Wednesday, September 27, 2023

ಬೆರಳ ತುದಿಯಲಿ ಬರೆದ ಕವಿತೆ

Follow Us

  • ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ
    response@134.209.153.225

 

 

ನಿನ್ನುಡುಗೆಯಲಿ ಅಡಗಿ
ಖುದ್ದಾಗಿ ಮುತ್ತಿಡಲು
ನಡುಗಿ ನೀ ಬೆಡಗಿನಿಂದಲೇ
ನಡುವ ಬಳಸಿದೆ
ಗುಡುಗು ಸಿಡಿಲಿನ ಮಳೆ ಹೊರಗೆ
ಒಳಗೆ ಸಾಗರದ ಬೋರ್ಗರೆತ
ಶೃಂಗಾರರಸದ ಕಡಲು
ಉಕ್ಕಿತು…

ನಾಚಿ ಮುಚ್ಚಿಕೊಂಡಿದ್ದ ಅಂಗಾಂಗಗಳೆಲ್ಲ
ಅರಿವಿಲ್ಲದೇ ಬಿಚ್ಚಿಕೊಂಡವು,
ಕಚ್ಚಿಕೊಂಡವು
ಹುಚ್ಚನ ಮಾಡಿ ನನ್ನ ಸುತ್ತಿಕೊಂಡವು
ಬೆರಳ ತುದಿಯಲಿ
ಕೊರಳಮೇಲೆ ಬರೆದ ಕವಿತೆ
ನಿನ್ನ ಸ್ವರಮಾಧುರ್ಯದ ರಾಗ ಸಂಯೋಜನೆಯಿಂದ
ಹಾಡಾಗಿ ಹೋಯಿತು

ಎದೆಯು ಬಾಯಿಗೆ ಬಂದಂತಾಗಿ
ಹೃದಯದುದ್ವೇಗ ಹೆಚ್ಚಾಗಿ
ಉಸಿರಲ್ಲೇ ಹುಟ್ಟಿದ್ದು ಈ ಉನ್ಮಾದ ಮತ್ತು ರೋಮಾಂಚನ
ತುಟಿಗೆ ತುಟಿಯ ಭೇಟಿಯಾಗಿ
ಎದೆಗೆ ಎದೆಯು ಬಿಗಿಯಾಗಿ
ನಡುವ ನಡುವೆ ಬಂಧಿಯಾಗಿ
ಗಂಧದಂಥ ಘಮವೊಂದು
ಚಿಲುಮೆಯಂತೆ ಚಿಮ್ಮಿತು…

 

ಮತ್ತಷ್ಟು ಸುದ್ದಿಗಳು

vertical

Latest News

ಸ್ನೇಹಿತೆ ಜತೆ ದೈಹಿಕ ಸಂಪರ್ಕಕ್ಕೆ ಪ್ರೇಯಸಿ ಒತ್ತಾಯ: ನಿರಾಕರಿಸಿದ ಪ್ರಿಯಕರನ ಮರ್ಮಾಂಗವನ್ನೇ ಕಚ್ಚಿದ ಗೆಳತಿ!

newsics.com ಕಾಸ್ಪುರ: ತನ್ನ ಸ್ನೇಹಿತೆಯೊಂದಿಗೆ ದೈಹಿಕ ಸಂಪರ್ಕ ಸಾಧಿಸಲಿಲ್ಲ ಎಂದು ಕೋಪಗೊಂಡ ಗೆಳತಿ, ಪ್ರಿಯಕರನ ಗುಪ್ತಾಂಗಕ್ಕೆ ಕಚ್ಚಿದ್ದಾಳೆ. ಇಂಥದ್ದೊಂದು ವಿಚಿತ್ರ ಮತ್ತು ಆಘಾತಕಾರಿ ಘಟನೆ ನಡೆದಿದ್ದು ಉತ್ತರಪ್ರದೇಶದಲ್ಲಿ. ಇಲ್ಲಿನ...

ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಶಾನವಾಜ್ ಹುಸೇನ್’ಗೆ ಹೃದಯಾಘಾತ!

newsics.com ಮುಂಬೈ: ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಶಾನವಾಜ್ ಹುಸೇನ್'ಗೆ ಹೃದಯ ಸ್ತಂಭನವಾಗಿದ್ದು, ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಜಿಯೋಪ್ಲ್ಯಾಸ್ಟಿ ಮಾಡಿಸಲಾಗಿದೆ. ಶಾನವಾಜ್ ಹುಸೇನ್ ಹೃದಯಾಘಾತದಿಂದ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಂಜಿಯೋಪ್ಲಾಸ್ಟಿ...

ಮನೆ ನೌಕರರಿಗೆ ಕಿರುಕುಳ ನೀಡುತ್ತಿದ್ದ ಸೇನಾ ಮೇಜರ್, ಆತನ ಪತ್ನಿ ಬಂಧನ!

newsics.com ಅಸ್ಸಾಂ: ಮನೆ ನೌಕರರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಸೇನಾ ಮೇಜರ್ ಹಾಗೂ ಆತನ ಪತ್ನಿಯನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ. ಅಸ್ಸಾಂನ ದಿಮಾ ಹಸಾವೋ ಜಿಲ್ಲೆಯಲ್ಲಿ ಸೇನಾ ಮೇಜರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು...
- Advertisement -
error: Content is protected !!