Tuesday, December 5, 2023

ಎರಡೂ ಕೈನಲ್ಲಿ ಬರೆವ ಸಾಧಕಿ…

Follow Us

newsics.com 
ಬ್ಬೊಬ್ಬರು ಒಂದೊಂದು ಸಾಧನೆಗೆ ಮುಂದಾಗುತ್ತಾರೆ. ಆದರೆ ಈ ಆದಿ ಸ್ವರೂಪ ಮಾತ್ರ ಸಾಧನೆಗೆ ಆಯ್ದುಕೊಂಡ ಕಾರ್ಯ ವಿಭಿನ್ನವಾದದ್ದು.
ಏಕಕಾಲಕ್ಕೆ ತನ್ನೆರಡೂ ಕೈಗಳಿಂದ ಅತಿ ವೇಗವಾಗಿ ಹಾಗೂ ಸುಂದರವಾಗಿ ಬರೆಯುವ ಮೂಲಕ ಮಂಗಳೂರಿನ ಈ ಆದಿ ಸ್ವರೂಪ ಜಗತ್ತಿನಲ್ಲಿ ದಾಖಲೆ ಬರೆದಿದ್ದಾಳೆ. ಬಹುಮುಖ ಪ್ರತಿಭೆಯ ಆದಿ ಸ್ವರೂಪ, ಈಗ ವರ್ಲ್ಡ್ ರೆಕಾರ್ಡ್ ದಾರಿಯಲ್ಲಿದ್ದಾಳೆ.
ಈಕೆ ಎರಡೂ ಕೈಗಳಲ್ಲಿ ಏಕಕಾಲಕ್ಕೆ 11 ಬಗೆಯಲ್ಲಿ ಬರೆಯಬಲ್ಲಳು. ಒಂದು ನಿಮಿಷಕ್ಕೆ 45 ಪದ ಬರೆಯುವ ಸಾಮರ್ಥ್ಯ ಹೊಂದಿರುವ ಆದಿ ಸ್ವರೂಪ, ಒಂದು ಕೈನಲ್ಲಿ ಇಂಗ್ಲಿಷ್ ಬರೆದರೆ, ಇನ್ನೊಂದು ಕೈನಲ್ಲಿ ಕನ್ನಡ ವಾಕ್ಯ ಬರೆಯುತ್ತಾಳೆ. ಅಥವಾ ಒಂದೇ ಭಾಷೆಯ ಒಂದೇ ವಾಕ್ಯ ಬರೆಯಬಲ್ಲಳು. ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಬರೆಯಬಲ್ಲ ಈಕೆ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡೂ ಬರೆಯುವ ಸಾಮರ್ಥ್ಯ ಹೊಂದಿದ್ದಾಳೆ.
ಆದಿ ಎರಡೂ ಕೈಗಳಲ್ಲಿ ಅತಿ ವೇಗವಾಗಿ ಬರೆಯಬಲ್ಲ ಬರಹಗಾರ್ತಿ ಎಂಬ ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾಳೆ. ಉತ್ತರ ಪ್ರದೇಶದ ಬರೇಲಿಯಾ ಲಾಟಾ ಫೌಂಡೇಶನ್ ಸಂಸ್ಥೆ ಈ ರೆಕಾರ್ಡ್ ಘೋಷಣೆ ಮಾಡಿದೆ.
ಅಷ್ಟೇ ಅಲ್ಲ, ಸಾಹಿತ್ಯ, ಸಂಗೀತ, ಯಕ್ಷಗಾನ, ಚಿತ್ರಕಲೆ, ಮಿಮಿಕ್ರಿ, ಬೀಟ್ ಬಾಕ್ಸ್ ಕೂಡ ಈಕೆಗೆ ಗೊತ್ತು. ಆದರೆ ಶಾಲೆ ಮೆಟ್ಟಿಲು ಹತ್ತಿಲ್ಲ. ಮನೆಯೇ ಈಕೆಗೆ ಶಾಲೆ. ತಂದೆ-ತಾಯಿಯೇ ಗುರು. ಬಾಹ್ಯವಾಗಿ (ಎಕ್ಸ್ಟರ್ನಲ್) ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದಾಳೆ.
ಸ್ವಕಲಿಕಾ ವಿಧಾನದಲ್ಲಿ ಶಿಕ್ಷಣ ಪಡೆಯುತ್ತಿರುವ ಆದಿ ಸ್ವರೂಪ, ಒಂದೂವರೆ ವರ್ಷದಲ್ಲೇ ಓದಲಾರಂಭಿಸಿದ್ದಳು. ಎರಡೂವರೆ ವರ್ಷದಲ್ಲಿದ್ದಾಗ ದಿನಕ್ಕೆ 30 ಪುಟ ಬರೆಯುತ್ತಿದ್ದಳು. ಈಗಾಗಲೇ 120 ಕಾದಂಬರಿಗಳನ್ನು ಓದಿರುವ ಆದಿ, ಈಗ ಒಂದು ಕಾದಂಬರಿ ಬರೆಯುತ್ತಿದ್ದಾಳೆ ಎನ್ನುತ್ತಾರೆ, ಆಕೆಯ ತಂದೆ ಗೋಪಾಲ್ ಗೋಪಾಡ್ಕರ್ ಮತ್ತು ತಾಯಿ ಸುಮಾಡ್ಕರ್.

ಮತ್ತಷ್ಟು ಸುದ್ದಿಗಳು

vertical

Latest News

ತೆಲಂಗಾಣದ ನೂತನ ಸಿಎಂ ಇವರೇ : ನಾಳೆಯೇ ಪ್ರಮಾಣ ವಚನ..!!

Newsics.com ಹೈದರಾಬಾದ್ : ತೆಲಂಗಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಇದೀಗ ಬಂದ...

ವಿಜಯಪುರ ಗೋದಾಮು ದುರಂತ : ಆರು ಮೃತದೇಹಗಳು ಪತ್ತೆ

Newsics.com ವಿಜಯಪುರ : ವಿಜಯಪುರ ರಾಜಗುರು ಫುಡ್ಸ್ ಗೋದಾಮಿನಲ್ಲಿ ಸಂಭವಿಸಿದ ದುರಂತದಲ್ಲಿ 7ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಈಗಾಗಲೇ ಆರು ಕಾರ್ಮಿಕರ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ನಿನ್ನೆ (ಡಿ.4) ರಾತ್ರಿ 11.30ರ...

ವರುಣನ ಅಬ್ಬರಕ್ಕೆ ತಮಿಳುನಾಡು ತತ್ತರ : ಐದು ಮಂದಿ ಸಾವು

Newsics.com ತಮಿಳುನಾಡು : ಮಿಚೌಂಗ್ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು ತತ್ತರಿಸಿ ಹೋಗಿದೆ. ಧಾರಾಕಾರ ಮಳೆಯಿಂದಾಗಿ ಇಡೀ ಚೆನ್ನೈ ಜಲಾವೃತವಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಮಿಚೌಂಗ್ ಚಂಡಮಾರುತದಿಂದಾಗಿ ಇಲ್ಲಿಯವರೆಗೆ ಐವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಚೆನ್ನೈನಲ್ಲಿ ವೇಗವಾಗಿ ಬೀಸುತ್ತಿರುವ ಗಾಳಿ...
- Advertisement -
error: Content is protected !!