Thursday, June 1, 2023

ಭರವಸೆ ಮೂಡಿಸುವ ಮೇತ್ರಿ

Follow Us

  • ಕಲ್ಲೇಶ್ ಕುಂಬಾರ್
    response@134.209.153.225

‘ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ’ ಕವನ ಸಂಕಲನ
ಲೇಖಕರು: ಸುಮಿತ್ ಮೇತ್ರಿ

‘ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ’ ಕವಿತೆ, ಕವಿಯೊಬ್ಬನ ಭಾವಕೋಶದಲ್ಲಿ ಲೋಕದ ವಿದ್ಯಮಾನಗಳ ಕುರಿತಾಗಿ ನಡೆಯುವ ಮಂಥನದಿಂದ ಕವಿತೆಯೊಂದು ಅರಳುವ ಪರಿಯನ್ನು ಅನನ್ಯವಾಗಿ ಕಟ್ಟಿಕೊಡುತ್ತದೆ. ಕವಿತೆಯೆಂದರೆ ಕವಿಯನ್ನು ಆವರಿಸಿದ ಮೌನದೊಳಗಿನ ಬೀಜ! ಅದು, ಆತನ ಧ್ಯಾನಸ್ಥ ಸ್ಥಿತಿಯಲ್ಲಿಯೇ ಹೂವಾಗಿ ಅರಳಬೇಕು; ಕವಿಯ ಒಳಗಿನ ಮಂಥನದಲ್ಲಿ ಭಾವನೆಗಳು ಉದ್ದೀಪನಗೊಂಡು ಹೊರಗಿನ ಅಭಿವ್ಯಕ್ತಿಯಾಗಬೇಕು! ಆಗ, ಅದು ಕೇವಲ ಕವಿತೆ ಎನಿಸದೇ ಸುಂದರವಾದ ಕಲಾಕೃತಿ ಎಂದೆನಿಸುತ್ತದೆ. ಮತ್ತು ಅಂಥ ಕವಿತೆ ಓದುಗನ ಮನದಲ್ಲಿ ಸದಾ ನಿಲ್ಲುತ್ತದೆ!..
..ಇಲ್ಲಿ, ಕವಿ (ಸುಮಿತ್) ಆಕಾಶಕ್ಕೆ ಉಗುಳುವುದನ್ನು ಬಿಡಬೇಕು ಎಂದು ಹೇಳಿರುವುದಕ್ಕೂ ಒಂದು ಕಾರಣವಿದೆ. ಅಂತೆಯೇ, ಕವಿತೆಯ ವಿಚಾರದಲ್ಲಿ ಕವಿಗೆ ಆಮೆ ಮತ್ತು ಮೊಲದ ಕಥೆಯನ್ನು ಅವರು ನೆನಪಿಸುತ್ತಾರೆ! ಅಹಂಮಿಕೆಯಿಂದ ಹೊರತಾದ ಮಗುವಿನ ಮುಗ್ಧತೆಯನ್ನು ಅಳವಡಿಸಿಕೊಂಡು, ಕವಿತೆಯ ಮುಂದೆ ಶರಣಾದಾಗ ಮಾತ್ರ ಕವಿತೆ ಕೈ ಹಿಡಿಯುತ್ತದೆ. ಹೀಗಾಗಿ, ಕವಿತೆಯೆಂದರೆ ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ – ಎಂದು ಹೇಳಿರುವ ಅವರ ಮಾತುಗಳು ಕವಿಯಾಗಿ ಸುಮಿತ್ ಮಾಗಿದ್ದಾರೆ ಎಂಬ ಭರವಸೆಯನ್ನು ಮೂಡಿಸುತ್ತವೆ..!

(ಸುಮಿತ್ ಮೇತ್ರಿ ಅವರ ‘ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ’ ಕವನ ಸಂಕಲನದಲ್ಲಿನ ಒಂದು ಕವಿತೆ)

ಥಟ್ ಅಂತ
ಬರೆದು ಕೊಡುವ ರಶೀದಿಯಲ್ಲ ಕವಿತೆ

ಥಟ್ ಅಂತ ಬರೆದು
ಕೊಡುವ ರಶೀದಿಯಲ್ಲ ಕವಿತೆ
ಕಾಯಬೇಕು ಹೂವು ಅರಳುವ
ಸೂರ್ಯ ಉದಯಿಸುವ ಘಳಿಗೆಗೆ
ಹಿಡಿಯಲು ಹವಣಿಸಲೇಬಾರದು
ಬಿಡುಗಡೆಯ ಭಾಗ್ಯಕ್ಕೆ
ಬಯೋಡೇಟಾ ಬೇಕೇನು?

ಅವ್ಯಕ್ತ!

ನೆನಪಿರಬಹುದು
‘ಆಮೆ ಮತ್ತು ಮೊಲದ ಕಥೆ’
ಮುಳ್ಳಾಗಿ ಚುಚ್ಚುವ ಅಹಂ
ತರಹೇವಾರಿ ಸರ್ಪನೃತ್ಯ ದಕ್ಕದು
ಅನಾಮಧೇಯ ಬೀಸುವ
ತಂಗಾಳಿಯಂತೆ ಸಾಗಬೇಕು
ಆಕಾಶಕ್ಕೆ ಉಗಿಯುವುದು ಬಿಡಬೇಕು
ಮಾತಾಗಬೇಕಿದೆ ಕವಿತೆ
ಧ್ಯಾನಸ್ಥ ಸ್ಥಿತಿ,

ಅವ್ಯಕ್ತ!

# ಸುಮಿತ್ ಮೇತ್ರಿ

ಮತ್ತಷ್ಟು ಸುದ್ದಿಗಳು

vertical

Latest News

ಅವಳಿ ಮಕ್ಕಳನ್ನು ಕಾರಿನಲ್ಲಿ ಉಸಿರುಗಟ್ಟಿಸಿ ಕೊಲೆಗೈದ ಪಾಪಿ ತಂದೆ

newsics.com ದಾವಣಗೆರೆ: ಪಾಪಿ ತಂದೆಯೊಬ್ಬ ತನ್ನ ಅವಳಿಗೆ ಘಟನೆ ಉಸಿರುಗಟ್ಟಿಸಿ ಕೊಲೆಗೈದ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ. ಅದ್ವೈತ್ (04) ಹಾಗೂ ಅನ್ವೀತ್ (04) ಮೃತಪಟ್ಟ ಮಕ್ಕಳು. ಅಮರ ಕಿತ್ತೂರು...

ತನ್ನ ಪ್ರೇಯಸಿಗೆ ಮೆಸೇಜ್ ಮಾಡಿದ ಎಂದು ಗೆಳೆಯನಿಗೆ ಚಾಕು ಇರಿದ ಯುವಕ

newsics.com ಮೈಸೂರು: ತನ್ನ ಪ್ರಿಯತಮೆಗೆ ಮೆಸೇಜ್ ಮಾಡಿದನೆಂದು ಯುವಕನೊಬ್ಬ ತನ್ನ ರೂಮೇಟ್‌ಗೆ ಚಾಕು ಇರಿದ ಪ್ರಸಂಗವೊಂದು ಅರಮನೆ ನಗರಿ ಮೈಸೂರಿನಲ್ಲಿ ನಡೆದಿದೆ. ಗಾಯಾಳುವನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ, ಈತನಿಗೆ ಸ್ನೇಹಿತ ಶ್ರೇಯಸ್ ಎಂಬಾತ ಚಾಕು...

ಉತ್ತರಾಖಂಡದಲ್ಲಿ ಭೂಕುಸಿತ: 300 ಮಂದಿ ಪ್ರಯಾಣಿಕರ ಪರದಾಟ

newsics.com ಡೆಹ್ರಾಡೂನ್: ಉತ್ತರಾಖಂಡದ ಪಿಥೋರಗಢದಲ್ಲಿ ಭೂಕುಸಿತ ಉಂಟಾದ ಪರಿಣಾಮ ರಸ್ತೆ ಕೊಚ್ಚಿಹೋಗಿದ್ದು, 300 ಮಂದಿ ಪ್ರಯಾಣಿಕರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಲಖನ್‌ಪುರ ಬಳಿಯ ಧಾರ್ಚುಲದಿಂದ 45 ಕಿಮೀ ಎತ್ತರದ ಲಿಪುಲೇಖ್ – ತವಾಘಾಟ್ ರಸ್ತೆಗೆ ಬೆಟ್ಟ ಕುಸಿದು...
- Advertisement -
error: Content is protected !!