Saturday, April 1, 2023

ಬಾಳದೋಣಿಯಲಿ…

Follow Us

* ಶಂಕರಿ ಶರ್ಮ, ಪುತ್ತೂರು
response@134.209.153.225

ಸುವಿಚಾರ ಧಾರೆ ತಾ ಸುರಿಯೆ ಕರ್ಣದ ಮೇಲೆ
ಮನಸಿಗುಲ್ಲಾಸ ನಿಜ ನಿತ್ಯ ಜೀವನದಿ
ಕುಟಿಲತೆಯ ಮಾತುಗಳು ತೂರೆ ಬಾಣದ ತೆರದಿ
ಅರಳಲಾರದು ನಗುವ ಹೂವು ಮೊಗದಿ

ಸಂಕೀರ್ಣ ಭಾವದಲೆ ಏರಿಳಿವ ಶರಧಿಯಲಿ
ಸವಿನೆನಪುಗಳ ತೆರೆಯ ನೊರೆಯು ಚೆಲ್ಲಿ
ಅಂತರಾಳದಿ ಒಲವು ತಾನುಕ್ಕಿ ಬರೆ ನಿತ್ಯ
ಅದೆ ಜೀವನದಿ ನೀಡೆ ಸದಾ ಗೆಲುವನಿಲ್ಲಿ

ಮನಕಡಲಿನಲಿಯಿರುವ ರತ್ನ ಮೇಲಕೆ ತರಲು
ಸತ್ಕಾರ್ಯ ಸನ್ನಡತೆ ನಾವೆ ತಾ ಬರಲು
ಸದ್ವಿಚಾರದ ಹುಟ್ಟು ಸ್ಥೈರ್ಯ ಅಂಬಿಗನಿರಲು
ಗೆಲುವು ನಮ್ಮೊಳಗೆ ತಾನೆ ತಾನಾಗಿ ಬರಲು

ಮತ್ತಷ್ಟು ಸುದ್ದಿಗಳು

vertical

Latest News

ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ಕೇಜ್ರಿವಾಲ್‌ಗೆ 25 ಸಾವಿರ ದಂಡ

ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ಗೆ  ಮುಖಭಂಗ ಉಂಟಾಗಿದೆ. ಪ್ರಧಾನಿ ಮೋದಿ ಡಿಗ್ರಿ ಸರ್ಟಿಫಿಕೇಟ್‍ಗಳನ್ನು ಪ್ರದರ್ಶಿಸುವ ಅಗತ್ಯವಿಲ್ಲ ಎಂದು ಗುಜರಾತ್...

ಕೆಲಸದ ನಡುವೆ ಧಮ್ ಎಳೆಯಲು ಪದೇ ಪದೇ ಬ್ರೇಕ್, 9 ಲಕ್ಷ ರೂಪಾಯಿ ದಂಡ

newsics.com ನವದೆಹಲಿ: ಕೆಲಸದ ನಡುವೆ ಧಮ್ ಎಳೆಯಲು ಬ್ರೇಕ್ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ.ನೀವೂ ಹೀಗೆ ಮಾಡುತ್ತಿದ್ದರೆ ಎಚ್ಚರವಾಗಿರುವುದು ಒಳಿತು. ಕೆಲಸದ ನಡುವೆ ಧಮ್ ಎಳೆಯಲು ಪದೇ ಪದೇ ಬ್ರೇಕ್, 9 ಲಕ್ಷ ರೂಪಾಯಿ ದಂಡವನ್ನು ಕಂಪನಿ...

ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿ ಹಿನ್ನೆಲೆ ಮಧ್ಯರಾತ್ರಿ 1 ಗಂಟೆಯ ತನಕ ಮೆಟ್ರೋ ಸೇವೆ

newsics.com ಬೆಂಗಳೂರು: ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿ ಹಿನ್ನೆಲೆ ಮಧ್ಯರಾತ್ರಿ 1 ಗಂಟೆಯ ತನಕ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗುತ್ತಿದೆ. ರಾಜ್ಯ ರಾಜಧಾನಿಯಲ್ಲಿ ಏಪ್ರಿಲ್ 2, 10, 17, 26 ಮೇ 21 ರಂದು ಐಪಿಎಲ್ ಪಂದ್ಯವಿರುವ...
- Advertisement -
error: Content is protected !!