newsics.com
ವಿಘ್ನನಿವಾರಕ ಗಣಪತಿ ಬಹುರೂಪಿ. ಬಗೆಬಗೆಯಲ್ಲಿ ಹೇಗೆ ನೋಡಿದರೂ ಗಣಪತಿಯೇ. ನಮ್ಮ ಭಾವನೆಯಂತೆ ಗಣೇಶ.
ಪ್ರಥಮವಂದ್ಯ ಗಣಪನಿಗೆ ಸಹಸ್ರಾರು ಗುಡಿ- ಮಂದಿರ. ಸಹಸ್ರನಾಮ ಬಲದ ಗಣಪತಿ ಇಷ್ಟಾರ್ಥ ಈಡೇರಿಸುವವ.
ದೇಶದಲ್ಲಿ ಗಣೇಶನಿಗೆ ವಿವಿಧ ವಿನ್ಯಾಸದ ದೇವಾಲಯಗಳಿದ್ದರೂ ನಾಗ ಗಣಪತಿಯಂಥ ದೇವಾಲಯ ಮತ್ತೊಂದಿಲ್ಲ. ಅಷ್ಟಕ್ಕೂ ಇದು ದೇವಾಲಯವೇ ಅಲ್ಲ, ಈತನಿಗೆ ಬಯಲೇ ಆಲಯ.
ಡೊಳ್ಳು ಹೊಟ್ಟೆಯ ವಿಶಾಲ ಗಣಪ ಸಾವಿರಾರು ವರ್ಷಗಳಿಂದ ನಿಸರ್ಗದ ಮಡಿಲಲ್ಲಿ ಬೆಟ್ಟ ಗುಡ್ಡಗಳ ನಡುವಣ ಪ್ರಶಾಂತ ವಾತಾವರಣದಲ್ಲಿ ಎದೆಯೊಡ್ಡಿ ಬಟಾಬಯಲಿನಲ್ಲಿ ಏಕಾಂಗಿಯಾಗಿ ವಿರಾಜಮಾನನಾಗಿದ್ದಾನೆ.
ಛತ್ತೀಸ್ಗಢದ ಮಂಡಪಾಲದಲ್ಲಿ ಪೂಜಿಸಲ್ಪಡುವ ದನಗಾಹಿ ಗಣಪತಿಯ ಬಗ್ಗೆ ಎಷ್ಟು ಹೇಳಿದರೂ ಸಾಲದು.
ಮೂರು ಸಾವಿರ ಅಡಿ ಎತ್ತರದಲ್ಲಿ ಏಕಶಿಲೆಯ ಮೇಲೆ ಪುಟ್ಟ ಜಾಗದಲ್ಲಿ ನೆಲೆಸಿರುವ ಈ ಗಣೇಶನಿಗೆ ನಿತ್ಯಪೂಜೆ ಮಾಡಲಾಗುತ್ತದೆ. ಅರ್ಚಕರು ಹೆಲಿಕಾಪ್ಟರ್ನಲ್ಲಿ ಬಂದು ಪೂಜೆ ಮಾಡಿ ಮರಳುತ್ತಾರೆ.ಈ ನಾಗಗಣಪ ಅಥವಾ ದನಗಾಹಿ ಗಣಪನ ಮೂರ್ತಿ ಸುಮಾರು 1103 ವರ್ಷ ಹಿಂದಿನದು. ಈ ದೇವಾಲಯ ಛತ್ತೀಸ್ಗಢದ ಡೋಲ್ಕಲ್ ಬೆಟ್ಟದಲ್ಲಿದೆ. ಇದು ಅರಣ್ಯದೊಳಗಡೆ 14 ಕಿಮೀ ದೂರದಲ್ಲಿರುವ ಮೂರು ಸಾವಿರ ಅಡಿ ಎತ್ತರದ ಬೆಟ್ಟದಲ್ಲಿದೆ.
ಪ್ರತಿವರ್ಷವೂ ಬೆಳೆಯುತ್ತಾನೆ ಈ ಗಣೇಶ:
ಈ ನಾಗ ಗಣಪತಿ ಮೂರ್ತಿಯ ವಿಶೇಷವೆಂದರೆ, ಪ್ರತಿವರ್ಷವೂ ಬೆಳೆಯುತ್ತಲೇ ಇದೆ. ಅಲ್ಲದೆ ಬೆಟ್ಟದ ತುತ್ತ ತುದಿಯಲ್ಲಿರುವ ಈ ಗಣೇಶನ ಮೂರ್ತಿ ರಂಗೋಲಿ ಹಾಕಿದಾಗ 360 ಡಿಗ್ರಿಯಲ್ಲಿ ತಿರುಗುತ್ತದೆ. ಈ ಪವಾಡದ ಹಿಂದಿನ ಕಾರಣವೇನು ಎಂಬುದನ್ನು ಈವರೆಗೂ ಬೇಧಿಸಲಾಗಿಲ್ಲ.
ಈ ಮೂರ್ತಿಯನ್ನು 2ನೇ ಶತಮಾನದಲ್ಲಿ ನಾಗ ಸಾಮ್ರಾಜ್ಯ ಕಾಲದಲ್ಲಿ ನಿರ್ಮಿಸಲಾಗಿದೆ. ಈ ಗಣಪತಿಯ ಶಿಲೆ ತುಂಬಾ ವಿಶೇಷವಾಗಿದೆ. ಇಂಥದ್ದೊಂದು ಕಲ್ಲು ಎಲ್ಲಿಯೂ ಕಂಡುಬಂದಿಲ್ಲ ಎಂದು ಪುರಾತತ್ವ ಇಲಾಖೆ ಹೇಳಿದೆ.
1924ರಲ್ಲಿ ಛತ್ತೀಸ್ಗಢದಲ್ಲಿ ಭಾರೀ ಭೂಕಂಪ ಸಂಭವಿಸುತ್ತದೆ. ಆಗ ಡೋಲ್ಕಲ್ ಬೆಟ್ಟ 4 ವಿಭಾಗವಾಗುತ್ತದೆ. ಅದರೆ ಈ ಮೂರ್ತಿ ಇರುವ ಬೆಟ್ಟದ ಭಾಗಕ್ಕೆ ಏನೂ ಹಾನಿಯಾಗದೆ ಹಾಗೆಯೇ ಉಳಿಯುತ್ತದೆ.
ಡೋಲ್ಕಲ್ ಬೆಟ್ಟದಲ್ಲಿರುವ ಈ ಗಣೇಶನನ್ನು ನೋಡಲು ಬಸ್ಕಾರ್ ಬೆಟ್ಟ ಹತ್ತಬೇಕು. ಡೋಲ್ಕಲ್ ಬೆಟ್ಟ ಹತ್ತುವುದು ಅಷ್ಟು ಸುಲಭವಲ್ಲ. ಹೀಗೆ ಹತ್ತಲು ಪ್ರಯತ್ನಿಸಿದ ಹಲವರು ತೊಂದರೆ ಅನುಭವಿಸಿದ್ದಾರೆ.
ಆದರೆ ಅದರ ಸಮೀಪ ಇರುವ ಬಸ್ಕಾರ್ ಬೆಟ್ಟ ಹತ್ತುವುದು ಸುಲಭ. ಈ ಬೆಟ್ಟ ಹತ್ತಿದರೆ ಡೋಲ್ಕಲ್ ಬೆಟ್ಟದಲ್ಲಿರುವ ಗಣೇಶನ ದರ್ಶನ ಪಡೆಯಬಹುದು. ಇಲ್ಲಿಗೆ ಪ್ರತಿನಿತ್ಯ ನೂರಾರು ಭಕ್ತರು ಬಂದು ಗಣೇಶನ ದರ್ಶನ ಪಡೆಯುತ್ತಾರೆ. ಇಲ್ಲಿಗೆ ನಾಗ ಜನಾಂಗದವರು ಸುಲಭದಲ್ಲಿ ಹತ್ತಿ ಬರುತ್ತಾರೆ. ಆದರೆ ಬೇರೆಯವರು ಈ ಬೆಟ್ಟ ಹತ್ತವುದು ಸುಲಭವಲ್ಲ.
ಹೆಲಿಕಾಫ್ಟರ್ನಲ್ಲಿ ಬರ್ತಾರೆ ಅರ್ಚಕರು!:
ಈ ಗಣೇಶನ ನಿತ್ಯ ಪೂಜೆ ಜವಾಬ್ದಾರಿಯನ್ನು ಛತ್ತೋಸ್ಗಢ ಸರ್ಕಾರವೇ ವಹಿಸಿಕೊಂಡಿದ್ದು ಪುರೋಹಿತರನ್ನು ಹೆಲಿಕಾಫ್ಟರ್ನಲ್ಲಿ ಕರೆದುಕೊಂಡು ಬಂದು ಪೂಜೆ ಸಲ್ಲಿಸಿ ಹೋಗುವ ವ್ಯವಸ್ಥೆಯಿದೆ. ಈ ಬೆಟ್ಟದಲ್ಲಿ ಇಬ್ಬರು ನಿಲ್ಲಬಹುದು ಅಷ್ಟೇ.ಡೋಲ್ಕರ್ ಬೆಟ್ಟದಲ್ಲಿರುವ ನಾಗ ಗಣಪತಿಯನ್ನು ಕೆತ್ತಿ ಮಾಡಿದ್ದಲ್ಲ, ಮಂತ್ರ ಶಕ್ತಿಯಿಂದ ಮಾಡಿದ್ದು ಎನ್ಜುವ ಪ್ರತೀತಿಯೂ ಇದೆ.
ರಂಗೋಲಿ ಚಮತ್ಕಾರ:
ನಾಗ ಸಾಮ್ರಾಜ್ಯದ 21 ಚಿಹ್ನೆಯ ರಂಗೋಲಿ ಹಾಕಿದರೆ ಗಣಪತಿ ಒಂದು ಸುತ್ತು ಹಾಕುತ್ತದೆ. ರಂಗೋಲಿಯ ತೂಕದ ಒತ್ತಡಕ್ಕೆ ಗಣಪತಿ ಮೂರ್ತಿ ತಿರುಗುವಂಥ ತಂತ್ರಜ್ಞಾನ ಆ ಕಾಲದಲ್ಲಿಯೇ ಮಾಡಲಾಗಿದೆ ಎಂದು ಹೇಳಲಾಗುತ್ತದೆ.
ಆದರೆ ರಂಗೋಲಿ ತೂಕದ ಬೇರೆ ಯಾವುದೇ ವಸ್ತು ಇಟ್ಟರೂ ಗಣಪತಿಯ ಮೂರ್ತಿ ತಿರುಗುವುದಿಲ್ಲ. ಬೇರೆ ಯಾವುದೇ ರಂಗೋಲಿ ಬರೆದರೂ ಮೂರ್ತಿ ತಿರುಗಲ್ಲ. ಆದರೆ ನಾಗ ಸಾಮ್ರಾಜ್ಯದ 21 ಚಿಹ್ನೆ ಬರೆದರೆ ಮೂರ್ತಿ ಒಂದು ಸುತ್ತು ಹಾಕುತ್ತದೆ.
ಛತ್ತೀಸ್ಗಢದ ದಾಂತೇವಾಡದ ಬೈಲಾಡಿಲಾದ ಢೋಲ್ಕಲ್ ಬೆಟ್ಟದ ಮೇಲೆ ನೆಲೆಗೊಂಡಿದೆ. ಪುರಾಣಗಳ ಪ್ರಕಾರ, ಈ ಬೆಟ್ಟದಲ್ಲಿ ಗಣೇಶ ಮತ್ತು ಪರಶುರಾಮ ನಡುವೆ ಯುದ್ಧ ನಡೆಯಿತು ಎಂದು ಹೇಳಲಾಗುತ್ತದೆ. ಅಲ್ಲದೆ ಈ ಯುದ್ಧದಲ್ಲಿ ಪರಶುರಾಮನ ಕೊಡಲಿಯು ವಿನಾಯಕನ ಮುಖಕ್ಕೆ ಡಿಚ್ಚಿ ಹೊಡೆದಾಗ, ಆತನ ಒಂದು ಹಲ್ಲು ಮುರಿಯಿತು. ಅದಕ್ಕಾಗಿಯೇ ಬೆಟ್ಟದ ಕೆಳಗಿನ ಗ್ರಾಮಕ್ಕೆ ಫರಸ್ಪಾಲ್ ಎಂದು ಹೆಸರಿಸಲಾಯಿತು.
ನಾಗವಂಶದ ರಾಜರು ಗಣೇಶನ ವಿಗ್ರಹವನ್ನು ಬೆಟ್ಟದ ಮೇಲೆ ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ. ಈ ಘಟನೆಯು ಈ ಪ್ರಪಂಚ ಇರುವವರೆಗೂ ಶಾಶ್ವತವಾಗಿ ನೆನಪಿನಲ್ಲುಳಿಯುತ್ತದೆ.
ಈ ವಿಗ್ರಹವು 11 ನೇ ಶತಮಾನಕ್ಕೆ ಸೇರಿದೆ. ಈ ಗಣಪನಿಗೆ ಬಯಲೇ ಆಹ್ಲಾದಕರ ಪ್ರಶಾಂತ ಆಲಯವಾಗಿದೆ.ಗಣಪನ ಶಕ್ತಿ ಹಾಗೂ ಪವಾಡಗಳ ಕಾರಣದಿಂದ ಈ ನಾಗಗಣಪ ಸಾಕಷ್ಟು ಭಕ್ತರನ್ನು ಆಕರ್ಷಿಸುತ್ತಾನೆ.
https://www.instagram.com/reel/CpHOKPfpfGY/?igsh=dXRiY3hld3ZkcmZv
ರುದ್ರಾಕ್ಷಿ ಮಣಿಗಳಿಂದಲೇ ಸಿದ್ಧವಾಯ್ತು 20 ಅಡಿ ಎತ್ತರದ ಗಣೇಶನ ವಿಗ್ರಹ