Wednesday, May 31, 2023

ಸಾಹಿತ್ಯ

ಮನಸ್ಸಿನ ಉಲ್ಲಾಸಕ್ಕಾಗಿ ಮಾಡಿ ‘ಮಾನಸ ಪೂಜೆ’

newsics.com ಇಂದು ಭಕ್ತಿಗಿಂತ ಆಡಂಬರವೇ ಹೆಚ್ಚಿದೆ. ದೇವರ ಪೂಜೆಯಲ್ಲೂ ಶ್ರದ್ಧಾಭಕ್ತಿ‌‌ ಕಡಿಮೆಯಾಗಿ ತೋರಿಕೆಯ ಪ್ರದರ್ಶನ ಕಾಣುತ್ತಿದೆ. ಈ ಸನ್ನಿವೇಶದಲ್ಲಿ ಹಾಗೂ ಎಲ್ಲ ಸಂದರ್ಭಗಳಲ್ಲೂ 'ಮಾನಸ ಪೂಜೆ' ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ಏನಿದು ಮಾನಸ ಪೂಜೆ?: ಮನಸ್ಸಿನಲ್ಲಿ ಇಷ್ಟದೇವರ ಮೂರ್ತಿಯನ್ನು ಸೃಷ್ಟಿಸಿ ಕೊಂಡು, ಮನದಲ್ಲೇ ಮಾಡುವ ಪೂಜೆಯೇ ಮಾನಸ ಪೂಜೆ. ಇದಕ್ಕೆ ಯಾವುದೇ ತಯಾರಿ ಬೇಡ, ಯಾವುದೇ ನಿಖರವಾದ ಸ್ಥಳ ಬೇಡ,...

ನನ್ನಜ್ಜಿಗೆ ಅಕ್ಷರದ ಅಕ್ಷತೆ ಹಾಕುವ ಉದ್ದೇಶದಿಂದ ಈ‌ ಪುಸ್ತಕ ಬರೆದೆ…

ಕೆಲ ದಿನಗಳ ಹಿಂದೆ ಲೇಖಕಿ, ಯೂ ಟ್ಯೂಬರ್ ಶುಭಶ್ರೀ ಭಟ್ಟ್ ಅವರ ಲಲಿತ ಪ್ರಬಂಧಗಳ ಸಂಕಲನ 'ಹಿಂದಿನ ನಿಲ್ದಾಣ' ಅನಾವರಣಗೊಂಡಿತು. ಈ ಪುಸ್ತಕವನ್ನೇಕೆ ಬರೆದೆ, ಬರೆಯಲು ಪ್ರೇರಣೆ ಏನು, ಯಾತಕ್ಕಾಗಿ ಓದುಗರು ಈ ಪುಸ್ತಕ ಓದಬೇಕು ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಜತೆಗೆ ಕೃತಿಯಲ್ಲಿನ ಪುಟ್ಟ ಪ್ರಬಂಧವೂ ಇದೆ. ನಾನೇಕೆ ಪುಸ್ತಕ...

ಅಣ್ಣ ಮಹಾಬಲ… ಸಾರ್ಥಕ ಬದುಕಿನ ಅನಾವರಣ   

ಎಂ ಎ ಹೆಗಡೆ ಜೀವನ ಭಾವನ ಸಾಧನ . ♦ ರಾಜಶೇಖರ ಜೋಗಿನ್ಮನೆ newsics.com@gmail.com ಈ ನಾಡು ಕಂಡ ಅಪರೂಪದ ವ್ಯಕ್ತಿತ್ವ ಪ್ರೊ. ಎಂ. ಎ. ಹೆಗಡೆ. ಅವರು ಯಕ್ಷಗಾನ ತಜ್ಞರಾಗಿದ್ದರು, ಸಂಸ್ಕೃತ ವಿದ್ವಾಂಸರಾಗಿದ್ದರು, ಸಾಹಿತಿಯಾಗಿದ್ದರು, ಯಕ್ಷಕವಿಯಾಗಿದ್ದರು. ಹೀಗೆ ತಮ್ಮ ಬಹುಮುಖಿ ಪಾಂಡಿತ್ಯದಿಂದಾಗಿ ಹೆಸರಾಗಿದ್ದವರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ, ಅಧ್ಯಕ್ಷರಿಗೆ...

ಹೊಸ ವರುಷ…

• ಶಿವಾನಂದ್ ಕರೂರ್ ಮಠ್, ಶಿಕ್ಷಕರು, ಶ್ರೀ ಸೋಮೇಶ್ವರ ವಿದ್ಯಾಲಯ. ದಾವಣಗೆರೆ newsics.com@gmail.com ಬರಲಿದೆ ಹೊಸ ವರುಷ ತರಲಿ ಎಲ್ಲರ ಬಾಳಲಿ ಹರುಷ ನೋವು ದ್ವೇಷಗಳ ಕಳೆದು ಸ್ನೇಹ ಸಂಬಂಧವ ಕೂಡುತ ಶುರುವಾಗಲಿ ಸುಖದ ಪರ್ವವು ಮೊಳಗಲಿ ಕೀರ್ತಿ ಅನಂತವು ಬರಲಿ ಹೊಸ ವರುಷ ಬಾಳಲಿ ಹೊಸ ಚೈತನ್ಯ ಮೂಡಲಿ ಗುರಿಯ ತಟ ಸನಿಹವಾಗಲಿ ಸಕಲವೂ ಶುಭವಾಗಲಿ... ಗತಿಸಿದ ಅವಮಾನಗಳೆಲ್ಲವೂ ಸನ್ಮಾನವಾಗಿ ಸಜ್ಜನರ ಮುಡಿಗೇರಲಿ ಬರಲಿ ಹೊಸ ವರುಷ ಬಾಳಲಿ ಕಷ್ಟಗಳನು ತಳ್ಳೋಣ ಪಾಳು ಗುಂಡಿಗೆ ಸಕಲಗಳನು...

ನಾನು ಪದ್ಯವಾಗಲಿಲ್ಲ…

• ಪ್ರಭಾಕರ ತಾಮ್ರಗೌರಿ ಗೋಕರ್ಣ newsics.com@gmail.com ಹುಣ್ಣಿಮೆಯ ದಿನ ಬಾನಿನಲ್ಲಿ ಇಣುಕಿ ನೋಡಿದೆ ಅಸಂಖ್ಯ ನಕ್ಷತ್ರಗಳು ಮಿನುಗುತ್ತಿದ್ದವು ಬಂಜೆ ಮೋಡಗಳು ಸಂತಸದಿಂದ ರೆಕ್ಕೆ ಬಿಚ್ಚಿ ಹಾರಾಡುತ್ತಿದ್ದವು ತುಂಬು ಮೊಗದ ಚಂದ್ರ ನಕ್ಕು ನಲಿಯುತ್ತಿದ್ದ ಸಾಗರ ಸಂತಸದಿಂದ ಉಕ್ಕಿ ಭೋರ್ಗೆರೆಯುತ್ತಿತ್ತು ಅದೇ ಕಡಲ ಮೊರೆತದ ಅಲೆಗಳು ಶೃತಿಯಾಗಿ ತೇಲಿಬರುತ್ತಿತ್ತು ಎಂಥ ಉತ್ಸಾಹ ! ತುಟಿಯಂಚಿನಲ್ಲಿ ಬೆಳದಿಂಗಳ ನಗೆ ಮುಂಗುರುಳು...

ನಾರಾಯಣಾಚಾರ್ಯರು ಹಚ್ಚಿದ ಜ್ಞಾನದ ದೀಪ

ಚಿಂತಕ ನಾರಾಯಣಾಚಾರ್ಯರಿಗೆ ನುಡಿನಮನ ಪೌರಾಣಿಕ, ಐತಿಹಾಸಿಕ ವಿಷಯಗಳನ್ನಾಧರಿಸಿದ ವಿದ್ವತ್ಪೂರ್ಣ ಗ್ರಂಥಗಳ ಲೇಖಕ, ಪ್ರಖರ ರಾಷ್ಟ್ರವಾದಿ ಚಿಂತಕ, ಚಿಂತನೆಗೆ ಹಚ್ಚುವಂತಹ ಪ್ರವಚನಕಾರರಾಗಿದ್ದ ಕೆ.ಎಸ್. ನಾರಾಯಣಾಚಾರ್ಯರು ಇಂದು ನಮ್ಮೊಂದಿಗಿಲ್ಲ. ಅವರು ಬೆಳಗಿಸಿದ ಜ್ಞಾನದ ಬೆಳಕು ಎಲ್ಲೆಡೆ ಪಸರಿಸಲಿ. ♦ ಸುಮನಾ ಲಕ್ಷ್ಮೀಶ newsics.com@gmail.com ಇಂದಿನ ತಲೆಮಾರಿಗೆ ವೇದ ಸಂಸ್ಕೃತಿಯನ್ನು ಅತ್ಯಂತ ವಿಷದವಾಗಿ ಹಾಗೂ ಅಧಿಕಾರಯುತವಾಗಿ ಪರಿಚಯಿಸಿದ ಏಕೈಕ...

ಹೋಗಿ ಬಾ…

♦ ಹರೀಶ್ ಗೌಡ ಗಂಗೆಕೊಳ್ಳ ಗೋಕರ್ಣ newsics.com@gmail.com ಹೋಗಿ ಬಾ ದೊರೆಯೆ ಹೋಗಿ ಬಾ ಕಾಣದ ಲೋಕವ ಹುಡುಕಿರುವೆ ನೀನು ಕಂಡರೂ ಕಾಣದೆ ಮನದೊಳಗೊಮ್ಮೆ ತಪ್ಪುವುದೇ ದಾರಿ ಪುನಃ ಬರಲು ನೀನು ಕಲ್ಮಶವಿಲ್ಲದ ಹೃದಯಾಂತರಾಳವು ಭಗವಂತ ಕುಳಿತಿಹನು ನಿನ್ನಾತ್ಮದಲ್ಲಿ ವಿಧಿಯಾಟವನಿಲ್ಲಿ ಬಲ್ಲವರಿಲ್ಲ ಆಡಿಸಿ ನಡೆದನು ಪರಮಾತ್ಮನಿಲ್ಲಿ ಅರಸಂತೆ ಕಂಡು ಆಳಂತೆ ನಡೆದು ಅಸಹಾಯಕ ಮನಗಳಿಗೆ ಆಧಾರವಾದರು ಕರುನಾಡು ಕಂದನೀ ಅಭಿಮಾನದ ಬಿಂದು ನೀ ಅಭಿಮಾನಿ ಮನದೊಳಗೆ ನೀವೆಂದು ಅಮರರು ಕಣ್ಗಳು ತುಂಬಿವೆ ಹನಿಯೊಂದು...

ಅನೂಹ್ಯ ತಿರುವುಗಳ ‘ಕೊನೆಯ ಅಂಕ’

♦ ಅಂಜನಾ ಹೆಗಡೆ newsics.com@gmail.com 'ಒಂದು ನಾಟಕದ ಕೊನೆಯ ಅಂಕ' ವಿಷ್ಣು ಭಟ್ ಅವರ ಮೊದಲನೆಯ ಕಥಾಸಂಕಲನ. ಸಾಮಾನ್ಯವಾಗಿ ಮೊದಲ ಸಂಕಲನವೆಂದರೆ ಅದು ಧಾವಂತದ ಧಾಟಿಯಲ್ಲಿರುವುದೇ ಜಾಸ್ತಿ; ಬಾಲ್ಯದಲ್ಲಿ ನೋಡಿದ ವ್ಯಕ್ತಿಗಳು, ಕಣ್ಣೆದುರು ನಡೆದ ಘಟನೆಗಳು, ಹದಿಹರೆಯದ ಪ್ರೀತಿ-ಪ್ರೇಮ, ಕಾಮದಂತಹ ಅನುಭವಗಳು ಕಥೆಯರೂಪ ಪಡೆದುಕೊಳ್ಳುವುದು ಸಾಮಾನ್ಯವೆನ್ನಬಹುದಾದ ಸಂಗತಿ. ಅದಕ್ಕೆ ವ್ಯತಿರಿಕ್ತವಾಗಿ ಕಥೆಗಾರ ಇಲ್ಲಿ ಆಯ್ದುಕೊಂಡಿರುವುದು ಜೀವರಾಶಿಗಳನ್ನು ತಲ್ಲಣಗೊಳಿಸಬಲ್ಲ,...

ಈ‌ ಕನ್ನಡತಿಗೆ ಕಥಾಲೋಕಕ್ಕೆ ಹೊಸ ಓದುಗರನ್ನು ಪರಿಚಯಿಸುವಾಸೆ…

♦ ಅನಿತಾ ಬನಾರಿ newsics.com@gmail.com ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಕನ್ನಡತಿ'ಯಲ್ಲಿ ನಾಯಕಿ ಭುವನೇಶ್ವರಿ ಆಲಿಯಾಸ್ ಸೌಪರ್ಣಿಕಾ ಆಗಿ ಅಭಿನಯಿಸುತ್ತಿರುವ ರಂಜನಿ ರಾಘವನ್ ಕತೆಗಾರ್ತಿಯಾಗಿಯೂ ಮೋಡಿ ಮಾಡಿದ್ದಾರೆ. ಮೊದಲಿನಿಂದಲೂ ಬರೆಯುವ ಹವ್ಯಾಸ ಹೊಂದಿರುವ ರಂಜನಿ ರಾಘವನ್ ಇದೀಗ ಸಾಹಿತಿಯಾಗಿಯೂ ಬಡ್ತಿ ಪಡೆದಿದ್ದಾರೆ. ಅಂದಹಾಗೆ ರಂಜನಿ ರಾಘವನ್ ಅವರ ಮೊದಲ ಕಥಾ ಸಂಕಲನ 'ಕತೆಡಬ್ಬಿ' ಇಂದು...

ಪಯಣ…

♦ ಪ್ರೊ. ಚಂದ್ರಶೇಖರ ಹೆಗಡೆ ಕನ್ನಡ ಸಹಾಯಕ ಪ್ರಾಧ್ಯಾಪಕರು newsics.com@gmail.com ಬಾಳ ಹೆದ್ದಾರಿಯಲಿ ಎದ್ದೋಡುವವರದೇ ಆರ್ಭಟ ಎತ್ತ ಸಾಗುವರೋ ಹೊರಟ ಮೇಲೆಯೇ ದಾರಿ ದಿಟ ಅಪಾಯವೆಂದರೂ ಅವಸರ ಬಿಡರು ;  ಅವರವರದೇ ಚಿತ್ತಹೂಟ ಅದೆಂತಹ ದಾಳಿಯ ಧಾವಂತ  ಒಬ್ಬರ ಮೇಲೊಬ್ಬರದಾಟ ಎಲ್ಲಿದೆ ಸಹಜತೆಯ ಏಕಾಂತ  ಮರೀಚಿಕೆಯೆಂಬಂತಿದೆ ಒಳನೋಟ ದೂರ ದಾರಿಯ ತೀರದ ದಾಹ ಮುಗಿಯದು; ಇರಲಿ ದೂರನೋಟ ಗಂತವ್ಯವ ಶೋಧಿಸಿ ಶರಣು ಶರಣಾದವರದದೋ ಇಲ್ಲಿದೆ ಪಾಠ ಜೋಕೆ, ಮಧ್ಯೆ ಗಾಲಿ, ಮೈ, ಮುರಿದುಕೊಂಡವರ ಗೋಳಾಟ ವಿರಮಿಸಿ; ಅನುಭವಿಸಿ ಕಂಡರಿಯದ ಬದುಕಿನ ತೋಟ ಅಬ್ಬಾ ಇದೇ...

‘ಲೇಖ ಮಲ್ಲಿಕಾ’ ಸಂಕಲನದಲ್ಲೇನಿದೆ?

♦ ಸುಮಾವೀಣಾ ಉಪನ್ಯಾಸಕರು, ಬರಹಗಾರರು newsics.com@gmail.com ‘ಲೇಖ ಮಲ್ಲಿಕಾ’ ಸಾಹಿತ್ಯಾತ್ಮಕ ಲೇಖನಗಳನ್ನು ಒಳಗೊಂಡ ಕೃತಿ ಸೆ.24ರಂದು ಬಿಡುಗಡೆಯಾಗಲಿದೆ. ಇಂದಿನ ದಿನಗಳಲ್ಲಿ ಸಾಹಿತ್ಯ ಓದುವವರ ಸಂಖ್ಯೆ ಕಡಿಮೆ ಎಂಬುದೆಲ್ಲ ಮೇಲು ಮಾತು ಅನ್ನಿಸುತ್ತದೆ. ತಂತ್ರಜ್ಞಾನದ ನೆರವಿನಿಂದ ಸಾಹಿತ್ಯವನ್ನು ಆಸ್ವಾದಿಸುವ ಅನೇಕ ಮಾರ್ಗಗಳು ಈಗ ತೆರೆದುಕೊಂಡಿವೆ. ಈ ಕಾರಣದಿಂದ ಸಾಹಿತ್ಯವನ್ನು ಅನುಸಂಧಾನಿಸುತ್ತಿರುವರು ಸಾಹಿತ್ಯದ ವಿದ್ಯಾರ್ಥಿಗಳೇ ಮಾತ್ರವಲ್ಲ ಬೇರೆ ಬೇರೆ ಕ್ಷೇತ್ರಗಳವರೂ ಇದ್ದಾರೆ....

ಒಂದು ಹಳ್ಳಿಯ ಸುತ್ತ…

♦ ಸುನೀತ ಕುಶಾಲನಗರ newsics.com@gmail.com ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಬರಹಗಾರರು ಮತ್ತು ಪುಸ್ತಕಗಳ ಪ್ರಕಟಣೆ ಹೆಚ್ಚುತ್ತಿರುವುದು ತುಂಬಾ ಖುಷಿಯ ವಿಚಾರ. ಕವಿತೆ, ಸಣ್ಣಕತೆಗಳು, ಲೇಖನ, ಪ್ರಬಂಧಗಳ ಜೊತೆಗೆ ಕಾದಂಬರಿಗಳು ಕೂಡಾ ಹೊರಬರುತ್ತಿರುವುದು ಹೆಮ್ಮೆ. ಹಲವು ವರ್ಷಗಳಿಂದ ಗೀತಾ ಮಂದಣ್ಣನವರ ಕಾದಂಬರಿಗಳನ್ನು ಶಕ್ತಿ ಪತ್ರಿಕೆಯಲ್ಲಿ ಓದುತ್ತಾ ಬಂದವರು ನಾವು. ಜಿಲ್ಲೆಯ ಖ್ಯಾತ ಕಾದಂಬರಿಕಾರರಾದ ಭಾರದ್ವಾಜರ ಕಾದಂಬರಿಗಳು ನಾಡಿನ ಓದುಗರ ಗಮನ...

‘ರತಿಯ ಕಂಬನಿ’ ಕೆನ್ನೆಗಿಳಿದು ಕರೆಗಟ್ಟುವ ಮುನ್ನ…

♦ ನಂದಿನಿ ಹೆದ್ದುರ್ಗ newsics.com@gmail.com ಹೂದಳದ ತುದಿಯಲ್ಲಿ ಹೊಯ್ದಾಡಿದ ಎಳೆಬೆಳಕ ಕೋಲು ನೀನು ಪಟಗುಡುವ ಚಿಟ್ಟೆ ಹುಟ್ಟಿಸಿದ ಲುಟುಪುಟು ಸದ್ದು ನಾನು... 'ಎಲ್ಲವೂ ಸರಿ ಇದ್ದರೆ ನಾನು ಇನ್ನೆನೋ ಆಗುತ್ತಿದ್ದೆ' ಎಂದುಕೊಳ್ಳುವ ಹೊತ್ತಿನಲ್ಲೇ ಸರಿ ಇಲ್ಲದ ಎಲ್ಲವೂ ಎದೆಯೊಳಗೆ ಹದವಾಗಿ ಕುದಿ ಬಂದು ಇನ್ನೂ ತಾಳಲಾರೆ ಎನ್ನುವಾಗೆಲ್ಲಾ ಉಕ್ಕುತ್ತದೆ. ಹೀಗೆ ಉಕ್ಕಿದ್ದು ಹಾಳೆಯೊಳಗೆ ಮೊಳೆತು ಬೆಳೆದು ನನ್ನ ನಾಳೆಗಳಿಗೆ ಬೆಳಕಾಗುತ್ತದೆ ಎಂಬರಿವು ಅಷ್ಟು...

ಅಪ್ಪ ನೆಟ್ಟ ಮರ…

♦ ಪ್ರಭಾಕರ ತಾಮ್ರಗೌರಿ ಗೋಕರ್ಣ newsics.com@gmail.com ಎಂದೋ ಅಪ್ಪ ನೆಟ್ಟ ಆಲದ ಮರ ಅಡ್ಡ ಕೊಂಬೆಗಳೆಷ್ಟೋ ಹಬ್ಬಿದ ಬೀಳಲುಗಳೆಷ್ಟೋ ಅದಕ್ಕೀಗ ಎಪ್ಪತ್ತು ವರ್ಷ ಪೂರ್ಣ ವಸಂತ ! ಅಂದು ಗಿಡ ನೆಟ್ಟು ಮೆಟ್ಟಿ ಮುರಿಯದ ಹಾಗೆ ಕಾದಿದ್ದ ಬೇಲಿ ಕಟ್ಟಿ ನೀರೆರೆದು ಬೆಳೆಸಿದ್ದ ಕಟ್ಟೆ ಕಟ್ಟಿ ನೆರಳಿತ್ತು ಬೆಳೆದಂತೆ ಹಸಿರೆತ್ತಿ ಹಿಡಿದಂತೆ ಏರಿ ಆಕಾಶದತ್ತ ಮುಖ ಮಾಡಿ ತಂಗಾಳಿ ಸೂಸುತ್ತಿತ್ತು ದಾರಿಗರ ಪಯಣಕೆ... ಮರದ ಎಲೆಯ ಗೊಂಚಲಿಗೆ ಎಲ್ಲಿಂದಲೋ ಬಂದ ಹಕ್ಕಿ ಬಳಗ ಗೂಡು ಕಟ್ಟಿ...

ಅಮ್ಮಾ ನನಗೆ ನೀ ಉಡುಗೊರೆ

♦ ಚಂದ್ರು ಪಿ ಹಾಸನ್ newsics.com@gmail.com ಮಮತೆಯ ಮಡಿಲಿಗೆ ಪದಗಳಲ್ಲಿ ಬಣ್ಣಿಸಲಾಗದು ತಾಯಿಯ ಒಲವಿಗೆ ಉಡುಗೊರೆ ಸಲ್ಲದು ದೇವರಿಗೆ ದೇವರುಗಳೇ ಅಮ್ಮನು ಆಗಿರುವಾಗ ನಾನೇನು ನೀಡಲೇಳೇ ಒಲವಿನ ಉಡುಗೊರೆ ಮಾಂಸದ ಮುದ್ದೆಯನ್ನು  ಗರ್ಭದಲ್ಲಿ ಇರಿಸಿದೆ ನವಮಾಸಗಳು ನನ್ನನ್ನು ಪಾಲಿಸಿ ಪೋಷಿಸಿದೆ ಜಗತ್ತಿಗೆ ಪರಿಚಯಿಸಿದೆ ಜೀವನ ಕಾಯ್ದಿರಿಸಿದೆ ಒಲವಿನ ವಾತ್ಸಲ್ಯದಲ್ಲಿ ಬಾಳಿಗೆ ಆಸರೆಯಾದೆ ಅಮ್ಮ ಎಂಬ ಪದದಲ್ಲಿ ಎಲ್ಲಾ ಶಕ್ತಿ ತುಂಬಿದೆ ನಿನ್ನಯ ಹಾರೈಕೆಯಲ್ಲಿ  ನನ್ನ ಈ ಜೀವನವಿದೆ ಅಮ್ಮ ಅಮ್ಮ ಓ ನನ್ನಮ್ಮ ಗುರುವಾಗಿ ನನ್ನನ್ನು ತಿದ್ದಿದೆ ಹಸಿದಾಗ ಅನ್ನ ನೀಡಿದೆ  ಪ್ರೀತಿಧಾರೆ ಸುರಿಸಿ ಬೆಳೆಸಿದೆ  ವಾತ್ಸಲ್ಯದ ಗುರುತುಗಳೇ  ನನ್ನ ಹಾಡಿಗೆ ಶಕ್ತಿ...

ಹೋದ ಜನ್ಮದಲ್ಲಿ…

♦ ಕೆ. ಪ್ರಭಾಕರನ್ ಮಲಯಾಳ ಕವಿತೆ-"ಪೋಯ ಜನ್ಮತ್ತಿಲ್" ಮೂಲ ಲೇಖಕರು: ಜಿಸ್ಮಿ ಪ್ರಮೋದ್ newsics.com@gmail.com ಅಂದು... ನಾವು ಒಂದಾಗಿ ಕಡಲ ತೀರದಲ್ಲಿ ಕೈಗಳ ಪೋಣಿಸಿಕೊಂಡು ದೃಷ್ಟಿಯೊಂದಿಗೆ ದೃಷ್ಟಿ ಸೇರಿಸಿಕೊಂಡು ನಿಂತಿದ್ದೆವು... ಆಗಸದಂಚಿನಲ್ಲಿ ಮೋಡಗಳು ಕಡು ಕೆಂಪು ಚಿತ್ರಗಳನ್ನು ಒಟ್ಟಿಗೆ ಬಣ್ಣವೇರಿಸಿಕೊಂಡು ಪುನರ್ ಚಿತ್ರಿಸಲಾಗಿತ್ತು... ತಣ್ಣನೆಯ ಮುಸ್ಸಂಜೆಯಲಿ ನೆತ್ತಿಯನ್ನು ಮುತ್ತಿಟ್ಟೆಚ್ಚರಿಸಿದ ಪುಟಾಣಿ ಮಳೆಹನಿಗಳನ್ನು ತಟ್ಟಿ ಚದುರಿಸಿ ಮರೆಯಾದ ನೋಟಗಳನ್ನು ಮತ್ತೆ ವಶಪಡೆಸಿಕೊಂಡೆವು... ಅಬ್ಬರಿಸಿಕೊಂಡೇರಿ ಬಂದ ತೆರೆಯಿಂದಾಗಿ ಮುಗ್ಗರಿಸಿ ಬೀಳದಿರಳು ಒಟ್ಟಾಗಿ...

ಹಣತೆ ಹಚ್ಚಿಡುವ ಮುನ್ನ…

♦ ಪ್ರಭಾಕರ ತಾಮ್ರಗೌರಿ  ಗೋಕರ್ಣ newsics.com@gmail.com ಮತ್ತೊಮ್ಮೆ ಯೋಚಿಸು  ಹಣತೆ ಹಚ್ಚಿಡುವ ಮುನ್ನ  ನೀ ಹಚ್ಚುವ ಹಣತೆ ಬರೀ ಮನೆಯ  ( ಹೊಸ್ತಿಲು ) ದೀಪವಾಗದೇ ದೂರ ದೂರ ಹರಡಬೇಕು ಆ ಹಣತೆಯ ಕಿರಣದಿಂದ ಪ್ರೀತಿ ಕರುಣೆಯು ಬೆಳಗಿ ಮನೆ ಮನೆಗೂ ನಂದಾದೀಪವಾಗಬೇಕು    ನೀ ಹಚ್ಚಿಟ್ಟ ಹಣತೆಯಿಂದ ಬೆಳಗಿದ ಬೆಳಕಿನ ಕಿರಣಕೆ ಜನರಲ್ಲಿ ಮೂಡಿದ  ದ್ವೇಷ , ರೋಷ ಅಳಿಸಿ          ಸ್ನೇಹದ ಸಂಕೋಲೆ ಬೆಸೆಯಬೇಕು ಹಣತೆ ಹಚ್ಚಿಡುವ ಮುನ್ನ ಮತ್ತೊಮ್ಮೆ...

cute foem…

♦ ಸತ್ಯಬೋಧ ಜೋಶಿ ಅಂಕಣಕಾರರು newsics.com@gmail.com ಹಗಲಿರುಳೂ ತಾಳಲಾಗದಂತೆ ಕಾಡುತ್ತಿದ್ದ ಆ ಅಕ್ಷರ ಗರ್ಭ ಕೊನೆಗೂ ಸುಖ ಪ್ರಸವ ಕಂಡಿತ್ತು ಫೇಸ್ ಬುಕ್ನಲ್ಲಿ " ತಾ ಥೈ ಥೈ...ಕೋಯ್ಯ್" ಬಾಣಂತಿ ನಾ ನಿಟ್ಟುಸಿರೂ ಬಿಟ್ಟಿರಲಿಲ್ಲ, ಜಗದೊಡೆಯ ಹುಟ್ಟಿದ ಸುದ್ದಿ ಜಗಜ್ಜಾಹೀರಾಗಿತ್ತು ಕೈ ತಟ್ಟಿ ಕುಣಿದರು ಹಲವು,ಕೆಲವರಿನ್ನೂ ಗದ್ಗದಿತ.. ಇನ್ನೂ ಹಲವರಿಗೆ ಹೃದಯಾಘಾತ, ಕೋಮಾ ಕ್ಕೆ ಜಾರಿದ್ದರು, "ತಾ ಥೈ ಥೈ .." ಸರಿ ಆದರೆ "ಕೋಯ್ಯ್" ಹೇಗೆ...

ಎಚ್ಚರಿಕೆ…!

♦ ಪ್ರಭಾಕರ ತಾಮ್ರಗೌರಿ ಗೋಕರ್ಣ ಕವಿ , ಕತೆಗಾರರು newsics.com@gmail.com ಹಸಿರುಟ್ಟ ಕಾನನದ  ಕಿರು ಶಿಲೆಯ ಬಿರುಕಿನಲಿ ಇಳಿ ಸಂಜೆಯ ಹೊಂಗಿರಣದಲಿ  ಹರಿಯುತಿದೆ ಜೀವ ಜಲ ....! ಭವಿಷ್ಯದ ಅಸಂಖ್ಯ ನಿರೀಕ್ಷೆಗಳ  ಹೊತ್ತು ಕುಳಿತ  ಎಳೆಯ ಕುವರಿಯರ  ಕಣ್ಣುಗಳ  ( ನಯನಗಳ ) ಗತ್ತು    ಒರಟು ಶಿಲೆಯನ್ನೇ ಸವೆಸಿ  ಮುಂದೆ ಮುಂದೆ ಹರಿಯುವ  ನೀರ ಯತ್ನ ಆಗಬೇಕಿದೆ  ಎಳೆಯರ ರೆಟ್ಟೆಗೆ ಬಲ ....! ಬದುಕಿನ ಆಳ ಎಷ್ಟೇ ಇರಲಿ  ಈಜು ಕಲಿತರೆ ಸಾಕು  ಆಳಕ್ಕೆ ಇಳಿಯಬಹುದು  ಹೋಗಬಹುದು ಅಗಲಕ್ಕೆ    ಶಿಲೆಯ...

ಹಸಿರು ಮರದ ಕೆಳಗೆ …

♦ ಪ್ರಭಾಕರ ತಾಮ್ರಗೌರಿ ಗೋಕರ್ಣ newsics.com@gmail.com ದಟ್ಟ ಹಸಿರಿನ ಮರದ ಕೆಳಗೆ  ತೊಟ್ಟಿಕ್ಕುವ ಇಬ್ಬನಿ ಸೋನೆ ಹೊರಟ ಸೂರ್ಯನ ಕಿರಣಕ್ಕೆ  ವಿರಮಿಸಲು ನಿನ್ನ ಜೊತೆ  ಯಾರಿದ್ದಾರೆ ...?   ಕೋಗಿಲೆಯ ಇಂಪಾದ  ಕುಹೂ ...ಕುಹೂ ... ಆಲಿಸುವವರು ಯಾರು ...? ಇಲ್ಲಿ ನಿಮಗೆ ವೈರಿಗಳಿಲ್ಲ  ಇಲ್ಲಿ ನಿಮಗೆ ಸಿಗುವುದು  ಚಳಿಗಾಲದ ಬೆಚ್ಚನೆಯ ಹವೆಯು  !   ಯಾರು ತನ್ನ ಆಸೆಗಳನ್ನೆಲ್ಲಾ  ಅದುಮಿಟ್ಟು ಸೂರ್ಯನ  ಎಳೆ ಬಿಸಿಲಿಗೆ ಮೈಯೊಡ್ಡಲು  ಬಯಸುವರೋ , ಅಲ್ಲಲ್ಲಿ ಉದುರಿಬಿದ್ದ ಹಣ್ಣುಗಳನ್ನು  ಹೆಕ್ಕಲು ಬರುವರೋ , ಇಲ್ಲಿ ಯಾವುದು ದೊರೆಯುವುದೋ , ಅದರಲ್ಲಿ...

ನೂರು ವರ್ಷಗಳ ಬಳಿಕ…

3019 ಎಡಿ ಇತ್ತೀಚೆಗೆ ಮೈಲ್ಯಾಂಗ್ಸ್ ಬುಕ್ಸ್ ಡಿಜಿಟಲ್ ಪ್ರೈವೇಟ್ ಲಿಮಿಟೆಡ್ “3019 ಎಡಿ’ ವೈಜ್ಞಾನಿಕ ಕಾದಂಬರಿಯನ್ನು ಹೊರತಂದಿದೆ. ಮೈಲ್ಯಾಂಗ್ಸ್ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಆಡಿಯೋ ಹಾಗೂ ಡಿಜಿಟಲ್ ಪುಸ್ತಕವನ್ನು ಖರೀದಿ ಮಾಡಬಹುದು. ♦ ಸುಮನಾ ಲಕ್ಷ್ಮೀಶ newsics.com@gmail.com ಹಿಂದಿನ ಬಾಲಿವುಡ್ ಆ್ಯಕ್ಷನ್ ಚಿತ್ರಗಳಲ್ಲಿ ಬರುತ್ತಿದ್ದ ಕೆಲವು ರೋಚಕ ಸಂಗತಿಗಳು ಇಂದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುವುದನ್ನು ಕಾಣಬಹುದು. ಸಣ್ಣದೊಂದು ಉದಾಹರಣೆ...

ಕಲ್ಕಿಯವತಾರಕೆ ಮುನ್ನ

♦ ರಾಜ್ ಆಚಾರ್ಯ newsics.com@gmail.com ಜಾತಿ-ಧರ್ಮ-ಕುಲದ ಕುಲುಮೆಗಳಲಿ ಕ್ರೌರ್ಯದ ಕತ್ತಿಗಳುತ್ಪಾದನೆ ಅನವರತ ಕಾಯ್ವ ದೈವಗಳ ಹೆಸರಿನಲಿ ಕೊಲುವ ಕಾಯಕ ಕಲೆ ಮನುಜನಿಗೆ ಮಾತ್ರ ಕರಗತ ದ್ವೇಷಾಸೂಯೆಗಳ ರುಜಿನಕೆ ಪ್ರೀತಿ ಎಂದಿಗೂ ಅವಧಿ ಮೀರಿದ ಔಷಧದಂತೆ ಅನುತ್ಪಾದಿತ ಧರ್ಮಸ್ಥಾಪನೆಗೆ  ಮತ್ತೆ ಇದೇ ಭುವಿಯಲಿ ಅವತಾರವೆತ್ತಲು ಭಯ ಬಿದ್ದನಂತೆ ಭಗವಂತ ಮನಸುಗಳ ಮುಳ್ಳು-ಕಂಟಿಗಳಿಗೆ ಹಬ್ಬಿದ  ಬಳ್ಳಿಯಲಿ ರಸಗಂಧವಿರದ ಹೂವ ಸಹಜತೆ  ಅಹಮಿಕೆಯ ಧೂಳು ಢಾಳಾಗಿ ಮೆತ್ತಿದ ಕನ್ನಡಿಯಲಿ ಅಸ್ಪಷ್ಟ ಬಿಂಬ ಮಾನುಷತೆ ಆತ್ಮರತಿ ಕ್ರೀಡೆಯಲಿ ತನ್ನತನವೆನೇ ಮಾರಿ ಅವಿರಿವರಿಗೆ...

ಮೃದು ಮಾತಿನ ವ್ಯಂಗ್ಯಚಿತ್ರಕಾರ ಗಂಗಾಧರ್ ಅಡ್ಡೇರಿ

ಗಂಗಾಧರ್ ಅಡ್ಡೇರಿ, ಪ್ರಜಾವಾಣಿ ಪತ್ರಿಕೆಯ ಅಡ್ಡನೋಟ ಅಂಕಣದ ಕಾಯಂ ವ್ಯಂಗ್ಯಚಿತ್ರಕಾರರು. ಸದಾಶಿವ ಸೊರಟೂರು ಇವರ ಹಲವು ಪುಸ್ತಕಗಳಿಗೆ ಮುಖಪುಟ ವಿನ್ಯಾಸ ಮಾಡಿದ್ದರು. ಅವರ ಅಕಾಲಿಕ ಸಾವು ಅಕ್ಷರಶಃ ಎಂದೆಂದಿಗೂ ತುಂಬಲಾರದ ನಷ್ಟ. ಅಗಲಿದ ಗೆಳೆಯನಿಗೆ ನುಡಿನಮನ ♦ ರಾಘವೇಂದ್ರ ಬೀಜಾಡಿ ಗಾಯಕರು,ಸಂಯೋಜಕರು newsics.com@gmail.com ಗಂಗಾಧರ್ ಅಡ್ಡೇರಿ ಅವರೋರ್ವ ವ್ಯಂಗ್ಯಚಿತ್ರಕಾರರಾಗಿದ್ದರೂ ಅವರನ್ನು ನೇರವಾಗಿ ನೋಡಿದಾಗ ಹಾಗನ್ನಿಸುತ್ತಲೇ ಇರಲಿಲ್ಲ. ಮೃದು ಮಾತುಗಾರ. ಎಲ್ಲರೊಡನೆಯೂ ಹೊಂದಿಕೊಳ್ಳುವ...

ಈಗೇನೂ ಉಳಿದಿಲ್ಲ…

♦ ಪ್ರಭಾಕರ ತಾಮ್ರಗೌರಿ ಗೋಕರ್ಣ   ಕವಿ,ಕತೆಗಾರರು newsics.com@gmail.com ಮಟ ಮಟ ಮಧ್ಯಾಹ್ನ ಕಾದ ಕಡಲ ತೀರದಿ ಮಳಲ ಹಾಸಿನ ಮೇಲೆ ಮೂಡಿದ ಹೆಜ್ಜೆ ಗುರುತುಗಳು ಅಲೆಯ ರಭಸಕ್ಕೆ ಅಳಿಸಿಹೋಯಿತು ಬೆಸ್ತರ ಬಲೆಯ ಜಾಲದ ಕುಣಿಕೆಗೆ ಸಿಲುಕಿ ಜೀವ ತೆತ್ತ ಅಮಾಯಕ ಮೀನಿನ ಹಾಗೆ !! ಪಶ್ಚಿಮ ದಿಗಂತದಲ್ಲಿ ಇಂಚಿಂಚಾಗಿ ಕರಗುವ ಕೆಂಪು ಸೂರ್ಯನ ಮುಸ್ಸಂಜೆ ( ಇಳಿಸಂಜೆ...

ಐಕ್ಯತೆ ಹರಿಕಾರ ಕಾರ್ಮಿಕ

♦ ಚಂದ್ರು ಪಿ. ಹಾಸನ್ ದಿನವೂ ದಿನಗೂಲಿಗಾಗಿ ದುಡಿದೆ ಅನುದಿನ ಕೂಳಿಗಾಗಿ ಸವೆದೆ ದುಡಿದರೆಷ್ಟೂ, ಹಸಿವಿನ ದಾಹ ಸಂಸಾರ ಉಳಿವಿಗೆ ನಿನ್ನ ಮೋಹ ಅನ್ನದಾತ ನೀ ಹೊನ್ನ ಬೆಳೆಯುವೆ ವೀರಯೋಧ ನೀ ರಕ್ಷಣೆ ಮಾಡುವೆ ಪ್ರತಿ ರಂಗದಲ್ಲೂ ನಿನ್ನದೇ ಛಾಪು ಯಜಮಾನನಿಗೆ ನೀತಂದೆ ಹೊಳಪು ದೇವರು ತೋರಿದ ಬಡತನದ ಹಾದಿ ನೀಗಿಸಲೊರಟೆ ಯಜಮಾನನ ಬೇಡಿ ತಿಂಗಳ ಕೊನೆಯಲ್ಲಿ ವಿಧಿಯ ಕಾಲ ನಿಲ್ಲಲು ಸಿದ್ಧವಿದೆ, ಸಾಲದ ಶೂಲ ಅಪಾಯವಿರಲಿ ಪ್ರಾಣವೇ ಹೋಗಲಿ ಸಾರ್ಥಕ...

ಪುಸ್ತಕ ಪ್ರೀತಿ ಹಿರಿದು

ಪುಸ್ತಕಗಳು ಸೃಜನಶೀಲತೆಗೂ ನಾಂದಿ ಹಾಡುತ್ತವೆ. ಕೊಂಡು ತಂದು ಓದುವ ಪುಸ್ತಕದ ಖುಷಿಯನ್ನು ಎರವಲು ತಂದ ಪುಸ್ತಕ ಕೊಡಲು ಸಾಧ್ಯವಿಲ್ಲ. ಇನ್ಯಾವುದೋ ಕಾರಣಕ್ಕೆ ವ್ಯರ್ಥವಾಗಿ ಹಣ, ಸಮಯ ವ್ಯಯಿಸುವ ಬದಲಾಗಿ ಪುಸ್ತಕಕ್ಕೆ ವಿನಿಯೋಗಿಸಬಹುದು. ♦ ಸುಮಾವೀಣಾ ಉಪನ್ಯಾಸಕರು, ಹಾಸನ newsics.com@gmail.com ಏಕಾಂತವನ್ನು ಬಯಸುವುದು ಮನುಷ್ಯನ ಸಹಜ ಗುಣ. ಇಂಥ ಏಕಾಂಥವನ್ನು ನೀಗಿಸುವುದು ಪುಸ್ತಕಾಬ್ಧಿ. ಮಸ್ತಕದಲ್ಲಿ ಜಡ್ಡುಗಟ್ಟಿದ, ಪೂರ್ವಾಗ್ರಹಪೀಡಿತ ಆಲೋಚನೆಗಳಿಂದ ಹೊರಬರಲು ಪುಸ್ತಕ ಪ್ರೀತಿ...

ಈ ಹೊತ್ತಿನ ಪ್ರಾರ್ಥನೆ…

♦ ಗೋಪಾಲ ತ್ರಾಸಿ newsics.com@gmail.com ದಿನ ಬೆಳಗಾದರೆ ಹೊರಗೆ ಒಳಗೆ ಅದೆಷ್ಟು ಯುದ್ಧಗಳು ಎನಿತು ಸಹಿಸುವುದು ಪ್ರಶಾಂತ ಸಾವನ್ನಲ್ಲ; ಘೋರ ಬದುಕನ್ನು ಕಾರ್ಯ ಕಾರಣ ಬೆಳಕಿನಷ್ಟು ಸ್ಪಷ್ಟ ಕಪಟ ರಾಜಕೀಯ ಕುಟಿಲ ರಾಜಕಾರಣಿಗಳಿಗೆ ನಿಜ ರಾಜಧರ್ಮ ದೀಕ್ಷೆ ಮನುಜ ಕುಲಕ್ಕೆ ಮಾನವೀಯ ಸ್ಪರ್ಶ ಸುಖ ನಮ್ಮೊಳಗೆ ಯುದ್ಧ ನಿರತ ಕರುಣಾಳು ಧರ್ಮ ದೇವತೆಗಳು ನಿಶಸ್ತ್ರಗೊಂಡು ದೇವಧರ್ಮ ನಿರತರಾಗಲಿ ಶ್ರೀರಾಮಚಂದ್ರನ ಕೈಯಲಿ ಕೃಷ್ಣನ ಕೊಳಲು ಸೀತೆಯ ನೊಂದೆದೆಯಲಿ ರಾಧಾನುರಾಗದಲೆ ಮೀಟುತ್ತಿರಲಿ ಈ ಹೊತ್ತಿನ ತುರ್ತು ಪ್ರಾರ್ಥನೆ, ಇಷ್ಟೆ.

108 ವರ್ಷಗಳ ಹಿರಿಯಜ್ಜ ಪ್ರೊ.ವೆಂಕಟಸುಬ್ಬಯ್ಯ

ಕನ್ನಡದ ಭಾಷಾ ತಜ್ಞ, ನಿಘಂಟು ತಜ್ಞ, ಶತಾಯಿಷಿ, ಶಬ್ದಬ್ರಹ್ಮ ಎಲ್ಲರ ಪ್ರೀತಿಯ ಪ್ರೊ.ವೆಂಕಟಸುಬ್ಬಯ್ಯನವರು ಇಹಲೋಕ ತೊರೆದಿದ್ದಾರೆ. ಚೈತನ್ಯದ ಚಿಲುಮೆಯಾಗಿ, ಭಾಷೆಯ ಬೆಳವಣಿಗೆಗೆ ಮಹತ್ವದ ಕಾಣಿಕೆ ನೀಡಿದ್ದ ಹಿರಿಯಜ್ಜ ಜಿ.ವಿ. ನಿಘಂಟು ರಚನೆಯಂಥ ಕಾರ್ಯಗಳ ಮೂಲಕ ಭಾಷೆಗೆ ಮಹತ್ವದ ಕೊಡುಗೆ ನೀಡಿದವರು. ಎಲ್ಲಕ್ಕಿಂತ ಮಿಗಿಲಾಗಿ ಅತ್ಯಂತ ಸಹೃದಯ, ಮಾನವೀಯ ಚೇತನವಾಗಿದ್ದರು ಜಿ.ವಿ. ನುಡಿನಮನ ♦ ವಿಧಾತ್ರಿ newsics.com@gmail.com ಭಾಷೆಯೊಂದರ ಉಳಿವು-ಬೆಳವಣಿಗೆಗೆ ನಿಘಂಟು...

ಕೊನೆ…

♦ ಡಾ.ಅಜಿತ್ ಹರೀಶಿ newsics.com@gmail.com ಕೊನೆ ಕಾನ ನಡುಮಧ್ಯೆ ಎಬ್ಬಿಸಿದ ಭವನ ಭೂಪ ಆಪತ್ತೆಂದು ಮಹಲಿಗೆ ಆಲ ತೆಂಗು ಮಾವು ಕಾಡು ಮರಗಳ ಕಡಿಸಿ ಬೇಲಿ ಸುತ್ತ ಬೋಳಿಸಿ ಆನೆಗಳ ಪಥ ಬದಲಿಸಿದ ಎಲ್ಲಿಂದಲೋ ಹಾರಿಬಂದ ಲೋಹದ ಹಕ್ಕಿ ಅಲ್ಲಿಯೇ ಧರೆಗುರುಳಿ ಭಸ್ಮ! ದನಿ ತಟಾಕು ಸಾಕು ಹಿಗ್ಗುತ್ತದೆ ಹೊಟ್ಟೆ ಹಿಡಿಸಿದಷ್ಟು ಕಂಡಾಪಟ್ಟೆ ಉಣ ಬಡಿಸುವ ಅಮ್ಮನಿಗೆ ಗದರಿಸುವ ನಾನು ಹೃದಯ ಬಿರಿಯುವಷ್ಟು ಪ್ರೀತಿ ಸುರಿಯುವ ಅವಳ ವಿಷಯದಲ್ಲಿ ಮೌನಿ

ಬೊಗಸೆಯಲ್ಲೊಂದು ಹೂ ನಗೆ

'ಬೊಗಸೆಯಲ್ಲೊಂದು ಹೂ ನಗೆ’ ಅಂಜನಾ ಹೆಗಡೆ ಅವರ ನೆನಪುಗಳ ಲಹರಿ. ಈ ಲಹರಿಯಲ್ಲಿ ಓದುಗ ಸ್ವತಃ ತಾನು ಕಳೆದುಹೋಗುತ್ತಾನೆ. ಇದು ಅಂಜನಾ ಹೆಗಡೆ ಬರಹದ ತಾಕತ್ತು. ಭಾನುವಾರ(ಏ.18) ಬೆಳಗ್ಗೆ 10 ಗಂಟೆಗೆ ಬಸವನಗುಡಿಯ ವರ್ಲ್ಡ್ ಕಲ್ಚರ್ ನಲ್ಲಿ ಆಯೋಜನೆಯಾಗಿರುವ 2021ರ ಮೈತ್ರಿ ಸಂಭ್ರಮದಲ್ಲಿ ಬಿಡುಗಡೆಯಾಗುತ್ತಿರುವ ಸಂಕಲನ 'ಬೊಗಸೆಯಲ್ಲೊಂದು ಹೂ ನಗೆ'. ಇದು ನೆನಪುಗಳ ಲಹರಿ ♦ ಸುಮನಾ...
- Advertisement -

Latest News

ಮಲಯಾಳಂ ಚಿತ್ರರಂಗದ ಖ್ಯಾತ ನಟ ಹರೀಶ್ ಪೆಂಗನ್ ನಿಧನ

newsics.com ಮಲಯಾಳಂ ಚಿತ್ರರಂಗದ ಖ್ಯಾತ ಕಲಾವಿದ ಹರೀಶ್ ಪೆಂಗನ್ ಅವರು ಮಂಗಳವಾರ (ಮೇ 30) ನಿಧನ ಹೊಂದಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು. ಹರೀಶ್ ಅವರು ಕಳೆದ...
- Advertisement -

ವಿಶಿಷ್ಟ ಪಕ್ಷಿತಾಣ ಸೂಳೆಕೆರೆ

ಕೊಕ್ಕರೆಬೆಳ‍್ಳೂರಿಗೆ ಬರುವ ಹೆಜ್ಜಾರ್ಲೆಗಳಿಗೆ ಆಹಾರ ಒದಗಿಸುವ ಬಹುದೊಡ್ಡ ಮೂಲ ಈ ಮಂಡ್ಯ ಜಿಲ್ಲೆಯ ಸೂಳೆಕೆರೆ. ಇದು ಕೊಕ್ಕರೆಬೆಳ್ಳೂರಿನಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿದೆ. ಮಂಡ್ಯದ ಕನಳಿ ಹಳ್ಳಿ ಈ ಕೆರೆಯ ತಾಣ. ಆಹಾರಕ್ಕಾಗಿ...

ಸ್ವಾರ್ಥ ಮತ್ತು ರಕ್ಷಿತಾರಣ್ಯ

ಅಭಿವೃದ್ಧಿ ಯೋಜನೆಗಳು ಎಂದಾಗ ಅವು ನಮ್ಮ ಸಮಗ್ರ ಅಭಿವೃದ್ಧಿಯ ಯೋಜನೆಗಳಾಗಿರಬೇಕೇ ಹೊರತಾಗಿ ಅಭಿವೃದ್ಧಿಯ ಹೆಸರಿನಲ್ಲಿ ಯಾರದೋ ಸ್ವಾರ್ಥ ಸಾಧನೆಯಾಗುತ್ತಿರಬಾರದು. ಜನಸಾಮಾನ್ಯರಲ್ಲಿ ಸಂರಕ್ಷಣೆ ಕುರಿತಾದ ಅಜ್ಞಾನವಿರುವವರೆಗೂ ಈ ಶೇಕಡಾ ಇಪ್ಪತ್ತರಷ್ಟು ಜನ ಉಳಿದವರ...

ಸ್ವಾರ್ಥ, ಅಜ್ಞಾನದ ಪರಿಧಿ

ಬಹಳ ಹಿಂದೆ ಕಾಡುಗಳನ್ನು ಕಡಿದು ಭೂಮಿಯನ್ನು ರೆವಿನ್ಯೂ ಇಲಾಖೆಗೆ ವರ್ಗಾಯಿಸುವುದೇ ಅರಣ್ಯ ಇಲಾಖೆಯ ಕಾರ್ಯವಾಗಿತ್ತು. ಯಾವುದೋ ಕಾರಣಕ್ಕೆ ಮಂಜೂರಾದ ಭೂಮಿಗಿಂತಲೂ ಹೆಚ್ಚು ಭೂಮಿಯನ್ನು ಬಳಸಿಕೊಂಡವನು ಶಾಣ್ಯಾ ಎಂಬ ಭಾವವೇ ಬಲಿಯಿತು. ನಾನಾ ಕಾರಣಗಳಿಗಾಗಿ...

ಸಂಘರ್ಷ, ಸಹಬಾಳ್ವೆ…

ಕಾಡಿನಲ್ಲಿ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಹೊಲ, ಗದ್ದೆ ತೋಟಗಳನ್ನು ಮಾಡಿಕೊಂಡಿರುವವರ ಅನುಭವವೇನು? ಮೇಲೆ ಕಾಣಿಸಿದಂತಹ ಸಹಬಾಳ್ವೆಯೇ? ಅಲ್ಲ, ಅದೊಂದು ದುಃಸ್ವಪ್ನ! ಬೆಳೆದ ಬೆಳೆಯ ತಿಲಾಂಶವೂ ಕೈಗೆ ಬಾರದು. ಪಕ್ಷಿ ಸಂರಕ್ಷಣೆ 51 ♦...
error: Content is protected !!