Wednesday, May 31, 2023

ಹಾಯ್ಕುಗಳು

Follow Us

  • ವಾಕ್ ಸಿದ್ಧಿ

ಹಂಬಲ

ಬಣ್ಣ ಬಣ್ಣಗಳ ಸರಣಿ ಬಲ್ಪುಗಳಲಂಕಾರದಿ ಜಗಮಗ ಬೆಳಗುತಿವೆ ಬಂಗಲೆಗಳ ಅಂಗಳ..!
ಗುಡಿಸಲ ಮುಂದೆ ಹಚ್ಚಿಟ್ಟ ಹಣತೆಗಳಿಗೋ ಗಾಳಿಯ ದಾಳಿ ಎದುರಿಸಿ ಬೆಳಗುವ ಹಂಬಲ!!

ಅಹಮಿಕೆ

ಅಹಮಿಕೆಯೆಂಬ ಬಲೂನಿನ ಬುಡಕೆ
ಚುಚ್ಚಿದಾಗ ನಿಜದ ಸೂಜಿಮಣಿ..!
ಜೋರು ಸದ್ದುಮಾಡಿ ಹೆದರಿಸುವುದು
ಗಾಳಿತುಂಬಿದ್ದ ದುರಹಂಕಾರದ ದ್ವನಿ…!!

ಕಂದರ

ಬೆಂದಷ್ಟೂ ಗಟ್ಟಿಯಾಗಿ ಇಟ್ಟಿಗೆಯಾದ ಮಣ್ಣು ಚೆಂದಗಾಣಿಸಿತು ಮನೆಮಂದಿರಗಳ ಹಂದರ..!
ನೊಂದಷ್ಟೂ ದಿಟ್ಟವಾಗಿ ಬದುಕುವ ಹೆಣ್ಣು ತುಂಬಲೇಬೇಕು ಮನಗೊಂದಲಗಳ ಕಂದರ..!!

ತಪ್ಪೊಪ್ಪು

ಆತ್ಮೀಯರ ತಪ್ಪುಗಳ ಕುರಿತು ಅರಿವಿದ್ದರೂ
ದೇವರಂತೆ ಇದ್ದುಬಿಡು ಹೇಳದೆ ಸುಮ್ಮನೆ..!
ತಿಪ್ಪೆಯ ಮೇಲರಳಿದ ಹೂವಿನಂದ ಮರೆತು
ಬುಡ ಕೆದಕಿದಷ್ಟೂ ಸಹಿಸಲಾಗದ ವಾಸನೆ..!!

ಸಂಹಿತೆ

ಅನ್ಯರ ಸರಿ ತಪ್ಪುಗಳ ಕುರಿತು ಅವರವರ
ಮೂಗಿನೇರಕ್ಕೆ ಆಡಿಕೊಳ್ಳುವವರಿಗಿಲ್ಲ ಕೊರತೆ.!
ಎಲ್ಲರಿಗೂ ಇದ್ದರೆಷ್ಟು ಚೆಂದ ತನ್ನಂತೆ ಪರರೆಂದು
ಅರಿತು ನಡೆಯುವ ವಿವೇಕದ ನೀತಿ ಸಂಹಿತೆ..!!

ಮತ್ತಷ್ಟು ಸುದ್ದಿಗಳು

vertical

Latest News

ಸಮುದ್ರಕ್ಕೆ ಬಿತ್ತು ಉತ್ತರ ಕೊರಿಯಾ ಉಡಾಯಿಸಿದ ‘ಗೂಢಚರ್ಯೆ ಉಪಗ್ರಹ’

newsics.com ಸೋಲ್: ಉತ್ತರ ಕೊರಿಯಾ ಬುಧವಾರ ಉಡಾವಣೆ ಮಾಡಿದ ಗೂಢಚರ್ಯೆ ಉಪಗ್ರಹ ಸಮುದ್ರದ ಪಾಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ತಾಂತ್ರಿಕ ಕಾರಣಗಳಿಂದಾಗಿ ಗೂಢಚರ್ಯೆ ಉಪಗ್ರಹ ಸಮುದ್ರಕ್ಕೆ ಬಿದ್ದಿದೆ...

ರಾಜ್ಯದ ಹಲವೆಡೆ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

newsics.com ಹಾವೇರಿ/ತುಮಕೂರು/ಶಿವಮೊಗ್ಗ: ಇಂದು(ಮೇ 31) ಬೆಳ್ಳಂಬೆಳಗ್ಗೆ ಹಾವೇರಿ, ತುಮಕೂರು ಹಾಗೂ ಶಿವಮೊಗ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿರುವ ನಿರ್ಮಿತಿ ಕೇಂದ್ರದ ಇಂಜಿನಿಯರ್ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ದಾಳಿ...

ಜೂನ್ 4 ರವರೆಗೆ ರಾಜಧಾನಿಯಲ್ಲಿ ಭಾರಿ ಮಳೆ: 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

newsics.com ಬೆಂಗಳೂರು: ಬೆಂಗಳೂರಿನಲ್ಲಿ ಜೂನ್ 4ರವರೆಗೂ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಂಗಳೂರು...
- Advertisement -
error: Content is protected !!