Thursday, December 7, 2023

ಕವಿತೆಯೆಂದರೆ…

Follow Us


♦ ವಿದ್ಯಾಶ್ರೀ ಎಸ್ ಅಡೂರ್

newsics.com@gmail.com


 ವಿತೆಯೆಂದರೆ ಮನದೊಳಗೊಂದು
ಚುಚ್ಚುವ ನೋವು….
ಕವಿತೆಯೆಂದರೆ ಉಕ್ಕಿಹರಿವ
ಮನಸಿನ ನಲಿವು….

ಕವಿತೆಯೆಂದರೆ ಮೌನಮನಸಿನ
ಸ್ವಚ್ಚಂದ ಆಕಾಶ
ಕವಿತೆಯೆಂದರೆ ಗಿಜಿಗುಡುವ
ಏಕತಾನತೆಯ ಆಕ್ರೋಶ

ಕವಿತೆಯೆಂದರೆ ಸುಮ್ಮನೆ
ನಿಡುಸುಯ್ದ ನಿಟ್ಟುಸಿರು
ಕವಿತೆಯೆಂದರೆ ನೀರು-ಗೊಬ್ಬರ
ಹಾಕಿ ಬೆಳೆಸಿದ ಹಸಿರು

ಕವಿತೆಯೆಂದರೆ ರಂಗುರಂಗಿನ
ಬಣ್ಣ ಬಣ್ಣದ ಕಾಮನಬಿಲ್ಲು
ಕವಿತೆಯೆಂದರೆ ಗಾಢಾಂಧಕಾರದಿ
ಬಿಡುಗಡೆಯ ಸೊಲ್ಲು

ಕವಿತೆಯೆಂದರೆ ಮೌನ
ಮನಸ್ಸಿನ ಟಿಪ್ಪಣಿ
ಕವಿತೆಯೆಂದರೆ ಕೂಗಿ ಕರೆಯುವ
ಹಾರಿ ಸಾರುವ ಪುರವಣಿ

ಕವಿತೆಯೆಂದರೆ ಜಗಕ್ಕೆ ಬೆನ್ನು ಮಾಡಿ
ಉಪ್ಪಿ ಅಪ್ಪಿದ ಮೌನ
ಕವಿತೆಯೆಂದರೆ ಅಂಗೈಯಲ್ಲಿ
ಮೊಗೆಮೊಗೆದು ಅನುಭವಿಸುವ ಜೀವನ

ಕವಿತೆಯೆಂದರೆ ಹೆಪ್ಪುಗಟ್ಟಿದ
ಭಾವಗಳ ಕಾರ್ಮುಗಿಲು
ಕವಿತೆಯೆಂದರೆ ಧುಮ್ಮಿಕ್ಕಿ ಸುರಿಯುವ
ಮನಸಿನ ದಿಗಿಲು

ಕವಿತೆಯೆಂದರೆ ಬಿದ್ದಾಗ
ಆಸರೆ ಕೊಡುವ ನೆಲ
ಕವಿತೆಯೆಂದರೆ ಸದಾ ಹಸಿರು
ತೆನೆಗಳಿಂದ ತೊಯ್ದಾಡುವ ಹೊಲ

ಕವಿತೆಯೆಂದರೆ ಮನದ ತಮ ಕಳೆಯಲು
ನಾನೇ ಹಚ್ಚಿದ ದೀಪ
ಕವಿತೆಯೆಂದರೆ ಬಗೆ ಬಗೆ
ಭಾವದ ಬಗೆಬಗೆ ರೂಪ

ಕವಿತೆಯೆಂದರೆ ನನ್ನ ಸದಾ
ಪೊರೆವ ಅಮ್ಮನ ಮಡಿಲು
ಕವಿತೆಯೆಂದರೆ ಭಾವದ ಕೂಸು
ಮಲಗಿರುವ ತೂಗುವ ತೊಟ್ಟಿಲು

ಮತ್ತಷ್ಟು ಸುದ್ದಿಗಳು

vertical

Latest News

ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ಪೊಲೀಸ್ ವಶಕ್ಕೆ

Newsics.com ಕಲಬುರಗಿ : ಅಪಘಾತವನ್ನು ಕೊಲೆ ಯತ್ನ ಎಂದು ಕಥೆ ಕಟ್ಟಿದ್ದ ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​ ರನ್ನ ನಗರ ಠಾಣೆಯ ಪೊಲೀಸರು ಮತ್ತೆ ವಶಕ್ಕೆ...

ನಂದಿನಿ ಹಾಲಿನ ದರ ಮತ್ತೆ ಏರಿಕೆ..!!

Newsics.com ಬೆಂಗಳೂರು :  ರಾಜ್ಯದ ಜನತೆಗೆ ಮತ್ತೊಂದು ದರ ಏರಿಕೆಯ ಬಿಸಿ ಕಾದಿದೆ. ಹೌದು, ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (KMF) ಚಿಂತನೆ ನಡೆಸಿದೆ. ಈ ಕುರಿತು ಜನವರಿಯಲ್ಲಿ...

ಚಿನ್ನ, ಜಮೀನು, ಬಿಎಂಡಬ್ಲ್ಯೂ ಕಾರಿಗೆ ಬೇಡಿಕೆ : ಕೇರಳದ ವೈದ್ಯೆ ಆತ್ಮಹತ್ಯೆ

Newsics.com ಕೇರಳ : ಕೇರಳದ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಸ್ನಾತಕೋತ್ತರ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಆತ್ಮಹತ್ಯೆಗೆ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಮೃತ ವೈದ್ಯಳನ್ನು...
- Advertisement -
error: Content is protected !!