Thursday, June 1, 2023

ನಾನು ಪದ್ಯವಾಗಲಿಲ್ಲ…

Follow Us

• ಪ್ರಭಾಕರ ತಾಮ್ರಗೌರಿ ಗೋಕರ್ಣ
newsics.com@gmail.com

ಹುಣ್ಣಿಮೆಯ ದಿನ
ಬಾನಿನಲ್ಲಿ ಇಣುಕಿ ನೋಡಿದೆ
ಅಸಂಖ್ಯ ನಕ್ಷತ್ರಗಳು ಮಿನುಗುತ್ತಿದ್ದವು
ಬಂಜೆ ಮೋಡಗಳು
ಸಂತಸದಿಂದ ರೆಕ್ಕೆ ಬಿಚ್ಚಿ ಹಾರಾಡುತ್ತಿದ್ದವು
ತುಂಬು ಮೊಗದ ಚಂದ್ರ
ನಕ್ಕು ನಲಿಯುತ್ತಿದ್ದ
ಸಾಗರ ಸಂತಸದಿಂದ
ಉಕ್ಕಿ ಭೋರ್ಗೆರೆಯುತ್ತಿತ್ತು
ಅದೇ ಕಡಲ ಮೊರೆತದ ಅಲೆಗಳು
ಶೃತಿಯಾಗಿ ತೇಲಿಬರುತ್ತಿತ್ತು
ಎಂಥ ಉತ್ಸಾಹ !
ತುಟಿಯಂಚಿನಲ್ಲಿ ಬೆಳದಿಂಗಳ ನಗೆ
ಮುಂಗುರುಳು ಅತ್ತಿತ್ತ ಓಲಾಡುತ್ತಿತ್ತು
ಕಣ್ಣು , ಮುಂಗುರುಳು ಹೊಳೆ ಹೊಳೆದು
ಬಿಳಿ ಹಾಳೆಯ ಮೇಲೆ ಪದ್ಯವಾಯಿತು
ಮುಗುಳು ನಗೆ
ಮೋಡಗಳು ಪದ್ಯವಾದವು
ಪದ್ಯವಾಗಬೇಕೆಂದು ನನಗೂ ಅನ್ನಿಸಿತು
ಕೂಡಲೇ, ಕಡಲ ಕನ್ನಡಿಯೊಳಗೆ
ಇಣುಕಿ ನೋಡಿದೆ
ನನ್ನ ಬಿಂಬ ಎಲ್ಲೂ ಕಾಣಲಿಲ್ಲ
ನಾನು ಪದ್ಯವಾಗಲಿಲ್ಲ
ನನ್ನ ಬಿಂಬ ಕಡಲ ಸುಳಿಯೊಳಗೆ
ಸಿಕ್ಕು ಲೀನವಾಯಿತು

ಮತ್ತಷ್ಟು ಸುದ್ದಿಗಳು

vertical

Latest News

ಕಣ್ಣೂರು ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಎಕ್ಸ್‌ಪ್ರೆಸ್ ರೈಲಿನ ಬೋಗಿ ಬೆಂಕಿಗಾಹುತಿ

newsics.com ಕಣ್ಣೂರು: ಕೇರಳದ ಕಣ್ಣೂರು ರೈಲು ನಿಲ್ದಾಣದಲ್ಲಿ ನಿಂತಿದ್ದ ಎಕ್ಸ್‌ಪ್ರೆಸ್ ರೈಲಿನ ಬೋಗಿಯಲ್ಲಿ ಇಂದು (ಜೂ. 1) ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ. ಪ್ಲಾಟ್‌ಫಾರ್ಮ್ ಮತ್ತು ಭಾರತ್ ಪೆಟ್ರೋಲಿಯಂ ಇಂಧನ...

ಅವಳಿ ಮಕ್ಕಳನ್ನು ಕಾರಿನಲ್ಲಿ ಉಸಿರುಗಟ್ಟಿಸಿ ಕೊಲೆಗೈದ ಪಾಪಿ ತಂದೆ

newsics.com ದಾವಣಗೆರೆ: ಪಾಪಿ ತಂದೆಯೊಬ್ಬ ತನ್ನ ಅವಳಿಗೆ ಘಟನೆ ಉಸಿರುಗಟ್ಟಿಸಿ ಕೊಲೆಗೈದ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ. ಅದ್ವೈತ್ (04) ಹಾಗೂ ಅನ್ವೀತ್ (04) ಮೃತಪಟ್ಟ ಮಕ್ಕಳು. ಅಮರ ಕಿತ್ತೂರು (35) ಮಕ್ಕಳನ್ನು ಕೊಂದ ಪಾಪಿ ತಂದೆ....

ತನ್ನ ಪ್ರೇಯಸಿಗೆ ಮೆಸೇಜ್ ಮಾಡಿದ ಎಂದು ಗೆಳೆಯನಿಗೆ ಚಾಕು ಇರಿದ ಯುವಕ

newsics.com ಮೈಸೂರು: ತನ್ನ ಪ್ರಿಯತಮೆಗೆ ಮೆಸೇಜ್ ಮಾಡಿದನೆಂದು ಯುವಕನೊಬ್ಬ ತನ್ನ ರೂಮೇಟ್‌ಗೆ ಚಾಕು ಇರಿದ ಪ್ರಸಂಗವೊಂದು ಅರಮನೆ ನಗರಿ ಮೈಸೂರಿನಲ್ಲಿ ನಡೆದಿದೆ. ಗಾಯಾಳುವನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ, ಈತನಿಗೆ ಸ್ನೇಹಿತ ಶ್ರೇಯಸ್ ಎಂಬಾತ ಚಾಕು...
- Advertisement -
error: Content is protected !!