newsics.com
ನಟಿ ಶ್ವೇತಾ ಬಸು ಪ್ರಸಾದ್ ಅವರು ಕಿರುತೆರೆಯಿಂದ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 2002 ರಲ್ಲಿ ‘ಮಕ್ದೀ’ ಚಿತ್ರದ ಮೂಲಕ ಬಾಲ ಕಲಾವಿದೆಯಾಗಿ ಬಾಲಿವುಡ್ಗೆ ಎಂಟ್ರಿ ಕೊಟ್ರು, ಅದಕ್ಕೂ ಕಿರುತೆರೆಯಲ್ಲಿ ಫೇಮಸ್ ಆಗಿದ್ರು. ‘ಮಕ್ದೀ’ ಚಿತ್ರದಲ್ಲಿನ ಅಭಿನಯಕ್ಕೆ ಅತ್ಯುತ್ತಮ ಬಾಲ ಕಲಾವಿದೆ ಪ್ರಶಸ್ತಿಯನ್ನು ಪಡೆದರು.
ಜಮ್ಶೆಡ್ಪುರದಲ್ಲಿ ನಟಿ ಶ್ವೇತಾ ಬಸು ಪ್ರಸಾದ್ ಜಾರ್ಖಂಡ್ನಲ್ಲಿ ಜನಿಸಿದರು. ಬಳಿಕ ಅವ್ರ ಇಡೀ ಕುಟುಂಬ ಮುಂಬೈನಲ್ಲಿ ನೆಲೆಸಿತು. ಶ್ವೇತಾ ತನ್ನ ಚಿಕ್ಕ ವಯಸ್ಸಿನಲ್ಲೇ ಬಣ್ಣ ಹಚ್ಚಿದ್ರು. ಬಳಿಕ ಬಾಲಿವುಡ್ಗೂ ಎಂಟ್ರಿ ಕೊಟ್ಟರು. ನಟಿ ಶ್ವೇತಾ ಬಸು ಪ್ರಸಾದ್ ‘ಕಹಾನಿ ಘರ್ ಘರ್ ಕಿ’ ಮತ್ತು ‘ಕರಿಷ್ಮಾ ಕಾ ಕರಿಷ್ಮಾ’ ಟಿವಿ ಶೋಗಳಿಗೆ ಸಾಕಷ್ಟು ಮೆಚ್ಚುಗೆಯನ್ನು ಪಡೆದರು. 2005 ರಲ್ಲಿ ನಿರ್ದೇಶಕ ನಾಗೇಶ್ ಕುಕುನೂರ್ ‘ಇಕ್ಬಾಲ್’ ಸಿನಿಮಾ ಆಫರ್ ನೀಡಿದ್ರು. ಬಳಿಕ ‘ಖದೀಜಾ’ ಪಾತ್ರದೊಂದಿಗೆ ಶ್ವೇತಾ ಬಿಗ್ ಸ್ಕ್ರೀನ್ನಲ್ಲಿ ಮಿಂಚಿದ್ರು. ‘ಇಕ್ಬಾಲ್’ ಚಿತ್ರಕ್ಕಾಗಿ ಅವರು ‘5 ನೇ ಕರಾಚಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.
2014ರ ಸೆಪ್ಟೆಂಬರ್ನಲ್ಲಿ ಪೊಲೀಸ್ ರೇಡ್ ವೇಳೆ ಶ್ವೇತಾ ಅವರನ್ನು ಹೈದರಾಬಾದ್ನ ಹೋಟೆಲ್ನಿಂದ ಬಂಧಿಸಿ ಕರೆತರಲಾಗಿತ್ತು. ವೇಶ್ಯಾವಾಟಿಕೆ ಆರೋಪದ ಮೇಲೆ ಆಕೆಯನ್ನು ಪೊಲೀಸರು ಬಂಧಿಸಿ, ಎರಡು ತಿಂಗಳ ಕಾಲ ರೆಸ್ಕೂ ರೂಮ್ಗೆ ಕಳುಹಿಸಿದ್ರು. ಅದೇ ವರ್ಷ ಡಿಸೆಂಬರ್ ನಲ್ಲಿ ಹೈದರಾಬಾದ್ನ ಮೆಟ್ರೋಪಾಲಿಟನ್ ಸೆಷನ್ಸ್ ಕೋರ್ಟ್ (ನಾಂಪಲ್ಲಿ) ಅವರ ವಿರುದ್ಧದ ಎಲ್ಲಾ ಆರೋಪಗಳನ್ನು ವಜಾಗೊಳಿಸಿತ್ತು. ಜೈಲಿನಿಂದ ರಿಲೀಸ್ ಆದ ಬಳಿಕ ನಟಿ ಶ್ವೇತಾ ಸಂತೋಷಂ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ರು, ನನ್ನ ಮೇಲೆ ಮಾಡಿದ ಆರೋ ಸುಳ್ಳು ಸಂಘಟಕರು ತನಗಾಗಿ ಏರ್ಪಡಿಸಿದ ಹೋಟೆಲ್ನಲ್ಲಿ ಉಳಿದುಕೊಂಡಿದ್ದೇ ಎಂದು ಹೇಳಿದರು.