Wednesday, May 31, 2023

ಪ್ರಬಂಧ

ಬದುಕೇ ವೃತ್ತಿ… ಬದುಕೇ ಬರಹ…

ಹೆಣ್ಣು ತಾನು ಬರೇ ವೈಯಕ್ತಿಕ ಬದುಕು, ವೃತ್ತಿ ಅಷ್ಟಕ್ಕೆ ಮೀಸಲಾಗದೆ ಒಂದು ರೀತಿಯ ಬಿಡುಗಡೆ ಬಯಸುತ್ತಾ ತನ್ನ ಅಸ್ಮಿತೆ ಉಳಿಸಿಕೊಳ್ಳುವ ಸಲುವಾಗಿ ಹಾಗೂ ತನ್ನ ವ್ಯಕ್ತಿತ್ವವನ್ನು ಅರಳಿಸಲೇಬೇಕೆಂಬ ಹಠಕ್ಕೆ ಬಿದ್ದು ತನ್ನದೇ ಆಸಕ್ತಿಯ ಕ್ಷೇತ್ರವನ್ನು ಕಂಡುಕೊಳ್ಳುತ್ತಾಳೆ. ಅವಳ ಪ್ರತಿಭೆಯ ಹಾದಿ ನಿತ್ಯ ಬದುಕಿನ ಜಡತ್ವವನ್ನು ಇಲ್ಲವಾಗಿಸಿ ಜೀವಂತಿಕೆ ತುಂಬುತ್ತದೆ.    ಮಹಿಳಾ ದಿನದ...

ಚಳಿಯ ಕಾವು ಎಲ್ಲರನೂ ಬೆಚ್ಚಗಿಡಲಿ!

ಚಳಿಯ ಕಾವು ಮೈಮನಗಳನ್ನು ಆವರಿಸಿರುವ ಸಮಯವಿದು. ನಗರವಿರಲಿ, ಹಳ್ಳಿಯಿರಲಿ, ಚಳಿರಾಯನ ಪ್ರವೇಶಕ್ಕೊಂದು ಸಂಭ್ರಮದ ಸ್ವಾಗತ ನಿಸ್ಸಂಶಯ. ಮೈ ನಡುಗಿಸುವ ಚಳಿ, ಮನವನ್ನು ಅರಳಿಸುವ ಚಳಿ ನಿರಂತರವಾಗಿ ನಮ್ಮ ಜತೆಗಿರಲಿ. ♦ ಸುಮನಸnewsics.com@gmail.com  ಮ ರದ ಎಲೆಗಳೆಲ್ಲ ವಯಸ್ಸಾದಂತೆ ಬಸವಳಿದಿವೆ. ಇನ್ನೇನು, ಉದುರುವ ಸಮಯ. ಉಳಿಯುವ ಇಷ್ಟೇ ಇಷ್ಟು ಹೊತ್ತಿನಲ್ಲೂ ಬಿಸಿಲಿಗೆ ಮೈಯೊಡ್ಡಿ ಸುಖಕ್ಕೆ ಪರಿತಪಿಸುವಂತೆ...

ನಿರೀಕ್ಷೆ…

ಯಾವ ಹುಡುಗಿಯೂ ಮುಡಿಯಲು ಇಷ್ಟಪಡದ ಬಿಳಿ ದಾಸವಾಳದ ವ್ಯಾಮೋಹ. ಅದು ನನಗೆ ಆಗ ವಿಚಿತ್ರ, ಈಗ ವಿಶೇಷ. ನಿನ್ನನ್ನು ಅಷ್ಟು ಆಳವಾಗಿ ಗಮನಿಸಿಯೂ ನೀನೇ ನನ್ನ ಮನ ಬಯಸಿದ ಪ್ರೀತಿ ಎಂಬುದು ತಿಳಿಯದೇ ಹೋಯಿತಲ್ಲ. ನಾನೆಂಥ ಮೂರ್ಖ? ♦ ಪ್ರಭಾ ಭಟ್ಹವ್ಯಾಸಿ ಬರಹಗಾರರುnewsics.com@gmail.com  ಬ ರೆಯಬೇಕೆನಿಸಿದಾಗ ಬರೆಯಲಾಗದ ಕವಿತೆ ನೀನು.....ಮರೆಯಬೇಕೆಂದಾಗ ಮರೆಯಲಾಗದ ಚರಿತೆ ನೀನು.....ಕಣ್ಣ...

ನಾಳೆ ಅಡುಗೆ ಏನು ಮಾಡುವುದು?!

ನನಗೆ ಎಷ್ಟೊಂದು ಬಾರಿ ವಗ್ಗರಣೆಗೆ ಎಣ್ಣೆ ಕಾಯಲು ಇಟ್ಟಾಗಲೆ ಸಾಸಿವೆ ಖಾಲಿಯಾಗಿದೆ ಅಂತ ಹೊಳೆಯುವುದು. ಈರುಳ್ಳಿ ಹೆಚ್ಚುವಾಗಲೇ ಮುಗಿದುಹೋದ ಹಸಿಮೆಣಸು ಕಣ್ಣಲ್ಲಿ ನೀರು ತರುವುದು. ರಾತ್ರಿ ಒಂಭತ್ತೂವರೆಗೆ ಸಾರಿಗೆ ವಗ್ಗರಣೆ ಹಾಕಿ, ಉಪ್ಪಿನ ಜಾಡಿಗೆ ಕೈ ಹಾಕಿದಾಗ ತೀರಿಹೋಗಿರುವ ಉಪ್ಪಿನ ಅಳತೆ ಸಿಗುವುದು...!   ಭಾವಲಹರಿ   ♦ ಸಮತಾ ಆರ್.ಶಿಕ್ಷಕರು, ಕವಯಿತ್ರಿnewsics.com@gmail.com  ಅ ಕ್ಕ, ತಂಗಿ...

ಸಹಜ ಉಸಿರಿನಷ್ಟು ಸರಾಗವಲ್ಲ ಬದುಕು…

ಜಗತ್ತನ್ನು ಏಕಕಾಲದಲ್ಲಿ ಇಕ್ಕಟ್ಟಿಗೆ ಸಿಲುಕಿಸಿ ನಡುಗಿಸುತ್ತಿರುವ ಕೊರೋನಾ ಪರಿಣಾಮಗಳು, ಇಚ್ಛೆಯಂತೆ ಸುರಿಯುವ ಮಳೆ, ಜತೆಗೀಗ ಡ್ರಗ್ಸ್ ಕಹಾನಿ ಸೇರಿ ಇನ್ನೂ ಏನೇನೋ ಭಯೋತ್ಪಾದನೆಯ ಅನೇಕ ಘಟನೆಗಳು ಬೀರುವ ಹೊಗೆಯಿಂದ ಉಸಿರು ಉಸಿರನ್ನೂ ತಲ್ಲಣಿಸುತ್ತಿದೆ. ಅಲ್ಲಮನ ಪ್ರಕಾರ, ತನ್ನ ತಾನರಿತರೆ ಪ್ರತಿ ಕ್ಷಣವೂ ಪ್ರಳಯವಲ್ಲ... ♦ ಸುನೀತ ಕುಶಾಲನಗರnewsics.com@gmail.com  ಬೆ ಳ್ಳಂಬೆಳಗ್ಗೆ ಕಣ್ತೆರೆದ ಮೊದಲ...

ಅನಿರ್ವಚನೀಯ ಆನಂದ ಅವಳಿಗೆ…

ರಾಗದೇವತೆಯೇ ನಿನ್ನೆಯ ಮಳೆಯ ರೂಪದಲ್ಲಿ ಬಂದು ತನಗೊಲಿಯಿತೋ ಎನ್ನುವ ಹಾಗಿನ ಅನುಭವ. ಆ ಮಯೂರಕ್ಕೆ ಗರಿಗೆದರುವಾಸೆ. ಮನದಣಿಯೆ ನರ್ತಿಸುವಾಸೆ. ಇನ್ನೇನು ಏರಿ ಬರಲಿರುವ ಕೆಂಗದಿರನ ಬಿಸಿಲಿಗೆ ತನ್ನ ಆಯುಷ್ಯವನ್ನು ಕಳೆದುಕೊಳ್ಳಬಹುದಾದ ಮಳೆಹನಿಗೆ ಏನನ್ನೋ ಕಂಡ ಧನ್ಯತಾ ಭಾವ. ಪೂರ್ಣ ತೃಪ್ತಿಯಿಂದ ಬಿಸಿಲಿಗೆ ಮೈಯೊಡ್ಡಿ ಕೂತಿದೆ ಮಳೆಹನಿ.           ...

ಮಳೆಗೆ ಜತೆಯಾಗುವ ನೆನಪು… ಕಾಡುವ ಭಯ

ಕಾವೇರಿಮಾತೆಯನ್ನೇ ನಂಬಿ, ಆರಾಧಿಸುತ್ತಿದ್ದ ಅರ್ಚಕರನ್ನೇ ಬಿಟ್ಟಿಲ್ಲವೆಂದರೆ ನಮ್ಮ ನಂಬಿಕೆಗೇ ಘಾಸಿಯಾಗಿಬಿಡುತ್ತದೆ. ಅದೆಷ್ಟೋ ಪ್ರಶ್ನೆಗಳು ತಲೆಯೊಳಗೆ ಗಿರಕಿ ಹೊಡೆಯುತ್ತಿವೆ. ಕರುನಾಡಿನ ಮಲೆನಾಡು, ಕರಾವಳಿ ಮಳೆ ಭಯ ಹುಟ್ಟಿಸುತ್ತಿದೆ. ಉತ್ತರ ಕರ್ನಾಟಕದ ಪ್ರವಾಹ ಆತಂಕ ಮೂಡಿಸುತ್ತಿದೆ. ಪ್ರಾಣಿಗಳ ಮೂಕರೋದನ ಮನ ಮರುಗುವಂತೆ ಮಾಡಿದೆ. ಈ ಪ್ರಕೃತಿಯ ಸಿಟ್ಟು ಇಲ್ಲಷ್ಟೇ ಅಲ್ಲ, ಅಸ್ಸಾಂ, ಬಿಹಾರ, ಆಸ್ಟ್ರೇಲಿಯಾ,...

ಚೆನ್ನಮ್ಮನೆಂಬ ಮಹಿಳಾ ಅಸ್ಮಿತೆ

♦ ಶೋಭಾ ಕಡೆಕೊಪ್ಪಲ response@134.209.153.225 newsics.com@gmail.com ಎಂದಿನ ಹಾಗೆ ಬಚ್ಚಲಿಗೆ ದಾಳಿ ಇಟ್ಟು ಬೆನ್ನು ತಿಕ್ಕತೀನಿ, ಬಾಣಂತಿ ನೀರು ಹಾಕಿಸ್ಕೊಬೇಕು. ನೀವೇ ಹಾಕೊಂಡ್ರೆ ಹೇಗೆ ಅಂತ ಬಾಯಿ ಮಾಡಿದ್ಲು. ಯಾವತ್ತೂ ಏನಾದರೂ ನೆಪ ಹೇಳಿ ಅವಳನ್ನು ಹೊರಗಟ್ಟುವುದರಲ್ಲಿ ಜಯ ಸಾಧಿಸುತ್ತಿದ್ದ ನನಗೆ, ಆ ದಿನ ಸಾಧ್ಯ ಆಗಲಿಲ್ಲ. ಏಕೆಂದರೆ ಅವ್ಳು ಶುರು ಮಾಡಿದ ಕತೆ ಅವಳ ಮನೆಯದೇ. ----------- ಸರಿಯಾಗಿ 20...

ಈ ಪ್ರೀತಿಯಲ್ಲಿ ನಾವೇಕೆ ಸೋಲುತ್ತೇವೆ?

♦ ವಿಷ್ಣು ಭಟ್ ಹೊಸ್ಮನೆresponse@134.209.153.225newsics.com@gmail.com   ಇಷ್ಟ ಎಂಬುದು ಪ್ರೀತಿಯಲ್ಲ. ಇಷ್ಟವಾಗಿದ್ದೆಲ್ಲವನ್ನೂ ಪ್ರೀತಿಸಲೇ ಬೇಕಂತೇನಿಲ್ಲ. ನಿನ್ನೆಯ ತನಕ ಇಷ್ಟವಾಗಿದ್ದ ಜೀನ್ಸ್ ಪ್ಯಾಂಟ್ ಇವತ್ತಿಂದ ಬೇಡವೇ ಬೇಡ ಅನಿಸಿಬಿಡಬಹುದು. ಹಾಗಾದರೆ ಇಷ್ಟು ದಿನ ಆ ಜೀನ್ಸ್ ಪ್ಯಾಂಟನ್ನು ಪ್ರೀತಿಸುತ್ತಿರಲಿಲ್ಲವೇ? ಇವತ್ತು ಅದು ಬೇಡ ಎಂದೆನಿಸಿದರೆ ಇನ್ನು ಪ್ರೀತಿಸುವುದಿಲ್ಲವೇ? === ಆ ಬಾಲ್ಯವೂ ಹದಿಹರೆಯವೂ ಜೀವನದ...

ಪಲಾವ್ ಪ್ರೇಮಿ

♦ ಅಂಬ್ರೀಶ್ ಎಸ್. ಹೈಯ್ಯಾಳ್response@134.209.153.225newsics.com@gmail.com   ಪಲಾವ್ ಪ್ರೇಮಿಯಾಗಿರುವ ನನಗೆ ಇದುವರೆಗೂ ಅದರ ಮೇಲಿನ ಪ್ರೀತಿ ಒಂದಿನಿತೂ ಕಡಿಮೆಯಾಗಿಲ್ಲ. ಆಗುವುದೂ ಇಲ್ಲ. ಬಹುತೇಕರು ರೊಟ್ಟಿ ತಟ್ಟುವ ಹೆಂಡತಿಯನ್ನೇ ಮದುವೆಯಾಗಬೇಕೆಂಬುದು ಕನಸಾಗಿರುತ್ತದೆ. ನನಗೆ ಮಾತ್ರ ರುಚಿಯಾದ, ಸ್ವಾದಿಷ್ಟವಾಗಿ ಪಲಾವ್ ಮಾಡುವ ಮಡದಿಯನ್ನೇ ಕಟ್ಟಿಕೊಳ್ಳಬೇಕೆಂಬ ಆಸೆಯಿದೆ. === ಆಂಗ್ಲಭಾಷೆಯಲ್ಲಿ ಪುಲಾವು, ಕನ್ನಡದಲ್ಲಿ ಪಲಾವ್ ಎಂದು ಕರೆಯಲ್ಪಡುವ...

ಮನಸ್ಸಿನಾಳದಿ ಉಳಿದ ಮಲ್ಲಿಗೆಯ ಕಂಪು…

ಈ ಮಲ್ಲಿಗೆಯ ಸೀಸನ್ನಲ್ಲಿ ನಾನು ಸಂತೋಷ, ಸುಖ ಅನುಭವಿಸಿದ ಮತ್ತು ಮತ್ತೆ... ಮತ್ತೆ ಬಯಸಿ ಅನುಭವಿಸುವ ಕ್ಷಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಈ.... ಬರವಣಿಗೆ ... ಈ ಬಾರಿ ಮಳೆರಾಯ ಬೇಗನೆ ಆರ್ಭಟ ಶುರು ಮಾಡಿದ್ದರಿಂದ ನಮ್ಮ ಮನೆಯಲ್ಲಿ ಮಲ್ಲಿಗೆಹೂವು ವಿರಳವಾಗಿ ಆಗುತ್ತಿದೆ. ಆದರೂ ಅದನ್ನು ಕಟ್ಟಿ ನಿಮ್ಮೆದುರು ಇಟ್ಟಿದ್ದೇನೆ. ಬಯಸುವವರೆಲ್ಲ ಮನದಲ್ಲಿಯೇ ಮುಡಿದು ಪರಿಮಳದ...

ನೀವು ದೇವರಾಗೋದು ಬೇಡ, ಮನುಷ್ಯರಾಗಿ…

ಕೊರೋನಾ ಡ್ರೀಮ್ ವಾಯುಮಾಲಿನ್ಯ ಮಾತ್ರದಿಂದಲೇ ಸಾಯುವವರ ಸಂಖ್ಯೆ ಎಷ್ಟೆಂದು ಗೊತ್ತಿದೆಯಾ..? ದಿನಕ್ಕೆ 12600 ಜನರು... ಲೆಕ್ಕಾಚಾರ ಇಲ್ಲಿಗೆ ಮುಗಿಯುತ್ತಿಲ್ಲ....ಹೇಳುವುದಕ್ಕಾದರೆ ಇನ್ನೂ ಬಹಳಷ್ಟಿದೆ... ಹೇ ಮನುಷ್ಯನೇ, ನೀನು ಮಾಡುವ ಪಾತಕ ಕೃತ್ಯಗಳ ಕಡೆಗೆ ಒಮ್ಮೆ ಸಂಪೂರ್ಣ ದೃಷ್ಟಿ ಹರಿಸಿದರೆ... ನನ್ನದು ಏನೇನೂ ಅಲ್ಲ... === ಅನುವಾದ: ಪ್ರಭಾಕರನ್ ಕೆ.,...

ಒಗ್ಗರಣೆಯ ಘಮಲಿನ ಜಾಡು ಹಿಡಿದು

Samatha R ♦ ಸಮತಾ ಆರ್.response@134.209.153.225newsics.com@gmail.com   ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಪ್ರಾರಂಭವಾದ ಬಳಿಕ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅತ್ಯಂತ ಕಠಿಣ ಅವಧಿ ಎಂದರೆ ಬೆಳಗಿನ ಅವಧಿಯ ನಾಲ್ಕನೇ ಪಿರಿಯಡ್ ಆಗಿಬಿಟ್ಟಿದೆ. ಒಗ್ಗರಣೆಯ ಘಮ ಘಮಿಸುವ ಪರಿಮಳ ತೇಲಿ ಬಂದರೆ ಶಾಲೆಯ ಶಿಕ್ಷಕರು,  ವಿದ್ಯಾರ್ಥಿಗಳನ್ನು ಏಕಾಗ್ರಚಿತ್ತರಾಗಿಸಲು ಬ್ರಹ್ಮನೇ ಬಂದರೂ ಸಾಧ್ಯವಾಗದು. === "ಅಮ್ಮ,...

ಗೃಹವಾಸದ ಹೊತ್ತಿನಲಿ…

* ಸುನೀತ ಕುಶಾಲನಗರ ಇಡೀ ವಿಶ್ವವನ್ನೇ ಕಪಿ ಮುಷ್ಠಿಯಲ್ಲಿ ಬಂಧಿಸಿ ವಿಲ ವಿಲ ಒದ್ದಾಡುವಂತೆ ಮಾಡುತ್ತಾ ತನ್ನ ವಂಶವನ್ನು ಸಮೃದ್ಧಿಗೊಳಿಸಲು ದೇಶ,ಭಾಷೆ,ಬಣ್ಣ,ಬಡವ,ಬಲ್ಲಿದ,ಧರ್ಮವೆನ್ನದೆ ಭೂಮಂಡಲವನ್ನೇ ಆವರಿಸಲು ಹೊಂಚು ಹಾಕುತಿರುವ ಕೊರೋನ ವೈರಾಣು ಮಕ್ಕಳಾದಿಯಾಗಿ ವಯೋವೃದ್ಧರವರೆಗೂ ಬೆಚ್ಚಿ ಬೀಳಿಸುತ್ತಿರುವುದಕ್ಕೆ ಸಾಕ್ಷಿಯಾಗುತಿದ್ದೇವೆ.ಕ್ಷಣ ಕ್ಷಣವೂ ಕಣಕಣವನ್ನೂ ಭೀತಿಗೊಡ್ಡುವ ಕೊರೋನ ಸುದ್ಧಿಗಳಲ್ಲಿ ಸಲಹೆ, ಜಾಗೃತಿ...

ಲೆಕ್ಕ ಚುಕ್ತವಾಗದ ಹೊರತು…

'ಕೊರೋನಾ ಜೋರಾ ನಿಮ್ ಕಡೆ' ಅಂತ ಕೇಳ್ತಿದ್ದಾರೆ ಸೌಖ್ಯ ವಿಚಾರಿಸಿಕೊಳ್ಳಲು ಫೋನ್ ಮಾಡುವವರು. ನನ್ನ ಕಿವಿಗೆ ಅದು ಹಬ್ಬ ಜೋರಾ ಅಂದ ಹಾಗೇ ಕೇಳಿಸ್ತಿದೆ. ಇನ್ನಾರೋ ಕ್ವಾರಂಟೈನ್ ಕಾಲದಲ್ಲಿ ಏನ ಮಾಡಿದ್ರಿ ಅಂತಾರೆ. ನನಗೆ ಮೈ ಉರಿಯುತ್ತದೆ. 'ರೀ, ಕ್ವಾರಂಟೈನು ಅನ್ನುವುದು ಸೋಂಕಿತರು ಅಥವಾ ಕೊರೋನಾ ಶಂಕಿತರಿಗೆ ಮಾತ್ರ ಬಳಸುವ ಪದ... ನಮ್ಮದು ನಿಮ್ಮ ಹಾಗೇ ಕೇವಲ...

ಬಿಳಿಯ ನೆನಪು

ನಿರ್ಜೀವ ವಸ್ತುಗಳಿಗೆ ಜತೆ ಹೊಂದಿಸಿಕೊಂಡು ಸಂಭ್ರಮಿಸಲು ಬಯಸುತ್ತಿರುವ ನಾವು, ಜೀವನದಲ್ಲಿ ಪಾಲುದಾರರಾಗುವ ಮಂದಿಯೊಡನೆ ಮನದಾಳದಿಂದ ಸಂಭ್ರಮಿಸುತ್ತಿರುವೆವಾ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ. ಹಾಗಲ್ಲದೆ ಬರೀ ವಸ್ತುಗಳಿಗೆ ಮತ್ತೊಂದು ವಸ್ತುವನ್ನು ಜತೆ ಮಾಡುತ್ತಾ.. ಸಂತೋಷವನ್ನೂ ಸಹ ನಿರ್ಜೀವ ವಸ್ತುಗಳಲ್ಲೇ ಹುಡುಕುತ್ತಾ.. ಜೀವಂತ ವ್ಯಕ್ತಿಗಳಿಂದ, ಮನಸ್ಸುಗಳಿಂದ ದೂರಾಗುತ್ತಾ ಬರಡು ಬಾಳನ್ನು ಬಣ್ಣ ರಹಿತವಾಗಿ ಕಳೆಯಬೇಕೇ..? ♦ ವಸುಂಧರಾ ಕದಲೂರು response@134.209.153.225 newsics.com@gmail.com ಕೊಳ್ಳುವ ಶಕ್ತಿ ಬಂದಿರುವ...

ಹಂಡೆ ಪುರಾಣ…

ಹೊಸ ವಸ್ತುಗಳ ಭರಾಟೆಯಲ್ಲಿ ಹಳೆಯವು ತಮ್ಮ ಮೌಲ್ಯ ಕಳೆದುಕೊಳ್ಳುತ್ತವೆ. ಆದರೆ ನಿಮಿಷಾರ್ಧದಲ್ಲಿ ಬಿಸಿನೀರನ್ನು ಕೊಡುವ ಗೀಸರಿನಿಂದಲೂ ಶಾರದಮ್ಮನ ಹಂಡೆ ವ್ಯಾಮೋಹ ಕಮ್ಮಿ ಮಾಡಲು ಸಾಧ್ಯವಾಗಲಿಲ್ಲ. ಈಗ ಮತ್ತೆ ಮನೆ ಬದಲಿಸುವ ತಯಾರಿ ನಡೆಸಿದ್ದಾರೆ. ಅದೇ ಹಂಡೆಯೊಂದಿಗೆ! ♦ ಪ್ರಭಾ ಭಟ್ ಹೊಸ್ಮನೆ response@134.209.153.225 newsics.com@gmail.com ಮಲೆನಾಡಿನಲ್ಲಿ ಅದರಲ್ಲಿಯೂ ಮಳೆಗಾಲದಲ್ಲಿ ಹಂಡೆಯಲ್ಲಿ ಕಾಯಿಸಿದ ಬಿಸಿಬಿಸಿ ನೀರಿನ ಸ್ನಾನದ ಮಜವನ್ನು ಗಂಟೆಗಟ್ಟಲೆ ಆನಂದಿಸುವುದೇ...

ಸಾವಿನ ಮನೆಯ ಹಾಡುಗಾರರು

. ♦ ಸಮತಾ ಆರ್. response@134.209.153.225 newsics.com@gmail.com ಸಾವು ಎಂದರೆ ಹೆದರದೆ ಇರುವವರು ಯಾರು? ಮಾನವ ಎಷ್ಟೇ ನಿಸರ್ಗದ ನಿಗೂಢ ರಹಸ್ಯಗಳನ್ನು ಭೇದಿಸಿರುವನಾದರೂ ಸಾವಿನ ನಿಗೂಢತೆ ಆತನ ಅರಿವಿನ ಆಚೆಗಿನ ಬುದ್ಧಿಗೆಟುಕದ ರಹಸ್ಯವಾಗಿಯೇ ಉಳಿದುಬಿಟ್ಟಿದೆ. ನಮ್ಮ ಮೂಡು ಸೀಮೆಯ ಕಡೆ ಒಂದು ಗಾದೆ ಹೇಳುತ್ತಾರೆ "ಸತ್ತವರ ತಿಕ ಅತ್ಲಾಗೋ ಇತ್ಲಾಗೋ, ಏನಾದರೇನು" ಅಂತ. ಅಂದರೆ ಸತ್ತ ನಂತರ ಆ ವ್ಯಕ್ತಿಯ ಭೌತ...

ವೇಷ ಭೂಷಣವಾಗಲಿ

♦ ಶಶಿಕಲಾ ಹೆಗಡೆ, ಮುಂಬೈ response@134.209.153.225 newsics.com@gmail.com ಅದೊಂದು ದಿನ ಟ್ರೈನ್ ಹತ್ತಿದೊಡನೆಯೇ ಸೀಟು ಸಿಕ್ಕಿಬಿಟ್ಟಿತ್ತು. ಕ್ಲಾಸ್ ಮುಗಿಸಿಕೊಂಡು ಯೂನಿವೆರ್ಸಿಟಿಯಿಂದ ಮನೆಗೆ ಮರಳುತ್ತಿದ್ದೆ. ಸುಮಾರು ಮೂವತೈದು ವರ್ಷಗಳ ನಂತರ ಮತ್ತೆ ಅಧ್ಯಯನ ಮಾಡುವ ಉತ್ಸಾಹ ಮೂಡಿದ್ದರಿಂದ ಕನ್ನಡ ಎಂ.ಎ.ತರಗತಿಗೆ ಸೇರಿಕೊಂಡಿದ್ದೆ.ಕುಣಿಯುವ ಮನದ ಗತಿಗೆ ತಕ್ಕಂತೆ ದಣಿದ ದೇಹ ತಾಳ ಹಾಕುತ್ತಿರಲಿಲ್ಲ. ಸಾಧಾರಣವಾಗಿ ಪ್ರಯಾಣದ ಸಮಯದಲ್ಲಿ ಯಾವುದಾದರೊಂದು ಪುಸ್ತಕದಲ್ಲಿ ತಲೆ...

ಮನದೊಳಗೊಂದು ತೀರದ ಮೌನ

ಮಹಾಮಾರಿಯ ಭಯಕ್ಕೋ... ಜಗತ್ತಿನ ಎಲ್ಲಾ ಘಟಾನುಘಟಿ ಬುದ್ಧಿಜೀವಿ ಎಂದುಕೊಳ್ಳುತ್ತಿದ್ದ ಮಾನವನನ್ನು ಸೂಕ್ಷ್ಮಾಣುಜೀವಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವುದಕ್ಕೋ... ಮನಸ್ಸಿಗೂ ಪ್ರತಿಬಂಧನವೇನೋ... ಒಂದು ಕವನವೂ ಹುಟ್ಟದಾಗಿದೆ. ಬರಿ ಎಂದರೂ ಬರೆಯಲಾಗುತ್ತಿಲ್ಲ....ಈ.. ವಿರಾಮವನ್ನು ಸಂಭ್ರಮಿಸಲಾಗುತ್ತಿಲ್ಲ.. ಅಗಾಧ ಅರ್ಥವಿರುವ ಈ ದಿವ್ಯಮೌನಕ್ಕೆ ಮುಕ್ತಿ ಬೇಕೆನಿಸುತ್ತಿದೆ. ಗಡಿಬಿಡಿಯ ಬದುಕಿಗೆ ಮತ್ತೆ ಹೊರಳುವ ಸಮಯಕ್ಕೆ ಕಾಯುತ್ತಿರುವೆ... ಈ ವಿರಾಮ ನನಗೆ ಆರಾಮ ಎನಿಸುತ್ತಿಲ್ಲ. === *...

ತಾಯ್ತನ ಎನ್ನುವುದು ಹೆತ್ತವಳ ಸೊತ್ತೆ?

* ಕೃಪಾ ದೇವರಾಜ್ ಮಡಿಕೇರಿ response@134.209.153.225 newsics.com@gmail.com 2 ವರ್ಷದ ಮಗುವಿನಲ್ಲಿ ಕೂಡ ತಾಯ್ತನ ಎನ್ನುವುದು ಜಾಗೃತವಾಗಿರುತ್ತದೆ. ಆ ಮಗು ತನ್ನ ಅಮ್ಮ ತನಗೆ ಏನೆಲ್ಲಾ ಮಾಡುತ್ತಾಳೋ, ಅದನ್ನೆಲ್ಲ ಅಂದರೆ ಸ್ನಾನ ಮಾಡಿಸುವುದು, ಬಟ್ಟೆಹಾಕಿ ಅಲಂಕಾರ ಮಾಡುವುದು, ಊಟ ಮಾಡಿಸುವುದು, ನಿದ್ದೆ ಮಾಡಿಸುವುದು.. ಎಲ್ಲವನ್ನು ನನ್ನ ಗೊಂಬೆಗೆ... ತನ್ನ ಮಗು ಎಂದುಕೊಂಡು ಮಾಡುತ್ತದೆ. ಇದರಿಂದ ಹೆಣ್ಣಿಗೆ ತಾಯ್ತನ ಎನ್ನುವುದು...

ಆತ್ಮಕ್ಕೆ ಲೆಕ್ಕ ಕೊಡುವುದು ಹೇಗೆ

* ನಂದಿನಿ ವಿಶ್ವನಾಥ ಹೆದ್ದುರ್ಗ response@134.209.153.225 newsics.com@gmail.com ಗೊತ್ತಿದೆ. ಇದು ನಾನಲ್ಲ.. ನಾನಿರಬೇಕಿರುವುದು ಹೀಗಲ್ಲ. ನಾ ಹೀಗಿದ್ದರೇ ಚಂದವೂ ಅಲ್ಲ. ನಾ ಹೀಗಿರುವುದು ನನಗೂ ಖುಷಿಯಿಲ್ಲ. ನಾ ಹೀಗಿರುವುದು ಅವನಿಗೂ ಸರಿಯೆನಿಸುವುದಿಲ್ಲ. ಅವನು ಯಾರು..? ಯಾವ ಹಸಿವಿನ ತೀವ್ರತೆಯ ಕಾಲದಲಿ ಮೊದಲು ನೋಡಿದ್ದು ನಾ ಅವನನ್ನು.? ಮೊದಲ ನೋಟದ್ದೇ ಇದು..? ಹೌದೆಂದರೆ ಆತ್ಮಕ್ಕೆ ಸುಳ್ಳು ಲೆಕ್ಕ ಹೊಂದಿಸಬೇಕು. ಮೂರುದಿನದ ನಂತರ ಮನಸೊಳಗೆ ಮತ್ತೆಮತ್ತೆ ಮಥಿಸಿ ಮೋಹ ಹುಟ್ಟಿಸಿದವ. ಮೋಹ ಮುಗಿದು ಪ್ರೇಮ ಶುರುವಾದದ್ದು ಯಾವಾಗ.? ಅವನೂ ಅನುಮಾನದಿಂದಲೇ...

ಪ್ರತೀ ದಿನವೂ ನಮ್ಮಡೇ ಬಿಡಿ

* ಸ್ಮಿತಾ ಅಮೃತರಾಜ್ ಸಂಪಾಜೆ response@134.209.153.225 ಪ್ರತೀ ಸಾರಿ ಸುಮ್ಮಗೆ ಇಲ್ಲದ್ದು ಸಲ್ಲದ್ದು ನೆನಪಿಸಿಕೊಂಡು ವೃಥಾ ಕೊರಗಬಾರದಪ್ಪ. ನೋಡಿ, ನಮಗೆ ಇವತ್ತೊಂದು ದಿನ ಸಿಕ್ಕಿದೆ ಅಂದರೆ ಸಮಾಜ ನಮ್ಮನ್ನು ಗುರುತಿಸಿದೆ ಅಂತಾನೇ ಅರ್ಥ ಅಲ್ಲವೇ? ನಮಗೂ ಸಂಭ್ರಮಿಸಲು ಒಂದು ದಿನ ಇದೆ ಅನ್ನುವುದು ಪಕ್ಕಾ ಆಯ್ತಲ್ಲ? ಇನ್ನೇನು ಬೇಕು. ಇದುವೇ ದೊಡ್ಡ ಸಂಭ್ರಮ. ಕೊಟ್ಟ ಒಂದು ದಿನವೇ...

ರೇಗಿಸುವ ಹರೆಯ

* ಸುನೀತ ಕುಶಾಲನಗರ response@134.209.153.225 ಹರೆಯ ಹದಿನಾರು ಆಯಿತೆಂದರೆ ಚುಡಾಯಿಸುವುದು, ಲೈನ್ ಹೊಡೆಸಿಕೊಳ್ಳುವುದು ಎಂದು ವಯಸ್ಸಿನ ಆಟ ಆರಂಭ. ಕಾಲಕ್ಕೆ ತಕ್ಕಂತೆ ಈ ಕೀಟಲೆ ಮಾಡುವ ಕ್ರಮದಲ್ಲೂ ದೊಡ್ಡ ಕ್ರಾಂತಿಯಾಗುತ್ತಿರುವುದನ್ನು ಗಮನಿಸಬಹುದು. ಯಾವುದೇ ವಿಚಾರಕ್ಕೆ ಬಂದಾಗ ನಾವು ಪಟ್ಟನೆ ಬಾಲ್ಯಕ್ಕೆ ಹೊರಳಿಕೊಳ್ಳುತ್ತೇವೆ ಅಥವಾ ತಾರುಣ್ಯದೆಡೆ ಮಗ್ಗಲು ಬದಲಿಸುತ್ತೇವೆ. ಏಕೆಂದರೆ ನಮ್ಮ ಬಾಲ್ಯ, ತಾರುಣ್ಯ, ಯೌವ್ವನ ಎಲ್ಲವೂ ನಮ್ಮ...

ಮೊದಲ ವಿಮಾನ ಪ್ರಯಾಣ

* ಗೀತಾ ಮೋಂಟಡ್ಕ ಮೈಸೂರು response@134.209.153.225 20 ವರ್ಷಗಳ ಹಿಂದಿನ ನೆನಪು. ಮೈಸೂರಿನ ರಂಗಾಯಣಕ್ಕೆ ದೇಶದ ಎಲ್ಲಾ ಕಡೆಯಿಂದ ತರಬೇತಿಗಾಗಿ ವಿಶೇಷ ತಜ್ಞರನ್ನು ಕರೆಸಿಕೊಂಡದ್ದಾಗಿತ್ತು. ಹಲವಾರು ಪ್ರಸಿದ್ಧ ನಿರ್ದೇಶಕರ ನಾಟಕಗಳೂ ನಡೆದವು. ಹೊರದೇಶದಿಂದ ಬಂದು ನಾಟಕವಾಡಿಸಿದರೆ ಅದಕ್ಕೆ ಹೆಚ್ಚು ಥಿಯೆಟಿ ್ರಕಲ್ ಅರ್ಥ ಬರುತ್ತೆ ಎನ್ನುವ ಯೋಚನೆಯೊಂದಿಗೆ ಮೇಷ್ಟ್ರು (ಬಿ.ವಿ.ಕಾರಂತರು) ಗ್ರೀಕ್ ದೇಶದ ವಶೀಲಿ ಎಂಬುವರನ್ನು ಹಿಪ್ಪೋಲಿಟಸ್...

ನಿದ್ರೆಯ ಗಮ್ಮತ್ತು

ಕಲಾ ಚಿದಾನಂದ, ಮುಂಬೈ response@134.209.153.225 kalabk12345@gmail.com ನಿದ್ರೆ ಎಂಬುದು ವರವೋ ಶಾಪವೋ ಅರಿಯದು. ಎಷ್ಟೋ ಬಾರಿ ನಮಗರಿವಿಲ್ಲದೆಯೇ ಒಲಿದುಬಿಡುತ್ತದೆ. ಕೆಲವೊಮ್ಮೆ ಕಷ್ಟಪಟ್ಟು ಒಲಿಸಿಕೊಳ್ಳಬೇಕು. ಮಾತ್ರೆಗಳಿಂದ ಒಲಿಸಿಕೊಳ್ಳುವುದು ಬೇರೆಯ ವಿಷಯ. ಆ ದಿನ ವಿಶ್ವವಿದ್ಯಾಲಯದ ತರಗತಿ ಮುಗಿಸಿ ಮನೆಗೆ ಮರಳುತ್ತಿದ್ದೆ. ಗೆಳತಿಯೂ ಜತೆಯಲ್ಲಿದ್ದಳು. ಪ್ಲಾಟ್ ಫಾರ್ಮ್ ನಲ್ಲಿ ನಿಂತಾಗಲೇ ಆಕಳಿಕೆ, ತೂಕಡಿಕೆ ನಿದ್ದೆಯ ಮುನ್ಸೂಚನೆ ನೀಡುತ್ತಿತ್ತು. ಮೊದಲನೇ ದಿನ ರಾತ್ರಿ...

ಸಂತೋಷವೆಂಬುದು ಬಗೆ ಬಗೆ

ಸ್ಮಿತಾ ಅಮೃತರಾಜ್, ಸಂಪಾಜೆ response@134.209.153.225 ಕೆಲಸ ಎಲ್ಲಾ ಬೇಗ ಮುಗಿಯಿತು ಈಗ ಹೊತ್ತೇ ಹೋಗುತ್ತಿಲ್ಲ ಅಂತಾನೋ ಅಥವಾ ನಂಗೆ ಮಾಡೋಕೆ ಬೇರೇನೂ ಕೆಲಸವಿಲ್ಲದೆ ಸಿಕ್ಕಾಪಟ್ಟೆ ಬೋರ್ ಆಗಿ ಏನು ಮಾಡಬೇಕೆಂದು ಗೊತ್ತಾಗದೆ ಒಂದಷ್ಟು ಹೊತ್ತು ನಿದ್ದೆ ತೆಗೆದೆ, ಧಾರಾವಾಹಿ ನೋಡಿದೆ, ಯಾವುದೋ ಸಿನೇಮಾ ಬರುತ್ತಿತ್ತು ಅಷ್ಟೇನೂ ಒಳ್ಳೆಯದಲ್ಲದಿದ್ದರೂ ಕುಳಿತು ನೋಡಿದೆ ಆದರೂ ಉದ್ದಕ್ಕೆ ಮುಗಿಯದಷ್ಟು ಬಿದ್ದುಕೊಂಡಿರುವ...

ಜೆಎನ್ ಯು ; ವಿವಿಗೆ ದೀಪಿಕಾ ಭೇಟಿ

ನವದೆಹಲಿ; ಜೆಎನ್ ಯು ಹಿಂಸಾಚಾರದ ಬೆನ್ನಲ್ಲೇ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿವಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದಾರೆ. ಸಂಜೆ 7.45ರ ಸುಮಾರಿಗೆ ವಿವಿಗೆ ಭೇಟಿ ನೀಡಿದ ದೀಪಿಕಾ 10 ನಿಮಿಷಗಳ ಕಾಲ ವಿದ್ಯಾರ್ಥಿಗಳೊಂದಿಗೆ ಕಾಲ ಕಳೆದು ಏನನ್ನೂ ಹೇಳದೆ ತೆರಳಿದರು. ಇದಕ್ಕೆ ಪ್ರತಿಕ್ರಿಯಿಸಿರುವ...

ರಿಕ್ಷಾ ಪ್ರಯಾಣದ ಒಳನೋಟ

ಜಯಶ್ರೀ ಬಿ. ಕದ್ರಿ response@134.209.153.225 ನನಗೆ ಮೊದಲಿನಿಂದಲೂ ವಾಹನಗಳೆಂದರೆ ಒಂದಿಷ್ಟು ಭಯ. ಮನೆಯಲ್ಲಿ ಕಾರು, ಕೈನೆಟಿಕ್ ಹೀಗೆಲ್ಲ ಇದ್ದರೂ ನನಗೆ ಡ್ರೈವಿಂಗ್ ಎಂದರೆ ಗಡಿಬಿಡಿ. ಹೀಗಾಗಿಯೇ ನಾನು ಗಂಡ, ಮಗಳು ಹೀಗೆ ನುರಿತವರು ಇಲ್ಲದೆ ಕಾರಿನಲ್ಲಿ ಪ್ರಯಾಣಿಸುವುದು ಕಡಿಮೆ. ನಮ್ಮ ಮನೆಗೆ ಬಸ್‍ಸ್ಟ್ಯಾಂಡಿನಿಂದ, ನಾನು ಕೆಲಸ ಮಾಡುವ ಸಂಸ್ಥೆಯಿಂದ ಕೊಂಚ ದೂರ ಇರುವ ಕಾರಣ, ನಡೆಯುವುದು ಮೈಗೆ...

ಡಿಯರ್ ಪಾರಿಜಾತ…

ವೀಚೀ response@134.209.153.225 ನೀನು ಬಿಟ್ಟು ಹೋದ ದಿನ ದಿಕ್ಕೆಟ್ಟಂತೆ ನಡುರಸ್ತೆಯಲ್ಲೇ ಬಿಕ್ಕಳಿಸಿದ ಕ್ಷಣಕ್ಕೆ, ಈ ಕಾಲ ಎನ್ನುವುದು ಇಷ್ಟು ಸರಾಗವಾಗಿ ಹರಿದು ಹೋಗಬಹುದೆಂಬ ಕಲ್ಪನೆಯೇ ಇರಲಿಲ್ಲ. ಅಂದು ಹೃದಯವೇ ಕಿತ್ತು ಹೋದಂತಾದ ನೋವಿನಿಂದ ಚಡಪಡಿಸಿದ ನನ್ನ ಸ್ಥಿತಿಗೆ ಇಂದು ನಗಬೇಕೋ, ನಾಚಿಕೊಳ್ಳಬೇಕೋ ಗೊತ್ತಾಗುತ್ತಿಲ್ಲ. ನೀನು ಹೋಗುವಾಗ ನನ್ನಷ್ಟೇ ಭಿಕಾರಿಯಾಗಿ ಒರಟೊರಟಾಗಿ ಬಿದ್ದಿದ್ದ ಈ ರಸ್ತೆ ಇಂದು ಗುಲ್'ಮೊಹರ್...
- Advertisement -

Latest News

Weekend With Ramesh; ಸಾಧಕರ ಕುರ್ಚಿಯಲ್ಲಿ ಡಿಕೆ ಶಿವಕುಮಾರ್!

newsics.com ಬೆಂಗಳೂರು: ಖಾಸಗಿವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್​ನ ಈ ವಾರದ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಮಿಸಲಿದ್ದಾರೆ ಎನ್ನುವ ಗಾಳಿ ಸುದ್ದಿಯೊಂದು ಹಬ್ಬಿದೆ. ಭಾನುವಾರದ ಎಪಿಸೋಡ್...
- Advertisement -

ವಿಶಿಷ್ಟ ಪಕ್ಷಿತಾಣ ಸೂಳೆಕೆರೆ

ಕೊಕ್ಕರೆಬೆಳ‍್ಳೂರಿಗೆ ಬರುವ ಹೆಜ್ಜಾರ್ಲೆಗಳಿಗೆ ಆಹಾರ ಒದಗಿಸುವ ಬಹುದೊಡ್ಡ ಮೂಲ ಈ ಮಂಡ್ಯ ಜಿಲ್ಲೆಯ ಸೂಳೆಕೆರೆ. ಇದು ಕೊಕ್ಕರೆಬೆಳ್ಳೂರಿನಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿದೆ. ಮಂಡ್ಯದ ಕನಳಿ ಹಳ್ಳಿ ಈ ಕೆರೆಯ ತಾಣ. ಆಹಾರಕ್ಕಾಗಿ...

ಸ್ವಾರ್ಥ ಮತ್ತು ರಕ್ಷಿತಾರಣ್ಯ

ಅಭಿವೃದ್ಧಿ ಯೋಜನೆಗಳು ಎಂದಾಗ ಅವು ನಮ್ಮ ಸಮಗ್ರ ಅಭಿವೃದ್ಧಿಯ ಯೋಜನೆಗಳಾಗಿರಬೇಕೇ ಹೊರತಾಗಿ ಅಭಿವೃದ್ಧಿಯ ಹೆಸರಿನಲ್ಲಿ ಯಾರದೋ ಸ್ವಾರ್ಥ ಸಾಧನೆಯಾಗುತ್ತಿರಬಾರದು. ಜನಸಾಮಾನ್ಯರಲ್ಲಿ ಸಂರಕ್ಷಣೆ ಕುರಿತಾದ ಅಜ್ಞಾನವಿರುವವರೆಗೂ ಈ ಶೇಕಡಾ ಇಪ್ಪತ್ತರಷ್ಟು ಜನ ಉಳಿದವರ...

ಸ್ವಾರ್ಥ, ಅಜ್ಞಾನದ ಪರಿಧಿ

ಬಹಳ ಹಿಂದೆ ಕಾಡುಗಳನ್ನು ಕಡಿದು ಭೂಮಿಯನ್ನು ರೆವಿನ್ಯೂ ಇಲಾಖೆಗೆ ವರ್ಗಾಯಿಸುವುದೇ ಅರಣ್ಯ ಇಲಾಖೆಯ ಕಾರ್ಯವಾಗಿತ್ತು. ಯಾವುದೋ ಕಾರಣಕ್ಕೆ ಮಂಜೂರಾದ ಭೂಮಿಗಿಂತಲೂ ಹೆಚ್ಚು ಭೂಮಿಯನ್ನು ಬಳಸಿಕೊಂಡವನು ಶಾಣ್ಯಾ ಎಂಬ ಭಾವವೇ ಬಲಿಯಿತು. ನಾನಾ ಕಾರಣಗಳಿಗಾಗಿ...

ಸಂಘರ್ಷ, ಸಹಬಾಳ್ವೆ…

ಕಾಡಿನಲ್ಲಿ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಹೊಲ, ಗದ್ದೆ ತೋಟಗಳನ್ನು ಮಾಡಿಕೊಂಡಿರುವವರ ಅನುಭವವೇನು? ಮೇಲೆ ಕಾಣಿಸಿದಂತಹ ಸಹಬಾಳ್ವೆಯೇ? ಅಲ್ಲ, ಅದೊಂದು ದುಃಸ್ವಪ್ನ! ಬೆಳೆದ ಬೆಳೆಯ ತಿಲಾಂಶವೂ ಕೈಗೆ ಬಾರದು. ಪಕ್ಷಿ ಸಂರಕ್ಷಣೆ 51 ♦...
error: Content is protected !!