Monday, December 11, 2023

ಹ-ರಾಮಿ ಚರಿತ್ರೆ

Follow Us

* ಮಧು ಬಿರಾದಾರ
response@134.209.153.225

ದು ಸಾಕು
ಹರಾಮಿ ಚರಿತ್ರೆಯ ಪುಟಗಳನ್ನು

ಮೊದಲ ಪುಟದಿಂದಲೇ ಆರಂಭ
ರಕ್ತಪಾತ ಮೋಸ ವಂಚನೆ
ಹಿಂಸೆಯ ಉಗ್ರ ಬಕಾಸುರತನ

ಬಣ್ಣ ಸಂಕೇತ ಘೋಷ ವಾಕ್ಯ
ಹೊತ್ತು ಕುಣಿಯಬೇಕು ಕತ್ತಿಯಂತೆ
ಪ್ರಾಸ ವಿನ್ಯಾಸದಲ್ಲಿ ಬಗೆ ಬಗೆ ರೂಪಕದಲ್ಲಿ
ವರ್ಣಿಸುತ್ತಾರೆ “ದೇವಮಾನ”ವರೆಂದು
ಹಾಗೆಯೇ ಕುಣಿತದಲ್ಲಿ ಸಾಗುತ್ತಲಿರಬೇಕು ಬಲಿಪೀಠದವರೆಗೆ

ಇಲ್ಲಿ ಬಾಯ್ತೆವಲಿಗಿ
ತೋಳ್ಬಲದ ತೆವಲಿಗೆ ತೊಡೆ ತೆವಲಿಗೆ
ಏನೆಲ್ಲವೂ ಸಂಭವಿಸಲು ಸಾಧ್ಯ

ನಾವು ಯಾರನ್ನು ದೂರಲಿಲ್ಲ
ದಂಡಯಾತ್ರೆ ಆಕ್ರಮಣ
ನಮ್ಮ ರಕ್ತದಲ್ಲಿ ಯಾವತ್ತೂ ಚಿಮ್ಮಲಿಲ್ಲ
ವಿಚಿತ್ರವೆಂದರೆ,
ನಮ್ಮ ಮನೆಗೆ ಬಂದ ಅತಿಥಿ ಯಜಮಾನನಾದ
ನಾವು ಗುಲಾಮರಾದೆವು

ವರ್ತಮಾನಕ್ಕೂ ಇತಿಹಾಸಕ್ಕೂ ಅಷ್ಟೇನು ವ್ಯತ್ಯಾಸವಿಲ್ಲ
ಶಾಲೆಯಲ್ಲಿ ಬೋಧಿಸಿದ 70 ವರ್ಷಗಳ ಗಿಳಿ ಪಾಠವೆ
ಜ್ಞಾನವೆನ್ನಲಾಗಿದೆ. ಹಾಗೆಂದು ಕರೆಯುತ್ತೇವೆ ಕೂಡ
ನಿಜವಾದ ಜ್ಞಾನ ಅಧಿಕಾರ ಪಶುಪಾಲಕರ ತಲೆಗಷ್ಟೇ ಮೆತ್ತಿದೆ
ಪಾಪ,
ಬಾಬಾನ ಒಂಟಿ ಹೋರಾಟಕ್ಕೆ ದಕ್ಕಿದ್ದು ಗಿಳಿಪಾಠವಷ್ಟೆ

ವಿಸ್ಮೃತಿಗೊಳಗಾದ ಕರಿಯರು ನಾವು
ಅವರೆಲ್ಲ ಸೇವೆ ಮಾಡಲು
ಗುಲಾಮರಾಗಲು
ನಾವಷ್ಟೆ ಅರ್ಹರು
ಹಾಗೆಂದು ನಿಯಮವಿದೆ
ಅವರ ಕಣ್ಣಳತೆ ಮೀರಿದರೆ
ದೇಶ ದ್ರೋಹಿಗಳೆಂಬ ಬಿರುದು ಬಳುವಳಿ
ಗಡಿಪಾರೆಂಬ ವಿಶೇಷ ಪ್ರವಾಸಿ ಪ್ಯಾಕೇಜ್

ಮಾತು ಬಾರದ
ಎಂದೂ ಒಂದಾಗದ ಕಪ್ಪು ಕೈಗಳು
ತಮ್ಮ ಶಿಲುಬೆ ತಾವೇ ಹೊತ್ತು ನಡೆಯಬೇಕು
ಮರುಭೂಮಿಯ ಗೋರಿ ಕಡೆಗೆ

ಇನ್ನಾದರೂ
ಚರಿತ್ರೆಯ ಅವಘಡ ಗ್ರಹಿಸಿ
ವರ್ತಮಾನ ರೂಪಿಸಲಾದರೂ
ಇತಿಹಾಸ ಓದಬೇಕು
ಮನುಷ್ಯ ಮನುಷ್ಯರೊಂದಿಗೆ
ನಡೆಸಿದ ಯುಗ ಯುಗಗಳ ಹೋರಾಟ
ತಿಳಿಯಲಾದರೂ ಓದಲೇಬೇಕು

ಬಾ ಮಗು
ಕೈಗೆ ಮೆತ್ತಿದ ರಕ್ತ ಬೆನ್ನಿಗಿರಲಿ
ಕಣ್ಣೆದುರಿನ ಅಕ್ಷರ ದೀಪ
ಯುಗದ ಕತ್ತಲೆ ಸರಿಸಿ ಉರಿಯುತ್ತಿರಲಿ…

ಮತ್ತಷ್ಟು ಸುದ್ದಿಗಳು

vertical

Latest News

ವಾಹನ ಸವಾರರಿಗೆ ಸಂತಸದ ಸುದ್ದಿ; ಇಳಿಕೆಯಾಗಲಿದೆ ಪೆಟ್ರೋಲ್, ಡೀಸೆಲ್ ಬೆಲೆ

newsics.com ನವದೆಹಲಿ: ಜನಸಾಮಾನ್ಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಲು ಮೋದಿ ಸರ್ಕಾರ ಸಜ್ಜಾಗಿದೆ. ಶೀಘ್ರದಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗಲಿದೆ. OMC ಈಗಾಗಲೇ ಸರ್ಕಾರದ ಜೊತೆ...

ಮದ್ಯ ವ್ಯಸನಿಗಳಿಗೆ ಗುಡ್ ನ್ಯೂಸ್.. ಕೋಕಾ ಕೋಲಾ ಕಂಪನಿಯ ಮದ್ಯ ಮಾರಾಟ

newsics.com ನವದೆಹಲಿ: ಮದ್ಯ ಪ್ರಿಯರಿಗೆ ಸಿಹಿಸುದ್ದಿ. ತಂಪು ಪಾನೀಯ ತಯಾರಿಕಾ ಕಂಪನಿಯೊಂದು ಭಾರತದಲ್ಲಿ ಮದ್ಯದ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕೋಕಾ ಕೋಲಾ, ತಂಪು ಪಾನೀಯಗಳ ಪ್ರಪಂಚದ ದೈತ್ಯ, ಭಾರತದಲ್ಲಿ ಮೊದಲ ಬಾರಿಗೆ ಮದ್ಯದ ವಿಭಾಗಕ್ಕೆ ಪ್ರವೇಶಿಸಿತು. ಕೋಕಾ ಕೋಲಾ...

ಶ್ರೀರಾಮನ ಆರಾಧನೆಗೆ 3000 ಅರ್ಚಕರ ಹಿಂದಿಕ್ಕಿ ಆಯ್ಕೆಯಾದ ವಿದ್ಯಾರ್ಥಿ ಮೋಹಿತ್

newsics.com ಅಯೋಧ್ಯೆ: ಅಯೋಧ್ಯೆಯಲ್ಲಿ ಹಿಂದೂಗಳ ಆರಾಧ್ಯ ದೇವ ಶ್ರೀರಾಮನ ದೇಗುಲ ಉದ್ಘಾಟನೆಗೆ ದಿನಗಣನೆಯಾಗ್ತಿದೆ. ಭವ್ಯ ಮಂದಿರದಲ್ಲಿ ಪೂಜೆಗಾಗಿ ದೇಶದೆಲ್ಲೆಡೆಯಿಂದ ಈ ಹಿಂದೆಯೇ ಪುರೋಹಿತರ ನೇಮಕ ಮಾಡಲಾಗಿದ್ದು,   ಉತ್ತರಪ್ರದೇಶದ ಗಾಜಿಯಾಬಾದ್‌ನ ಮೋಹಿತ್ ಪಾಂಡೆ ಅವರ ಸುದ್ದಿ...
- Advertisement -
error: Content is protected !!