Monday, December 11, 2023

ಕಾಲು ಕಳೆದುಕೊಂಡ ವ್ಯಕ್ತಿಗೆ 63 ಲಕ್ಷ ರೂ. ಪರಿಹಾರ

Follow Us

ಚೆನ್ನೈ; ನಗರ ಸಂಸ್ಥೆ ದುರಸ್ತಿಗೊಳಿಸುತ್ತಿದ್ದ ದೀಪದ ಕಂಬ ಬಿದ್ದ ಪರಿಣಾಮ ಕಾಲು ಕಳೆದುಕೊಂಡು ಅಂಗವಿಕಲನಾದ ವ್ಯಕ್ತಿಗೆ  ಮದ್ರಾಸ್ ಹೈಕೋರ್ಟ್ 63 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ.

ಚೆನ್ನೈ ನಗರ ಪಾಲಿಕೆ ಮತ್ತು ತಮಿಳುನಾಡು ವಿದ್ಯುತ್ ಪ್ರಸರಣದ ನಿಗಮದ ನಿರ್ಲಕ್ಷ್ಯದಿಂದ ಆನಂದ್ ಕುಮಾರ್ ಎಂಬ ವ್ಯಕ್ತಿ ತನ್ನ ಸಂಪೂರ್ಣ ಜೀವನವನ್ನು ವ್ಹೀಲ್ ಚೇರ್ ನಲ್ಲಿ ಕಳೆಯುವಂತಾಗಿದೆ ಎಂಬ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಶೀಘ್ರದಲ್ಲಿ ಆತನಿಗೆ ಪರಿಹಾರ ನೀಡುವಂತೆ ನಗರ ಪಾಲಿಕೆಗೆ ಸೂಚಿಸಿದೆ.

2009ರ  ಏಪ್ರಿಲ್ ನಲ್ಲಿ ಚೆನ್ನೈನ ಮರೀನಾ ಬೀಚ್ ನಲ್ಲಿ ವಿದ್ಯುತ್ ಕಂಬ ದುರಸ್ತಿಗೊಳಿಸುತ್ತಿದ್ದ ವೇಳೆ ಕರೌಸಲ್ ನಿರ್ವಾಹಕ ಎನ್. ಆನಂದ್ ಕುಮಾರ್ ಕಾಲ ಮೇಲೆ ವಿದ್ಯುತ್ ಕಂಬ ಬಿದ್ದು ಆತ ಶಾಶ್ವತ ಅಂಗವಿಕಲನಾಗಿದ್ದ. ಈತನಿಗೆ ಪರಿಹಾರ ನೀಡುವಂತೆ ಕೆಳ ನ್ಯಾಯಾಲಯ ನೀಡಿದ್ದ ತೀರ್ಪು ಪ್ರಶ್ನಿಸಿ ಚೆನ್ನೈ ನಗರ ಪಾಲಿಕೆ ಮೇಲ್ಮನವಿ ಸಲ್ಲಿಸಿತ್ತು.

ಮತ್ತಷ್ಟು ಸುದ್ದಿಗಳು

vertical

Latest News

ಶ್ರೀರಾಮನ ಆರಾಧನೆಗೆ 3000 ಅರ್ಚಕರ ಹಿಂದಿಕ್ಕಿ ಆಯ್ಕೆಯಾದ ವಿದ್ಯಾರ್ಥಿ ಮೋಹಿತ್

newsics.com ಅಯೋಧ್ಯೆ: ಅಯೋಧ್ಯೆಯಲ್ಲಿ ಹಿಂದೂಗಳ ಆರಾಧ್ಯ ದೇವ ಶ್ರೀರಾಮನ ದೇಗುಲ ಉದ್ಘಾಟನೆಗೆ ದಿನಗಣನೆಯಾಗ್ತಿದೆ. ಭವ್ಯ ಮಂದಿರದಲ್ಲಿ ಪೂಜೆಗಾಗಿ ದೇಶದೆಲ್ಲೆಡೆಯಿಂದ ಈ ಹಿಂದೆಯೇ ಪುರೋಹಿತರ ನೇಮಕ ಮಾಡಲಾಗಿದ್ದು,   ಉತ್ತರಪ್ರದೇಶದ...

3 ದಿನ ವರ್ಚುಯಲ್ ಕಾಲ್: ಉದ್ಯಮಿಗೆ 1.98 ಕೋಟಿ ರೂ. ಪಂಗನಾಮ ಹಾಕಿದ ವಂಚಕರು!

newsics.com ಬೆಂಗಳೂರು: 3 ದಿನಗಳ ಕಾಲ ವರ್ಚುಯಲ್ ಕರೆ ಮಾಡಿದ ಸೈಬರ್ ವಂಚಕರು, 46 ವರ್ಷದ ಉದ್ಯಮಿಯೊಬ್ಬರಿಗೆ 1.98 ಕೋಟಿ ರೂಪಾಯಿ ವಂಚಿಸಿದ್ದಾರೆ. ಮುಂಬೈ ಕ್ರೈಂ ಬ್ರಾಂಚಿನ ಅಧಿಕಾರಿಗಳಂತೆ ನಟಿಸಿ ಉದ್ಯಮಿ ಮನೀಶ್ ಅವರನ್ನು ಬಲೆಗೆ...

84 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ತೋಟ ಕಾಯುವ ಹಮಾಲಿಗೆ ಧಾರೆ ಎರೆಯಲು ನಿರ್ಧರಿಸಿದ ಶ್ರೀಮಂತ!

newsics.com ಫ್ರಾನ್ಸ್: ಫ್ರಾನ್ಸ್ ದೇಶದ ಶ್ರೀಮಂತ 80 ವರ್ಷದ ನಿಕೋಲಾಸ್ ಪ್ಯೂಕ್ ಅವರು ತಮ್ಮ ಎಲ್ಲಾ ಸಂಪತ್ತನ್ನು ತೋಟದ ಹಮಾಲಿಗೆ ಬರೆದಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಪ್ಯೂಕ್ ಅವರ ಆಸ್ತಿಯ ವಾರಸುದಾರ ಆಗುತ್ತಿರುವ ಹಮಾಲಿಯ ವಯಸ್ಸು...
- Advertisement -
error: Content is protected !!