ನವದೆಹಲಿ: ಮೂವರು ಶಂಕಿತ ಭಯೋತ್ಪಾದಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ವಿದೇಶಿ ಏಜನ್ಸಿಗಳ ನಿರ್ದೇಶನದಂತೆ ಹಿಂದೂ ಮುನ್ನಾನಿ ನಾಯಕ ಸುರೇಶಕುಮಾರ್ ಹತ್ಯೆಯಲ್ಲಿ ಭಾಗಿಯಾಗಿದ್ದ ಐಎಸ್ ಐ ಸಂಘಟನೆಗೆ ಸೇರಿದ ಕ್ವಾಜಾ ಮೊಹಿನುದ್ದೀನ್, ಸೈಯದ್ ನವಾಜ್, ಮೊಹಿಸೀನ್ ಎಂಬ ಮೂವರು ಶಂಕಿತ ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.