Monday, October 2, 2023

ಓ ನೆನಪೇ…

Follow Us

  • ವಿಷ್ಣು ಭಟ್ ಹೊಸ್ಮನೆ

ನೆನಪೇ

ನನ್ನೊಡನೆ

ನಿನ್ನ ಚದುರಂಗ

ಗೆಲುವೂ ಇಲ್ಲ, ಸೊಲೂ ಇಲ್ಲ

ಹಸಿಮಣ್ಣಿಗೆ ಹೊಡೆದ ಕಲ್ಲು

ಹಾಯಾಗಿ ಬಂದು

ಮನಕೆ ಕಚಗುಳಿ

ನೋವಾಗಿ ಹೊರಟು

ಕುಸಿದ ಗೋಪುರ

ನೆಸರನಿಲ್ಲದ ಜಗ

ಕೆಸರಿಲ್ಲದ ಹೊಲ

ಬೆಲೆಯಿಲ್ಲದ ಧನ- ಧನಕೊಳ್ಳಲಾಗದ ನಂಟು

ನೆನಪುಂಟು

ಕದ್ದಿಲ್ಲ-ಸಿಕ್ಕಿಲ್ಲ- ದೃಶ್ಯ –ಅದೃಶ್ಯಗಳಲ್ಲಿ

ಪತ್ಯವಾಗಿ ಬಂದೆ

ಆಗಸದಲ್ಲೂ ಚಂದ್ರ- ಸಾಗರದಲ್ಲೂ ಚಂದ್ರ

ಕೈಗೆ ಸಿಗದ ಚಂದ

ಕಣ್ಣ ಕಟ್ಟುತ್ತೀಯ

ಒಂದು ಎರಡಾಗಿ-ಮೂರಾಗಿ ಮುಂದೆ ಮುಂದೆ

ನಿರಂತರ – ಚಿರ

ಉಸಿರುಗಟ್ಟುವ ಬಿರುಗಾಳಿ

ಶೂನ್ಯದಲ್ಲಿ ಅನಂತವಾಗಿ

ನನ್ನೊಡನೆ

ನಿನ್ನ ಚದುರಂಗ

ನಗಬೇಕೋ – ಅಳಬೇಕೋ?

ಮಿಥ್ಯವಾಗದು

ನೆನಪೇ

ನೀ ನಿತ್ಯಸತ್ಯ.

ಮತ್ತಷ್ಟು ಸುದ್ದಿಗಳು

vertical

Latest News

ವಿದ್ಯುತ್ ಲೈನ್ ತಗುಲಿ 5 ಜಾನುವಾರು ಸ್ಥಳದಲ್ಲಿಯೇ ಸಾವು

newsics.com ಕೊಡಗು: ವಿದ್ಯುತ್ ಲೈನ್ ತುಂಡಾಗಿ ಬಿದ್ದ ಹಿನ್ನೆಲೆ ಐದು ಜಾನುವಾರುಗಳು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ದಾರುಣ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಮತ್ತೂರಿನಲ್ಲಿ ನಡೆದಿದೆ. ಮತ್ತೂರು ಗ್ರಾಮದ...

Asian Games; ಭಾರತಕ್ಕೆ ಒಂದೇ ದಿನ 15 ಪದಕ

newsics.com ಹ್ಯಾಂಗ್‌ಝೌ: ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ 8ನೇ ದಿನವಾದ ಭಾನುವಾರ ಒಂದೇ ದಿನ 15 ಪದಕ ಬಾಚಿಕೊಂಡಿದೆ. 7ನೇ ದಿನವಾದ ಶನಿವಾರ 10 ಚಿನ್ನ, 14 ಬೆಳ್ಳಿ ಮತ್ತು 14 ಕಂಚಿನೊಂದಿಗೆ 38 ಪದಕಗಳನ್ನು ಭಾರತ...

ಬೆಂಗಳೂರು ಕಂಬಳ: ಕೋಣಗಳಿಗೆ ಮಂಗಳೂರಿಂದಲೇ ಬರುತ್ತೆ ಕುಡಿಯುವ ನೀರು!

newsics.com ಬೆಂಗಳೂರು: ನವೆಂಬರ್ ತಿಂಗಳ 25 ಮತ್ತು 26ನೇ ತಾರೀಕಿನಂದು ಮೊದಲ ಬಾರಿಗೆ ತುಳುನಾಡಿನ ಗಡಿಯನ್ನು ದಾಟಿ ಬೆಂಗಳೂರಿನಲ್ಲಿ ಕರಾವಳಿಯ ಸಾಂಸ್ಕೃತಿಕ ಕ್ರೀಡೆ ಕಂಬಳ ನಡೆಯುತ್ತಿದೆ. ಪುತ್ತೂರು ಶಾಸಕ ಅಶೋಕ್‌ ಕುಮಾರ್ ರೈ ನೇತೃತ್ವದಲ್ಲಿ ಕಂಬಳ...
- Advertisement -
error: Content is protected !!