ವಾರಾಣಸಿ: ಈಗ ಈರುಳ್ಳಿಗೂ ಸಾಲ ಸಿಗುತ್ತದೆ! ಈಗ ಇದೊಂದು ಬಗೆಯ ಆಂದೋಲನವಾಗಿಯೂ ರೂಪುಗೊಳ್ಳುತ್ತಿದೆ.
ಹೌದು, ವಾರಾಣಸಿಯ ಕೆಲವು ಅಂಗಡಿಗಳಲ್ಲಿ ಈರುಳ್ಳಿಯನ್ನು ಸಾಲ ಕೊಡಲಾಗುತ್ತದೆ. ಆದರೆ, ಅದಕ್ಕೆ ಪ್ರತಿಯಾಗಿ ಆಧಾರ್ ಕಾರ್ಡ್ ಅಥವಾ ಬೆಳ್ಳಿ ಆಭರಣಗಳನ್ನು ಅಡ ಇಡಬೇಕು!
ಇದೆಲ್ಲ ಈರುಳ್ಳಿ ಬೆಲೆ ಗಗನಕ್ಕೇರಿರುವುದರ ಪರಿಣಾಮ. ಗ್ರಾಹಕರು ಈರುಳ್ಳಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಅನೇಕ ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಈರುಳ್ಳಿ ಬಳಕೆಯನ್ನು ಕಡಿಮೆ ಮಾಡಲಾಗಿದೆ. ಈರುಳ್ಳಿಯ ಬೆಲೆ ಏರಿಕೆಯಾಗಿರುವುದು ಒಂದೆಡೆಯಾದರೆ ಇನ್ನು ಕೆಲವೆಡೆ ಈರುಳ್ಳಿ ಖರೀದಿಸಲು ಸಿದ್ಧರಿದ್ದರೂ ಉತ್ತಮ ಈರುಳ್ಳಿ ಸಿಗದ ಪರಿಸ್ಥಿತಿ ಇದೆ.
ಈ ಹಿನ್ನೆಲೆಯಲ್ಲೇ ವಾರಾಣಸಿಯ ಕೆಲ ಅಂಗಡಿಗಳಲ್ಲಿ ಸಾಲ ರೂಪದಲ್ಲಿ ಈರುಳ್ಳಿ ನೀಡುವ ಮಾರ್ಗ ಕಂಡುಕೊಳ್ಳಲಾಗಿದೆ. ಈರುಳ್ಳಿಯನ್ನು ಸಾಲ ನೀಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲು ವಾರಾಣಸಿ ಜನರು ಮುಂದಾಗಿದ್ದಾರೆ. ಇದಕ್ಕೆ ಸಮಾಜವಾದಿ ಪಕ್ಷದ ಯುವಘಟಕದ ಕಾರ್ಯಕರ್ತರು ಜತೆಯಾಗಿದ್ದಾರೆ. ಸಮಾಜವಾದಿ ಪಕ್ಷದ ಕಾರ್ಯಕರ್ತರಿಂದ ನಡೆಸಲ್ಪಡುವ ಅಂಗಡಿಗಳಲ್ಲಿ ಬೆಳ್ಳಿ ವಸ್ತುಗಳು ಅಥವಾ ಆಧಾರ್ ಕಾರ್ಡ್ ಅನ್ನು ಒತ್ತೆಯಾಗಿಟ್ಟುಕೊಂಡು ಈರುಳ್ಳಿಯ ಸಾಲ ನೀಡಲಾಗುತ್ತಿದೆ.
ಸಿಗುತ್ತಿದೆ ಈರುಳ್ಳಿ ಸಾಲ!
Follow Us