ನವದೆಹಲಿ: ದೀಪಿಕಾ ಪಡುಕೋಣೆ ಅಭಿನಯದ ಛಪಕ್ ಚಿತ್ರ ಬಿಡುಗಡೆಗೆ ತಡೆ ನೀಡಬೇಕೆಂದು ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ತೀರ್ಪನ್ನು ದೆಹಲಿಯ ಪಟಿಯಾಲ ನ್ಯಾಯಾಲಯ ಕಾಯ್ದಿರಿಸಿದೆ.
ತಾವು ಹಲವು ವರ್ಷಗಳ ಕಾಲ ಆಸಿಡ್ ದಾಳಿಯ ಸಂತ್ರಸ್ತೆ ಲಕ್ಷ್ಮೀ ಅಗರ್ ವಾಲ್ ಪರ ವಾದ ಮಂಡಿಸಿದ್ದೆ. ಆದರೆ, ನಿರ್ದೇಶಕರು ಚಿತ್ರದಲ್ಲಿ ತಮಗೆ ಯಾವುದೇ ಕ್ರೆಡಿಟ್ ನೀಡಿಲ್ಲ. ಆದ್ದರಿಂದ ಚಿತ್ರದಲ್ಲಿ ತಮಗೆ ಹೆಸರು ಉಲ್ಲೇಖಿಸುವಂತೆ ನಿರ್ದೇಶಕರಿಗೆ ಸೂಚನೆ ನೀಡಬೇಕು ಎಂದು ವಕೀಲರಾದ ಅಪರ್ಣಾ ಭಟ್ ಮನವಿ ಮಾಡಿದ್ದಾರೆ. ತೀರ್ಪು ಇಂದು ಸಂಜೆಯೊಳಗೆ ಹೊರಬೀಳುವ ಸಾಧ್ಯತೆಯಿದೆ.