Saturday, December 2, 2023

‘ಕಲ್ಯಾಣಿಯ ಮಳೆಯಲ್ಲಿ’ ಮಿಂದ ಪುಳಕ

Follow Us

* ಪ್ರಸಾದ್ ಕುಲಕರ್ಣಿ ಸೂರ್ಯಸಖ
response@134.209.153.225

ಳೆ ಸುರಿಸುವ ಮೇಘ ಅವಳದಲ್ಲ, ಹುಚ್ಚು ಆವೇಗ. ತಿಳಿದಿದೆ ಆಕೆಗೆ, ಯಾವ ಕಲ್ಯಾಣಿಯ ಮೇಲೆ ಸುರಿಯಬೇಕು, ಯಾವುದರ ಮೇಲೆ ಸುಮ್ಮನೆ ಹಾಯಬೇಕೆಂದು. ಸುಮ್ಮನೆ ಹಾಯಬೇಕಾದ ನನ್ನೆದೆಯೆಂಬ ಕಲ್ಯಾಣಿಯಲ್ಲಿ ವಾರದಿಂದ ಧೋ ಮಳೆ. ಈ ಮಳೆಯ ದೆಸೆಯಿಂದ ಒಂದಷ್ಟು ಲವಲವಿಕೆ ಮೂಡಿದೆ ನನ್ನಲ್ಲಿ. ಮನಸ್ಸು ಮಿಂದು ಮಡಿಯಾಯಿತು.
ಇದು ಹೇಮಾ ಸದಾನಂದ ಅಮೀನ್ ಅವರ ಚೊಚ್ಚಲ ಎನಿಸದ ಚೊಚ್ಚಲ ಕವನ ಸಂಕಲನ ‘ಕಲ್ಯಾಣಿಯಲ್ಲಿ ಮಳೆ ‘ ಎಂಬ ಕೃತಿಯ ಕುರಿತು ನನ್ನ ಹನಿ ಹನಿ ಅನಿಸಿಕೆ. ಈ ಸಂಕಲನದ ಪ್ರಾರಂಭದಲ್ಲೇ ಮೌಲ್ಯಯುತವಾದ ಒಂದು ಮೌನವಿದೆ. ಓದುತ್ತ ಹೋದಂತೆ ನಾವು, ಗಾಳಿ, ನೀರು, ಮೋಡ, ಸಿಡಿಲುಗಳ ಭರಾಟೆಗೆ ಸಿಕ್ಕಿಕೊಳ್ಳುತ್ತೇವೆ. ಮತ್ತದನ್ನು ಆನಂದಿಸುತ್ತೇವೆ. ನಮ್ಮ ಅಹಂಕಾರದ ಪೊರೆ ಕಳಚಿ ಆರ್ದ್ರವಾಗುತ್ತೇವೆ. ಕವಯತ್ರಿ ವಿನಾಕಾರಣದ ಮಾತಿನ ಹರಳನ್ನೆಸೆದು ನಮ್ಮ ಮೌನಭಂಗವಾಗದಂತೆ ಕವಿತೆಗಳ ತೂಗಿಸಿ ಗೆದ್ದಿದ್ದಾರೆ. ಒಂದೇ ಗುಕ್ಕಿನಲ್ಲಿ ಓದಿ ಮುಗಿಸಲಾಗದ ಕವನ ಸಂಕಲನ ಇದು. ಆದರೆ ಈ ಕೃತಿ ತೀರದ ದಾಹ ಮೂಡಿಸುತ್ತದೆ. ಮತ್ತೆ ಮತ್ತೆ ತನ್ನತ್ತ ಸೆಳೆಯುತ್ತದೆ. ದಾಹ ಇಂಗುವುದೇ ಇಲ್ಲ. ನನ್ನ ದಾಹ ಇಂಗಿದ್ದರೆ ಈ ಪರಿಚಯ ಬರೆಯಲಾಗುತ್ತಲೇ ಇರಲಿಲ್ಲ. ಇದನ್ನು ಪೂರ್ತಿ ಓದಿದ ಬಳಿಕ ನನಗನಿಸಿದ್ದು; ನಾನು ಬರೆಯುವುದು, ಕಲಿಯುವುದು ಇನ್ನೂ ತುಂಬಾ ಇದೆ ಎಂದು.
ಇಲ್ಲಿನ ಕವಿತೆಗಳು ಅನುಭವ ಶ್ರೀಮಂತಿಕೆಯ ಜತೆಜತೆಗೆ ಒಂದಷ್ಟು ಕಲ್ಪನೆ, ಅದ್ಭುತ ಭಾಷೆಯ ಸಾಂಗತ್ಯದಿಂದ ಕಂಗೊಳಿಸಿವೆ. ಪದಗಳ ವೈಭವೀಕರಣವಾಗದೆ ಅಂತಃಕರಣ ತಟ್ಟುತ್ತವೆ. ಜಡಗಳಿಗೂ ಚೇತನ ನೀಡುವ ಭಾವ ಕಲ್ಯಾಣಿ ಇದು. ಕವಯತ್ರಿ ಮತ್ತು ಕವಿತೆಯ ನಡುವೆ ನಡೆಯುವ ತೀವ್ರ ಸಂಘರ್ಷದ ಫಲವೇ ಈ ಧಾರಾಕಾರ ಮಳೆಗೆ ಕಾರಣ. ಒಟ್ಟು ೫೭ ಕವಿತೆಗಳು, ಕೆಲವು ಹನಿ ಕವನಗಳ ಈ ಸಂಕಲನ ಓದುವಾಗ, ಪುಟ್ಟ ಬೆರಗು, ಒಂದು ಒಳನೋಟ, ಹೊಸದೊಂದು ಹೊಳಹು ಕಾಣಿಸುತ್ತದೆ. ಅನುಭೂತಿಗೂ ಬರುತ್ತದೆ. ಕೆಲವು ಸಾಲುಗಳು ತಾಕುತ್ತವೆ. ಚಿಂತನೆಗೆ ದೂಡುತ್ತವೆ. ವಾಸ್ತವದ ಪ್ರಖರ ಸೂರ್ಯನನ್ನೂ ಪರಿಚಯಿಸುತ್ತವೆ. ಗಾಲಿಬನ ಗಜಲಿನ ಮೇಲಾಣೆ ಕೆಲವು ಕವಿತೆಗಳು ಸಣ್ಣಗೆ ಬಳಕುತ್ತವೆ. ದಟ್ಟ ವಿಷಾದ, ಪುಟ್ಟ ಸಂಭ್ರಮ ಎರಡನ್ನೂ ಮೂಡಿಸುತ್ತವೆ.
ಈ ಕವನ ಸಂಕಲನವನ್ನೊಮ್ಮೆ ಎಡವಿಬಿಡಿ. ನಿಮ್ಮ ದುಃಖವ ತನ್ನೆದೆಗಾತು, ತಬ್ಬಿ, ತಟ್ಟಿ, ಚಪ್ಪರಿಸಿ ಮತ್ತೆ ತಾಯಿಯಂತೆ ತುತ್ತನಿಟ್ಟು, ಅರಿವಿನ ಹರಿವು ಹರಿಸುತ್ತದೆ. ಮುಳ್ಳಿನ ಬೆನ್ನಲ್ಲಿ ಹೂವಿನೆದೆಯ ಮಿದು ಸ್ಪರ್ಶ ನೀಡುತ್ತದೆ. ಹಿರಿಯ ಸಾಹಿತಿ ವಿದ್ಯಾಧರ ಮುತಾಲಿಕ್ ದೇಸಾಯಿ ಅವರ ಚೆಂದದ ಬೆನ್ನುಡಿ ಹಾಗೂ ಮುಂಬಯಿಯ ಕರ್ನಾಟಕ ಮಲ್ಲ ದೈನಿಕದ ಉಪ ಸಂಪಾದಕ, ಸಾಹಿತಿ ಶ್ರೀನಿವಾಸ ಜೋಕಟ್ಟೆಯವರ ಮುನ್ನುಡಿಯೊಂದಿಗೆ ಕಲ್ಯಾಣಿಯಲ್ಲಿ ಮಳೆ ತುಂಬಿದೆ. ನನ್ನ ಬೊಗಸೆಯಲ್ಲಿ… ಮಳೆ… ಹಿಡಿಸಿದ್ದಿಷ್ಟೆ. ನೀವೂ ಒಮ್ಮೆ ಕಲ್ಯಾಣಿಯ ಮಳೆಯಲ್ಲಿ ತೋಯ್ದು ಬನ್ನಿ.

(‘ಕಲ್ಯಾಣಿಯ ಮಳೆಯಲ್ಲಿ’ ಕವನ ಸಂಕಲನದಲ್ಲಿನ ಆಯ್ದ ಕವಿತೆ)
ಮೌನ ತಪಸ್ವಿ
ಎಂದಾದರೂ ನನ್ನ ಮನದ ಉರಿನಾಲಗೆ
ನಿನ್ನ ಮೌನದತ್ತ ಚಾಚಿಕೊಂಡರೆ
ಶತಶತಮಾನದಿಂದ ನನ್ನಲ್ಲಿನ
ಆ ದಾವಾಗ್ನಿ ನಿನ್ನನ್ನೂ ಬಿಡಲಾರದು
ಮತ್ತೆ ನೀನು ಶಪಿಸದಿರು ನನ್ನ !
ಕತ್ತಲೆಯನ್ನು ಎಳೆದುಕೊಂಡ ಬೆಳಕಿನಂತೆ
ನಿನ್ನನ್ನು ಪೂರ್ತಿಯಾಗಿ ಅಪ್ಪಿಕೊಂಡೆನೆಂದು
ಅದಕ್ಕೆ ನಾನು ಹೊಣೆಗಾರನಲ್ಲ ಮತ್ತೆ!…

ಮತ್ತಷ್ಟು ಸುದ್ದಿಗಳು

vertical

Latest News

ನೀವು ಭಯಗೊಂಡಾಗ ದೇಹದಲ್ಲಿ ಏನಾಗುತ್ತದೆ ಗೊತ್ತಾ?

ಭಯವು ಸಾಮಾನ್ಯ ಭಾವನೆಯಾಗಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಹೆದರುತ್ತಾರೆ. ಆದರೆ ಕೆಲವರು ಸಣ್ಣ ವಿಷಯಗಳಿಗೂ ತುಂಬಾ ಹೆದರುತ್ತಾರೆ. ಅವರು ಯಾಕೆ ಹೆದರುತ್ತಾರೆ ಎಂದು ಅವರಿಗೆ ತಿಳಿದಿಲ್ಲ. ಕೆಲವರು ಹಾರರ್ ಸಿನಿಮಾಗಳನ್ನು...

ಹೂವು ಬಿಡಿಸಲು ಹೋಗಿದ್ದಾಗ ವಿದ್ಯುತ್ ತಂತಿ ತುಳಿದು ಮಹಿಳೆ ಸಾವು

newsics.com ದಾವಣಗೆರೆ: ಪಂಪ್​ಸೆಟ್​​ಗೆ ಅಳವಡಿಸಿದ್ದ ವಿದ್ಯುತ್ ತಂತಿ ತುಳಿದು ಮಹಿಳೆ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ  ಬಸವರಾಜಪುರದಲ್ಲಿ ನಡೆದಿದೆ. ಅಲಿಬಾಯಿ(62) ಮೃತ ರ್ದುದೈವಿ. ಹೂವು ಬಿಡಿಸಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಬಸವಪಟ್ಟಣ...

ಜೈ ಶ್ರೀರಾಮ್‌ ಹೇಳುವಂತೆ ಗಡ್ಡಕ್ಕೆ ಬೆಂಕಿ ಹಚ್ಚಿ ವೃದ್ಧನ ಮೇಲೆ ಹಲ್ಲೆ

newsics.com ಕೊಪ್ಪಳ :  65 ವರ್ಷದ ಅಂಧ ಮುಸ್ಲಿಂ ವೃದ್ಧನಿಗೆ ಇಬ್ಬರು ಅನಾಮಿಕ ವ್ಯಕ್ತಿಗಳು ಗಂಗಾವತಿ ಟೌನ್‌ನಲ್ಲಿ ಕಿರುಕುಳ ನೀಡಿದ ಘಟನೆ ನಡೆದಿದೆ. ಗಂಗಾವತಿಯಲ್ಲಿ ಒಂದು ಕಪ್‌ ಚಹಾ ಕುಡಿದು ಆಟೋರಿಕ್ಷಾಕ್ಕೆ ಕಾಯುತ್ತಿರುವಾಗ ಬೈಕ್‌ನಲ್ಲಿ ಇಬ್ಬರು...
- Advertisement -
error: Content is protected !!