Thursday, December 7, 2023

ವಿರಹಿ

Follow Us

  • ಗುರು ಹಿರೇಮಠ ಇಳಕಲ್

ಈ ಸಂಜೆಯಲಿ
ಒಂದು ಮತ್ತೊಂದಾಗುವ ಸುಳಿವುಗಳನ್ನು
ತಂಗಾಳಿ ಹೊತ್ತು ತರುವುದು
ಕಡಲಿ‌ನ ದಡದಲಿ‌‌ ನಡೆಯುವಾಗ
ನಾನಂತೂ ಊಹಿಸಿರಲಿಲ್ಲ.

ನೋಡಿ ನಕ್ಕ ಆ ದೈತ್ಯ ಅಲೆಗಳ
ಬಣ್ಣಬಣ್ಣದ ಮಾತುಗಳ ಅಂತಃಸತ್ಯವ
ಬಂಡೆಯ ಮೇಲೆ ಗೀಚಿ ಹೋಗುತ್ತಿದ್ದೆ..

ಏಕಾಂತದ ಆ ಮೌನ‌‌ಗಳು
ಕಡಲಿನ ಮಧ್ಯೆ ನಿಲ್ಲದಂತೆ
ನಗುತ ಹಾಕಿದ ಕೇಕೆ, ಅಟ್ಟಹಾಸ,
ಸಿಡಿಲಿಗೂ ಮೀರಿದಂತಿತ್ತು….

ಒಲವಿನ ಬುತ್ತಿ ಹಾಡಾಗಿ
ಹಡಗಿನ ಅವಶೇಷಗಳೊಂದಿಗೆ
ಜತೆಯಾಗಿ
ಮರಳಲಿ ಈಗಾಗಲೇ ಇತಿಹಾಸವಾಗಿವೆ..

ಅಲೆಮಾರಿಯಾಗಿ ತೋರಿ ಬರುವ
ಆ ಚಿಪ್ಪುಗಳಲಿ ನಾಳೆಗಳನ್ನ ವಂಚಿಸುವ
ಕುರಿತು ಮುತ್ತುಗಳು
ಟಿಪ್ಪಣಿಗಳನು ಬರೆದು ಕಳಿಸಿವೆ.

ಕೈ ಹಿಡಿದು ಕಡಲು ನೋಡಿದ
ಆ ಸಂಭ್ರಮದ ಪ್ರತಿ ಕ್ಷಣದ ನೆನಪುಗಳು
ಮುರಿದ ಮೆಟ್ಟಲುಗಳಾಗಿ ಈಗ
ಅಲೆಗಳಲಿ ರಾರಾಜಿಸುತ್ತಿವೆ…

ಮತ್ತಷ್ಟು ಸುದ್ದಿಗಳು

vertical

Latest News

ಚಿನ್ನ, ಜಮೀನು, ಬಿಎಂಡಬ್ಲ್ಯೂ ಕಾರಿಗೆ ಬೇಡಿಕೆ : ಕೇರಳದ ವೈದ್ಯೆ ಆತ್ಮಹತ್ಯೆ

Newsics.com ಕೇರಳ : ಕೇರಳದ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಸ್ನಾತಕೋತ್ತರ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಆತ್ಮಹತ್ಯೆಗೆ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದೆ ಕಾರಣ...

ಊಟ ಕೇಳಿದ್ದಕ್ಕೆ ವಿದ್ಯಾರ್ಥಿಗಳಿಗೆ ಬಿತ್ತು ಚಾಟಿ ಏಟು

newsics.com ಹಾವೇರಿ : ಊಟ ಕೇಳಿದ ವಿಧ್ಯಾರ್ಥಿಗಳಿಗೆ ವಾರ್ಡನ್ ಚಾಟಿ ಏಟು ಕೊಟ್ಟಿರುವಂತಹ ಅಮಾನವೀಯ ಘಟನೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಾದ ಹಾವೇರಿಯಲ್ಲಿ ನಡೆದಿದೆ. ರಾಣೇಬೆನ್ನೂರು ನಗರದ ಅಂಬೇಡ್ಕರ್ ವಸತಿ...

ಹೊತ್ತಿ ಉರಿದ ಕಾರು – ಟಿಪ್ಪರ್ : ಇಬ್ಬರು ಸಜೀವ ದಹನ

Newsics.com ಬೆಳಗಾವಿ : ಕಾರು ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿ, ಬಾಲಕಿ ಸೇರಿ ಇಬ್ಬರು ಸಜೀವ ದಹನವಾದರೆ ಮತ್ತಿಬ್ಬರಿಗೆ ಗಂಭೀರ ಗಾಯವಾಗಿರುವಂತಹ ಘಟನೆ ಬೆಳಗಾವಿ ತಾಲೂಕಿನ ದೇವಗಿರಿ ಬಂಬರಗಾ ಕ್ರಾಸ್ ಬಳಿ...
- Advertisement -
error: Content is protected !!