♦ ಶಿವಾನಂದ್ ಕರೂರ್ ಮಠ್
ಶಿಕ್ಷಕರು, ದಾವಣಗೆರೆ
response@134.209.153.225
newsics.com@gmail.com
ಬನ್ನಿರಿ ಮಿತ್ರರೆ ಧಾರಣ ಧರಣಿಗೆ
ಶಿರವನು ಬಾಗಿ ನಮಿಸೋಣ
ಪುಣ್ಯದ ಫಲವೇ ಇಲ್ಲಿನ ಜನನ
ಸಾರ್ಥಕ ಜೀವನ ನಡೆಸೋಣ
ಮನುಕುಲದ ಒಳಿತಿಗೆ
ಗಿಡ ಮರ ಸಲಹುತ
ಶುದ್ಧ ನೀರು ಗಾಳಿ ಬೆಳಕಿಗೆ
ನಾವೇ ಸಾಕ್ಷಿಯಾಗೋಣ
ಪ್ಲಾಸ್ಟಿಕ್ ಮಾರಿಯ ತೊಲಗಿಸಿ ನಾವೆಲ್ಲ
ಫಲವತ್ತತೆ ಭೂಮಿಯ ಉಳಿಸೋಣ
ಹೊಗೆಯನು ಉಗುಳಿ ಹೋಗದೆ ನಾವು
ಹೊಂಬೆಳಕಿನ ಮುನ್ನುಡಿ ಬರೆಯೋಣ
ಬೆಟ್ಟಗುಡ್ಡ ನದಿ ನಾಲೆಯ ಉಳಿಸುತ
ನಿಸರ್ಗ ನೀಡುವ ಶುದ್ಧತೆ
ಬಳಸುತ
ಕಣಕಣ ಲವಣವ ಸವಿಯೋಣ
ಪ್ರಾಣಿ ಪಕ್ಷಿಗಳ ಉಳಿಸಲು ಬೆಳೆಸಲು
ಹೊಸ ಮುನ್ನಡಿಯನು ಬರೆಯೋಣ
ಜೀವದ ಜಲವು ಬೇಕಿದೆ ಮುಂದು
ಕಳೆಯದೆ ಉಳಿಸೋಣ ನಾವಿಂದು
ಮರಗಿಡ ಕಡಿದು ಮಳೆಯನು ಕಳೆಯದೆ
ಉಸಿರಿಗೆ ಹಸಿರನು ಉಳಿಸೋಣ
ತೋರಣ ಕಟ್ಟಲು ಎಲೆಗಳು ಬೇಕು
ಬನ್ನಿಮುಡಿಯಲು ಮರಗಳು ಬೇಕು
ಮೂಡುವ ಕಂದನ ನಗುಮೊಗ ನೋಡಲು
ಬಿದಿರಿನ ತೊಟ್ಟಿಲು ಕಟ್ಟಲೆ ಬೇಕು
ಬನ್ನಿರಿ ಮರಗಿಡಬಳ್ಳಿಯ ಬೆಳೆಸೋಣ
ಸಮೃದ್ಧ ಧರೆಯನು ಉಳಿಸೋಣ