newsics.com
ಬೆಂಗಳೂರು: ರಾಮನಗರ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾಯಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟ ನಿರ್ಧರಿಸಿದೆ.
ಉಳಿದೆಲ್ಲವೂ ಮೊದಲಿನಂತೆಯೇ ಇರುತ್ತದೆ. ಹೆಸರು ಮಾತ್ರ ಬದಲಾಯಿಸಲಾಗುವುದು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಹೆಸರು ಬದಲಾವಣೆಯಿಂದ ಅಗುವ ಸಾಧನೆಯಾದರೂ ಏನು ಎಂದು ಕೇಳಿದಾಗ, ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ಜಿಲ್ಲೆಯ ಜನರ ಆಶಯವೂ ಆಗಿತ್ತು ಎಂದು ಹೇಳಿದರು.
ಈ ಮೂಲಕ ಉಪ ಮುಖ್ಯಮಂತ್ರಿ ಮತ್ತು ಕನಕಪುರದ ಶಾಸಕ ಡಿಕೆ ಶಿವಕುಮಾರ್ ತಾವಂದುಕೊಂಡಿದ್ದನ್ನು ಸಾಧಿಸಿದ್ದಾರೆ.
ಕೆಲ ದಿನಗಳ ಹಿಂದೆ ಅವರು ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಪುನರ್ ನಾಮಕರಣ ಮಾಡುವ ಬಗ್ಗೆ ಚಿಂತನೆ ನಡೆದಿದೆ ಮತ್ತು ಅದರ ಬಗ್ಗೆ ಒಂದು ಪ್ರಸ್ತಾವ ಮುಖ್ಯಮಂತ್ರಿಗಳಿಗೆ ಸಲ್ಲಿಸಲಿದ್ದೇವೆ ಎಂದು ಹೇಳಿದ್ದರು.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.
ಬ್ರ್ಯಾಂಡ್ ಬೆಂಗಳೂರು ಬಿಲ್ಡ್ ಮಾಡುವ ಭರದಲ್ಲಿ ತುಮಕೂರು ಜಿಲ್ಲೆಯನ್ನೂ ಬೆಂಗಳೂರಿಗೆ ಸೇರಿಸಲಾಗುತ್ತಾ ಎಂಬ ಪ್ರಶ್ನೆಗೆ ಸಚಿವ ಪಾಟೀಲ್, ಇಲ್ಲ ಸೇರಿಸಲ್ಲ, ಯಾಕೆಂದರೆ ತುಮಕೂರು ಯಾವತ್ತೂ ಬೆಂಗಳೂರಿನ ಭಾಗವಾಗಿರಲಿಲ್ಲ. ಅದರೆ ರಾಮನಗರ ಜಿಲ್ಲೆ ಮೊದಲಿಂದಲೂ ಬೆಂಗಳೂರಿನ ಭಾಗವಾಗಿತ್ತು ಎಂದರು.
ಒಲಿಂಪಿಕ್ಸ್ಗೆ ಅದ್ಧೂರಿ ಚಾಲನೆ, ಟೀಂ ಇಂಡಿಯಾ ಮುನ್ನಡೆಸಿದ ಶರತ್, ಸಿಂಧು
ಕೇವಲ 1 ಲಕ್ಷ ರೂ. ಇದ್ರೆ ಸಾಕು, ನಿಸ್ಸಾನ್ X Trail ಎಸ್ಯುವಿ ನಿಮ್ಮದೆ…!