newsics.com
ಆರೋಗ್ಯವಾಗಿ ಮತ್ತು ಸಂತೋಷವಾಗಿರಲು ಎಲ್ಲರೂ ಬಯಸುತ್ತಾರೆ. ಇದಕ್ಕಾಗಿಯೇ ಎಲ್ಲರೂ ಶ್ರಮಿಸುತ್ತಾರೆ. ಆದರೆ ಕೆಲವೊಮ್ಮೆ ನಾವು ಎಷ್ಟೇ ಪ್ರಯತ್ನಿಸಿದರೂ ನಮಗೆ ಬೇಕಾದ ರೀತಿಯಲ್ಲಿ ಬದುಕಲು ಆಗುವುದಿಲ್ಲ. ಜೀವನದಲ್ಲಿ ಯಾವಾಗಲೂ ಕಷ್ಟಗಳು ಇದ್ದೇ ಇರುತ್ತವೆ. ಅನಗತ್ಯ ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ನಾವು ಮಾಡುವ ಸಣ್ಣಪುಟ್ಟ ತಪ್ಪುಗಳೇ ಇಂತಹ ತೊಂದರೆಗೆ ಕಾರಣ ಎಂದು ವಾಸ್ತುಶಾಸ್ತ್ರವಲ್ಲದೇ ಹಿರಿಯರೂ ಹೇಳುತ್ತಾರೆ. ಸಂಜೆ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡಬಾರದು. ಇದರಿಂದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ ಎಂಬ ನಂಬಿಕೆಯಿದೆ.
ಮಲಗಬೇಡಿ:
ಸೂರ್ಯಾಸ್ತದ ವೇಳೆ ಮಲಗಬಾರದು. ಈ ಸಮಯದಲ್ಲಿ ದೇವತೆಗಳನ್ನು ಪೂಜಿಸಬೇಕು. ಲಕ್ಷ್ಮಿ ದೇವಿಗೆ ಈ ಸಮಯದಲ್ಲಿ ಮಲಗಿದರೆ ಇಷ್ಟವಾಗುವುದಿಲ್ಲ. ಹೀಗೆ ಮಾಡಿದರೆ ಮನೆಯಲ್ಲಿ ಬಡತನ ಬರುತ್ತದೆ ಎನ್ನಲಾಗುತ್ತದೆ.
ಬಟ್ಟೆ ಒಗೆಯಬೇಡಿ:
ಸೂರ್ಯ ಮುಳುಗುವ ಸಮಯದಲ್ಲಿ ಬಟ್ಟೆ ಒಗೆಯುವುದು ತುಂಬಾ ಅಶುಭ. ಬದಲಾಗಿ, ಸಂಜೆಯ ಮೊದಲು ಕೆಲವು ಗಂಟೆಗಳ ಮೊದಲು ಬಟ್ಟೆ ಒಗೆಯುವ ಕೆಲಸವನ್ನು ಮಾಡಬೇಕು. ಸಂಜೆ ಅಥವಾ ರಾತ್ರಿ ಬಟ್ಟೆ ಒಗೆಯುವುದು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.
ಕಸ ಗುಡಿಸದಿರಿ, ನೆಲ ಒರೆಸದಿರಿ:
ಸಂಜೆಯಾದರೆ ಯಾವುದೇ ಸಂದರ್ಭದಲ್ಲೂ ಮನೆ ಗುಡಿಸಿ ಒರೆಸುವ ಕೆಲಸ ಮಾಡಬಾರದು. ಏಕೆಂದರೆ ಲಕ್ಷ್ಮಿ ದೇವಿಯು ಶುದ್ಧ ಸ್ಥಳಗಳಲ್ಲಿ ಮಾತ್ರ ಇರುತ್ತಾಳೆ. ಆದ್ದರಿಂದ, ಮಧ್ಯಾಹ್ನದ ಒಳಗೇ ಶುಚಿಗೊಳಿಸುವಿಕೆಯನ್ನು ಮಾಡಿ ಮುಗಿಸಿ. ಸಂಜೆ ಮನೆಯನ್ನು ಶುಚಿಗೊಳಿಸಿದರೆ ಸಂಪತ್ತು ಸಿಗುವುದಿಲ್ಲ. ಗೌರವ ಇರುವುದಿಲ್ಲ ಬದಲಾಗಿ ಮನೆಯಲ್ಲಿ ಜಗಳ ಇರುತ್ತದೆ.
ಲೈಂಗಿಕ ಸಂಪರ್ಕ ಬೇಡ:
ಪುರುಷರು ಮತ್ತು ಮಹಿಳೆಯರು ಸಂಜೆ ದೈಹಿಕ ಸಂಪರ್ಕವನ್ನು ಹೊಂದಬಾರದು. ಇದರಿಂದ ದೇವರಿಗೆ ಕೋಪ ಬರುವುದಲ್ಲದೆ ಈ ಸಮಯದಲ್ಲಿ ಹುಟ್ಟಿದ ಮಗುವಿನ ಜೀವನವೂ ನೋವಿನಿಂದ ಕೂಡಿರುತ್ತದೆ ಎಂದು ನಂಬಲಾಗಿದೆ.
ಹಣದ ವ್ಯವಹಾರ ಬೇಡ:
ಸಂಜೆ ಹಣದ ವ್ಯವಹಾರ ಮಾಡಬೇಡಿ. ಇದರಿಂದ ಲಕ್ಷ್ಮಿ ದೇವಿಯು ಕೋಪಗೊಂಡು ಅಲ್ಲಿಂದ ಹೊರಟು ಹೋಗುತ್ತಾಳೆ ಎಂಬ ನಂಬಿಕೆಯಿದೆ.