Saturday, December 2, 2023

ನಿಷ್ಪ್ರಂಪಚದ ಪಲಕು

Follow Us

  • ರಾಜ್ ಆಚಾರ್ಯ

ಕವಿತೆ ಬರೆಯುವುದೇಕೆ
ನಿಲ್ಲಿಸಿದೆ ಎಂದೇಕೆ ಕೇಳಿದೆ
ಖಾಲಿ ಹಾಳೆಗಳ ತುಂಬೆಲ್ಲ
ಮತ್ತದೇ ನಿಶ್ಯಬ್ಧ ಪದಗಳು
ತನಿಯೊಡೆಯದ ಭಾವ
ಸವೆದ ಪೆನ್ನಿನ ನಿಬ್ಬಿಗು
ಮೂಡದ ಮಸಿಯ ಬೆರಗು
ನಿಷ್ಪ್ರಂಪಚದ ಪಲಕುಗಳು
ನಿನ್ನ ಹಸಿ-ಬಿಸಿ ನೆನಪುಗಳಿಗೆ
ಮೊದಲಿನ ಮಾದಕತನವಿಲ್ಲ
ಮನೆಯಂಗಳದ ಮಲ್ಲಿಗೆ
ಮೊಗ್ಗುಗಳೇಕೆ ಅರಳುತಿಲ್ಲ
ಸಂಜೆಗಣ್ಣಿನ ನೋಟಕೆ
ಈಗೀಗ ಪೊರೆಬಂದಂತಿದೆ
ಕಾಲಚಕ್ರದ ಉರುಳಿಗೆ
ಕೊರಳನೊಡ್ಡಿ ಬರಿದಾದೆ
ಬರೆಯದೆ ನನಗೇ ನಾನೇ
ನಿನಗೆ ಹೇಳದೆ-ಕೇಳದೆ
ಹೀಗೆಯೇ ಸುಮ್ಮನಾದೆ

ಮತ್ತಷ್ಟು ಸುದ್ದಿಗಳು

vertical

Latest News

ನೀವು ಭಯಗೊಂಡಾಗ ದೇಹದಲ್ಲಿ ಏನಾಗುತ್ತದೆ ಗೊತ್ತಾ?

ಭಯವು ಸಾಮಾನ್ಯ ಭಾವನೆಯಾಗಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಹೆದರುತ್ತಾರೆ. ಆದರೆ ಕೆಲವರು ಸಣ್ಣ ವಿಷಯಗಳಿಗೂ ತುಂಬಾ ಹೆದರುತ್ತಾರೆ. ಅವರು ಯಾಕೆ ಹೆದರುತ್ತಾರೆ ಎಂದು ಅವರಿಗೆ ತಿಳಿದಿಲ್ಲ. ಕೆಲವರು ಹಾರರ್ ಸಿನಿಮಾಗಳನ್ನು...

ಹೂವು ಬಿಡಿಸಲು ಹೋಗಿದ್ದಾಗ ವಿದ್ಯುತ್ ತಂತಿ ತುಳಿದು ಮಹಿಳೆ ಸಾವು

newsics.com ದಾವಣಗೆರೆ: ಪಂಪ್​ಸೆಟ್​​ಗೆ ಅಳವಡಿಸಿದ್ದ ವಿದ್ಯುತ್ ತಂತಿ ತುಳಿದು ಮಹಿಳೆ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ  ಬಸವರಾಜಪುರದಲ್ಲಿ ನಡೆದಿದೆ. ಅಲಿಬಾಯಿ(62) ಮೃತ ರ್ದುದೈವಿ. ಹೂವು ಬಿಡಿಸಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಬಸವಪಟ್ಟಣ...

ಜೈ ಶ್ರೀರಾಮ್‌ ಹೇಳುವಂತೆ ಗಡ್ಡಕ್ಕೆ ಬೆಂಕಿ ಹಚ್ಚಿ ವೃದ್ಧನ ಮೇಲೆ ಹಲ್ಲೆ

newsics.com ಕೊಪ್ಪಳ :  65 ವರ್ಷದ ಅಂಧ ಮುಸ್ಲಿಂ ವೃದ್ಧನಿಗೆ ಇಬ್ಬರು ಅನಾಮಿಕ ವ್ಯಕ್ತಿಗಳು ಗಂಗಾವತಿ ಟೌನ್‌ನಲ್ಲಿ ಕಿರುಕುಳ ನೀಡಿದ ಘಟನೆ ನಡೆದಿದೆ. ಗಂಗಾವತಿಯಲ್ಲಿ ಒಂದು ಕಪ್‌ ಚಹಾ ಕುಡಿದು ಆಟೋರಿಕ್ಷಾಕ್ಕೆ ಕಾಯುತ್ತಿರುವಾಗ ಬೈಕ್‌ನಲ್ಲಿ ಇಬ್ಬರು...
- Advertisement -
error: Content is protected !!