Saturday, December 2, 2023

ನಾವು ಹೆಂಗಸರೇ ಹೀಗೆ

Follow Us

ನಂದಿನಿ ವಿಶ್ವನಾಥ ಹೆದ್ದುರ್ಗ

ಹೆಜ್ಜೆ ಕೊಳಕೆಂಬುದು ತಿಳಿದಿದ್ದರೂ
ತೊಳೆದ ನೆಲವನ್ನು ಮತ್ತೆ ಒರೆಸಿ
ಥಳಥಳಿಸುತ್ತೇವೆ
ನಾಳೆ ಬರುವ ಅವರ
ಸಲುವಾಗಿ.
ಬಂದವರು ಹೋದ ಮೇಲೆ
ಹೊಳೆದಿದ್ದ
ನೆಲದ ಮೇಲೆ ಹಾವು ಹೊರಳಿದ
ಹಾಗೆ ಇದು
ಒರೆಸಲಾಗದ ಕುರುಹು
ಭರಿಸಲಾಗದ ನೋವು!

ಸೆಜ್ಜೆಯೊಳಗೂ
ಉಜ್ಜಿ ಮೆತ್ತಿದ್ದ ದಾರಿಗುಂಟದ ಕೆಸರು.
ಎದೆ…
ಆಗ ತಾನೆ ಸಾರಿಸಿದ ಹಸಿ ನೆಲ.
ಹೀಗೆ
ಬಂದವರು
ಹಾಗೆ
ಹೋದ ಮೇಲೆ
ಮನ.. ತಳ ಒಡೆದ ತಪ್ಪಲೆ
ಉಳಿಯುವುದು ಇಲ್ಲಿ
ಬರೀ ಕಲೆ..!

ನಾವು ಹೆಂಗಸರೇ ಹೀಗೆ

ಹೊಸಿಲಿನೊಳಗಡೆ
ಹಠದ ಜೊತೆಗೆ
ಹಗೆಯ ಮೊಳಕೆ ಕಟ್ಟಿ
ದಣಿಯುತ್ತೇವೆ
ಉಸಿರುಗಟ್ಟಿ.
ಆಸರಕೆ
ಹೊಸಿಲಾಚೆ ಹೊರಟು
ನಿಂತು ಒಣಮರದ ಕೆಳಗೆ
ಬೇಡುತ್ತೇವೆ ನೆರಳು
ಭ್ರಮಿಸುತ್ತೇವೆ ಹೂ ಘಮಲು.
ಹಣ್ಣಿಗಾಗಿ
ಟೊಂಗೆ ತುದಿಯೇರಿ
ನೆಲಕುರುಳಿ ನಲುಗಿ
ಮನೆ
ತಲುಪಿ ಮಾಡುತ್ತೇವೆ ತಲಾಶು.
ಎಂದೋ ಇಟ್ಟು
ಮರೆತಿದ್ದ ಒಂದು
ಪಕಳೆ ಕಳಚಿದ್ದ ಹೂವು.
ನೆನಪು ನೀರೊಲೆಯ
ಉರಿಯೊಳಗೆ.
ಉಳಿಯುವುದು ಬರೀ ಬೇಗೆ

ನಾವು ಹೆಂಗಸರೇ ಹೀಗೆ

ಜೀನ್ಸು ತೊಟ್ಟು
ತೆಗೆಯುತ್ತೇವೆ ಜ್ವರಕ್ಕೆ ದೃಷ್ಟಿ.
ತುಂಡುಗೂದಲಿಗೇ
ದುಂಡು ಮಲ್ಲಿಗೆ ಗಿಡಿದು
ಓದುತ್ತೇವೆ ಪರಿಮಳದ
ಕವಿತೆ.
ಕಿವಿಯಿದ್ದರೆ
ಮೂರು ದಾರಿ ಕೂಡುವಲ್ಲೂ
ಪ್ರವರ ಬಿಚ್ಚುತ್ತೇವೆ.
ನಕ್ಕು ಮಾತಾಡಿದವನ
ದುಃಖಕ್ಕೆ ಬಿಡುವಾಗಿ
ಸೋಗನ್ನೆ ಮಾಗಿದ
ಮನವೆಂದು
ಒಳಗಿರಲಾಗದೆ ತಳಮಳಿಸಿ
ತಿರುವಿನಲಿ ದಿಕ್ಕು ಬದಲಿಸಿ
ದಯೆಗಾಗಿ ಗುಡಿಯ ನೋಡಿ..

ಕೊನೆಗಿಲ್ಲಿ ಉಳಿಯುವುದಾದರೂ ಏನು?
ಹೀಗೆ ತಳಮಳಿಸುವ ಹೃದಯವಷ್ಟೇ
ತನ್ನಲ್ಲಿ ತಾನು!

ಮತ್ತಷ್ಟು ಸುದ್ದಿಗಳು

vertical

Latest News

ನೀವು ಭಯಗೊಂಡಾಗ ದೇಹದಲ್ಲಿ ಏನಾಗುತ್ತದೆ ಗೊತ್ತಾ?

ಭಯವು ಸಾಮಾನ್ಯ ಭಾವನೆಯಾಗಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಹೆದರುತ್ತಾರೆ. ಆದರೆ ಕೆಲವರು ಸಣ್ಣ ವಿಷಯಗಳಿಗೂ ತುಂಬಾ ಹೆದರುತ್ತಾರೆ. ಅವರು ಯಾಕೆ ಹೆದರುತ್ತಾರೆ ಎಂದು ಅವರಿಗೆ ತಿಳಿದಿಲ್ಲ. ಕೆಲವರು ಹಾರರ್ ಸಿನಿಮಾಗಳನ್ನು...

ಹೂವು ಬಿಡಿಸಲು ಹೋಗಿದ್ದಾಗ ವಿದ್ಯುತ್ ತಂತಿ ತುಳಿದು ಮಹಿಳೆ ಸಾವು

newsics.com ದಾವಣಗೆರೆ: ಪಂಪ್​ಸೆಟ್​​ಗೆ ಅಳವಡಿಸಿದ್ದ ವಿದ್ಯುತ್ ತಂತಿ ತುಳಿದು ಮಹಿಳೆ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ  ಬಸವರಾಜಪುರದಲ್ಲಿ ನಡೆದಿದೆ. ಅಲಿಬಾಯಿ(62) ಮೃತ ರ್ದುದೈವಿ. ಹೂವು ಬಿಡಿಸಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಬಸವಪಟ್ಟಣ...

ಜೈ ಶ್ರೀರಾಮ್‌ ಹೇಳುವಂತೆ ಗಡ್ಡಕ್ಕೆ ಬೆಂಕಿ ಹಚ್ಚಿ ವೃದ್ಧನ ಮೇಲೆ ಹಲ್ಲೆ

newsics.com ಕೊಪ್ಪಳ :  65 ವರ್ಷದ ಅಂಧ ಮುಸ್ಲಿಂ ವೃದ್ಧನಿಗೆ ಇಬ್ಬರು ಅನಾಮಿಕ ವ್ಯಕ್ತಿಗಳು ಗಂಗಾವತಿ ಟೌನ್‌ನಲ್ಲಿ ಕಿರುಕುಳ ನೀಡಿದ ಘಟನೆ ನಡೆದಿದೆ. ಗಂಗಾವತಿಯಲ್ಲಿ ಒಂದು ಕಪ್‌ ಚಹಾ ಕುಡಿದು ಆಟೋರಿಕ್ಷಾಕ್ಕೆ ಕಾಯುತ್ತಿರುವಾಗ ಬೈಕ್‌ನಲ್ಲಿ ಇಬ್ಬರು...
- Advertisement -
error: Content is protected !!