Wednesday, May 31, 2023

ಪವನ್ ಜಲ್ಲಾದ್ ಗೆ ಲಕ್ಷ ರೂ. ನೀಡುವೆ- ನಟ ಜಗ್ಗೇಶ್

Follow Us

ಬೆಂಗಳೂರು: ಜ.22ರಂದು ನಿರ್ಭಯಾ ಅತ್ಯಾಚಾರ ಅಪರಾಧಿಗಳನ್ನು ಗಲ್ಲಿಗೇರಿಸಲಿರುವ ಉತ್ತರ ಪ್ರದೇಶ ಮೇರಠ್ ನ ‌ಪವನ್ ಜಲ್ಲಾದ್ ಗೆ ಹಿರಿಯ ನಟ ಜಗ್ಗೇಶ್ ಒಂದು‌ ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದೇಶ ಕಂಟಕರನ್ನು ನಿರ್ನಾಮ ಮಾಡುವವರನ್ನು ಪ್ರೋತ್ಸಾಹಿಸುವುದೂ ಹರಿ ಸೇವೆಯೇ ಎಂದು ಹೇಳಿಕೊಂಡಿದ್ದಾರೆ. ಪವನ್ ಜಲ್ಲಾದ್ ತೀರಾ ಬಡತನದಲ್ಲಿದ್ದು, ನೇಣಿಗೇರಿಸುವ ಕಾರ್ಯಕ್ಕೆ ಉತ್ತರ ಪ್ರದೇಶ ಸರ್ಕಾರ ನೀಡುವ ಒಂದು ಲಕ್ಷ ರೂ.ಗಳನ್ನು ಮಗಳ ಮದುವೆಗೆ ಬಳಸುವುದಾಗಿ ಹೇಳಿದ್ದ. ಈ ಬಗ್ಗೆ‌ ನ್ಯೂಸಿಕ್ಸ್ ಡಾಟ್ ಕಾಮ್ ವರದಿ ಪ್ರಕಟಿಸಿತ್ತು.

ನೇಣಿನ ಹಣವನ್ನು ಮಗಳ‌ ಮದುವೆಗೆ ಬಳಸುವೆ…

* ನಿರ್ಭಯಾ ಕೇಸ್ ಅಪರಾಧಿಗಳನ್ನು ನೇಣಿಗೇರಿಸುವ ಪವನ್ ಜಲ್ಲಾದ್ ಹೇಳಿಕೆ

ಮೇರಠ್: ‘ನನ್ನ ಮಗಳ ‌ಮದುವೆಗೆ ಹಣ ಹೊಂದಿಸುವುದಕ್ಕಾಗಿ ದೇವರೇ ಒದಗಿಸಿದ ಅವಕಾಶ.’
– ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸುವ ಹೊಣೆ ಹೊತ್ತಿರುವ ಉತ್ತರ ಪ್ರದೇಶ ಮೇರಠ್ ನ ಪವನ್ ಜಲ್ಲಾದ್ (57) ಹೇಳಿದ ಮಾತಿದು.
ಮಗಳ‌ ಮದುವೆಗೆ ಹಣ ಹೊಂದಿಸುವುದು ಹೇಗೆಂದು ತಿಳಿಯದೆ ಕಂಗಾಲಾಗಿದ್ದೆ‌. ಮನೆಯೂ ಕುಸಿಯುವ ಹಂತದಲ್ಲಿದೆ. ಸಾಲದ್ದಕ್ಕೆ ಆಗಾಗ ಸಾಲಗಾರರೂ ಮನೆ ಬಳಿ ಬರುತ್ತಿದ್ದಾರೆ. ಈ ವೇಳೆಯಲ್ಲೇ ಉತ್ತರ ಪ್ರದೇಶ ಸರ್ಕಾರ ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ನೇಣಿಗೇರಿಸುವ ಕೆಲಸವನ್ನು ನನಗೆ ವಹಿಸಿದೆ. ಇದಕ್ಕಾಗಿ ಸರ್ಕಾರ ನನಗೆ ಒಂದು‌ ಲಕ್ಷ ರೂಪಾಯಿ ನೀಡುತ್ತಿದ್ದು, ಈ ಹಣದಲ್ಲಿ ಮಗಳ ‌ಮದುವೆ ಮಾಡುವುದಾಗಿ ಪವನ್ ಹೇಳಿದ್ದಾನೆ.
ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಜ.22ರಂದು ಗಲ್ಲಿಗೇರಿಸುವಂತೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಪವನ್ ಜಲ್ಲಾದ್ ಗೆ ಅಪರಾಧಿಗಳನ್ನು ನೇಣಿಗೇರಿಸುವ ಜವಾಬ್ದಾರಿ ನೀಡಿದೆ.
ನಾನು ಆ ದಿನಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಆದರೆ ಅದಕ್ಕೂ ಮೊದಲೇ ಅಪರಾಧಿಗಳನ್ನು ಗಲ್ಲಿಗೇರಿಸಬಹುದು. ಮಾಹಿತಿ ಕೊಡವುದಾಗಿ ಪೊಲೀಸರು ತಿಳಿಸಿದ್ದಾರೆಂದು ಪವನ್ ಹೇಳಿದ್ದಾರೆ.
ಪವನ್ ಜಲ್ಲಾದ್, ಮೇರಠ್ನ ಭೂಮಿಯಪುಲ್ಲಾ ಪ್ರದೇಶದ ಲಕ್ಷ್ಮಣ ಕುಮಾರ್ ಕುಟುಂಬದ ನಾಲ್ಕನೇ ತಲೆಮಾರಿನ ವ್ಯಕ್ತಿ. ಈ ಕುಟುಂಬದವರು ಹ್ಯಾಂಗ್ಮನ್ ಕೆಲಸ ಮಾಡುತ್ತ ಬಂದಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಜೂನ್ 4 ರವರೆಗೆ ರಾಜಧಾನಿಯಲ್ಲಿ ಭಾರಿ ಮಳೆ: 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

newsics.com ಬೆಂಗಳೂರು: ಬೆಂಗಳೂರಿನಲ್ಲಿ ಜೂನ್ 4ರವರೆಗೂ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ,...

ಅಶ್ವಥ್‌ ನಾರಾಯಣ್‌ಗೆ ಹೈಕೋರ್ಟ್‌ನಿಂದ 4 ವಾರಗಳ ತಾತ್ಕಾಲಿಕ ರಿಲೀಫ್

newsics.com ಬೆಂಗಳೂರು: ಟಿಪ್ಪು ರೀತಿ ಸಿದ್ದರಾಮಯ್ಯರನ್ನು ಮುಗಿಸಬೇಕು ಎಂದಿದ್ದ ಮಾಜಿ ಮಂತ್ರಿ ಅಶ್ವಥ್‍ ನಾರಾಯಣ್‍ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಮೈಸೂರಿನ ದೇವರಾಜ ಠಾಣೆಯಲ್ಲಿ ದಾಖಲಾಗಿದ್ದ ಎಫ್‍ಐಆರ್ ರದ್ದತಿಗೆ ನಿರ್ದೇಶನ ನೀಡುವಂತೆ ಕೋರಿ ಅಶ್ವಥ್‍ನಾರಾಯಣ್...

ಸಾಮಾಜಿಕ ಜಾಲತಾಣಗಳಲ್ಲೂ ನ್ಯಾಯಾಧೀಶರನ್ನು ದೂಷಿಸುವಂತಿಲ್ಲ: ಸುಪ್ರೀಂ ಕೋರ್ಟ್‌ ಆದೇಶ

newsics.com ನವದೆಹಲಿ: ಸೋಷಿಯಲ್ ಮೀಡಿಯಾದಲ್ಲೂ ನ್ಯಾಯಾಧೀಶರನ್ನು ದೂಷಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ನೀಡಿದೆ. ಜಿಲ್ಲಾ ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದಕ್ಕಾಗಿ ಮಧ್ಯಪ್ರದೇಶ ಹೈಕೋರ್ಟ್ ವ್ಯಕ್ತಿಯೊಬ್ಬರಿಗೆ 10 ದಿನಗಳ ಜೈಲು ಶಿಕ್ಷೆ ವಿಧಿಸಿರುವುದನ್ನು...
- Advertisement -
error: Content is protected !!