Wednesday, May 31, 2023

ಶಿಕ್ಷಣ ತೇರು

Follow Us

  • ದೇವರಾಜ್ ನಿಸರ್ಗತನಯ
    ಬಂಗಾರಪೇಟೆ
    response@134.209.153.225

ಬಿತ್ತೋಣ ಬನ್ನಿ ನಾವು
ಅಕ್ಷರಗಳ ಬೀಜವನ್ನು
ಎಳೆಯರಾ ಎದೆಯೊಳಗೆ !
ಬೆಳೆಯೋಣ ಬನ್ನಿ ನಾವು
ಜ್ಞಾನದ ಸಸಿಗಳನ್ನು
ಮುಗ್ಧತೆಯ ಮನದೊಳಗೆ |1|

ಕೀಳೋಣ ಬನ್ನಿ ನಾವು
ಕೀಳರಿಮೆ ಕಳೆಯನ್ನು
ಕಿರಿಯರ ಮನಸೊಳಗೆ !
ಹೇಳೋಣ ಬನ್ನಿ ನಾವು
ಮಾನವತೆ ಕಥೆಯನ್ನು
ಮುಂದಿನಾ ಪೀಳಿಗೇಗೆ |2|

ಎಳೆಯೋಣ ಬನ್ನಿ ನಾವು
ಶಿಕ್ಷಣದಾ ತೇರನ್ನು
ಜ್ಞಾನ ದೇಗುಲದೊಳಗೆ !
ಕಳೆಯೋಣ ಬನ್ನಿ ನಾವು
ಸಂತಸದಾ ಕ್ಷಣಗಳನ್ನು
ಚಿಣ್ಣರಾ ಖುಷಿಯೊಳಗೆ |3|

ಏರೋಣ ಬನ್ನಿ ನಾವು
ಸಾಧನೆಯಾ ಶಿಖರವನ್ನು
ಕಾಯಕದಾ ತತ್ವದೊಳಗೆ !
ಸಾರೋಣ ಬನ್ನಿ ನಾವು
ಸಮಾನತೆ ಪಾಠವನ್ನು
ಭವಿಷ್ಯದಾ ಕನಸುಗಳಿಗೆ |4|

ಮತ್ತಷ್ಟು ಸುದ್ದಿಗಳು

vertical

Latest News

ಮಲಯಾಳಂ ಚಿತ್ರರಂಗದ ಖ್ಯಾತ ನಟ ಹರೀಶ್ ಪೆಂಗನ್ ನಿಧನ

newsics.com ಮಲಯಾಳಂ ಚಿತ್ರರಂಗದ ಖ್ಯಾತ ಕಲಾವಿದ ಹರೀಶ್ ಪೆಂಗನ್ ಅವರು ಮಂಗಳವಾರ (ಮೇ 30) ನಿಧನ ಹೊಂದಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು. ಹರೀಶ್ ಅವರು ಕಳೆದ...

ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ದುಷ್ಕೃತ್ಯ ಸಂಚು: ದಕ್ಷಿಣ ಕನ್ನಡದ 16 ಕಡೆ NIA ದಾಳಿ

newsics.com ಮಂಗಳೂರು: ಪ್ರಧಾನಿ ಮೋದಿಯವರ ಬಿಹಾರ ಕಾರ್ಯಕ್ರಮದ ವೇಳೆ ದುಷ್ಕೃತ್ಯ ಸಂಚು ರೂಪಿಸಿದ್ದ ಹಿನ್ನೆಲೆಯಲ್ಲಿ ಬುಧವಾರ ರಾಷ್ಟ್ರೀಯ ತನಿಖಾ ದಳ (ಎನ್ಐಎ) ದಕ್ಷಿಣ ಕನ್ನಡ ಜಿಲ್ಲೆಯ 16‌ ಕಡೆ ದಾಳಿ‌ ನಡೆಸಿದೆ. ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ,...

ಸಮುದ್ರಕ್ಕೆ ಬಿತ್ತು ಉತ್ತರ ಕೊರಿಯಾ ಉಡಾಯಿಸಿದ ‘ಗೂಢಚರ್ಯೆ ಉಪಗ್ರಹ’

newsics.com ಸೋಲ್: ಉತ್ತರ ಕೊರಿಯಾ ಬುಧವಾರ ಉಡಾವಣೆ ಮಾಡಿದ ಗೂಢಚರ್ಯೆ ಉಪಗ್ರಹ ಸಮುದ್ರದ ಪಾಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ತಾಂತ್ರಿಕ ಕಾರಣಗಳಿಂದಾಗಿ ಗೂಢಚರ್ಯೆ ಉಪಗ್ರಹ ಸಮುದ್ರಕ್ಕೆ ಬಿದ್ದಿದೆ ಎಂದು ಉತ್ತರ ಕೊರಿಯಾ ಮಾಧ್ಯಮಗಳು ತಿಳಿಸಿವೆ. ಮೊದಲು...
- Advertisement -
error: Content is protected !!