Tuesday, March 28, 2023

ಕೊರೋನಾ ಚಿಕಿತ್ಸೆಗಾಗಿ ಇಂದಿನಿಂದ ಆಯುಷ್ ಪ್ರಾಯೋಗಿಕ ಪರೀಕ್ಷೆ

Follow Us

ನವದೆಹಲಿ: ಕೊರೋನಾ ವೈರಸ್ ಸೋಂಕಿನ ಚಿಕಿತ್ಸೆಗಾಗಿ ಆಯುಷ್ ಇಲಾಖೆ ಮುಂದಾಗಿದ್ದು, ಶುಕ್ರವಾರದಿಂದ (ಮೇ 15) ಪ್ರಾಯೋಗಿಕ ಪರೀಕ್ಷೆ ಆರಂಭಿಸಲಿದೆ.
ಇದಕ್ಕಾಗಿ ನಾಲ್ಕು ವಿಧದ ಸಾಂಪ್ರದಾಯಿಕ ಔಷಧ ಸಂಯೋಜನೆಗಳನ್ನು ಆಯುಷ್ ಸಿದ್ಧಪಡಿಸಿದೆ ಎಂದು ಆಯುಷ್ ಸಚಿವ ಶ್ರೀಪಾದ್ ವೈ. ನಾಯಕ್ ತಿಳಿಸಿದ್ದಾರೆ.
ಕೊರೋನ ವೈರಸ್ ಸೋಂಕು ಗುಣಪಡಿಸಲು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯು ಒಂದು ಮಾರ್ಗವನ್ನು ಕಂಡುಹಿಡಿಯಲಿದೆಯೆಂದು ಎಂಬ ಭರವಸೆ ತನಗಿದೆಯೆಂದು ಸಚಿವರು ತಿಳಿಸಿದರು.
ಮುಂದಿನ ಮೂರು ತಿಂಗಳೊಳಗೆ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶಗಳು ದೊರೆಯಲಿವೆ ಎಂದು ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ(ಸಿಎಸ್‌ಐಆರ್)ಯ ಮಹಾನಿರ್ದೇಶಕ ಶೇಖರ್ ಮಾಂಡೆ ಹಾಗೂ ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೇಚಾ ತಿಳಿಸಿದ್ದಾರೆ.
ಕೊರೋನಾ ವೈರಸ್ ರೋಗಿಗಳ ಮೇಲೆ ಹೆಚ್ಚುವರಿ ಥೆರಪಿ ಹಾಗೂ ಮಾನದಂಡನಾತ್ಮಕ ಶುಶ್ರೂಷೆಯಲ್ಲಿ ಈ ನಾಲ್ಕು ಔಷಧ ಸಂಯೋಜನೆಗಳನ್ನು ಪರೀಕ್ಷಿಸಲಾಗವುದು. ಅಶ್ವಗಂಧ, ಯಷ್ಟಿಮಧು ಹಾಗೂ ಗುಡುಚಿ+ಪಿಪ್ಪಲಿ (ಗಿಲೋಯ್) ಹಾಗೂ ಮಲೇರಿಯಾ ರೋಗದ ಚಿಕಿತ್ಸೆಗಾಗಿ ಸಂಶೋಧಿಸಲಾದ ಆಯುಷ್-64 ಹೀಗೆ ನಾಲ್ಕು ಬಗೆಯ ಔಷಧ ಸಂಯೋಜನೆಗಳನ್ನು ಕೋವಿಡ್-19 ಚಿಕಿತ್ಸೆಗಾಗಿ ಬಳಸಲಾಗುವುದೆಂದು ಕೊಟೇಚಾ ತಿಳಿಸಿದ್ದಾರೆ.
ಕೋವಿಡ್19 ಚಿಕಿತ್ಸೆಗೆ ನಾಲ್ಕು ವಿಭಿನ್ನ ಔಷಧ ಸಂಯೋಜನೆಗಳನ್ನು ರೂಪಿಸಲು ಸಿಎಸ್‌ಐಆರ್ ಹಾಗೂ ಆಯುಷ್ ಸಚಿವಾಲಯ ಪ್ರಯತ್ನಿಸಲಿದೆಯೆಂದು ಅವರು ಕೊಟೇಚಾ ಹೇಳಿದರು.

ಮತ್ತಷ್ಟು ಸುದ್ದಿಗಳು

vertical

Latest News

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ಬಡ್ಡಿ ದರ ಶೇ.8.15 ಕ್ಕೆ ಏರಿಕೆ

newscics.com ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಭವಿಷ್ಯ ನಿಧಿಯ ಮೇಲಿನ ಬಡ್ಡಿ ದರವನ್ನುಬ ಹೆಚ್ಚಿಸಲು ತೀರ್ಮಾನಿಸಿದೆ....

ವಾಯುಮಾಲಿನ್ಯದಿಂದ 1,220 ಜನರು ಸಾವು

newscics.com ಮುಂಬೈ: ಮುಂಬೈನಲ್ಲಿ 2016-2021 ರ ನಡುವೆ 1,220 ಜನರು ವಾಯುಮಾಲಿನ್ಯದಿಂದ ಸಾವನ್ನಪ್ಪಿದ್ದಾರೆ. ಅಂಕಿಅಂಶಗಳ ಪ್ರಕಾರ, ಮುಂಬೈನಲ್ಲಿ 2016 ಮತ್ತು 2021 ರ ನಡುವೆ 1,220...

ಭಾರತದ ಮೊದಲ ಗೀರ್ ತದ್ರೂಪಿ ತಳಿ ಆಕಳ ಕರು ಜನನ

newsics.com ನವದೆಹಲಿ: ಭಾರತದ ಮೊದಲ ತದ್ರೂಪಿ ಗಿರ್ ತಳಿಯ ಆಕಳ ಕರು ಹರಿಯಾಣದ ಕರ್ನಾಲ್‌ನಲ್ಲಿರುವ ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ (NDRI) ಯಲ್ಲಿ ಜನ್ಮ ಪಡೆದಿದೆ.ಈ...
- Advertisement -
error: Content is protected !!