Saturday, June 10, 2023

ಮನಸ್ಸಿನ ಉಲ್ಲಾಸಕ್ಕಾಗಿ ಮಾಡಿ ‘ಮಾನಸ ಪೂಜೆ’

Follow Us

newsics.com

ಇಂದು ಭಕ್ತಿಗಿಂತ ಆಡಂಬರವೇ ಹೆಚ್ಚಿದೆ. ದೇವರ ಪೂಜೆಯಲ್ಲೂ ಶ್ರದ್ಧಾಭಕ್ತಿ‌‌ ಕಡಿಮೆಯಾಗಿ ತೋರಿಕೆಯ ಪ್ರದರ್ಶನ ಕಾಣುತ್ತಿದೆ. ಈ ಸನ್ನಿವೇಶದಲ್ಲಿ ಹಾಗೂ ಎಲ್ಲ ಸಂದರ್ಭಗಳಲ್ಲೂ ‘ಮಾನಸ ಪೂಜೆ’ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ.

ಏನಿದು ಮಾನಸ ಪೂಜೆ?:

ಮನಸ್ಸಿನಲ್ಲಿ ಇಷ್ಟದೇವರ ಮೂರ್ತಿಯನ್ನು ಸೃಷ್ಟಿಸಿ ಕೊಂಡು, ಮನದಲ್ಲೇ ಮಾಡುವ ಪೂಜೆಯೇ ಮಾನಸ ಪೂಜೆ.

ಇದಕ್ಕೆ ಯಾವುದೇ ತಯಾರಿ ಬೇಡ, ಯಾವುದೇ ನಿಖರವಾದ ಸ್ಥಳ ಬೇಡ, ನಮ್ಮ ಮುಂದೆ ದೇವರ ಪ್ರತಿಷ್ಠಾಪನೆಯ ಅಗತ್ಯವೂ ಇಲ್ಲ.

ಯಾವುದೇ ವಸ್ತುವಿನ/ ಆಹಾರ ನೈವೇದ್ಯ ಬೇಡ, ಹೂವಿನ ಅಲಂಕಾರ ಬೇಡ. ಇಲ್ಲಿ ಬೇಕಿರುವುದು ಒಬ್ಬ ವ್ಯಕ್ತಿ ಹಾಗೂ ಆತನ ಮನಸ್ಸು. ಅದುವೇ ಮಾನಸ ಪೂಜೆ.

ಎಲ್ಲೆಲ್ಲಿಯೂ ದೇವರಿದ್ದಾನೆ. ಆತನಿಗೆ ಬೇಕಿರುವುದು ಕೇವಲ ನಿಷ್ಕಲ್ಮಶ ಭಕ್ತಿ ಎಂಬುದಕ್ಕೆ ಈ ಮಾನಸ ಪೂಜೆಯೇ ಸಾಕ್ಷಿ. ಜಡ ಮನಸ್ಸನ್ನು ಬಡಿದೆಬ್ಬಿಸುವ, ಮನಸ್ಸಿಗೆ ನೆಮ್ಮದಿ ಕೊಡುವ, ಸ್ಥಿರತೆಯನ್ನು ಮೂಡಿಸುವಲ್ಲಿ ಈ ಮಾನಸ ಪೂಜೆಯು ಸಹಕಾರಿಯಾಗುತ್ತದೆ.

ಹೆಣ್ಣು ಮಕ್ಕಳು, ಮನದಲ್ಲಿ ಲಕ್ಷ್ಮಿಯನ್ನು ಸ್ಮರಿಸಿ, ಮನದಲ್ಲೇ ಆಕೆಯನ್ನು ಅಲಂಕರಿಸಿ, ಆ ದೇವಿಯ ಮೂರ್ತಿಯನ್ನು ಮನದಲ್ಲೇ ಪ್ರತಿಷ್ಠಾಪಿಸಿ ಪೂಜೆ ಮಾಡಿದರೆ ಆ ದೇವಿ ಒಲಿಯದೆ ಇರಲಾರಳು.

ಬನ್ನಿ ಹಾಗಾದರೆ ನಿತ್ಯ ಮಾಡೋಣ “ಮಾನಸ ಪೂಜೆ”.

ನಿತ್ಯ‌ವೂ ನೀವು ಹೀಗೆ‌ ಮಾಡಿ, ಆರೋಗ್ಯವಂತರಾಗಿರಿ

ಮತ್ತಷ್ಟು ಸುದ್ದಿಗಳು

vertical

Latest News

ಗಡಿಯಲ್ಲಿ ಪಾಕ್ ನಿಗೂಢ ಬಲೂನ್ ಪತ್ತೆ: ಸೇನೆಯಿಂದ ಶೋಧ ಕಾರ್ಯ

Newsics.com ಶ್ರೀನಗರ: ಪಾಕಿಸ್ತಾನದ ಅಂತರಾಷ್ಟ್ರೀಯ ಏರ್‌ಲೈನ್ಸ್ ಲಾಂಛನ ಇರುವ ವಿಮಾನದ ಆಕಾರದ ಅನುಮಾನಾಸ್ಪದ ಬಲೂನ್ ಜಮ್ಮು ಮತ್ತು ಕಾಶ್ಮೀರದ...

ಗ್ಯಾರಂಟಿ ಜಾರಿ ಬೆನ್ನಲ್ಲೇ ಮದ್ಯಪ್ರಿಯರಿಗೆ ಶಾಕ್

newsics.com ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿ ಜಾರಿಗೊಳಿಸಿದ ಬೆನ್ನಲ್ಲೇ ಮದ್ಯದ ಬೆಲೆಯನ್ನು ದುಪ್ಪಟ್ಟು ಮಾಡಿ ಮದ್ಯಪ್ರಿಯರಿಗೆ ಶಾಕ್ ನೀಡಿದೆ. ಕರೆಂಟ್ ಬಿಲ್ ದರ ಏರಿಕೆ ಬಳಿಕ...

ಚಂಡಮಾರುತ: ಕರ್ನಾಟಕ ಸೇರಿ 3 ರಾಜ್ಯಗಳಿಗೆ ಅಲರ್ಟ್

Newsics.com ನವದೆಹಲಿ: ಅರಬ್ಬೀ ಸಮುದ್ರದ ಕರಾವಳಿ ಭಾಗದಲ್ಲಿ ಭಾರೀ ಆತಂಕ ಮೂಡಿಸಿರುವ ಬಿಪರ್ಜೋಯ್ ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿದ್ದು ಉತ್ತರ ಈಶಾನ್ಯದೆಡೆಗೆ ಚಲಿಸಲಿದೆ...
- Advertisement -
error: Content is protected !!