Saturday, December 2, 2023

ತಬ್ಬಲಿ

Follow Us

  • ಕನ್ನಡಿ ಚಿಗುರು ಚೈತ್ರೆ, ಕಾಳನಕಟ್ಟೆ
    response@134.209.153.225

ಹಿಡಿ ಮೇವು ನೀರು ಪಡೆದು
ಅಮೃತವೆ ಸುರಿಸಿದ ಗೌರಿಯದು
ದೊಡ್ಡ ಮಾತೃ ಹೃದಯ
ಸೌಮ್ಯ ಸ್ವಭಾವದ ಗುಣದವಳು

ಆರೇಳು ಕರುಗಳ ಕರುಣಿಸಿ
ನಮ್ಮ ತಬ್ಬಲಿತನ ನೀಗಿಸಿ
ಮುದಿ ಜೀವ ಮನುಷ್ಯನಾಸೆಗೆ
ಮತ್ತೆ ಗರ್ಭ ಧರಿಸಿಹಳು

ತುಂಬು ಗರ್ಭಿಣಿಯು
ಭಾರ ಒಡಲ ಹೊತ್ತು
ನಡೆಯಲಾಗದೆ ಕುಸಿದಿಹಳು
ಯಾರ ಸಹಾಯವಿಲ್ಲದ ತಬ್ಬಲಿ

ತನ್ನೆಲ್ಲ ನೋವ ನಡುವೆ
ಜನ್ಮವಿತ್ತಳು ಮುದ್ದು ಕರುವಿಗೆ
ಕೊನೆಯುಸಿರೆಳೆದಳು ವಾರದೊಳಗೆ

ತನ್ನದೇ ಕರುವಿಗ ತಬ್ಬಲಿಯೆಂದು
ಸಾರುತ್ತಿದ್ದವು ತೆರೆದಿರುವ
ಆ ಮಾತೃ ಕಂಗಳು…

ಮತ್ತಷ್ಟು ಸುದ್ದಿಗಳು

vertical

Latest News

ನೀವು ಭಯಗೊಂಡಾಗ ದೇಹದಲ್ಲಿ ಏನಾಗುತ್ತದೆ ಗೊತ್ತಾ?

ಭಯವು ಸಾಮಾನ್ಯ ಭಾವನೆಯಾಗಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಹೆದರುತ್ತಾರೆ. ಆದರೆ ಕೆಲವರು ಸಣ್ಣ ವಿಷಯಗಳಿಗೂ ತುಂಬಾ ಹೆದರುತ್ತಾರೆ. ಅವರು ಯಾಕೆ ಹೆದರುತ್ತಾರೆ ಎಂದು ಅವರಿಗೆ ತಿಳಿದಿಲ್ಲ. ಕೆಲವರು ಹಾರರ್ ಸಿನಿಮಾಗಳನ್ನು...

ಹೂವು ಬಿಡಿಸಲು ಹೋಗಿದ್ದಾಗ ವಿದ್ಯುತ್ ತಂತಿ ತುಳಿದು ಮಹಿಳೆ ಸಾವು

newsics.com ದಾವಣಗೆರೆ: ಪಂಪ್​ಸೆಟ್​​ಗೆ ಅಳವಡಿಸಿದ್ದ ವಿದ್ಯುತ್ ತಂತಿ ತುಳಿದು ಮಹಿಳೆ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ  ಬಸವರಾಜಪುರದಲ್ಲಿ ನಡೆದಿದೆ. ಅಲಿಬಾಯಿ(62) ಮೃತ ರ್ದುದೈವಿ. ಹೂವು ಬಿಡಿಸಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಬಸವಪಟ್ಟಣ...

ಜೈ ಶ್ರೀರಾಮ್‌ ಹೇಳುವಂತೆ ಗಡ್ಡಕ್ಕೆ ಬೆಂಕಿ ಹಚ್ಚಿ ವೃದ್ಧನ ಮೇಲೆ ಹಲ್ಲೆ

newsics.com ಕೊಪ್ಪಳ :  65 ವರ್ಷದ ಅಂಧ ಮುಸ್ಲಿಂ ವೃದ್ಧನಿಗೆ ಇಬ್ಬರು ಅನಾಮಿಕ ವ್ಯಕ್ತಿಗಳು ಗಂಗಾವತಿ ಟೌನ್‌ನಲ್ಲಿ ಕಿರುಕುಳ ನೀಡಿದ ಘಟನೆ ನಡೆದಿದೆ. ಗಂಗಾವತಿಯಲ್ಲಿ ಒಂದು ಕಪ್‌ ಚಹಾ ಕುಡಿದು ಆಟೋರಿಕ್ಷಾಕ್ಕೆ ಕಾಯುತ್ತಿರುವಾಗ ಬೈಕ್‌ನಲ್ಲಿ ಇಬ್ಬರು...
- Advertisement -
error: Content is protected !!