newsics.com
ರಾಂಚಿ(ಜಾರ್ಖಂಡ್): ಆನೆಯ ಸತತ ದಾಳಿಯಿಂದ ಪಾರಾಗಲು ಟೆರೇಸ್ನಲ್ಲಿ ಮಲಗಿದ್ದ ಮಕ್ಕಳ ಪೈಕಿ ಮೂವರು ಹಾವು ಕಚ್ಚಿ ಮೃತಪಟ್ಟ ಘಟನೆ ಕಾಡಂಚಿನ ಚಪ್ಕ್ಲಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಆನೆ ದಾಳಿಗೆ ಈಗಾಗಲೇ ಕೆಲವರು ಬಲಿಯಾಗಿದ್ದಾರೆ. ಹೀಗಾಗಿ ಗ್ರಾಮಸ್ಥರು ಸಂಜೆಯಾಗುತ್ತಿದ್ದಂತೆ ಸುರಕ್ಷಿತ ಮನೆ, ಶಾಲಾ ಕಟ್ಟಡದ ಟರೇಸ್ ಸೇರಿದಂತೆ ಒಂದೊಂದು ಕಡೆಯಲ್ಲಿ ಮಲಗುವ ಪರಿಪಾಠ ಆರಂಭಿಸಿದ್ದಾರೆ. ಹಲವು ಕುಟುಂಬಗಳು ಜೊತೆಯಾಗಿ ಮಲಗಿ ರಾತ್ರಿ ಕಳೆಯುತ್ತಿದ್ದರು.
ಹೀಗೆ ಆನೆ ದಾಳಿಯಿಂದ ಮಕ್ಕಳು ಸುರಕ್ಷಿತವಾಗಿರಲಿ ಎಂದು ಪೋಷಕರು 8 ರಿಂದ 10 ಮಕ್ಕಳನ್ನು ಮನೆಯ ಟೆರೇಸ್ನಲ್ಲಿ ಮಲಗಿಸಿದ್ದರು. ಆನೆಯಿಂದ ಬಚಾವ್ ಆದರೂ ಈ ಪೈಕಿ ಮೂವರು ಮಕ್ಕಳು ಹಾವು ಕಡಿದು ಮೃತಪಟ್ಟ ಘಟನೆ ಜಾರ್ಖಂಡ್ನ ಚಪ್ಕ್ಲಿ ಗ್ರಾಮದಲ್ಲಿ ನಡೆದಿದೆ.
ಪನ್ನಾಲಾಲ್ ಕೊರ್ವಾ(15), ಕಾಂಚನ್ ಕುಮಾರಿ(8) ಹಾಗೂ ಬೇಬಿ ಕುಮಾರು(9) ಮೃತಪಟ್ಟ ಮಕ್ಕಳು. ಕಾಡಿನಲ್ಲಿನ ಹಲವು ಮರಗಳು ಟಿಂಬರ್ ಉದ್ಯಮಕ್ಕೆ ಬಲಿಯಾಗಿರುವುದರಿಂದ ಇತ್ತೀಚೆಗೆ ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುತ್ತಿದೆ.
ಹೀಗಾಗಿ ಚಪ್ಕ್ಲಿ ಗ್ರಾಮದ ಹಲವರ ಮೇಲೆ ಆನೆ ದಾಳಿ ಮಾಡಿದೆ. ಹೀಗಾಗಿ ಸಣ್ಣ ಡೇರೆ, ಚಪ್ಪಡಿ ಮನೆಗಳಲ್ಲಿ ವಾಸವಿರುವ ಕೂಲಿ ಕಾರ್ಮಿಕರು ಸಂಜೆಯಾಗುತ್ತಿದ್ದಂತೆ ಸುರಕ್ಷಿತ ಮನೆಗಳು, ಶಾಲಾ ಕಟ್ಟಡ, ಸರ್ಕಾರಿ ಕಟ್ಟಟದ ಟೆರೇಸ್ ಮೇಲೆ ಮಲಗುತ್ತಿದ್ದಾರೆ.
ಆನೆ ದಾಳಿ ಮಾಡಿದರೂ ಮಕ್ಕಳು ಸುರಕ್ಷಿತವಾಗಿರಲಿದ್ದಾರೆ ಅನ್ನೋ ಲೆಕ್ಕಾಚಾರದಲ್ಲಿ ಪೋಷಕರು 10 ಮಕ್ಕಳನ್ನು ಟೆರೇಸ್ನಲ್ಲಿ ಮಲಗಿಸಿದ್ದಾರೆ. ಆದರೆ ನೆಲದ ಮೇಲೆ ಮಲಗಿದ್ದ ಮಕ್ಕಳ ಪೈಕಿ ಮೂವರು ಮಕ್ಕಳಿಗೆ ನಿದ್ದೆಯಲ್ಲಿರುವಾಗಲೇ ಹಾವು ಕಡಿದಿದೆ. ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ.
3 ಸಾವಿರ ಅಡಿ ಎತ್ತರದಲ್ಲಿರುವ ಈ ಪವರ್ಫುಲ್ ಗಣಪನ ಪೂಜೆಗೆ ಹೆಲಿಕಾಪ್ಟರ್ನಲ್ಲೇ ಬರ್ತಾರೆ ಅರ್ಚಕರು! ವಿಡಿಯೋ ನೋಡಿ
ಪೋಷಕರೇ ಗಮನಿಸಿ, ಸುಕನ್ಯಾ ಸಮೃದ್ಧಿ ಯೋಜನೆ ನಿಯಮ ಬದಲಾಗಿದೆ: ಮಾರ್ಗಸೂಚಿ ಪಾಲಿಸದಿದ್ದರೆ ಖಾತೆ ಬಂದ್