Wednesday, May 31, 2023

ವಿದೇಶ

ಸಮುದ್ರಕ್ಕೆ ಬಿತ್ತು ಉತ್ತರ ಕೊರಿಯಾ ಉಡಾಯಿಸಿದ ‘ಗೂಢಚರ್ಯೆ ಉಪಗ್ರಹ’

newsics.com ಸೋಲ್: ಉತ್ತರ ಕೊರಿಯಾ ಬುಧವಾರ ಉಡಾವಣೆ ಮಾಡಿದ ಗೂಢಚರ್ಯೆ ಉಪಗ್ರಹ ಸಮುದ್ರದ ಪಾಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ತಾಂತ್ರಿಕ ಕಾರಣಗಳಿಂದಾಗಿ ಗೂಢಚರ್ಯೆ ಉಪಗ್ರಹ ಸಮುದ್ರಕ್ಕೆ ಬಿದ್ದಿದೆ ಎಂದು ಉತ್ತರ ಕೊರಿಯಾ ಮಾಧ್ಯಮಗಳು ತಿಳಿಸಿವೆ. ಮೊದಲು ಹಂತದಲ್ಲಿ ಉಪಗ್ರಹ ಯಶಸ್ವಿಯಾಗಿ ಆಕಾಶಕ್ಕೆ ಹಾರಿತು. ಆದರೆ ಎರಡನೇ ಹಂತದಲ್ಲಿ ಉಪಗ್ರಹ ರಾಕೆಟ್‌ನಿಂದ ಬೇರ್ಪಡುವಾಗ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಪರಿಣಾಮ...

ಸೋಶಿಯಲ್‌ ಮೀಡಿಯಾ ಕ್ರೋಮಿಂಗ್‌ ಟ್ರೆಂಡ್‌; 13 ವರ್ಷದ ಬಾಲಕಿ ಬಲಿ

newsics.com ಆಸ್ಟ್ರೇಲಿಯಾ: ಸೋಶಿಯಲ್‌ ಮೀಡಿಯಾ ಟ್ರೆಂಡ್‌ ವೈರಲ್‌ ಆಗಿದ್ದು, ಆಸ್ಟ್ರೇಲಿಯಾದಲ್ಲಿ 13 ವರ್ಷದ ಬಾಲಕಿಯೊಬ್ಬಳು ಸಾವು ಕಂಡಿದ್ದಾಳೆ. ಆಸ್ಟ್ರೇಲಿಯಾದಲ್ಲಿ 13 ವರ್ಷದ ಬಾಲಕಿ ಎಸ್ರಾ ಹೇಯ್ನೆಸ್‌, ಈ ಸೋಶಿಯಲ್‌ ಮೀಡಿಯಾ ಟ್ರೆಂಡ್‌ಗೆ ಬಲಿಯಾಗಿದ್ದಾಳೆ. ಜನರ ಪ್ರಾಣಕ್ಕೆ ಕಂಟಕವಾಗಿರುವ ಈ ಸೋಶಿಯಲ್‌ ಮೀಡಿಯಾ ಟ್ರೆಂಡ್‌ಅನ್ನು 'ಕ್ರೋಮಿಂಗ್‌' ಎನ್ನುವ ಹೆಸರಿನಿಂದ ಕರೆಯಲಾಗುತ್ತಿದೆ. ಡಿಯೋಡ್ರೆಂಟ್‌ ಕ್ಯಾನ್‌ಅನ್ನು ಈ ಚಾಲೆಂಜ್‌ನಲ್ಲಿ ಭಾಗವಹಿಸಲು ಬಳಸಿದ್ದ ಬಾಲಕಿ,...

ಈ ದೇಶದಲ್ಲಿ ಅಪ್ಪಿ ತಪ್ಪಿಯೂ ಚೂಯಿಂಗ್ ಗಮ್ ತಿನ್ನುವಂತಿಲ್ಲ!

newsics.com ಸ್ವಚ್ಛತೆಯ ವಿಷಯಕ್ಕೆ ಬಂದರೆ ಸಿಂಗಾಪುರ ಅಗ್ರಸ್ಥಾನದಲ್ಲಿದೆ. ಸಿಂಗಾಪುರ ದೇಶದ ಸ್ವಚ್ಛತೆಯನ್ನು ಕಂಡರೆ ಜನರು ಬೆರಗಾಗುವುದು ನಿಶ್ಚಿತ. ಆದರೆ ಸಿಂಗಾಪುರದಲ್ಲಿ ಚೂಯಿಂಗ್ ಗಮ್ ತಿನ್ನುವಂತಿಲ್ಲ. ಇದೇನಪ್ಪಾ ವಿಚಿತ್ರ ಚೂಯಿಂಗ್ ಗಮ್ ತಿನ್ನಬಾರದೇ? ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಿರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ ಸಿಂಗಾಪುರದಲ್ಲಿ ಚೂಯಿಂಗ್ ಗಮ್ ಕಾನೂನುಬಾಹಿರ. ಚೂಯಿಂಗ್ ಗಮ್ ಖರೀದಿ ಮತ್ತು ಆಮದು ಎರಡಕ್ಕೂ...

ಚೀನಾದಲ್ಲಿ ಶತಮಾನದ ಅತಿ‌ ಹೆಚ್ಚು ತಾಪಮಾನ

newsics.com ಶಾಂಘೈ: ಕಳೆದ 100 ವರ್ಷಗಳಲ್ಲೇ ಅತಿ ಹೆಚ್ಚಿನ ತಾಪಮಾನ ಚೀನಾದ ಶಾಂಘೈನಲ್ಲಿ ಸೋಮವಾರ ದಾಖಲಾಗಿದೆ. ಚೀನಾ ಹವಾಮಾನ ಇಲಾಖೆ ಈ‌ ಮಾಹಿತಿ ನೀಡಿದ್ದು, ಸೋಮವಾರ ಮಧ್ಯಾಹ್ನ 1.09ರ ಸಮಯದಲ್ಲಿ ಶುಯಿಜಿ ಮೆಟ್ರೊ ನಿಲ್ದಾಣದಲ್ಲಿ 36.1 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಮಧ್ಯಾಹ್ನದ ನಂತರ, ಶಾಂಘೈನ ಕೇಂದ್ರ ಮೆಟ್ರೊ ನಿಲ್ದಾಣದಲ್ಲಿ ತಾಪಮಾನವು 36.7 ಡಿಗ್ರಿ ಸೆಲ್ಸಿಯಸ್‌ಗೆ...

ಬಾಹ್ಯಾಕಾಶಕ್ಕೆ ನಾಗರಿಕರನ್ನು ಕಳುಹಿಸಲು ಮುಂದಾದ ಚೀನಾ

newsics.com ಚೀನಾ:  ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣಕ್ಕೆ ಸಿಬ್ಬಂದಿ ಕಾರ್ಯಾಚರಣೆಯ ಭಾಗವಾಗಿ ಮಂಗಳವಾರ ಮೇ 30ರಂದು ಇದೇ ಮೊದಲ ಬಾರಿಗೆ ಚೀನಾ ನಾಗರಿಗ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುತ್ತಿದೆ ಎಂದು ಇಲ್ಲಿಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಈವರೆಗೆ ಬಾಹ್ಯಾಕಾಶಕ್ಕೆ ತೆರಳಿದ್ದ ಎಲ್ಲಾ ಗಗನಯಾತ್ರಿಗಳು ಪೀಪಲ್ಸ್ ಲಿಬರೇಶನ್ ಆರ್ಮಿಯ ಭಾಗವಾಗಿದ್ದರು. ಬೀಜಿಂಗ್ ಏರೋನಾಟಿಕ್ಸ್ ಮತ್ತು ಆಸ್ಟ್ರೋನಾಟಿಕ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಪೇಲೋಡ್ ತಜ್ಞ ಗುಯಿ...

ಟರ್ಕಿ ಅಧ್ಯಕ್ಷರಾಗಿ ಮತ್ತೆ ಎರ್ಡೋಗನ್‌ ಆಯ್ಕೆ

ಮತ್ತೊಂದು ಅವಧಿಗೆ ಟರ್ಕಿ ಅಧ್ಯಕ್ಷರಾಗಿ ರೆಸೆಪ್‌ ತಯ್ಯಿಪ್‌ ಎರ್ಡೋಗನ್‌ ಅವರು ಗೆಲವು ಸಾಧಿಸಿದ್ದಾರೆ ಎಂದು ವರದಿ ತಿಳಿಸಿದೆ. 

ಪರಮಾಣು ವಿಕಿರಣ ಸೋರಿಕೆಗೆ ರಷ್ಯಾ ಸಂಚು: ಉಕ್ರೇನ್ ಆರೋಪ

ಜಫೋರಿಯಾದಲ್ಲಿ ತನ್ನ ನಿಯಂತ್ರಣದಲ್ಲಿರುವ ಉಕ್ರೇನ್‌ನ ಅತಿ ದೊಡ್ಡ ವಿದ್ಯುತ್‌ ಸ್ಥಾವರದ ಮೇಲೆ ದಾಳಿ ನಡೆಸಲು ರಷ್ಯಾ ಸಂಚು ರೂಪಿಸಿದೆ.

ಬೈಬಲ್‌ ಇಟ್ಟುಕೊಂಡ ಕಾರಣಕ್ಕೆ 2 ವರ್ಷದ ಮಗುವಿಗೆ ಜೀವಾವಧಿ ಶಿಕ್ಷೆ!

newsics.com ಪ್ಯೊಂಗ್ಯಾಂಗ್: ಕ್ರೈಸ್ತರ ಪವಿತ್ರ ಗ್ರಂಥವಾದ ಬೈಬಲ್‌ ಇಟ್ಟುಕೊಂಡಿದ್ದಕ್ಕೆ 2 ವರ್ಷದ ಬಾಲಕನಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಘಟನೆ ಉತ್ತರ ಕೊರಿಯಾದಲ್ಲಿ ನಡೆದಿದೆ. ಕ್ರೈಸ್ತ ಧರ್ಮ ಆಚರಣೆ ಮತ್ತು ಬೈಬಲ್ ಹೊಂದಿದ್ದಕ್ಕಾಗಿ ಕುಟುಂಬವನ್ನು ಬಂಧಿಸಲಾಯಿತು. ಎರಡು ವರ್ಷದ ಮಗು ಸೇರಿದಂತೆ ಇಡೀ ಕುಟುಂಬಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಬಂಧನಕ್ಕೊಳಗಾಗಿರುವ ಕ್ರಿಸ್ಚಿಯನ್ನರು ಭೀಕರ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ದೈಹಿಕ ಚಿತ್ರಹಿಂಸೆ...

ಕಾನ್‌ ಸಿನಿಮೋತ್ಸವದಲ್ಲಿ ಸನ್ನಿ ಲಿಯೋನ್‌ ಹಾಟ್ ಅವತಾರ

newsics.com ಬಾಲಿವುಡ್‌ ನಟಿ ಸನ್ನಿ ಲಿಯೋನ್‌, ಕಾನ್‌ ಸಿನಿಮೋತ್ಸವದ ಅಂಗಳದಲ್ಲಿ ಬಹಳ ಆಕರ್ಷಿಕವಾಗಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಪ್ರತಿಷ್ಠಿತ ಖಾನ್ ಚಿತ್ರೋತ್ಸವದಲ್ಲಿ ಅನೇಕ ನಟ ನಟಿಯರು ಭಾಗಿಯಾಗಿ ವಿವಿಧ ವೇಷಭೂಷಣಗಳ ಮೂಲಕ ಗಮನ ಸೆಳೆಯುತ್ತಾರೆ. ಇದರಂತೆ ಬೇಬಿ ಡಾಲ್ ಸನ್ನಿ ಲಿಯೋನ್ ಕೂಡ ಇದೀಗ ತಮ್ಮದೇ ಆದ ವಿಭಿನ್ನ ಲುಕ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹಾಟ್ ಅವತಾರದಲ್ಲಿ...

ಮೆಟಾದಿಂದ ಕೆಲಸ ಕಳೆದುಕೊಂಡ ಉನ್ನತ ಹುದ್ದೆಯಲ್ಲಿದ್ದ ಭಾರತೀಯರು

newsics.com ನ್ಯೂಯಾರ್ಕ್‌: ಫೇಸ್‌ಬುಕ್‌ನ ಮಾತೃ ಸಂಸ್ಥೆ ಮೆಟಾ ತಾನು ಈ ಹಿಂದೆ ಘೋಷಿಸಿದ 10,000 ಉದ್ಯೋಗ ಕಡಿತ ಯೋಜನೆಯ ಅಂತಿಮ ಭಾಗವಾಗಿ ಹಲವು ಮಂದಿಯನ್ನು ಕೆಲಸದಿಂದ ವಜಾ ಮಾಡಿದೆ. ಈ ಬಾರಿ ಪ್ರಮುಖ ಸ್ಥಾನದಲ್ಲಿರುವ ಭಾರತೀಯರು ಕೆಲಸ ಕಳೆದುಕೊಂಡಿದ್ದಾರೆ. ಭಾರತ ಮಾರ್ಕೆಟಿಂಗ್ ನಿರ್ದೇಶಕ ಅವಿನಾಶ್ ಪಂತ್‌, ಮಾಧ್ಯಮ ಸಹಯೋಗದ ನಿರ್ದೇಶಕ ಹಾಗೂ ಮುಖ್ಯಸ್ಥ ಸಾಕೇತ್ ಝಾ ಸೌರಭ್...

ತಾನೇ ಸಾಕಿದ 40 ಮೊಸಳೆಗಳಿಗೆ ಆಹಾರವಾದ 72ರ ವೃದ್ಧ!

newsics.com ಕಾಂಬೋಡಿಯಾ: ಸಾಕಿದ ರೈತನನ್ನೇ ಬರೋಬ್ಬರಿ 40 ಮೊಸಳೆಗಳು ಸೇರಿ ಹರಿದು ತಿಂದು, ಕೊಂದಿರುವ ಘಟನೆ ಇಂದು ( ಮೇ 26) ಕಾಂಬೋಡಿಯಾದಲ್ಲಿ ನಡೆದಿದೆ. ಕಾಂಬೋಡಿಯಾದ 72ರ ಹರೆಯದ ಲುವಾನ್ ನಾಮ್ ಎಂಬವರು ಸ್ಥಳೀಯ ಮೊಸಳೆ ರೈತರ ಸಂಘದ ಅಧ್ಯಕ್ಷರಾಗಿದ್ದರು. ಅವರೇ ಸಾಕಿದ 40 ಮೊಸಳೆಗಳ ಬಾಯಲ್ಲಿ ಸಿಲುಕಿದ ಲುವಾನ್ ಅಸುನೀಗಿದ್ದಾರೆ. ಕಾಂಬೋಡಿಯಾದ ಸೀಮ್ ರೀಪ್ ಪಟ್ಟಣದಲ್ಲಿ ಮೊಸಳೆಗಳ...

ಆ ನಿರ್ದೇಶಕ ನನ್ನ ಒಳ ಉಡುಪು ತೆಗೆಯಲು ಹೇಳಿದ್ದರು: ಪ್ರಿಯಾಂಕಾ ಚೋಪ್ರಾ ಸ್ಫೋಟಕ ಹೇಳಿಕೆ

newsics.com ಪ್ರಿಯಾಂಕಾ ಚೋಪ್ರಾ ಅವರು ಹಿಂದಿ ಚಿತ್ರರಂಗದಲ್ಲಿ ಯಾರು ಗಾಡ್‌ಫಾದರ್ ಇಲ್ಲದೇ ಬೆಳೆದವರು. ಬಾಲಿವುಡ್ ರಂಗದಲ್ಲಿ ನಾಯಕಿಯಾಗಿ ಗಟ್ಟಿ ನೆಲೆ ಗಿಟ್ಟಿಸಿಕೊಂಡು, ಬೇಡಿಕೆ ಇರುವಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ಹಾಲಿವುಡ್‌ನಲ್ಲಿ ನಟಿ ಸದ್ದು ಮಾಡ್ತಿದ್ದಾರೆ. ಬಾಲಿವುಡ್‌ಗೆ ಮರಳುವ ಯಾವುದೇ ಯೋಚನೆ ಅವರಿಗಿಲ್ಲ. ಹಿಂದಿ ಸಿನಿಮಾ ಮಾಡುವಾಗ ತಮ್ಮ ಹಳೆಯ ದಿನಗಳನ್ನು ನಟಿ ಬಿಚ್ಚಿಟ್ಟಿದ್ದಾರೆ....

1 ವರ್ಷಕ್ಕೆ 8.26 ಕೋಟಿ ಸಂಪಾದಿಸುತ್ತೆ ಈ ನಾಯಿ: ಸಿವಿಲ್ ಇಂಜಿನಿಯರ್ ಕೆಲಸಕ್ಕೆ ಗುಡ್ ಬೈ ಹೇಳಿದ ಓನರ್

newsics.com ವಾಷಿಂಗ್ಟನ್‌: ಇಲ್ಲೊಬ್ಬರು ಮಹಿಳೆ ನಾಯಿಯನ್ನು ನೋಡಿಕೊಳ್ಳುವುದಕ್ಕಾಗಿಯೇ ಇದ್ದ ಸಿವಿಲ್‌ ಎಂಜಿನಿಯರ್‌ ಕೆಲಸ ತೊರೆದಿದ್ದು, ಈಗ ಅದೇ ನಾಯಿಯಿಂದ ವರ್ಷಕ್ಕೆ 8 ಕೋಟಿ ಗಿಂತಲೂ ಅಧಿಕ ಹಣ ಸಂಪಾದಿಸುತ್ತಿದ್ದಾರೆ. ದಂಪತಿಯೊಬ್ಬರು ತಾವು ಸಾಕಿದ ಟಕ್ಕರ್‌ ಹೆಸರಿನ ಗೋಲ್ಡನ್‌ ರಿಟ್ರೈವರ್‌ ಶ್ವಾನದಿಂದ ವರ್ಷಕ್ಕೆ 1 ಮಿಲಿಯನ್‌ ಡಾಲರ್‌ (8.26 ಕೋಟಿ ರೂ.) ಗಳಿಸುತ್ತಿದ್ದು, ನೆಟ್ಟಿಗರನ್ನ ಬೆರಗಾಗುವಂತೆ ಮಾಡಿದೆ. ಪೋರ್ಟ್ರೇಟ್ ಕಂಪನಿ...

ಕಾಂಗೋ; ಭೀಕರ ಪ್ರವಾಹಕ್ಕೆ 443 ಮಂದಿ ಸಾವು

newsics.com ವಿಶ್ವಸಂಸ್ಥೆ;  ಭಾರೀ ಮಳೆ ಸುರಿದ ಪರಿಣಾಮವಾಗಿ ಕಾಂಗೋದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈವರೆಗೆ 443 ಮಂದಿ ಸಾವನ್ನಪ್ಪಿದ್ದು ನೂರಾರು ಜನರು ಗಾಯಗೊಂಡಿದ್ದಾರೆ.  ಮತ್ತು ಅನೇಕರು ನಾಪತ್ತೆಯಾಗಿದ್ದಾರೆ ಎಂದು ವರದಿ ತಿಳಿಸಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ವಿಶ್ವಸಂಸ್ಥೆಯ ಮಾನವತಾವಾದಿ ಗುಂಪು ತಿಳಿಸಿದೆ

‘ಪ್ರಧಾನಿ ಮೋದಿ ಈಸ್ ದಿ ಬಾಸ್’: ಆಸ್ಟ್ರೇಲಿಯಾ ಪ್ರಧಾನಿ

newsics.com ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ಸಂಬಂಧವು ಪರಸ್ಪರ ನಂಬಿಕೆ ಮತ್ತು ಗೌರವವನ್ನು ಆಧರಿಸಿದೆ ಎಂದು ಪ್ರಧಾನಿ ಮೋದಿ ಮಂಗಳವಾರ ತಿಳಿಸಿದ್ದಾರೆ. ಸಿಡ್ನಿಯ ಕ್ಯುಡೋಸ್ ಬ್ಯಾಂಕ್ ಅರೆನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಪನೀಸ್ ಅವರೊಂದಿಗೆ ಭಾಗವಹಿಸಿದ ಮೋದಿ, ಅಲ್ಲಿನ ವಲಸಿಗ ಭಾರತೀಯರನ್ನು ಉದ್ದೇಶಿ ಮಾತನಾಡಿದರು. ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ ಅಲ್ಪನೀಸ್, "ಪ್ರಧಾನಿ ಮೋದಿಯೇ...

ನ್ಯೂಜಿಲೆಂಡ್ ನಲ್ಲಿ ಕುರಿಗಳ ಸಂಖ್ಯೆ ಜನರಿಗಿಂತ 5 ಪಟ್ಟು ಹೆಚ್ಚು: ಹೊಸ ದಾಖಲೆ

newsics.com ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ಕುರಿಗಳ ಸಂಖ್ಯೆಯು ಜನರಿಗಿಂತ 5 ಪಟ್ಟು ಹೆಚ್ಚಿದೆ ಎಂಬುದನ್ನು ಅಧಿಕೃತ ಅಂಕಿಅಂಶಗಳು ಸೋಮವಾರ ತೋರಿಸಿವೆ. 1850ರ ದಶಕದ ನಂತರ ಮೊದಲ ಬಾರಿಗೆ ಜನರಿಗಿಂತ ಕುರಿಗಳ ಸಂಖ್ಯೆ ಹೆಚ್ಚಾಗಿದೆ. ನ್ಯೂಜಿಲೆಂಡ್‌ನವರು ತಮ್ಮ ಪ್ರತಿಸ್ಪರ್ಧಿ ಆಸ್ಟ್ರೇಲಿಯದವರಿಗಿಂತ ಕಡಿಮೆ ಉಣ್ಣೆ ತೆಗೆಯುವವರನ್ನು ಹೊಂದಿದ್ದಾರೆ ಎಂದು ನ್ಯೂಜಿಲೆಂಡ್ ಸರ್ಕಾರಿ ಸಂಸ್ಥೆ ತಿಳಿಸಿದೆ. 1850 ರ ದಶಕದ ನಂತರ ಮೊದಲ...

ಪ್ರಧಾನಿ ಮೋದಿಗೆ‌ ಫಿಜಿ ದೇಶದ ಅತ್ಯುನ್ನತ ಗೌರವ ಪ್ರಶಸ್ತಿ

newsics.com ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫಿಜಿ ದೇಶದ ಅತ್ಯುನ್ನತ ಗೌರವವಾದ ‘ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಫಿಜಿ ದೇಶದವರಲ್ಲದವರು ಈ ಪ್ರಶಸ್ತಿ ಸ್ವೀಕರಿಸಿರುವುದು ಇದೇ ಮೊದಲು. ಜಾಗತಿಕ ನಾಯಕತ್ವಕ್ಕಾಗಿ ಪ್ರಧಾನಿ ಮೋದಿಯವರಿಗೆ ಈ ಗೌರವ ಲಭಿಸಿದೆ. ಫಿಜಿ ಪ್ರದಾನಿ ಸಿಟಿವೆನಿ ರಬುಕಾ ಪ್ರಶಸ್ತಿ ನೀಡಿ ಮೋದಿಯವರನ್ನು ಸನ್ಮಾನಿಸಿದ್ದಾರೆ. ಈ...

ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತ ಕೋರಿದ ಪಪುವಾ ನ್ಯೂ ಗಿನಿಯಾ ಪ್ರಧಾನಿ

newsics.com ಪೋರ್ಟ್ ಮೊರೆಸ್‌ಬೈ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಪುವಾ ನ್ಯೂ ಗಿನಿಯಾ ಸರ್ಕಾರ ಶಿಷ್ಟಾಚಾರಕ್ಕೆ ಗುಡ್‌ಬೈ ಹೇಳಿ ಅಪರೂಪದ ಗೌರವ ಸಲ್ಲಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮೋದಿ ವಿಮಾನದಿಂದ ಇಳಿದು ಬರುತ್ತಿದ್ದಂತೆ ಪಪುವಾ ನ್ಯೂ ಗಿನಿಯಾ ಪ್ರಧಾನಿ ಜೇಮ್ಸ್ ಮರಪೇ ಸ್ವಾಗತಿಸಿದರು. ಸಂಪ್ರದಾಯ ಮುರಿದು ಸೂರ್ಯಾಸ್ತದ ವೇಳೆ ಸ್ವಾಗತಿಸಿದ ಬಳಿಕ ಅವರು ಮೋದಿ...

ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಕಾಲ್ತುಳಿತ: 9 ಮಂದಿ ಸಾವು

newsics.com ಸ್ಯಾನ್ ಸಾಲ್ವಡೋರ್: ರಿಪಬ್ಲಿಕ್ ಆಫ್ ಎಲ್ ಸಾಲ್ವಡೋರ್‌ನ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಸ್ಥಳೀಯ ಫುಟ್‌ಬಾಲ್ ಪಂದ್ಯಾವಳಿ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 9 ಮಂದಿ ಮೃತಪಟ್ಟ ಘಟನೆ ನಡೆದಿದೆ. 'ಕಸಕಾಟ್ಲನ್ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 9 ಮಂದಿ ಮೃತಪಟ್ಟಿದ್ದಾರೆ' ಎಂದು ರಾಷಟ್ರಿಯ ಸಿವಿಲ್ ಪೊಲೀಸ್ ಟ್ವಿಟರ್‌ನಲ್ಲಿ ತಿಳಿಸಿದೆ. ಗಾಯಗೊಂಡ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸ್ಥಳೀಯ ಆಸ್ಪತ್ರೆಗಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲಿಯಾಂಜಾ...

ಪ್ರವಾಸಿ ವಿಮಾನ ಪತನ: ಪೈಲಟ್ ಸೇರಿ‌ ಮೂವರ ಸಾವು

newsics.com ಸ್ವಿಟ್ಜರ್ಲೆಂಡ್‌: ಪ್ರವಾಸಿ ವಿಮಾನವೊಂದು ಪಶ್ಚಿಮ ಸ್ವಿಟ್ಜರ್ಲೆಂಡ್‌ನ ಪರ್ವತ ಪ್ರದೇಶದಲ್ಲಿ ಶನಿವಾರ ಪತನಗೊಂಡಿದ್ದು, ಅದರಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಣ್ಣ ಪ್ರವಾಸಿ ವಿಮಾನವು ಸ್ವಿಸ್ ಕ್ಯಾಂಟನ್ ನ್ಯೂಚಾಟೆಲ್‌ನ ಪಾಂಟ್ಸ್-ಡಿ-ಮಾರ್ಟೆಲ್ ಬಳಿ ಕಡಿದಾದ ಮತ್ತು ಅರಣ್ಯ ಪ್ರದೇಶದಲ್ಲಿ ಬೆಳಿಗ್ಗೆ 10:20 ರ ಸುಮಾರಿಗೆ (0820 GMT) ಪತನಗೊಂಡಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಪೈಲಟ್ ಮತ್ತು ಇಬ್ಬರು...

ಒಂದೇ ಕಾಲೇಜಿನಲ್ಲಿ ಕಲಿತ ಮಹಿಳೆಯರ ಮನೆಗೆ ಕಾಂಡೋಮ್: ಕಾರಣವೇನು?

newsics.com ಮೆಲ್ಬೊರ್ನ್‌: ಒಂದೇ ಕಾಲೇಜಿನಲ್ಲಿ ಕಲಿತ 65ಕ್ಕೂ ಹೆಚ್ಚು ಮಹಿಳೆಯರ ಮನೆಗೆ ಬಳಸಿದ ಕಾಂಡೋಮ್ ಕಳುಹಿಸಿದ ಘಟನೆ ನಡೆದಿದೆ. ಇದರ ಜೊತೆಗೆ ಎಚ್ಚರಿಕೆ ಪತ್ರವನ್ನು ಕಳುಹಿಸಲಾಗಿದೆ. ಇದೀಗ ಈ ಆರೋಪಿಗಾಗಿ ಪೊಲೀಸರ ಹುಡುಕಾಟ ತೀವ್ರಗೊಂಡಿದೆ. ಈ ಸಂಬಂಧ 65 ಮಹಿಳೆಯರು ಠಾಣೆ ಮೆಟ್ಟಿಲೇರಿದ...

ಒಬಾಮಾ ಸೇರಿದಂತೆ 500 ಅಮೆರಿಕನ್ನರಿಗೆ ರಷ್ಯಾ ಪ್ರವೇಶಕ್ಕೆ ನಿರ್ಬಂಧ

newsics.com ಮಾಸ್ಕೋ: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ 500 ಅಮೆರಿಕನ್ನರಿಗೆ ಪ್ರವೇಶವನ್ನು ನಿರ್ಬಂಧಿಸಿ ರಷ್ಯಾ ಆದೇಶ ಪ್ರಕಟಿಸಿದೆ. ಜೋ ಬೈಡನ್‌ ಆಡಳಿತ ನಿರಂತರವಾಗಿ ರಷ್ಯಾದ ಮೇಲೆ ವಿಧಿಸುತ್ತಿರುವ ನಿರ್ಬಂಧಗಳಿಗೆ ಪ್ರತಿಯಾಗಿ ಅಮೆರಿಕದ 500 ಮಂದಿಗೆ ರಷ್ಯಾ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಉಕ್ರೇನ್‌ ಮೇಲೆ ದಾಳಿ ಮಾಡುತ್ತಿರುವ ರಷ್ಯಾವನ್ನು ಆರ್ಥಿಕವಾಗಿ ಕುಗ್ಗಿಸಲು ಅಮೆರಿಕ...

77ನೇ ವಯಸ್ಸಿನಲ್ಲಿ ಮದುವೆ; ತನ್ನನ್ನು ತಾನೇ ವಿವಾಹವಾದಳು!

newsics.com ನವದೆಹಲಿ:   ಯುನೈಟೆಡ್ ಸ್ಟೇಟ್ಸ್‌ನಲ್ಲಿ ಫಿಡೆಲಿ ಎಂಬು 77 ವರ್ಷದ ಮಹಿಳೆ ತನ್ನನ್ನು ತಾನೇ ವಿವಾಹವಾಗಿ ಅಚ್ಚರಿಗೆ ಕಾರಣವಾಗಿದ್ದಾಳೆ. ಈ  ವೃದ್ಧೆಯ ಮದುವೆಯಲ್ಲಿ ಆಕೆಯ ಬಂಧುಗಳು, ನೆರೆಹೊರೆಯವರು, ಸ್ನೇಹಿತರು ನೆರೆದಿದ್ದರು. ಫಿಡೆಲಿಯ ಮಗಳು ಡೊನ್ಹಾ ಪೆನ್ನಿಂಗ್ಟನ್ ಕೂಡ, ತನ್ನ ತಾಯಿಯ ಏಕವ್ಯಕ್ತಿ ವಿವಾಹವನ್ನು ಇಷ್ಟಪಟ್ಟಿದ್ದು, ಆಕೆಯೇ ಸ್ವತಃ ನಿಂತು ಎಲ್ಲ ಉಸ್ತುವಾರಿಯನ್ನು ನೋಡಿಕೊಂಡಿದ್ದಾಳೆ. ತನ್ನ ಜೀವಿತಾವಧಿಯನ್ನು ಈ ಮೊದಲು...

ಈ ಬೈಕ್ಗೆ ಪೆಟ್ರೋಲ್ ಬೇಡ, ಬಿಯರ್ ಹಾಕಿದ್ರೆ ಸಾಕು!

newsics.com ಅಮೆರಿಕ: ಇಲ್ಲಿನ ವ್ಯಕ್ತಿಯೊಬ್ಬ ಬಿಯರ್‌ನಿಂದ ಚಲಿಸುವ ಹೊಸ ವಾಹನ ಒಂದನ್ನು ತಯಾರಿಸಿದ್ದಾನೆ. ಅಮೆರಿಕದ ಮೈಕೆಲ್ಸನ್ ಎಂಬ ವ್ಯಕ್ತಿಯೇ ಬಿಯರ್‌ನಿಂದ ಚಲಿಸುವ ಬೈಕ್‌ವೊಂದನ್ನು ಅನ್ವೇಷಿಸಿದಾತ. ಈ ಬೈಕ್‌ಗೆ ಪೆಟ್ರೋಲ್ ಬೇಕಿಲ್ಲ. ಪೆಟ್ರೋಲ್ ಬದಲಿಗೆ ಬಿಯರ್ ತುಂಬಿಸಿದರೆ ಸಾಕು. ಇದು ಗಂಟೆಗೆ 240 ಕಿ.ಮೀ ವೇಗದಲ್ಲಿ ಚಲಿಸುತ್ತದೆ ಎಂದು ಮೈಕೆಲ್ಸನ್ ತಿಳಿಸಿದ್ದಾರೆ. ಮೈಕೆಲ್ಸನ್ ತಯಾರಿಸಿರುವ ಬಿಯರ್ ಚಾಲಿತ ಬೈಕ್ ಅಲ್ಲಿನ...

ಉದ್ಯೋಗಿಗಳಿಗೆ ಎಂಟು ತಿಂಗಳ ಸಂಬಳವನ್ನು ಬೋನಸ್ ಆಗಿ ನೀಡುತ್ತಿರುವ ಸಿಂಗಾಪುರ್ ಏರ್ಲೈನ್ಸ್

newsics.com ಸಿಂಗಾಪುರ್ ಏರ್ಲೈನ್ಸ್ ದಾಖಲೆಯ ವಾರ್ಷಿಕ ಲಾಭವನ್ನು ಪೋಸ್ಟ್ ಮಾಡಿದ ನಂತರ ಸಿಬ್ಬಂದಿಗಳಿಗೆ ಸುಮಾರು ಎಂಟು ತಿಂಗಳ ಸಂಬಳವನ್ನು ಬೋನಸ್ ಆಗಿ ನೀಡುತ್ತಿದೆ. ಅರ್ಹ ಸಿಬ್ಬಂದಿಗೆ 6.65 ತಿಂಗಳ ವೇತನಕ್ಕೆ ಸಮಾನವಾದ ಲಾಭ- ಹಂಚಿಕೆಯ ಬೋನಸ್ ಮತ್ತು ಗರಿಷ್ಠ 1.5 ತಿಂಗಳ ವೇತನದ ಎಕ್ಸ್- ಗ್ರೇಷಿಯಾ ಬೋನಸ್ ಅನ್ನು ಪಾವತಿಸಲಾಗುತ್ತದೆ. ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷದಲ್ಲಿ S...

ವಿಮಾನ ಪತನ: ಅಮೆಜಾನ್ ಕಾಡಿನಲ್ಲಿ ಎರಡು ವಾರಗಳ ಬಳಿಕ ಜೀವಂತವಾಗಿ ಪತ್ತೆಯಾದ ನಾಲ್ಕು ಮಕ್ಕಳು

newsics.com ಬೊಗೊಟ್, ಕೊಲಂಬಿಯಾ: ಎರಡು ವಾರಗಳ ಹಿಂದೆ ವಿಮಾನ ಅಪಘಾತದ ನಂತರ ದಟ್ಟವಾದ ಕೊಲಂಬಿಯಾದ ಅಮೆಜಾನ್‌ ಕಾಡಿನಲ್ಲಿ 11 ತಿಂಗಳ ಮಗು ಸೇರಿದಂತೆ ನಾಲ್ಕು ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಅಧ್ಯಕ್ಷ ಗುಸ್ಟಾವೊ ಪೆಟ್ರೋ ಬುಧವಾರ ಹೇಳಿದ್ದಾರೆ. ಇದು "ದೇಶಕ್ಕೆ ಸಂತೋಷದ ದಿನ" ಎಂದು ಘೋಷಿಸಿದ್ದಾರೆ. ಸೇನೆಯ ಕಠಿಣ ಶೋಧ ಪ್ರಯತ್ನಗಳ ನಂತರ ಮಕ್ಕಳನ್ನು ಪತ್ತೆ ಮಾಡಲಾಗಿದೆ...

ಮುಂದಿನ ವಾರ ಸಿಡ್ನಿಯಲ್ಲಿ ಪ್ರಧಾನಿ ಮೋದಿ ಪ್ರವಾಸ

newsics.com ಸಿಡ್ನಿ: ಸಿಡ್ನಿಯಲ್ಲಿ ನಡೆಯಬೇಕಿದ್ದ ಕ್ವಾಡ್ ನಾಯಕರ ಸಭೆ ರದ್ದುಗೊಂಡಿದ್ದರೂ ಪ್ರಧಾನಿ ಮೋದಿ ಆಸ್ಟ್ರೇಲಿಯಾ ಪ್ರವಾಸ ಇದ್ದೇ ಇರಲಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಅಂಟೋನಿ ಅಲ್ಬನೀಸ್ ಹೇಳಿದ್ದಾರೆ. ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಎದುರು ನೋಡುತ್ತಿದ್ದೇನೆ ಎಂದು ಆಲ್ಬೆನೀಸ್ ಹೇಳಿದ್ದಾರೆ. ಕ್ವಾಡ್ ನಾಯಕರ ಸಭೆ ರದ್ದುಗೊಂಡಿದ್ದು ಪ್ರಧಾನಿ ಮೋದಿ ಅವರು ಮೇ.24 ರಂದು ಸಿಡ್ನಿಗೆ ಬರಲಿದ್ದಾರೆಯೇ? ಎಂಬ...

ಇಮ್ರಾನ್ ಖಾನ್ ಬಂಧನಕ್ಕೆ ಹೈಕೋರ್ಟ್‌ ತಡೆ

newsics.com ಇಸ್ಲಾಮಾಬಾದ್:ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಯಾವುದೇ ಪ್ರಕರಣದಲ್ಲಿ ಬಂಧಿಸದಂತೆ ನೀಡಿದ್ದ ಆದೇಶವನ್ನು ಮೇ 31ರ ವರೆಗೆ ಇಲ್ಲಿನ ಹೈಕೋರ್ಟ್ ಬುಧವಾರ ಮುಂದೂಡಿದೆ. ಇಮ್ರಾನ್ ಖಾನ್ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳ ಕುರಿತು ಮಾಹಿತಿ ನೀಡುವಂತೆ ಪಾಕಿಸ್ತಾನ ತೆಕ್ರೀಕ್- ಇ-ಇನ್ಸಾಫ್(ಪಿಟಿಐ) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ಹಾಜರಿದ್ದ ಸರ್ಕಾರದ ಪರ ವಕೀಲರು ಮಾಹಿತಿ...

ಬಳಕೆದಾರರ ಜಿಮೇಲ್ ಖಾತೆಗಳನ್ನು ಡಿಲೀಟ್ ಮಾಡಲು ಮುಂದಾದ ಗೂಗಲ್

newsics.com ವಾಷಿಂಗ್ಟನ್: ಜಿಮೇಲ್ ಖಾತೆ ಇದ್ದವರು ಅದನ್ನು 2 ವರ್ಷಗಳಿಂದ ಬಳಸಿಯೇ ಇಲ್ಲ ಎಂದಾದರೆ ನಿಮ್ಮ ಖಾತೆಗೆ ಇದೀಗ ಕುತ್ತು ಬರುವ ಸಾಧ್ಯತೆಯಿದೆ. ಗೂಗಲ್ ತನ್ನ ಬಳಕೆದಾರರ ನಿಷ್ಕ್ರಿಯ ಖಾತೆಗಳ ನೀತಿಯಲ್ಲಿ ಹೊಸ ಬದಲಾವಣೆ ತಂದಿದೆ. ಬಳಕೆದಾರರು ತನ್ನ ಹಳೆಯ ಗೂಗಲ್ ಖಾತೆಗಳನ್ನು ಲಾಗ್‌ಇನ್ ಮಾಡಲು ಹಾಗೂ ಪರಿಶೀಲಿಸಲು ಹೇಳಿದೆ. ಈ ಹಿಂದೆ 2 ವರ್ಷಗಳಿಂದ ಕಾರ್ಯನಿರ್ವಹಿಸದ...

11 ಸಾವಿರ ಉದ್ಯೋಗಿಗಳು ವಜಾ: ನೂತನ ವೊಡಾಫೋನ್‌ ಸಿಇಒ ಘೋಷಣೆ

newsics.com ಲಂಡನ್: ಬ್ರಿಟಿಷ್ ದೂರಸಂಪರ್ಕ ಸೇವಾ ಕಂಪನಿ ವೊಡಾಫೋನ್ ಮುಂದಿನ ಮೂರು ವರ್ಷಗಳಲ್ಲಿ 11 ಸಾವಿರ ನೌಕರರನ್ನು ಕೆಲಸದಿಂದ ತೆಗೆಯಲಿದೆ. ಕಂಪನಿಯ ಹೊಸ ಸಿಇಒ, ಕಂಪನಿಯನ್ನು ಇನ್ನಷ್ಟು 'ಸರಳಗೊಳಿಸಲು ಬಯಸಿರುವ ಕಾರಣ ಈ ಕ್ರಮ ಅನುಸರಿಸಲು ತೀರ್ಮಾನಿಸಲಾಗಿದೆ. 11 ಸಾವಿರ ನೌಕರರನ್ನು ಕೆಲಸದಿಂದ ತೆಗೆದರೆ ವೊಡಾಫೋನ್ ಕಂಪನಿಯು ತನ್ನ ಒಟ್ಟು ನೌಕರರಲ್ಲಿ ಶೇಕಡ 10ಕ್ಕಿಂತ ಹೆಚ್ಚಿನ ನೌಕರರನ್ನು ವಜಾಗೊಳಿಸಿದಂತೆ...
- Advertisement -

Latest News

ಆದಾಯ ತೆರಿಗೆ ಅಧಿಕಾರಿಗಳಂತೆ ವೇಷ ಧರಿಸಿ ಚಿನ್ನ ಕದ್ದ ಕಳ್ಳರು

newsics.com ಹೈದರಾಬಾದ್: ಆದಾಯ ತೆರಿಗೆ ಅಧಿಕಾರಿಗಳಂತೆ ವೇಷ ಧರಿಸಿ ಹೈದರಾಬಾದ್‌ನ ಅಂಗಡಿಯೊಂದರಲ್ಲಿ 60 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕತ್‌ಗಳನ್ನು ಕದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ...
- Advertisement -

ವಿಶಿಷ್ಟ ಪಕ್ಷಿತಾಣ ಸೂಳೆಕೆರೆ

ಕೊಕ್ಕರೆಬೆಳ‍್ಳೂರಿಗೆ ಬರುವ ಹೆಜ್ಜಾರ್ಲೆಗಳಿಗೆ ಆಹಾರ ಒದಗಿಸುವ ಬಹುದೊಡ್ಡ ಮೂಲ ಈ ಮಂಡ್ಯ ಜಿಲ್ಲೆಯ ಸೂಳೆಕೆರೆ. ಇದು ಕೊಕ್ಕರೆಬೆಳ್ಳೂರಿನಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿದೆ. ಮಂಡ್ಯದ ಕನಳಿ ಹಳ್ಳಿ ಈ ಕೆರೆಯ ತಾಣ. ಆಹಾರಕ್ಕಾಗಿ...

ಸ್ವಾರ್ಥ ಮತ್ತು ರಕ್ಷಿತಾರಣ್ಯ

ಅಭಿವೃದ್ಧಿ ಯೋಜನೆಗಳು ಎಂದಾಗ ಅವು ನಮ್ಮ ಸಮಗ್ರ ಅಭಿವೃದ್ಧಿಯ ಯೋಜನೆಗಳಾಗಿರಬೇಕೇ ಹೊರತಾಗಿ ಅಭಿವೃದ್ಧಿಯ ಹೆಸರಿನಲ್ಲಿ ಯಾರದೋ ಸ್ವಾರ್ಥ ಸಾಧನೆಯಾಗುತ್ತಿರಬಾರದು. ಜನಸಾಮಾನ್ಯರಲ್ಲಿ ಸಂರಕ್ಷಣೆ ಕುರಿತಾದ ಅಜ್ಞಾನವಿರುವವರೆಗೂ ಈ ಶೇಕಡಾ ಇಪ್ಪತ್ತರಷ್ಟು ಜನ ಉಳಿದವರ...

ಸ್ವಾರ್ಥ, ಅಜ್ಞಾನದ ಪರಿಧಿ

ಬಹಳ ಹಿಂದೆ ಕಾಡುಗಳನ್ನು ಕಡಿದು ಭೂಮಿಯನ್ನು ರೆವಿನ್ಯೂ ಇಲಾಖೆಗೆ ವರ್ಗಾಯಿಸುವುದೇ ಅರಣ್ಯ ಇಲಾಖೆಯ ಕಾರ್ಯವಾಗಿತ್ತು. ಯಾವುದೋ ಕಾರಣಕ್ಕೆ ಮಂಜೂರಾದ ಭೂಮಿಗಿಂತಲೂ ಹೆಚ್ಚು ಭೂಮಿಯನ್ನು ಬಳಸಿಕೊಂಡವನು ಶಾಣ್ಯಾ ಎಂಬ ಭಾವವೇ ಬಲಿಯಿತು. ನಾನಾ ಕಾರಣಗಳಿಗಾಗಿ...

ಸಂಘರ್ಷ, ಸಹಬಾಳ್ವೆ…

ಕಾಡಿನಲ್ಲಿ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಹೊಲ, ಗದ್ದೆ ತೋಟಗಳನ್ನು ಮಾಡಿಕೊಂಡಿರುವವರ ಅನುಭವವೇನು? ಮೇಲೆ ಕಾಣಿಸಿದಂತಹ ಸಹಬಾಳ್ವೆಯೇ? ಅಲ್ಲ, ಅದೊಂದು ದುಃಸ್ವಪ್ನ! ಬೆಳೆದ ಬೆಳೆಯ ತಿಲಾಂಶವೂ ಕೈಗೆ ಬಾರದು. ಪಕ್ಷಿ ಸಂರಕ್ಷಣೆ 51 ♦...
error: Content is protected !!