newsics.com
ಬೆಂಗಳೂರು:ನಟ ದರ್ಶನ್ ಅವರು ಪ್ರಿಸನ್ ಕಾಲ್ ಸಿಸ್ಟಮ್ ಅಡಿ ಲ್ಯಾಂಡ್ಲೈನ್ ಮೂಲಕ ಪತ್ನಿ ವಿಜಯಲಕ್ಷ್ಮಿ ಜೊತೆ ಮಾತನಾಡಿದ್ದಾರೆ.
ಪತಿ-ಪತ್ನಿ ಇಬ್ಬರು 5 ನಿಮಿಷ ಕಾಲ ಮಾತನಾಡಿದ್ದಾರೆ. ಈ ಇಬ್ಬರು ಮಾತನಾಡಿದ್ದ ಪೋನ್ ಸಂಭಾಷಣೆಯನ್ನು ಜೈಲು ಅಧಿಕಾರಿಗಳು ರೆಕಾರ್ಡ್ ಮಾಡಿಕೊಂಡಿದ್ದಾರೆ. ದರ್ಶನ್ ಅವರು ಕೇಳಿದ ಮೇಲೆ ಸುಮಾರು 3 ಗಂಟೆ ತಡವಗಿ ಫೋನ್ ಮಾಡಲು ಅಧಿಕಾರಿಗಳು ಅನುಮತಿ ಕೊಟ್ಟಿದ್ದಾರೆ.
ವಿಜಯಲಕ್ಷ್ಮಿಯವರು ದರ್ಶನ್ ಅವರ ಆರೋಗ್ಯವನ್ನು ವಿಚಾರಣೆ ಮಾಡಿದ್ದಾರೆ.ಪ್ರಿಸನ್ ಕಾಲ್ ಸಿಸ್ಟಮ್ ಅಡಿಯಲ್ಲಿ ಪತ್ನಿ ಜೊತೆ ಇಂದು 2:30ಕ್ಕೆ ದರ್ಶನ ಮಾತನಾಡಿದ್ದಾರೆ. ಫೋನ್ನಲ್ಲಿ ಚಾರ್ಜ್ಶೀಟ್ ಕುರಿತಂತೆ ದರ್ಶನ್ ಮಾಹಿತಿ ಪಡೆದುಕೊಂಡಿದ್ದಾರೆ.
ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್ನಲ್ಲಿ ಹತ್ಯೆ ಮಾಡಿದ ಕೇಸ್ನಲ್ಲಿ ಭಾಗಿಯಾದ 17 ಆರೋಪಿಗಳ ಭವಿಷ್ಯ ಈಗ ನ್ಯಾಯಾಲಯದ ಅಂಗಳದಲ್ಲಿದೆ. ಈ ಕೇಸ್ನ ತನಿಖೆ ನಡೆಸಿದ ಪೊಲೀಸರು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. 3991 ಪುಟಗಳ ಚಾರ್ಜ್ಶೀಟ್ನಲ್ಲಿ 17 ಆರೋಪಿಗಳ ಪಾತ್ರದ ಬಗ್ಗೆ ವಿವರವಾದ ಸಾಕ್ಷ್ಯ ಮತ್ತು ಕೃತ್ಯದಲ್ಲಿ ಭಾಗಿಯಾದ ಪಾತ್ರದ ಬಗ್ಗೆ ದಾಖಲಿಸಿದ್ದಾರೆ.
ರೇಣುಕಾಸ್ವಾಮಿ ಕೇಸ್ನಲ್ಲಿ A1 ಪವಿತ್ರಾಗೌಡ ಅವರೇ ಈ ಕೃತ್ಯಕ್ಕೆ ಮೂಲ ಕಾರಣ ಎಂದು ತನಿಖೆಯ ಆರಂಭದಿಂದಲೂ ಹೇಳಲಾಗಿದೆ. ಇದರ ಜೊತೆಗೆ A2 ದರ್ಶನ್, A3 ಪವನ್, A4 ರಾಘವೇಂದ್ರ, A5 ನಂದೀಶ್, A6 ಜಗದೀಶ್, A7 ಅನು, A8 ರವಿ, A9 ಧನರಾಜು, A10 ವಿನಯ್, A11 ನಾಗರಾಜು, A12 ಲಕ್ಷ್ಮಣ್, A13 ದೀಪಕ್, A14 ಪ್ರದೋಶ್, A15 ಕಾರ್ತಿಕ್, A16 ಕೇಶವಮೂರ್ತಿ, A17 ನಿಖಿಲ್ ಅವರ ಪಾತ್ರ ಏನು ಅನ್ನೋದನ್ನ ತಿಳಿಸಲಾಗಿದೆ.