newsics.com
ಆಹಾರ ಅರಸಿ ಬಂದಿದ್ದ ಐದು ಆನೆಗಳಲ್ಲಿ ಒಂದನ್ನು ಜನರ ಗುಂಪು ಸುಡುವ ಕಬ್ಬಿಣದ ರಾಡ್ನಿಂದ ಇರಿದು ಕೊಂದ ಘಟನೆ ಪಶ್ಚಿಮ ಬಂಗಾಳದ ಜಾರ್ಗ್ರಾಮ್ ದಲ್ಲಿ ನಡೆದಿದೆ.
ಆನೆಗಳ ಮೇಲೆ ಬೆಂಕಿ ಮತ್ತು ಫಿರಂಗಿ ಪ್ರಯೋಗ ನಿಷೇಧಿಸಿ 2018 ರಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದರೂ ಜನವಸತಿ ಪ್ರದೇಶದಿಂದ ಆನೆಯನ್ನು ಓಡಿಸಲು ಮುಂದಾದ ಗುಂಪು ಕ್ರೂರವಾಗಿ ಬೆಂಕಿ ಪಂಜುಗಳು ಮತ್ತು ಸುಡುವ ರಾಡ್ ಬಳಸಿರುವುದು ಆನೆಯ ಸಾವಿಗೆ ಕಾರಣವಾಗಿದೆ.
ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ.