Thursday, June 1, 2023

ಸಂತುಲಿತ ಆಹಾರ

Follow Us

  • ಹೊರಾ ಪರಮೇಶ್ ಹೊಡೇನೂರು
    response@134.209.153.225

ನಿತ್ಯವು ಕೆಲಸ ಮಾಡಲು ನಮಗೆ
ಶಕ್ತಿ ಚೈತನ್ಯ ಇರಬೇಕು
ದೇಹಕೆ ಬೇಕಾದ ಶಕ್ತಿ ದೊರೆಯಲು
ಕಾರ್ಬೋಹೈಡ್ರೇಟ್ ಇರಬೇಕು //

ಅಕ್ಕಿ ರಾಗಿ ಜೋಳ ಧಾನ್ಯಗಳು
ಕಾರ್ಬೋಹೈಡ್ರೇಟ್ ನೀಡುವವು
ಪಿಷ್ಟ ಸಕ್ಕರೆ ಕೊಬ್ಬಿನಂಶಗಳು
ಹೆಚ್ಚಿನ ಶಕ್ತಿಯ ಕೊಡುವವು //

ನಮ್ಮ ದೇಹದ ಬೆಳವಣಿಗೆಗಾಗಿ
ಪ್ರೋಟೀನ್ ಪದಾರ್ಥಗಳು ಬೇಕು
ದೇಹದ ದುರಸ್ತಿ ಕಾರ್ಯಕ್ಕಾಗಿ
ಹಾಲು ಮೊಟ್ಟೆ ಸೇವಿಸಬೇಕು //

ರೋಗರುಜಿನಗಳು ಬಾರದ ಹಾಗೆ
ಜೀವಸತ್ವಗಳು ತಡೆಯುವವು
ಹಣ್ಣು ತರಕಾರಿ ಸೊಪ್ಪುಗಳಿಂದ
ಅನ್ನಾಂಗಗಳು ದೊರೆಯುವವು //

ಹಲ್ಲು ಮೂಳೆಗಳ ರಕ್ಷಣೆಗಾಗಿ
ಕ್ಯಾಲ್ಸಿಯಂ ಖನಿಜ ಉಪಯುಕ್ತ
ರಕ್ತಹೀನತೆಗೆ ಕಬ್ಬಿಣಾಂಶ ಬೇಕು
ಗಳಗಂಡ ರೋಗಕೆ ಅಯೋಡಿನ್ ಸೂಕ್ತ //

ಮತ್ತಷ್ಟು ಸುದ್ದಿಗಳು

vertical

Latest News

ಕಣ್ಣೂರು ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಎಕ್ಸ್‌ಪ್ರೆಸ್ ರೈಲಿನ ಬೋಗಿ ಬೆಂಕಿಗಾಹುತಿ

newsics.com ಕಣ್ಣೂರು: ಕೇರಳದ ಕಣ್ಣೂರು ರೈಲು ನಿಲ್ದಾಣದಲ್ಲಿ ನಿಂತಿದ್ದ ಎಕ್ಸ್‌ಪ್ರೆಸ್ ರೈಲಿನ ಬೋಗಿಯಲ್ಲಿ ಇಂದು (ಜೂ. 1) ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ. ಪ್ಲಾಟ್‌ಫಾರ್ಮ್ ಮತ್ತು ಭಾರತ್ ಪೆಟ್ರೋಲಿಯಂ ಇಂಧನ...

ಅವಳಿ ಮಕ್ಕಳನ್ನು ಕಾರಿನಲ್ಲಿ ಉಸಿರುಗಟ್ಟಿಸಿ ಕೊಲೆಗೈದ ಪಾಪಿ ತಂದೆ

newsics.com ದಾವಣಗೆರೆ: ಪಾಪಿ ತಂದೆಯೊಬ್ಬ ತನ್ನ ಅವಳಿಗೆ ಘಟನೆ ಉಸಿರುಗಟ್ಟಿಸಿ ಕೊಲೆಗೈದ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ. ಅದ್ವೈತ್ (04) ಹಾಗೂ ಅನ್ವೀತ್ (04) ಮೃತಪಟ್ಟ ಮಕ್ಕಳು. ಅಮರ ಕಿತ್ತೂರು (35) ಮಕ್ಕಳನ್ನು ಕೊಂದ ಪಾಪಿ ತಂದೆ....

ತನ್ನ ಪ್ರೇಯಸಿಗೆ ಮೆಸೇಜ್ ಮಾಡಿದ ಎಂದು ಗೆಳೆಯನಿಗೆ ಚಾಕು ಇರಿದ ಯುವಕ

newsics.com ಮೈಸೂರು: ತನ್ನ ಪ್ರಿಯತಮೆಗೆ ಮೆಸೇಜ್ ಮಾಡಿದನೆಂದು ಯುವಕನೊಬ್ಬ ತನ್ನ ರೂಮೇಟ್‌ಗೆ ಚಾಕು ಇರಿದ ಪ್ರಸಂಗವೊಂದು ಅರಮನೆ ನಗರಿ ಮೈಸೂರಿನಲ್ಲಿ ನಡೆದಿದೆ. ಗಾಯಾಳುವನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ, ಈತನಿಗೆ ಸ್ನೇಹಿತ ಶ್ರೇಯಸ್ ಎಂಬಾತ ಚಾಕು...
- Advertisement -
error: Content is protected !!