪ್ಸರಾ’ ಟ್ರಾಂಬೆಯಲ್ಲಿ ಕಾರ್ಯಾರಂಭ ಮಾಡಿತು.
* ಬರಾಕ್ ಒಬಾಮ – ಆಗಸ್ಟ್ 04, 1961 ರಂದು ಜನಿಸಿದರು. ಅಮೆರಿಕ ದೇಶದ ೪೪ನೇ ರಾಷ್ಟಪತಿ. ಇದಕ್ಕೆ ಮುಂಚೆ ಇಲಿನೊಯ್ ರಾಜ್ಯದ ಸೆನೆಟರ್ ಆಗಿದ್ದರು. ಇವರು ಡೆಮೊಕ್ರೆಟಿಕ್ ಪಕ್ಷಕ್ಕೆ ಸೇರಿರುವರು. ಕೊಲಂಬಿಯ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ ಕಾನೂನು ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ಈತ ಇಲಿನೊಯ್ ರಾಜ್ಯದ ವಿಧಾನ ಸಭೆಯಲ್ಲಿ 1997ರಿಂದ 2004ರವರೆಗೆ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದರು. 2004ರಲ್ಲಿ ಸೆನೆಟ್ಗೆ ಆಯ್ಕೆಯಾದರು. ನವೆಂಬರ್ 4, 2008ರಂದು ನಡೆದ ಚುನಾವಣೆಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿ ಆಯ್ಕೆಯಾದರು. ಅಮೆರಿಕದ ‘ಪ್ರಪ್ರಥಮ ಆಫ್ರೋ ಅಮೆರಿಕನ್’ ಮೂಲದ 48 ವರ್ಷದ ಬರಾಕ್ ಒಬಾಮಾ ಅವರಿಗೆ, ಪ್ರತಿಷ್ಠಿತ, ‘ನೋಬೆಲ್ ಶಾಂತಿ ಪ್ರಶಸ್ತಿ,’ಯನ್ನು ಡಿಸೆಂಬರ್, 10ರಂದು ಓಸ್ಲೋನಲ್ಲಿ ವಿತರಿಸಲಾಯಿತು.
* ಆಗಸ್ಟ್ 04, 1967 ರಂದು ವಿಶ್ವದ ಅತಿ ಉದ್ದ ಮತ್ತು ಎತ್ತರದ ಅಣೆಕಟ್ಟಾದ “ನಾಗಾರ್ಜುನ ಸಾಗರ”ವನ್ನು ಉದ್ಘಾಟಿಸಲಾಯಿತು.