newsics.com
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಲ್ಲಿರುವ ನಟ ದರ್ಶನ್ಗೆ ಕೊನೆಗೂ ಮನೆಯೂಟ ಭಾಗ್ಯ ಸಿಗಲಿಲ್ಲ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಮನೆ ಊಟ ಕೋರಿ ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ಪೂರ್ಣಗೊಳಿಸಿದ ಸೆಷನ್ ಕೋರ್ಟ್ ಮನೆಯೂಟ ನಿರಾಕರಿಸಿದೆ. ಹೀಗಾಗಿ ದರ್ಶನ್ಗೆ ಜೈಲೂಟವೇ ಖಚಿತವಾಗಿದೆ.
ಒಂದು ತಿಂಗಳಿನಿಂದ ಜೈಲು ಆಹಾರದಿಂದ ಆರೋಗ್ಯದಲ್ಲಿ ಏರುಪೇರಾಗಿದೆ. ಅತಿಸಾರ, ಭೇದಿ, ಹೊಟ್ಟೆ ನೋವು, ಜ್ವರ ಕಾಡುತ್ತಿದೆ. ಹೀಗಾಗಿ ಮನೆ ಊಟದ ವ್ಯವಸ್ಥೆಗೆ ಅವಕಾಶ ಮಾಡಿಕೊಡಿ ಎಂದು ದರ್ಶನ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಸೋಮವಾರ ಅರ್ಜಿಯ ವಾದ ಪ್ರತಿವಾದ ಆಲಿಸಿದ್ದ ಕೋರ್ಟ್ ತೀರ್ಪನ್ನು ಗುರುವಾರಕ್ಕೆ ಕಾಯ್ದಿರಿಸಿತ್ತು. ಇದೀಗ ಸೆಷನ್ ಕೋರ್ಟ್ ದರ್ಶನ್ಗೆ ಮನೆಯೂಟವನ್ನು ನಿರಾಕರಿಸಿದೆ.