newsics.com
ಚೆನ್ನೈ: ಲೈಂಗಿಕ ಅಪರಾಧದಿಂದ ತಮ್ಮನ್ನು ಅಥವಾ ಇತರರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ರೇಪ್ ಮಾಡಲು ಬಂದ ವ್ಯಕ್ತಿಯನ್ನು ಕೊಂದರೂ ಅವರಿಗೆ ಐಪಿಸಿಯ ಸೆಕ್ಷನ್ 97 ರ ಅಡಿಯಲ್ಲಿ ವಿನಾಯಿತಿ ನೀಡಲಾಗುತ್ತದೆ ಮತ್ತು ಶಿಕ್ಷೆಯಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತಿಳಿಸಿದೆ.
ಕುಡಿದ ಮತ್ತಿನಲ್ಲಿ 21ರ ಹರೆಯದ ಮಗಳ ಮೇಲೆ ಹಲ್ಲೆಗೆ ಯತ್ನಿಸಿದ ಪತಿಯನ್ನು ಕೊಂದ ಆರೋಪದ ಮೇಲೆ ತನ್ನ ವಿರುದ್ಧ ದಾಖಲಾಗಿದ್ದ ಕೊಲೆ ಪ್ರಕರಣವನ್ನು ರದ್ದುಗೊಳಿಸುವಂತೆ ತಾಯಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಿ ಜಯಚಂದ್ರನ್ ಅವರ ಪೀಠವು ಅಂಗೀಕರಿಸಿತು. ಸೆಕ್ಷನ್ 482 CrPC ಅಡಿಯಲ್ಲಿ ಸಲ್ಲಿಸಿದ ತನ್ನ ಅರ್ಜಿಯಲ್ಲಿ, ತನ್ನ ಮಗಳನ್ನು ಉಳಿಸಲು ತನ್ನ ಗಂಡನನ್ನು ಕೊಲ್ಲುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಪತ್ನಿ ಕೋರ್ಟ್ ಎದುರು ಹೇಳಿದ್ದಳು.
ಮಹಿಳೆಯ ಪರ ವಕೀಲರು, ಮಗಳ ಹೇಳಿಕೆ ಮತ್ತು ಮೃತ ವ್ಯಕ್ತಿಯ ಛಾಯಾಚಿತ್ರಗಳು, ಆತನ ತಲೆಯ ಹಿಂಭಾಗದಲ್ಲಿ ಆಗಿರುವ ಗಾಯವನ್ನು ತೋರಿಸಿದೆ, ಇದು ಆತ್ಮರಕ್ಷಣೆಯ ಸ್ಪಷ್ಟ ಪ್ರಕರಣವನ್ನು ಸೂಚಿಸುತ್ತದೆ ಎಂದು ವಾದಿಸಿದರು. ಆದ್ದರಿಂದ, ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಮಹಿಳೆಯನ್ನು ವಿಚಾರಣೆಗೆ ಒಳಪಡಿಸುವುದು ಸರಿಯಲ್ಲ ಎಂದು ವಕೀಲರು ವಾದ ಮಾಡಿದ್ದರು.