newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಈ ದಿನ- ನಿತ್ಯ ಪಂಚಾಂಗ
31-08-2024 ಶನಿವಾರ
ದಿನ ವಿಶೇಷ:
* ಪ್ರದೋಷ
* ಸ್ವಾಮಿ ವರದಾನಂದ ಭಾರತಿ ಪುಣ್ಯತಿಥಿ
* ಅಗಡಿ ಶೇಷಾಚಲ ಸದ್ಗುರು ಪುಣ್ಯಸ್ಮರಣೆ (ದಿನಾಂಕಾನುಸಾರ)
***
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ- ದಕ್ಷಿಣಾಯನ
ದಿನಾಂಕ – 31/08/2024
ತಿಂಗಳು – ಆಗಸ್ಟ್
ಬಣ್ಣ – ನೀಲಿ/ಕಪ್ಪು
ವಾರ – ಶನಿವಾರ
ತಿಥಿ – ತ್ರಯೋದಶಿ 27:40:13*
ಪಕ್ಷ – ಕೃಷ್ಣ
ನಕ್ಷತ್ರ – ಪುಷ್ಯ 19:38:36
ಯೋಗ – ವರಿಯಾಣ 17:36:57
ಕರಣ – ಗರಜ 14:59:08
ಕರಣ – ವಾಣಿಜ 27:40:13*
ತಿಂಗಳು (ಅಮಾವಾಸ್ಯಾಂತ್ಯ) ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ) ಭಾದ್ರಪದ
ಚಂದ್ರ ರಾಶಿ ಕರ್ಕಾಟಕ
ಸೂರ್ಯ ರಾಶಿ ಸಿಂಹ
ಋತು- ವರ್ಷ
ಸೂರ್ಯೋದಯ 06:09:36
ಸೂರ್ಯಾಸ್ತ 18:29:48
ಹಗಲಿನ ಅವಧಿ 12:20:12
ರಾತ್ರಿಯ ಅವಧಿ 11:39:49
ಚಂದ್ರಾಸ್ತ 16:53:10
ಚಂದ್ರೋದಯ 28:34:35*
ರಾಹು ಕಾಲ 09:15 – 10:47 ಅಶುಭ
ಯಮಗಂಡ ಕಾಲ 13:52 – 15:25 ಅಶುಭ
ಗುಳಿಕ ಕಾಲ 06:10 – 07:42
ಅಭಿಜಿತ್ 11:55 – 12:44 ಶುಭ
ದುರ್ಮುಹೂರ್ತ 07:48 – 08:38 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***
***
ಈ ದಿನದ ಮಾತು
ಕೊಟ್ಟ ಮಾತು, ಗಳಿಸಿದ ಗೆಳೆತನ ಮತ್ತು ಬೆಳೆಸಿದ ಸಂಬಂಧಗಳ ಕುರಿತು ಯಾವಾಗಲೂ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ, ಇವು ಒಂದೊಮ್ಮೆ ಮುರಿದುಬಿದ್ದರೆ ಬಲವಾದ ಸದ್ದನ್ನೇನೂ ಮಾಡುವುದಿಲ್ಲ. ಬದಲಿಗೆ, ಅವ್ಯಕ್ತವಾದ ಮೌನವನ್ನು ಸೃಷ್ಟಿಸಿಬಿಡುತ್ತವೆ.
***
ಈ ದಿನದ ಸುಭಾಷಿತ
ಅರ್ಥಸ್ಯ ನಿಶ್ಚಯೋ ದೃಷ್ಟೋ
ವಿಚಾರೇಣ ಹಿತೋಕ್ತಿತಃ |
ನ ಸ್ನಾನೇನ ನ ದಾನೇನ
ಪ್ರಾಣಾಯಾಮಶತೇನ ವಾ ||
(ವಿವೇಕ ಚೂಡಾಮಣಿ)
ತತ್ತ್ವನಿಶ್ಚಯವು ಜ್ಞಾನಿಗಳ ಸಮಾಲೋಚನೆಯ ಆಪ್ತವಾಕ್ಯವನ್ನು ಅನುಸರಿಸಿದ ವಿಚಾರದಿಂದ ಸಿದ್ಧಿಸುತ್ತದೆಯೇ ವಿನಾ ಪವಿತ್ರ ಸ್ನಾನದಿಂದಾಗಲೀ ದಾನದಿಂದಾಗಲೀ ಅಥವಾ ನೂರಾರು ಪ್ರಾಣಾಯಾಮಗಳಿಂದಾಗಲೀ ಸಿದ್ಧಿಸುವುದಿಲ್ಲ.
***
ಈ ದಿನದ ಇತಿಹಾಸ
* ಆಗಸ್ಟ್ 31, 1881 ರಂದು ಅಮೆರಿಕದ ಮೊದಲ ಟೆನಿಸ್ ಚಾಂಪಿಯನ್ ಶಿಪ್ ರೋಡ್ ಐಲ್ಯಾಂಡಿನ ನ್ಯೂಪೋರ್ಟ್ ಕ್ಯಾಸಿನೋದಲ್ಲಿ ಆರಂಭವಾಯಿತು. ರಿಚರ್ಡ್ ಸಿಯರ್ಸ್ ಅವರು ವಿಲಿಯಂ ಗ್ಲೈನ್ ಅವರನ್ನು ಪರಾಭವಗೊಳಿಸಿ ಮೊದಲ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡರು. 1887ರಲ್ಲಿ ಮಹಿಳೆಯರ ಆಟವನ್ನು ಆರಂಭಿಸಲಾಯಿತು.
* ಆಗಸ್ಟ್ 31, 1887 ರಂದು ಥಾಮಸ್ ಆಲ್ವ ಎಡಿಸನ್ ಕಂಡುಹಿಡಿದ ‘ಕೈನೆಟೋಸ್ಕೋಪ್’ಗೆ ಹಕ್ಕು ಸ್ವಾಮ್ಯ ನೀಡಲಾಯಿತು. ಈ ಯಂತ್ರವನ್ನು ಚಲಿಸುವ ಚಿತ್ರಗಳ ನಿರ್ಮಾಣಕ್ಕೆ ಬಳಸಲಾಗುತ್ತಿತ್ತು.
* ರಾಮೋನ್ ಮ್ಯಾಗ್ಸೆಸೆ ಅವರು ಆಗಸ್ಟ್ 31, 1907 ರಂದು ಜನಿಸಿದರು. ಫಿಲಿಪ್ಪೀನ್ಸ್ ಅಧ್ಯಕ್ಷರಾಗಿದ್ದ ಇವರು ಕಮ್ಯುನಿಸ್ಟ್ ನೇತೃತ್ವದ (ಹಕ್) ಚಳವಳಿಯನ್ನು ಯಶಸ್ವಿಯಾಗಿ ಸೋಲಿಸಿದ ವ್ಯಕ್ತಿ. ಅವರ ನೆನಪಿಗಾಗಿ ಪ್ರತಿವರ್ಷ ಮ್ಯಾಗ್ಸೇಸೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
* ಅಮೃತಾ ಪ್ರೀತಮ್ – ಭಾರತದ ಖ್ಯಾತ ಬರಹಗಾರ್ತಿ, ಕವಯಿತ್ರಿ, ಕಾದಂಬರಿಗಾರ್ತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಅಮೃತಾ ಪ್ರೀತಮ್ ಅವರು ಆಗಸ್ಟ್ 31, 1919 ರಂದು ಜನಿಸಿದರು.
* ಆಗಸ್ಟ್ 31, 1956 ರಂದು ಪದ್ಮಶ್ರೀ ನೇತ್ರದಾನಿ ಡಾ. ಎಂ.ಸಿ. ಮೋದಿ (ಮುರಿಗೆಪ್ಪ ಚನ್ನವೀರಪ್ಪ ಮೋದಿ) ಅವರು ಕರ್ನಾಟಕದ ಹೊಸಪೇಟೆಯಲ್ಲಿನಡೆಸಿದ ತಮ್ಮ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಕುರುಡನೊಬ್ಬನಿಗೆ ಕೋಳಿಮರಿಯ ಕಣ್ಣುಗುಡ್ಡೆಗಳನ್ನು ಹಾಕಿ ನೇತ್ರ ಶಸ್ತ್ರಚಿಕಿತ್ಸೆ ನಡೆಸಿ ದೃಷ್ಟಿ ತಂದುಕೊಡುವಲ್ಲಿ ಯಶಸ್ವಿಯಾದರು.
* ಮಲೇಷಿಯಾವನ್ನು ಆಗಸ್ಟ್ 31, 1957 ರಂದು ಸ್ವತಂತ್ರಗೊಳಿಸಲಾಯಿತು.
* ಜಾವಗಲ್ ಶ್ರೀನಾಥ್ – ಆಗಸ್ಟ್ 31, 1969 ರಂದು ಮೈಸೂರಿನಲ್ಲಿ ಜನಿಸಿದರು. ಜಾವಗಲ್ ಶ್ರೀನಾಥ್ ಅವರು ಭಾರತದ ನಿವೃತ್ತ ಕ್ರಿಕೆಟ್ ಆಟಗಾರರು. ೨೦೦೩ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗುವ ಮುನ್ನ ಭಾರತದ ಪ್ರಮುಖ ವೇಗದ ಬೌಲರ್ ಆಗಿದ್ದರು. ಕ್ರೀಡಾಭಿಮಾನಿಗಳ ಪಾಲಿಗೆ ‘ಮೈಸೂರು ಎಕ್ಸ್ಪ್ರೆಸ್’ ಎಂದೇ ಖ್ಯಾತರಾದವರು.
* ಆಗಸ್ಟ್ 31, 1979 ರಂದು ಭಾರತದ ಉಪರಾಷ್ಟ್ರಪತಿಯಾಗಿ ಎಂ. ಹಿದಾಯತುಲ್ಲಾ ನೇಮಕ.
* ವೇಲ್ಸ್ ರಾಜಕುಮಾರಿ ಡಯಾನಾ ಆಗಸ್ಟ್ 31, 1997ರಂದು ನಿಧನರಾದರು.