Wednesday, May 31, 2023

Home

ಸ್ವಿಡ್ಜರ್​ಲ್ಯಾಂಡ್​ನಲ್ಲಿ ನಟಿ ಅದಿತಿ ಪ್ರಭುದೇವ ದಂಪತಿ

newsics.com ಬೆಂಗಳೂರು: ನಟಿ ಅದಿತಿ ಪ್ರಭುದೇವ ಪತಿಯೊಟ್ಟಿಗೆ ಸ್ವಿಟ್ಜರ್​ಲ್ಯಾಂಡ್​ನಲ್ಲಿ ಸುತ್ತಾಟ ಪ್ರವಾಸದಲ್ಲಿದ್ದಾರೆ. ಅದಿತಿ ಹಾಗೂ ಯಶಸ್ ಅವರ ವಿವಾಹ ನವೆಂಬರ್ 28, 2022 ರಲ್ಲಿ ನಡೆದಿದೆ. ಮದುವೆಯಲ್ಲಿ ಹಲವು ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಅದಿತಿ ಪ್ರಭುದೇವ ಸ್ವಿಟ್ಜರ್​ಲ್ಯಾಂಡ್​ನಲ್ಲಿ ರಜೆಯ ಮಜೆಯನ್ನು ಅನುಭವಿಸುತ್ತಿರುವ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್‌ ಮೀಡಿಐಆದಲ್ಲಿ ವೈರಲ್‌ ಆಗಿವೆ. https://newsics.com/news/india/farmers-of-vijayapura-and-bellary-were-killed-by-lightning-while-plowing-their-field/148421/

ಹೊಲದಲ್ಲಿ ಉಳುಮೆ ಮಾಡುತ್ತಲೇ ಸಿಡಿಲಿಗೆ ಬಲಿಯಾದ ರೈತರು

newsics.com ಬಳ್ಳಾರಿ : ಇಂದು ಸುರಿದ ಸಂಜೆ ಮಳೆಗೆ ವಿಜಯಪುರ ಹಾಗೂ ಬಳ್ಳಾರಿಯಲ್ಲಿ ಉಳುಮೆ ಮಾಡುತ್ತಿದ್ದ ರೈತರು ಹೊಲದಲ್ಲಿಯೇ ಸಾವನ್ನಪ್ಪಿದ್ದಾರೆ. ವಿಜಯಪುರ ತಾಲೂಕಿನ ಕಿರಶ್ಯಾಳ ಗ್ರಾಮದಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ಯುವ ರೈತನೊಬ್ಬ ಮೃತಪಟ್ಟರೆ ಇಬ್ಬರು ಮೂರ್ಛೆ ಹೋದ ಘಟನೆ ಜರುಗಿದೆ. ಕಿರಿಶ್ಯಾಳ ಗ್ರಾಮದ ದ್ಯಾಮಣ್ಣ ಸಿದ್ದಪ್ಪ ಸೀರೆಕಾರ (22) ಮೃತಪಟ್ಟವರು. ದ್ಯಾಮಣ್ಣ ಸೀರೆಕಾರ,...

ರಾಜಸ್ಥಾನದಲ್ಲಿ ನಡೆಯಲಿದೆ ಪರಿಣಿತಿ- ರಾಘವ್ ಮದುವೆ

newsics.com ಮುಂಬೈ:  ರಾಜಸ್ಥಾನದಲ್ಲಿ ನಟಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಮದುವೆ ಅದ್ದೂರಿಯಾಗಿ ನಡೆಯಲಿದೆ. ಬಿಟೌನ್ ‘ಲವ್ ಬರ್ಡ್ಸ್’ ರಾಘವ್ – ಪರಿಣಿತಿ ಚೋಪ್ರಾ  ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ದೆಹಲಿಯಲ್ಲಿ ಆಪ್ತರ ಸಮ್ಮುಖದಲ್ಲಿ ಮೇ 13ರಂದು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು.  ಉದಯ್‌ಪುರ, ಜೈಪುರ ಸೇರಿದಂತೆ ಹಲವು ಕಡೆ ಪರಿಣಿತಿ ಜೋಡಿ ಮದುವೆ ಸ್ಥಳ ನೋಡಿದ್ದಾರೆ ಎನ್ನಲಾಗುತ್ತಿದೆ. ರಾಜಸ್ಥಾನದಲ್ಲಿ  ಮದುವೆ...

ದಾಖಲೆ ಇಲ್ಲದೇ 2,000 ರೂ. ನೋಟು ವಿನಿಮಯ: ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ

newsics.com ನವದೆಹಲಿ: ದಾಖಲೆ ಇಲ್ಲದೆಯೇ 2,000 ರೂ. ಮುಖಬೆಲೆಯ ನೋಟುಗಳ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಸೋಮವಾರ ವಜಾ ಮಾಡಿತು. ಗುರುತಿನ ಚೀಟಿ ದಾಖಲೆಯಿಲ್ಲದೇ 2,000 ರೂ. ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಆರ್‌ಬಿಐ ಮತ್ತು ಎಸ್‌ಬಿಐ ಅವಕಾಶ ಕಲ್ಪಿಸಿತ್ತು. ಇದನ್ನು ಪ್ರಶ್ನಿಸಿ ವಕೀಲ ಅಶ್ವಿನಿ...

ಕೂಲಿ ಕಾರ್ಮಿಕರ ಮೇಲೆ ಬಿದ್ದ ಹೈಟೆನ್ಶನ್ ವೈಯರ್; 8 ಮಂದಿ ದುರ್ಮರಣ

newsics.com ಧನಾಬಾದ್: ಕೂಲಿ ಕಾರ್ಮಿಕರ ಮೇಲೆ ಹೈಟೆನ್ಶನ್ ವೈಯರ್ ಬಿದ್ದು, 8 ಮಂದಿ ದುರ್ಮರಣ ಹೊಂದಿದ್ದಾರೆ. ಈ ಜಾರ್ಖಂಡ್‌ನ ಧನಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ನಿಚಿತುಪರ ರೈಲ್ವೇ ಗೇಟ್ ಬಳಿ ಕಾಮಾಗಾರಿ ಕೈಗೆತ್ತಿಕೊಳ್ಳಲಾಗಿದೆ. ಇಲ್ಲಿ ಹೊಸ ವಿದ್ಯುತ್ ಕಂಬ, ಸೂಚನಾ ಫಲಕ ಸೇರಿದಂತೆ ಹಲವು ದುರಸ್ತಿ ಕಾಮಾಗಾರಿಯಲ್ಲಿ ಕಾರ್ಮಿಕರು ತೊಡಿಗಿದ್ದಾರೆ. ಇದೇ ವೇಳೆ...

ಟ್ರಾಫಿಕ್​ ಸಿಗ್ನಲ್‌ ಬಿದ್ದ ವೇಳೆ ಆಹಾರ ಸೇವಿಸಿದ BMTC ಚಾಲಕ!: ವೀಡಿಯೋ ವೈರಲ್‌

newsics.com ಬೆಂಗಳೂರು: ಟ್ರಾಫಿಕ್​ ಸಮ್ಯೆಯಿಂದಾಗಿ ಕೆಲವರು ಆಫೀಸ್​ಗೆ ತೆರಳುವ ಮಾರ್ಗಮಧ್ಯೆ ಲ್ಯಾಪ್​​ಟಾಪ್​ಅಲ್ಲಿ ಕೆಲಸ ಮಾಡುವುದನ್ನು ನಾವು ನೋಡಿದ್ದೇವೆ. ಈಗ ಟ್ರಾಫಿಕ್​ ಸಿಗ್ನಲ್‌ ಬಿದ್ದ ವೇಳೆ BMTC ಚಾಲಕನೊಬ್ಬ ಆಹಾರ ಸೇವಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಬಿಎಂಟಿಸಿ ಚಾಲಕನೋರ್ವ ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿರುವ ವೇಳೆ ಆತ ತನ್ನ ಊಟವನ್ನು ಸಿಗ್ನಲ್​ ಬಿಡುವಷ್ಟರಲ್ಲೇ ತಿಂದು ಮುಗಿಸುವುದು...

ಮಟನ್ ಕರಿಗಾಗಿ ಜೈಲರ್‌ಗಳ ಮೇಲೆ ಕೈದಿಗಳ ದಾಳಿ

newsics.com ಕೇರಳ: ತಿರುವನಂತಪುರಂನಲ್ಲಿ ಜೈಲಿನಲ್ಲಿ ನೀಡಲಾದ ಕುರಿ ಮಾಂಸದ ಪ್ರಮಾಣದಿಂದ ಅತೃಪ್ತಿಗೊಂಡ ಖೈದಿಯೊಬ್ಬ ಜೈಲು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾನೆ. "ಸಾಮಾನ್ಯವಾಗಿ ಶನಿವಾರದಂದು, ನಾವು ಕೈದಿಗಳಿಗೆ ಮಟನ್ ಕರಿ ಬಡಿಸುತ್ತೇವೆ.  ಸಾಮಾನ್ಯ ಪ್ರಮಾಣವನ್ನು ನೀಡಲಾಯಿತು ಆದರೆ ಅವರು ಸಾಮಾನ್ಯವಾಗಿ ಬಡಿಸುವುದಕ್ಕಿಂತ ಹೆಚ್ಚಿನದನ್ನು ಬಯಸಿದರು" ಎಂದು ಅಧಿಕಾರಿಯೊಬ್ಬರು ಹೇಳಿದರು. ಊಟವನ್ನು ಕಸದ ಬುಟ್ಟಿಗೆ ಎಸೆದರು ಮತ್ತು ಹಿರಿಯ ಜೈಲು ಅಧಿಕಾರಿಗಳನ್ನು...

ಬಾಲ್ಯ ವಿವಾಹ ತಡೆದ ಅಧಿಕಾರಿಗಳು, ಬಾಲಕಿಯ ರಕ್ಷಣೆ

newsics.com ಧಾರವಾಡ: ಬಾಲ್ಯ ವಿವಾಹದ ಬಗ್ಗೆ ಸೂಕ್ತ ಅರಿವಿಲ್ಲದೇ ಅಪ್ರಾಪ್ತೆಯನ್ನು ಮದುವೆ ಮಾಡಿ ಕೊಡುತ್ತಿದ್ದ ಕುಟುಂಬಕ್ಕೆ ಅಧಿಕಾರಿಗಳು ತಿಳಿ ಹೇಳಿ ಮದುವೆ ನಿಲ್ಲಿಸಿದ ಘಟನೆ ಕುಂದಗೋಳ ತಾಲೂಕಿನ ರಟಗೇರಿ ಗ್ರಾಮದಲ್ಲಿ ಇಂದು ನಡೆದಿದೆ. ಕುಂದಗೋಳ ತಾಲೂಕಿನ ರಟಗೇರಿ ಗ್ರಾಮದ ಕುಟುಂಬವೊಂದರಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯೋರ್ವಳನ್ನು ಇಂದು ಮದುವೆ ನಿಶ್ಚಿಯಿಸಿ ವಿವಾಹ ಮಾಡಿಕೊಡಲು ಕುಟುಂಬಸ್ಥರು ನಿರ್ಧರಿಸಿದ್ದರು. ಮಹಿಳಾ...

ಕಾಂತಾರ ಬೆಡಗಿ ಸಪ್ತಮಿ ಗೌಡ ಕ್ಯೂಟ್ ಫೋಟೋ ವೈರಲ್

newsics. Com ಬೆಂಗಳೂರು :ಕಾಂತಾರ’ ಬೆಡಗಿ ಸಪ್ತಮಿ ಗೌಡ ಇದೀಗ ಹೊಸ ಫೋಟೋಶೂಟ್‌ನಲ್ಲಿ ಕಂಗೊಳಿಸಿದ್ದಾರೆ. ಇತ್ತೀಚಿನ ಸಿನಿಮಾ ಸಮಾರಂಭದಲ್ಲಿ ನಟಿ ಸಪ್ತಮಿ, ನೀಲಿ ಬಣ್ಣದ ಡ್ರೆಸ್ ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸಿಂಗಾರ ಸಿರಿಯ ನಯಾ ಫೋಟೋ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ....

ಜೂನ್‌ನಲ್ಲಿ ಅಂಬಿ ಪುತ್ರನ ಅದ್ದೂರಿ ಮದುವೆ- ಆಮಂತ್ರಣ ಪತ್ರಿಕೆ ಇಲ್ಲಿದೆ

newsics. Com ಬೆಂಗಳೂರು : ಸ್ಯಾಂಡಲ್‌ವುಡ್ ನಟ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಮದುವೆಗೆ ದಿನಗಣನೆ ಶುರುವಾಗಿದೆ. ಚಂದನವನದಲ್ಲಿ ಮತ್ತೊಂದು ಜೋಡಿ ಹಸೆಮಣೆ ಏರೋದಕ್ಕೆ ಸಜ್ಜಾಗಿದೆ. ಅಂಬಿ ಪುತ್ರನ ಮದುವೆ ಯಾವಾಗ? ಎಲ್ಲಿ ಮದುವೆ ನಡೆಯಲಿದೆ. ಆಮಂತ್ರಣ ಪತ್ರಿಕೆ ಹೇಗಿದೆ.?...

ಚೀನಾದಲ್ಲಿ ಶತಮಾನದ ಅತಿ‌ ಹೆಚ್ಚು ತಾಪಮಾನ

newsics.com ಶಾಂಘೈ: ಕಳೆದ 100 ವರ್ಷಗಳಲ್ಲೇ ಅತಿ ಹೆಚ್ಚಿನ ತಾಪಮಾನ ಚೀನಾದ ಶಾಂಘೈನಲ್ಲಿ ಸೋಮವಾರ ದಾಖಲಾಗಿದೆ. ಚೀನಾ ಹವಾಮಾನ ಇಲಾಖೆ ಈ‌ ಮಾಹಿತಿ ನೀಡಿದ್ದು, ಸೋಮವಾರ ಮಧ್ಯಾಹ್ನ 1.09ರ ಸಮಯದಲ್ಲಿ ಶುಯಿಜಿ ಮೆಟ್ರೊ ನಿಲ್ದಾಣದಲ್ಲಿ 36.1 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಮಧ್ಯಾಹ್ನದ ನಂತರ, ಶಾಂಘೈನ ಕೇಂದ್ರ ಮೆಟ್ರೊ ನಿಲ್ದಾಣದಲ್ಲಿ ತಾಪಮಾನವು 36.7 ಡಿಗ್ರಿ ಸೆಲ್ಸಿಯಸ್‌ಗೆ...

ಗೂಗಲ್‌ನಲ್ಲಿ ಲೈಂಗಿಕ‌ ವಿಷಯ ಹುಡುಕಾಟ: ಶೇ.1,300ರಷ್ಟು ಹೆಚ್ಚಳ!

newsics.com ಸ್ಯಾನ್ ಫ್ರಾನ್ಸಿಸ್ಕೋ: ಲೈಂಗಿಕ ವಿಷಯಗಳ ಕುರಿತಾದ ಹುಡುಕಾಟ ಗೂಗಲ್‌ನಲ್ಲಿ 2004 ರಿಂದ 2023ರವರೆಗೆ 1,300 ಪ್ರತಿಶತದಷ್ಟು ಪ್ರಮಾಣ ಹೆಚ್ಚಳವಾಗಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆಯಾದ ಕಲ್ಚರಲ್ ಕರೆಂಟ್ಸ್ ಇನ್‌ಸ್ಟಿಟ್ಯೂಟ್ ನಡೆಸಿದ ಸಂಶೋಧನೆಯಲ್ಲಿ ಈ‌ ಮಾಹಿತಿ ಬಹಿರಂಗವಾಗಿದೆ. ಅಮೆರಿಕದಲ್ಲಿ ಲೈಂಗಿಕ ದೃಷ್ಟಿಕೋನ ಮತ್ತು ಲಿಂಗ ಗುರುತಿಸುವಿಕೆಗೆ ಸಂಬಂಧಿಸಿದ ವಿಷಯಗಳಿಗಾಗಿ ಜನವರಿ 2004 ರಿಂದ ಮೇ 2023 ರವರೆಗಿನ ಎಲ್ಲ...

ಕುರುಬೂರು ಬಳಿ ಖಾಸಗಿ‌ ಬಸ್ ಕಾರು ಡಿಕ್ಕಿ: ಹತ್ತು‌ ಮಂದಿ ಸಾವು

newsics.com ಚಾಮರಾಜನಗರ: ಜಿಲ್ಲೆಯ ಕುರುಬೂರು ಗ್ರಾಮದ ಪಿಂಜರಪೋಲ್ ಬಳಿ ಸೋಮವಾರ ಖಾಸಗಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಹತ್ತು‌ ಮಂದಿ ಮೃತಪಟ್ಟಿದ್ದಾರೆ. ಮೂವರ ಸ್ಥಿತಿ‌ ಚಿಂತಾಜನಕವಾಗಿದೆ. 19 ಮಂದಿ ಗಾಯಗೊಂಡಿದ್ದಾರೆ. ಸೋಮವಾರ ಮಧ್ಯಾಹ್ನ ಕೊಳ್ಳೇಗಾಲ - ಟಿ.ನರಸೀಪುರ ಮುಖ್ಯ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಪ್ರವಾಸಕ್ಕೆ ಬಂದಿದ್ದ ಬಳ್ಳಾರಿಯ ಸಂಗನಕಲ್ಲು ಗ್ರಾಮದ 12 ಜನರ ತಂಡ ಮೈಸೂರಿನಿಂದ...

ಅರ್ಜುನ್ ಕಪೂರ್ ಖಾಸಗಿ ಫೋಟೋ ಶೇರ್ ಮಾಡಿದ ಮಲೈಕಾ!

newsics.com ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ಜೋಡಿ ಅಂದರೆ ಅರ್ಜುನ್- ಮಲೈಕಾ ಅರೋರಾ. ಸಿನಿಮಾಗಿಂತ ಖಾಸಗಿ ವಿಚಾರವಾಗಿಯೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಮಲೈಕಾ ಮಾಡಿದ ಒಂದು ಕೆಲಸದಿಂದ ಅರ್ಜುನ್ ಕಪೂರ್ ಸಖತ್ ಟ್ರೋಲ್ ಆಗುತ್ತಿದ್ದಾರೆ. ಮಲೈಕಾ- ಅರ್ಜುನ್ ಕಪೂರ್ ರಿಲೇಷನ್‌ಶಿಪ್ ಇದೀಗ ಗುಟ್ಟಾಗಿ ಏನು ಉಳಿದಿಲ್ಲ. ಅರ್ಬಾಜ್ ಖಾನ್ ಜತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಮಲೈಕಾ,...

ಪೊಲೀಸರಿಂದ ತಪ್ಪಿಸಿಕೊಳ್ಳಲು ಕದ್ದ ಚಿನ್ನದ ಸರವನ್ನೇ ನುಂಗಿದ ಕಳ್ಳ!

newsics.com ರಾಂಚಿ: ಕಳ್ಳನೊಬ್ಬ ಮಹಿಳೆಯ ಕತ್ತಿನಿಂದ ಚಿನ್ನದ ಸರ ಕದ್ದು ಪರಾರಿಯಾಗುವಾಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಸರ ನುಂಗಿ ಗಂಟಲಲ್ಲಿ ಸಿಲುಕಿ ನರಳಾಡಿದ ಘಟನೆ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದಿದೆ. ಡೊರಾಂಡಾ ಪೊಲೀಸ್ ಠಾಣಾ ವ್ಯಾಪ್ತಿಯ ದುಬಾದಿ ಸೇತುವೆ ಬಳಿ ಸಲ್ಮಾನ್ ಮತ್ತು ಜಾಫರ್ ಎಂಬ ಇಬ್ಬರು ಕಳ್ಳರು ಮಹಿಳೆಯ ಕತ್ತಿನಲ್ಲಿ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾರೆ. ಸರ ಕಸಿದುಕೊಂಡ ನಂತರ...

GSLV-F12 ಮತ್ತು NVS-01 ಉಪಗ್ರಹ ಉಡಾವಣೆ ಮಾಡಿದ ಇಸ್ರೋ

nwsics.com ಚೆನ್ನೈ: ಇಸ್ರೋ ಶ್ರೀಹರಿಕೋಟಾದಿಂದ ತನ್ನ ಸುಧಾರಿತ ನ್ಯಾವಿಗೇಷನ್ ಉಪಗ್ರಹ GSLV-F12 ಮತ್ತು NVS-01 ನ್ನು  ಉಡಾವಣೆ ಮಾಡಿದೆ. ನ್ಯಾವಿಗೇಷನ್ ಸೇವೆಗಳನ್ನು ಸುಧಾರಿಸಲು ಮತ್ತು ವ್ಯವಸ್ಥೆಗೆ ಹೊಸ ವಿಚಾರಗಳನ್ನು ಪರಿಚಯಿಸಲು ಈ ಉಡಾವಣೆ ಮಾಡಲಾಗಿದೆ. ಮೇಲ್ವಿಚಾರಣೆ ಮತ್ತು ನ್ಯಾವಿಗೇಷನ್ ಸಾಮರ್ಥ್ಯಗಳನ್ನು ಹೆಚ್ಚಿಸಲು ಈ ಉಪಗ್ರಹ ಉಡಾವಣೆ ಮಾಡಲಾಗಿದೆ. ಇದು 2,232 ಕೆಜಿ ತೂಕದ ನ್ಯಾವಿಗೇಷನ್ ಉಪಗ್ರಹವಾಗಿದೆ. ಸುಮಾರು 251 ಕಿಮೀ...

ಸಿಬ್ಬಂದಿ ಹಾಗೂ ಪೊಲೀಸರ ನಿರ್ಲಕ್ಷ್ಯ: ರೈಲಿನಲ್ಲೇ ಒದ್ದಾಡಿ ಪ್ರಾಣಬಿಟ್ಟ ಮೂರ್ಛೆ ರೋಗಿ

newsics.com ಮಂಡ್ಯ: ರೈಲ್ವೆ ಸಿಬ್ಬಂದಿ ಹಾಗೂ ಪೊಲೀಸರ ನಿರ್ಲಕ್ಷ್ಯದಿಂದ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿನಲ್ಲಿ ಮೂರ್ಛೆ ರೋಗಿ ನರಳಿ ನರಳಿ ಪ್ರಾಣ ಬಿಟ್ಟಿರುವ ಘಟನೆ ಮೈಸೂರು ಹಾಗೂ ಮಂಡ್ಯ ನಡುವಿನ ರೈಲು ಪ್ರಯಾಣದಲ್ಲಿ ಜರುಗಿದೆ. ಮೈಸೂರಿನ ರಮಾಬಾಯಿ ನಗರದ ನಿವಾಸಿ ಸ್ವಾಮಿ (83) ಸಾವನ್ನಪ್ಪಿರುವ ವ್ಯಕ್ತಿ. ಭಾನುವಾರ ಸಂಜೆ ಮೈಸೂರಿನಿಂದ ಬೆಂಗಳೂರಿಗೆ ಪ್ಯಾಸೆಂಜರ್ ರೈಲಿನಲ್ಲಿ ಸ್ವಾಮಿ ಪ್ರಯಾಣಿಸುತ್ತಿದ್ದರು. ಮೈಸೂರಿನಲ್ಲಿ ರೈಲು...

ಬಾಹ್ಯಾಕಾಶಕ್ಕೆ ನಾಗರಿಕರನ್ನು ಕಳುಹಿಸಲು ಮುಂದಾದ ಚೀನಾ

newsics.com ಚೀನಾ:  ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣಕ್ಕೆ ಸಿಬ್ಬಂದಿ ಕಾರ್ಯಾಚರಣೆಯ ಭಾಗವಾಗಿ ಮಂಗಳವಾರ ಮೇ 30ರಂದು ಇದೇ ಮೊದಲ ಬಾರಿಗೆ ಚೀನಾ ನಾಗರಿಗ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುತ್ತಿದೆ ಎಂದು ಇಲ್ಲಿಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಈವರೆಗೆ ಬಾಹ್ಯಾಕಾಶಕ್ಕೆ ತೆರಳಿದ್ದ ಎಲ್ಲಾ ಗಗನಯಾತ್ರಿಗಳು ಪೀಪಲ್ಸ್ ಲಿಬರೇಶನ್ ಆರ್ಮಿಯ ಭಾಗವಾಗಿದ್ದರು. ಬೀಜಿಂಗ್ ಏರೋನಾಟಿಕ್ಸ್ ಮತ್ತು ಆಸ್ಟ್ರೋನಾಟಿಕ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಪೇಲೋಡ್ ತಜ್ಞ ಗುಯಿ...

ಮತ್ತೆ ಭುಗಿಲೆದ್ದ ಮಣಿಪುರ ಹಿಂಸಾಚಾರ: 40 ಭಯೋತ್ಪಾದಕರ ಹತ್ಯೆ

newsics.com ಮಣಿಪುರ: ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಎಂಟು ಗಂಟೆಗಳ ಕಾಲ ಪೊಲೀಸ್ ಕಮಾಂಡೋಗಳು ನಡೆಸಿದ ಕಾರ್ಯಾಚರಣೆಯಲ್ಲಿ 40 ಭಯೋತ್ಪಾದಕರ ಹತ್ಯೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಎನ್‌ ಬಿರೇನ್‌ ಸಿಂಗ್‌ ಮಾಹಿತಿ ನೀಡಿದ್ದಾರೆ. ಭಾನುವಾರ ನಡೆದ ಗಲಭೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಒಂದು ತಿಂಗಳಿನಿಂದ ನಡೆಯುತ್ತಿರುವ ಗಲಾಟೆಯಲ್ಲಿ...

ಮುರುಘಾ ಮಠದ ಉಸ್ತುವಾರಿಯಾಗಿ ಬಸವಪ್ರಭು ಸ್ವಾಮೀಜಿ ಆಯ್ಕೆ

newsics.com ಚಿತ್ರದುರ್ಗ: ಮಠ ಮತ್ತು ಎಸ್‌ಜೆಎಂ ಶಿಕ್ಷಣ ಸಂಸ್ಥೆಗಳ ದೈನಂದಿನ ವ್ಯವಹಾರಗಳ ಮೇಲ್ವಿಚಾರಣೆ ಮಾಡಲು ರಚಿಸಲಾದ ತಾತ್ಕಾಲಿಕ ಆಡಳಿತ ಸಮಿತಿಯು ಮುರುಘಾ ಮಠದ ಉಸ್ತುವಾರಿಯಾಗಿ ಬಸವಪ್ರಭು ಸ್ವಾಮೀಜಿ ಅವರನ್ನು ಆಯ್ಕೆ ಮಾಡಿದೆ. ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಪೋಕ್ಸೋ ಪ್ರಕರಣ ಇತ್ಯರ್ಥವಾಗುವವರೆಗೆ ತಾತ್ಕಾಲಿಕ ಆಡಳಿತ ಸಮಿತಿ ರಚನೆ ಮಾಡುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಇದರಂತೆ...

ಅಸ್ಸಾಂನಲ್ಲಿ ಭೀಕರ ರಸ್ತೆ ಅಪಘಾತ: 7 ಮಂದಿ ಸಾವು, ಹಲವರಿಗೆ ಗಾಯ

newsics.com ಗುವಾಹಟಿ: ಅಸ್ಸಾಂ ರಾಜ್ಯದ ಗುವಾಹಟಿ ಜಲುಕ್ಬರಿ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಕನಿಷ್ಟ 7 ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಮೃತ 7 ಮಂದಿ ವಿದ್ಯಾರ್ಥಿಗಳಾಗಿದ್ದಾರೆಂದು ಪ್ರಾಥಮಿಕ ತನಿಖಾ ವರದಿಗಳಿಂದ ತಿಳಿದುಬಂದಿದೆ ಎಂದು ಗುವಾಹಟಿಯ ಜಂಟಿ ಪೊಲೀಸ್ ಕಮಿಷನರ್ ತುಬೆ ಪ್ರತೀಕ್ ವಿಜಯ್ ಕುಮಾರ್ ಅವರು...

ಟರ್ಕಿ ಅಧ್ಯಕ್ಷರಾಗಿ ಮತ್ತೆ ಎರ್ಡೋಗನ್‌ ಆಯ್ಕೆ

ಮತ್ತೊಂದು ಅವಧಿಗೆ ಟರ್ಕಿ ಅಧ್ಯಕ್ಷರಾಗಿ ರೆಸೆಪ್‌ ತಯ್ಯಿಪ್‌ ಎರ್ಡೋಗನ್‌ ಅವರು ಗೆಲವು ಸಾಧಿಸಿದ್ದಾರೆ ಎಂದು ವರದಿ ತಿಳಿಸಿದೆ. 

ಮಹಾಕಾಲ್ ಕಾರಿಡಾರ್ ನಲ್ಲಿರುವ ಸಪ್ತಋಷಿಗಳ ಪ್ರತಿಮೆಗಳಿಗೆ ಹಾನಿ: ಇಬ್ಬರು ಸಾವು

newsics.com ಮಧ್ಯಪ್ರದೇಶ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನದಲ್ಲಿರುವ ಮಹಾಕಾಲ್ ಲೋಕ್ ಕಾರಿಡಾರ್ ನಲ್ಲಿರುವ ಸಪ್ತಋಷಿಗಳ ಪ್ರತಿಮೆಗಳಿಗೆ ಹಾನಿಯಾಗಿದೆ. ಭಾನುವಾರ ಭಾರಿ ಗಾಳಿ, ಮಳೆಯಾಗಿದ್ದು, ಏಳು ಪ್ರತಿಮೆಗಳಲ್ಲಿ 6 ಪ್ರತಿಮೆಗಳು ಸ್ಥಳಾಂತರಗೊಂಡಿವೆ. ಎರಡು ಪ್ರತಿಮೆಗಳಿಗೆ ಹಾನಿಯುಂಟಾಗಿದೆ. ಹಾಗೆಯೇ ಇಬ್ಬರು ಬಲಿಯಾಗಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಪ್ರತಿಮೆಗಳನ್ನು ಅನಾವರಣಗೊಳಿಸಿದ್ದರು.ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಉಜ್ಜಯಿನಿ ಜಿಲ್ಲಾಧಿಕಾರಿ...

ಈ 9 ಜಿಲ್ಲೆಗಳಲ್ಲಿ ಜೂನ್ 2 ರವರೆಗೆ ಭಾರಿ ಮಳೆ ಸಾಧ್ಯತೆ: ಯೆಲ್ಲೋ ಅಲರ್ಟ್ ಘೋಷಣೆ

newsics.com ಬೆಂಗಳೂರು:ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಚಾಮರಾಜನಗರ, ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ರಾಮನಗರ ಜಿಲ್ಲೆಗಳಲ್ಲಿ ಜೂನ್ 2ರವರೆಗೂ ಅಧಿಕ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನುಳಿದಂತೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಕೊಪ್ಪಳ, ರಾಯಚೂರು, ವಿಜಯಪುರ, ಮೈಸೂರು, ವಿಜಯನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ...

ನೂತನ ಸಚಿವರ ಖಾತೆ ಹಂಚಿಕೆ ಅಧಿಕೃತ ಪಟ್ಟಿ ಇಲ್ಲಿದೆ: ಯಾರಿಗೆ ಯಾವ ಖಾತೆ?

newsics.com ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದ ಸಚಿವರಿಗೆ ಭಾನುವಾರ ರಾತ್ರಿ ಖಾತೆ ಹಂಚಿಕೆ ಮಾಡಲಾಗಿದೆ. ಸಾರಿಗೆ ಖಾತೆ ಹಂಚಿಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ರಾಮಲಿಂಗಾರೆಡ್ಡಿ ಅವರಿಗೆ ಸಾರಿಗೆ ಖಾತೆಯ ಜತೆಗೆ ಹೆಚ್ಚುವರಿಯಾಗಿ ಮುಜರಾಯಿ ಖಾತೆಯನ್ನೂ ನೀಡಲಾಗಿದೆ. ಯಾರಿಗೆ, ಯಾವ ಖಾತೆ? ಸಿದ್ದರಾಮಯ್ಯ (ಮುಖ್ಯಮಂತ್ರಿ); ಹಣಕಾಸು, ಆಡಳಿತ ಸುಧಾರಣೆ, ಗುಪ್ತಚರ, ವಾರ್ತಾ ಇಲಾಖೆ ಮತ್ತು ಹಂಚಿಕೆಯಾಗದೆ ಉಳಿರುವ ಖಾತೆಗಳು ಡಿ.ಕೆ.ಶಿವಕುಮಾರ್...

ಶ್ವಾನದ ವಾರ್ಷಿಕ ತಿಥಿ ನೆರವೇರಿಸಿದ ಕುಟುಂಬ

newsics.com ಥಾಣೆ: ಮಹಾರಾಷ್ಟ್ರದ ಥಾಣೆಯ ಕುಟುಂಬವೊಂದು ವರ್ಷದ ಹಿಂದೆ ಮೃತಪಟ್ಟ ತಮ್ಮ ಮುದ್ದಿನ ನಾಯಿಯ ಹೆಸರಿನಲ್ಲಿ ದೇವಸ್ಥಾನದಲ್ಲಿ ವರ್ಷದ ತಿಥಿ ನೆರವೇರಿಸುವ ಮೂಲಕ ಶ್ವಾನ ಪ್ರೇಮವನ್ನು ಮೆರೆದಿದೆ. ಖೋಪಟ್ ನಿವಾಸಿಯಾದ ಕೇತನ್ ಜಾಧವ್ ತಮ್ಮ ನಾಯಿಯ ಶ್ರಾದ್ಧ ನೆರವೇರಿಸಿದ್ದಾರೆ. ಕೇತನ್ ಸಾಕಿಕೊಂಡಿದ್ದ ಪೊಮೆರೇನಿಯನ್ ನಾಯಿ ಶೆರೂ ವರ್ಷದ ಹಿಂದೆ ಮೃತಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಕೌಪಿಣೇಶ್ವರ ದೇಗುಲದಲ್ಲಿ ಅರ್ಚಕ ಸಚಿನ್...

ಬಂಗಾರ ಖರೀದಿಗೆ ಉತ್ತಮ ಸಮಯ: ಚಿನ್ನದ ಬೆಲೆ ಯಥಾಸ್ಥಿತಿ

newsics.com ಬೆಂಗಳೂರು: ಸತತ ನಾಲ್ಕು ದಿನಗಳಿಂದ ಚಿನ್ನದ ಬೆಲೆ ಇಳಿಕೆಯಾಗಿದ್ದು, ಇಂದು (ಮೇ 29) ಚಿನ್ನಾಭರಣ ದರದಲ್ಲಿ ಯಾವುದೇ ಏರಿಕೆಯಾಗದೆ ತಟಸ್ಥವಾಗಿದೆ. ನಿನ್ನೆಗೆ ಹೋಲಿಸಿದರೆ ಯಾವುದೇ ವ್ಯತ್ಯಾಸವಾಗಿಲ್ಲ. ಬೆಂಗಳೂರಿನಲ್ಲಿ ಇಂದು 10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ (22 carat gold rate) 55,600 ರೂ. ಇದೆ. ಇದೇ ರೀತಿ, 10 ಗ್ರಾಂ ಅಪರಂಜಿ ಚಿನ್ನದ...

‘ಗಂಡನನ್ನು ರಿಲೀಸ್‌ ಮಾಡಿ, ಇಲ್ದಿದ್ರೆ ಬಂಜೆ ಆಗ್ತೇನೆ..’; ಕೋರ್ಟ್‌ಗೆ ಮಹಿಳೆಯ ಮನವಿ

newsics.com ನವದೆಹಲಿ: ಕೊಲೆ ಅಪರಾಧದಲ್ಲಿ ಜೈಲನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ವ್ಯಕ್ತಿಗೆ ಕೋರ್ಟ್‌ 90 ದಿನಗಳ ಪೆರೋಲ್‌ ಮೇಲೆ ರಿಲೀಸ್‌ ಮಾಡಿದೆ. ಅದಕ್ಕೆ ಕಾರಣ ಆತನ ಪತ್ನಿ ಕೋರ್ಟ್‌ಗೆ ಹಾಕಿದ್ದ ಒಂದೇ ಒಂದು ಅರ್ಜಿ. ವಿಕ್ಕಿ ಆನಂದ್‌ ಪಟೇಲ್‌ ಏಳು ವರ್ಷಗಳ ಹಿಂದೆ ನಳಂದಾದಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ, 16 ದಿನಗಳ ಬಳಿಕ ಆಸ್ಪತ್ರೆಯಲ್ಲಿ...

2,000 ರೂ. ನೋಟುಗಳನ್ನು ಸ್ವೀಕರಿಸಲಾಗುತ್ತಿದೆ: KSRTC

newsics.com ಬೆಂಗಳೂರು: ದೇಶಾದ್ಯಂತ ಎರಡು ಸಾವಿರ ರೂ. ನೋಟ್‌ ಚಲಾವಣೆಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ಈ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ. ಕರ್ನಾಟಕ ಬಸ್‌ಗಳಲ್ಲಿ ₹2,000 ನೋಟುಗಳನ್ನು ಸ್ವೀಕರಿಸುತ್ತಿಲ್ಲ ಎಂದು ದೂರುಗಳು ಬಂದ ನಂತರ ಕೆಎಸ್‌ಆರ್‌ಟಿಸಿ ಸ್ಪಷ್ಟನೆ ನೀಡಿದೆ. ಇತ್ತೀಚೆಗೆ ಹಿಂಪಡೆದ ₹ 2,000 ನೋಟುಗಳನ್ನು ಕೆಲವು ಕಂಡಕ್ಟರ್‌ಗಳು ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ ಎಂಬ ಹಲವು ದೂರುಗಳನ್ನು ಸ್ವೀಕರಿಸಿದ...

ಮೇ 31ರಿಂದ ಶಾಲೆಗಳು ಆರಂಭ

newsics.com ಬೆಂಗಳೂರು: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮೇ 31ರಂದು ಶಾಲಾ ಪ್ರಾರಂಭೋತ್ಸವವನ್ನು ಮಾಡುವಂತೆ ಶಾಲಾ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ. ಮೇ 29 ಮತ್ತು 30ರಂದು ಶಾಲೆಗಳನ್ನು ಸ್ವಚ್ಛಗೊಳಿಸಿ ಪ್ರಾರಂಭೋತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದೆ. 2022-23ನೇ ಸಾಲಿನ ಶೈಕ್ಷಣಿಕ ಚಟುವಟಿಕೆ, ಪರೀಕ್ಷೆಗಳು ಮುಕ್ತಾಯಗೊಂಡ ಬಳಿಕ ಏ.11ರಿಂದ ಮೇ 28ರ ವರೆಗೆ ರಾಜ್ಯಾದ್ಯಂತ ಶಾಲೆಗಳಿಗೆ ಸುಮಾರು ಎರಡು ತಿಂಗಳ...
- Advertisement -

Latest News

ಅಶ್ವಥ್‌ ನಾರಾಯಣ್‌ಗೆ ಹೈಕೋರ್ಟ್‌ನಿಂದ 4 ವಾರಗಳ ತಾತ್ಕಾಲಿಕ ರಿಲೀಫ್

newsics.com ಬೆಂಗಳೂರು: ಟಿಪ್ಪು ರೀತಿ ಸಿದ್ದರಾಮಯ್ಯರನ್ನು ಮುಗಿಸಬೇಕು ಎಂದಿದ್ದ ಮಾಜಿ ಮಂತ್ರಿ ಅಶ್ವಥ್‍ ನಾರಾಯಣ್‍ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಮೈಸೂರಿನ ದೇವರಾಜ ಠಾಣೆಯಲ್ಲಿ ದಾಖಲಾಗಿದ್ದ ಎಫ್‍ಐಆರ್...
- Advertisement -

ವಿಶಿಷ್ಟ ಪಕ್ಷಿತಾಣ ಸೂಳೆಕೆರೆ

ಕೊಕ್ಕರೆಬೆಳ‍್ಳೂರಿಗೆ ಬರುವ ಹೆಜ್ಜಾರ್ಲೆಗಳಿಗೆ ಆಹಾರ ಒದಗಿಸುವ ಬಹುದೊಡ್ಡ ಮೂಲ ಈ ಮಂಡ್ಯ ಜಿಲ್ಲೆಯ ಸೂಳೆಕೆರೆ. ಇದು ಕೊಕ್ಕರೆಬೆಳ್ಳೂರಿನಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿದೆ. ಮಂಡ್ಯದ ಕನಳಿ ಹಳ್ಳಿ ಈ ಕೆರೆಯ ತಾಣ. ಆಹಾರಕ್ಕಾಗಿ...

ಸ್ವಾರ್ಥ ಮತ್ತು ರಕ್ಷಿತಾರಣ್ಯ

ಅಭಿವೃದ್ಧಿ ಯೋಜನೆಗಳು ಎಂದಾಗ ಅವು ನಮ್ಮ ಸಮಗ್ರ ಅಭಿವೃದ್ಧಿಯ ಯೋಜನೆಗಳಾಗಿರಬೇಕೇ ಹೊರತಾಗಿ ಅಭಿವೃದ್ಧಿಯ ಹೆಸರಿನಲ್ಲಿ ಯಾರದೋ ಸ್ವಾರ್ಥ ಸಾಧನೆಯಾಗುತ್ತಿರಬಾರದು. ಜನಸಾಮಾನ್ಯರಲ್ಲಿ ಸಂರಕ್ಷಣೆ ಕುರಿತಾದ ಅಜ್ಞಾನವಿರುವವರೆಗೂ ಈ ಶೇಕಡಾ ಇಪ್ಪತ್ತರಷ್ಟು ಜನ ಉಳಿದವರ...

ಸ್ವಾರ್ಥ, ಅಜ್ಞಾನದ ಪರಿಧಿ

ಬಹಳ ಹಿಂದೆ ಕಾಡುಗಳನ್ನು ಕಡಿದು ಭೂಮಿಯನ್ನು ರೆವಿನ್ಯೂ ಇಲಾಖೆಗೆ ವರ್ಗಾಯಿಸುವುದೇ ಅರಣ್ಯ ಇಲಾಖೆಯ ಕಾರ್ಯವಾಗಿತ್ತು. ಯಾವುದೋ ಕಾರಣಕ್ಕೆ ಮಂಜೂರಾದ ಭೂಮಿಗಿಂತಲೂ ಹೆಚ್ಚು ಭೂಮಿಯನ್ನು ಬಳಸಿಕೊಂಡವನು ಶಾಣ್ಯಾ ಎಂಬ ಭಾವವೇ ಬಲಿಯಿತು. ನಾನಾ ಕಾರಣಗಳಿಗಾಗಿ...

ಸಂಘರ್ಷ, ಸಹಬಾಳ್ವೆ…

ಕಾಡಿನಲ್ಲಿ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಹೊಲ, ಗದ್ದೆ ತೋಟಗಳನ್ನು ಮಾಡಿಕೊಂಡಿರುವವರ ಅನುಭವವೇನು? ಮೇಲೆ ಕಾಣಿಸಿದಂತಹ ಸಹಬಾಳ್ವೆಯೇ? ಅಲ್ಲ, ಅದೊಂದು ದುಃಸ್ವಪ್ನ! ಬೆಳೆದ ಬೆಳೆಯ ತಿಲಾಂಶವೂ ಕೈಗೆ ಬಾರದು. ಪಕ್ಷಿ ಸಂರಕ್ಷಣೆ 51 ♦...
error: Content is protected !!