Thursday, June 1, 2023

ಹನಿಟ್ರ್ಯಾಪ್ ಮೂಲಕ ಆರೋಪಿ ಸೆರೆ!

Follow Us

ಭೋಪಾಲ್: ಹನಿಟ್ರ್ಯಾಪ್ ಮೂಲಕ ಮಧ್ಯಪ್ರದೇಶ ಪೊಲೀಸರು ಮೋಸ್ಟ್ ವಾಂಟೆಡ್ ಕ್ರಿಮಿನಲ್ನನ್ನು ಶನಿವಾರ ಬಂಧಿಸಿದ್ದಾರೆ. ಕೊಲೆ ಸೇರಿ 16 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಾಲಕೃಷ್ಣ ಚೌಧರಿ ಬಂಧಿತ  ಆರೋಪಿ. ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಚೌಧರಿ ಕಳೆದ ಆಗಸ್ಟ್ನಲ್ಲಿ ಮಧ್ಯಪ್ರದೇಶದ ನೌಗಾನ್ ಪ್ರಾಂತ್ಯದಲ್ಲಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಚೌಧರಿ ಮದುವೆ ವಿಚಾರ ತಿಳಿದ ಪೊಲೀಸರು ಮಹಿಳೆ ಹೆಸರಿನಲ್ಲಿ ಸಿಮ್ ಖರೀದಿಸಿ ಮಹಿಳಾ ಎಸ್ ಐ ಒಬ್ಬರಿಂದ ಕಾಲ್ ಮಾಡಿಸಿ ಆರೋಪಿ ಚೌಧರಿ ಜತೆ ಮಾತನಾಡಿಸಿದ್ದಾರೆ. ಬುಂದೇಲ್ ಖಂಡದ ಮಹಿಳೆ ಎಂದು ಪರಿಚಯಿಸಿಕೊಂಡ ಎಸ್ ಐ ತಕ್ಷಣ ಕಾಲ್ ಕಟ್ ಮಾಡಿದ್ದಾರೆ. ಆದರೆ ಚೌಧರಿ ಅದೇ ನಂಬರ್ ಗೆ ಕಾಲ್ ಮಾಡಿ ಹುಡುಗಿಯ ಸ್ನೇಹ ಸಂಪಾದಿಸಲು ಯತ್ನಿಸಿದ್ದು, ಎಸ್ ಐ ರೂಪದ ಹುಡುಗಿ ಮಾಡುವೆ ಪ್ರಸ್ತಾಪ ಇಟ್ಟಿದ್ದಾಳೆ. ಇದಕ್ಕೆ ಒಪ್ಪಿದ ಚೌಧರಿ ಬಿಜೌರಿಹಳ್ಳಿಯ ದೇವಸ್ಥಾನದಲ್ಲಿ ಭೇಟಿಯಾಗುವುದಾಗಿ ತಿಳಿಸಿದ್ದಾನೆ. ಮಫ್ತಿ ಪೊಲೀಸರೊಂದಿಗೆ ತೆರಳಿದ ಮಹಿಳಾ ಸಬ್ಇನ್ಸ್ಪೆಕ್ಟರ್, ಆರೋಪಿ ಚೌಧರಿ ದೇವಸ್ಥಾನದಲ್ಲಿ  ಬಂಧಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಲೈಂಗಿಕ ಚಟುವಟಿಕೆ ನಿರಾಕರಿಸಿದ್ದಕ್ಕೆ ಹೆಂಡತಿಯನ್ನೇ ಕೊಂದ ಪತಿ

newsics.com ಹೈದರಾಬಾದ್: ತನ್ನ ಪತ್ನಿ ಲೈಂಗಿಕತೆಗೆ ನಿರಾಕರಿಸಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಆಕೆಯನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಶವಪರೀಕ್ಷೆ ವರದಿಯಲ್ಲಿ ಸಾವಿನ ಕಾರಣ ಬಹಿರಂಗವಾಗುವ ಮೂಲಕ...

ಕಣ್ಣೂರು ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಎಕ್ಸ್‌ಪ್ರೆಸ್ ರೈಲಿನ ಬೋಗಿ ಬೆಂಕಿಗಾಹುತಿ

newsics.com ಕಣ್ಣೂರು: ಕೇರಳದ ಕಣ್ಣೂರು ರೈಲು ನಿಲ್ದಾಣದಲ್ಲಿ ನಿಂತಿದ್ದ ಎಕ್ಸ್‌ಪ್ರೆಸ್ ರೈಲಿನ ಬೋಗಿಯಲ್ಲಿ ಇಂದು (ಜೂ. 1) ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ. ಪ್ಲಾಟ್‌ಫಾರ್ಮ್ ಮತ್ತು ಭಾರತ್ ಪೆಟ್ರೋಲಿಯಂ ಇಂಧನ ಡಿಪೋದಿಂದ ಹಲವಾರು ಮೀಟರ್ ದೂರದಲ್ಲಿ ರೈಲು...

ಅವಳಿ ಮಕ್ಕಳನ್ನು ಕಾರಿನಲ್ಲಿ ಉಸಿರುಗಟ್ಟಿಸಿ ಕೊಲೆಗೈದ ಪಾಪಿ ತಂದೆ

newsics.com ದಾವಣಗೆರೆ: ಪಾಪಿ ತಂದೆಯೊಬ್ಬ ತನ್ನ ಅವಳಿಗೆ ಘಟನೆ ಉಸಿರುಗಟ್ಟಿಸಿ ಕೊಲೆಗೈದ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ. ಅದ್ವೈತ್ (04) ಹಾಗೂ ಅನ್ವೀತ್ (04) ಮೃತಪಟ್ಟ ಮಕ್ಕಳು. ಅಮರ ಕಿತ್ತೂರು (35) ಮಕ್ಕಳನ್ನು ಕೊಂದ ಪಾಪಿ ತಂದೆ....
- Advertisement -
error: Content is protected !!