newsics.com
ಬೆಂಗಳೂರು: ದರ್ಶನ್ ಬಂಧನ ಆಗಿ 60 ದಿನ ಕಳೆದು ಹೋಗಿದೆ. ದರ್ಶನ್, ಪವಿತ್ರಾಗೌಡ ಸೇರಿ ಎಲ್ಲರೂ ಜೈಲುಪಾಲಾಗಿ 50 ದಿನ ಆಗಿದೆ. 50 ದಿನದಿಂದ ಜೈಲಲ್ಲಿರೋ ಡಿ ಗ್ಯಾಂಗ್ಗೆ ನೆಮ್ಮದಿನೇ ಇಲ್ಲ..
ಇದರ ಬೆನ್ನಲ್ಲೇ ಈಗ ನಟ ಚಿಕ್ಕಣ್ಣ ಅವರಿಗೆ ಸಂಕಷ್ಟ ಎದುರಾಗಿದ್ದು, ಪ್ರಕರಣದಲ್ಲಿ ಪೊಲೀಸರು ಅವರ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದಾರೆ. CrPC 164ರ ಅಡಿಯಲ್ಲಿ ನ್ಯಾಯಾಲಯದ ಎದುರು ಪೊಲೀಸರು ನಟ ಚಿಕ್ಕಣ್ಣ ಅವರ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದು,ಇದರಿಂದ ಡೆವಿಲ್ ಗ್ಯಾಂಗ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಪ್ರಕರಣ ನಡೆದ ದಿನ ಚಿಕ್ಕಣ್ಣ ಅವರು ದರ್ಶನ್ ಅವರೊಂದಿಗೆ ಪಾರ್ಟಿಯಲ್ಲಿ ಭಾಗಿಯಾಗಿದ್ದರಂತೆ. ಅಂದು ಪಾರ್ಟಿಯಲ್ಲಿ ಏನೆಲ್ಲಾ ಆಯ್ತು? ದರ್ಶನ್ ಯಾವಾಗ ಬಂದಿದ್ದರು, ಯಾವಾಗ ಹೋದರು, ಆ ವೇಳೆ ಏನೆಲ್ಲಾ ಚರ್ಚೆ ಆಯ್ತು ಎಂಬ ಬಗ್ಗೆ ಪೊಲೀಸರು ಚಿಕ್ಕಣ್ಣ ಅವರನ್ನು ಕರೆದು ಈ ಹಿಂದೆ ವಿಚಾರಣೆ ನಡೆಸಿದ್ದರು. ನ್ಯಾಯಾಲಯದ ಎದುರು ಹೇಳಿಕೆ ದಾಖಲಾಗಿರುವ ಕಾರಣ ಪ್ರಕರಣದಲ್ಲಿ ಇದು ಕೂಡ ಪ್ರಮುಖ ಸಾಕ್ಷಿಯಾಗಲಿದೆಯಂತೆ. ಮುಂದಿನ ದಿನಗಳಲ್ಲಿ ಹೇಳಿಕೆ ಬದಲಾಗದಂತೆ ಮಾಡಲು ಚಿಕ್ಕಣ್ಣ ಅವರ ಹೇಳಿಕೆಯನ್ನು ನ್ಯಾಯಾಧೀಶರ ಎದುರೇ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ.
ಕಾಲೇಜಲ್ಲೇ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ: ಓರ್ವನ ಬಂಧನ, ಭಾರೀ ಪ್ರತಿಭಟನೆ
ಹೃತಿಕ್ ಜೊತೆಗಿನ ಲಿಪ್ ಲಾಕ್ ಬಳಿಕ ಐಶ್ವರ್ಯಾ ರೈ ಬದುಕಲ್ಲಿ ಆಗಿದ್ದೇನು!
ಸೀಸನ್ 11ರ ನಿರೂಪಣೆಗೆ ಕಿಚ್ಚ ಡೌಟ್;ಕನ್ನಡ ಬಿಗ್ ಬಾಸ್ ಬಗ್ಗೆ ಚರ್ಚೆ ಜೋರು!
ತನ್ನದೇ ಹಸ್ತಮೈಥುನ ವಿಡಿಯೋ ಕಳುಹಿಸಿ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕಿ ಅರೆಸ್ಟ್!