Monday, December 11, 2023

ಹಾಯ್ಕುಗಳು

Follow Us

  • ವಾಕ್ ಸಿದ್ಧಿ

ಹಂಬಲ

ಬಣ್ಣ ಬಣ್ಣಗಳ ಸರಣಿ ಬಲ್ಪುಗಳಲಂಕಾರದಿ ಜಗಮಗ ಬೆಳಗುತಿವೆ ಬಂಗಲೆಗಳ ಅಂಗಳ..!
ಗುಡಿಸಲ ಮುಂದೆ ಹಚ್ಚಿಟ್ಟ ಹಣತೆಗಳಿಗೋ ಗಾಳಿಯ ದಾಳಿ ಎದುರಿಸಿ ಬೆಳಗುವ ಹಂಬಲ!!

ಅಹಮಿಕೆ

ಅಹಮಿಕೆಯೆಂಬ ಬಲೂನಿನ ಬುಡಕೆ
ಚುಚ್ಚಿದಾಗ ನಿಜದ ಸೂಜಿಮಣಿ..!
ಜೋರು ಸದ್ದುಮಾಡಿ ಹೆದರಿಸುವುದು
ಗಾಳಿತುಂಬಿದ್ದ ದುರಹಂಕಾರದ ದ್ವನಿ…!!

ಕಂದರ

ಬೆಂದಷ್ಟೂ ಗಟ್ಟಿಯಾಗಿ ಇಟ್ಟಿಗೆಯಾದ ಮಣ್ಣು ಚೆಂದಗಾಣಿಸಿತು ಮನೆಮಂದಿರಗಳ ಹಂದರ..!
ನೊಂದಷ್ಟೂ ದಿಟ್ಟವಾಗಿ ಬದುಕುವ ಹೆಣ್ಣು ತುಂಬಲೇಬೇಕು ಮನಗೊಂದಲಗಳ ಕಂದರ..!!

ತಪ್ಪೊಪ್ಪು

ಆತ್ಮೀಯರ ತಪ್ಪುಗಳ ಕುರಿತು ಅರಿವಿದ್ದರೂ
ದೇವರಂತೆ ಇದ್ದುಬಿಡು ಹೇಳದೆ ಸುಮ್ಮನೆ..!
ತಿಪ್ಪೆಯ ಮೇಲರಳಿದ ಹೂವಿನಂದ ಮರೆತು
ಬುಡ ಕೆದಕಿದಷ್ಟೂ ಸಹಿಸಲಾಗದ ವಾಸನೆ..!!

ಸಂಹಿತೆ

ಅನ್ಯರ ಸರಿ ತಪ್ಪುಗಳ ಕುರಿತು ಅವರವರ
ಮೂಗಿನೇರಕ್ಕೆ ಆಡಿಕೊಳ್ಳುವವರಿಗಿಲ್ಲ ಕೊರತೆ.!
ಎಲ್ಲರಿಗೂ ಇದ್ದರೆಷ್ಟು ಚೆಂದ ತನ್ನಂತೆ ಪರರೆಂದು
ಅರಿತು ನಡೆಯುವ ವಿವೇಕದ ನೀತಿ ಸಂಹಿತೆ..!!

ಮತ್ತಷ್ಟು ಸುದ್ದಿಗಳು

vertical

Latest News

ನಿನ್ಗೆ ಹುಚ್ಚು ನಾಯಿ ಕಚ್ಚಿದ್ಯಾ? ; ಬಿಜೆಪಿ ವಿರುದ್ಧ ಲಕ್ಷ್ಮಣ್‌ ಸವದಿ ಕೆಂಡಾಮಂಡಲ

  newsics.com ಬೆಳಗಾವಿ: ರೈತರು  ದೇವರ ಸಮಾನ,  ರೈತರ ಹಣ ತಿಂದ ಮಾಲೀಕರು ಉದ್ಧಾರ ಆಗಲ್ಲ. ಅವರಿಗೆ ಮೋಸ ಮಾಡಬೇಡಿ ಎಂದು  ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಕಲಾಪದ ವೇಳೆ...

ಹಸುಗಳ ಮೇಲೆ ಆ್ಯಸಿಡ್‌ ಎರಚಿದ ಬೆಂಗಳೂರಿನ ವೃದ್ಧೆ

newsics.com ನೆಲಮಂಗಲ:  ಮನೆ ಬಳಿ ಮೇಯಲು ಬಂದ ಹಸುಗಳ ಮೇಲೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗುಣಿ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಜೋಸೆಫ್ ಗ್ರೇಸ್ (76 ವರ್ಷ)  ಎನ್ನುವ ಮಹಿಳೆ ಮನೆ...

ಆಸ್ತಿಗಾಗಿ ತಂದೆ-ತಾಯಿಯನ್ನೇ ಕೊಲೆಗೈದಿದ್ದ ಮಗ ಅರೆಸ್ಟ್​

newsics.com ದೇವನಹಳ್ಳಿ:  ಆಸ್ತಿಗಾಗಿ ಹೆತ್ತ ತಂದೆ-ತಾಯಿಯನ್ನೇ ಕೊಲೆಗೈದಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಮಗ ನರಸಿಂಹಮೂರ್ತಿ ತಪ್ಪೊಪ್ಪಿಕೊಂಡಿದ್ದಾನೆ.  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ ವೃದ್ಧ ದಂಪತಿ ಯನ್ನು ಕೊಲೆಗೈದಿದ್ದ ಮಗನನ್ನು ಪೊಲೀಸರು...
- Advertisement -
error: Content is protected !!