ನವದೆಹಲಿ: ಪ್ರಸಿದ್ದ ಇಂಗ್ಲೀಷ್ ಬರಹಗಾರ ಹಾಗೂ ರಾಜಕಾರಣಿ ಶಶಿ ಥರೂರ್, ಸಾಹಿತಿ ಹಾಗೂ ನಾಟಕಕಾರ ನಂದಕಿಶೋರ್ ಆಚಾರ್ಯ ಸೇರಿದಂತೆ 23 ಸಾಹಿತಿಗಳು ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬುಧವಾರ ನಡೆದ ಸಾಹಿತ್ಯ ಅಕಾಡೆಮಿ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಪ್ರಶಸ್ತಿ ಪಟ್ಟಿಗೆ ಅನುಮೋದನೆ ನೀಡಿದ್ದು, ಈ ಬಾರಿ ನೇಪಾಳಿ ಭಾಷೆಗೂ ಪ್ರಶಸ್ತಿಯನ್ನು ಪ್ರಕಟಿಸಲಾಗುತ್ತಿದೆ. ಜನವರಿ 25ರಂದು ಸಾಹಿತಿಗಳಿಗೆ 1 ಲಕ್ಷ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರವನ್ನೊಳಗೊಂಡ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ರಾಜಸ್ಥಾನದ ಬಿಕನೇರ್ ನ ನಂದ ಕಿಶೋರ್ ಆಚಾರ್ಯ ಅವರ ಕವನ ಸಂಕಲನ “ಚಿಲ್ತೆ ಹೂ ಅಪ್ನೆ ಕೊ” ಹಾಗೂ ಶಶಿ ಥರೂರ್ ಅವರ ” ಆನ್ ಎರಾ ಆಫ್ ಡಾರ್ಕ್ ನೆಸ್ ” ಕೃತಿಗೆ ಪ್ರಶಸ್ತಿ ಲಭಿಸಿದೆ.