newsics.com
ಖಾರ್ಟೂಮ್(ಸುಡಾನ್): ಹಿಂದೆಂದೂ ಕಾಣದಷ್ಟು ಭೀಕರ ಬರ ಆವರಿಸಿರುವ ಸುಡಾನ್ನಲ್ಲಿ ಜನ ಹಸಿವಿನಿಂದ ಕಂಗಾಲಾಗಿದ್ದಾರೆ.
ಸುಡಾನ್ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಅಂದರೆ 25 ದಶಲಕ್ಷಕ್ಕೂ ಹೆಚ್ಚು ಜನ ತೀವ್ರ ಆಹಾರ ಕೊರತೆ ಎದುರಿಸುತ್ತಿದ್ದಾರೆ.
ಹಲವು ಕುಟುಂಬಗಳು ದಿನಕ್ಕೆ ಒಂದೇ ಒಂದು ಊಟ ಮಾಡಿ ಬದುಕುವಂತಾಗಿದೆ. ಅಲ್ಲದೇ ಇನ್ನೂ ಕೆಲ ಕುಟುಂಬಗಳು ಎಲೆ ಅಥವಾ ಕೀಟಗಳನ್ನು ತಿಂದು ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮಾನವೀಯ ನೆರವು ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.
ಸುಡಾನ್ ಭೀಕರ ಹಸಿವಿನ ಬರ ಎದುರಿಸುತ್ತಿದೆ ಎಂದು ಮೂರು ಅಂತಾರಾಷ್ಟ್ರೀಯ ನೆರವು ಸಂಸ್ಥೆಗಳು ಗಂಭೀರ ಎಚ್ಚರಿಕೆ ನೀಡಿವೆ. ಸುಡಾನ್ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದ ಸಂಪೂರ್ಣ ನಿರ್ಲಕ್ಷ್ಯದ ಮಧ್ಯೆ ಅಲ್ಲಿನ ಜನ ಹಸಿವಿನಿಂದ ಸಾಯುತ್ತಿದ್ದಾರೆ ಎಂದು ನಾರ್ವೇಜಿಯನ್ ನಿರಾಶ್ರಿತರ ಮಂಡಳಿ, ಡ್ಯಾನಿಶ್ ನಿರಾಶ್ರಿತರ ಮಂಡಳಿ ಮತ್ತು ಮರ್ಸಿ ಕಾರ್ಪ್ಸ್ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಆದರೆ, ಸುಡಾನ್ ಸರ್ಕಾರ ಈ ಹೇಳಿಕೆಗಳನ್ನು ನಿರಾಕರಿಸಿದ್ದು, ಆಹಾರ ಕ್ಷಾಮ ಇಲ್ಲ ಎಂದಿದೆ. ಏಪ್ರಿಲ್ 2023ರಲ್ಲಿ ಸುಡಾನ್ ಸಶಸ್ತ್ರ ಪಡೆಗಳು ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ ನಡುವೆ ಸಂಘರ್ಷ ಪ್ರಾರಂಭವಾದಾಗಿನಿಂದ ದೇಶದಲ್ಲಿ ಲಕ್ಷಾಂತರ ಜನ ಸ್ಥಳಾಂತರಗೊಂಡಿದ್ದಾರೆ.
ಬಾಲಕನ ಬೋಲ್ಡ್ ಪ್ರಶ್ನೆಗೆ ಬೆಚ್ಚಿಬಿದ್ದ ಉರ್ಫಿ, ಕುಟುಂಬದವರೆದುರೇ ನಟಿಗೆ ಮುಜುಗರ
ಸಿದ್ದರಾಮಯ್ಯ ಬದಲಿಸಲು ಹೆಚ್ಚಿದ ಒತ್ತಡ, ಒಮ್ಮತದ ಸಿಎಂ ಅಭ್ಯರ್ಥಿಗಾಗಿ ಕಾಂಗ್ರೆಸ್ ಹೈಕಮಾಂಡ್ ಶೋಧ