Thursday, December 7, 2023

717 ವರ್ಷಗಳ ಬಳಿಕ ಪೆರುಂಕಳಿಯಾಟ ಆರಂಭ: ಕಲ್ಯೋಟ್ ನಲ್ಲಿ ಜನ ಜಾತ್ರೆ

Follow Us

ಕಾಸರಗೋಡು: ಕಾಸರಗೋಡಿನಿಂದ ದಕ್ಷಿಣಕ್ಕೆ ಸುಮಾರು 15 ಕಿಲೋ ಮೀಟರ್ ದೂರದಲ್ಲಿರುವ ಕಲ್ಯೋಟ್ನಲ್ಲಿ  ಹಬ್ಬದ ವಾತಾವರಣ ಮನೆ ಮಾಡಿದೆ.   717 ವರ್ಷಗಳ ಬಳಿಕ ಕಲ್ಯೋಟ್ ಶ್ರೀ ಭಗವತಿ ಕ್ಷೇತ್ರ ಕಳಗಂನಲ್ಲಿ ಪೆರುಂಕಳಿಯಾಟ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆತಿದೆ.  ಡಿಸೆಂಬರ್ 23ರಿಂದ 29ರ ತನಕ ಪೆರುಂಕಳಿಯಾಟ ನೆರವೇರಲಿದೆ..

ಪೆರುಂಕಳಿಯಾಟ ಹಲವು ಸಂಕೀರ್ಣ ಹಾಗೂ ವಿಶಿಷ್ಟವಾದ ವೈದಿಕ ವಿಧಿ ವಿಧಾನಗಳ ಆಗರವೂ ಆಗಿದೆ. ಬ್ರಹ್ಮ ಶ್ರೀ ಕೇಶವ ತಂತ್ರಿ ಮತ್ತು ಕೃಷ್ಣದಾಸ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನೆರವೇರಿತು.

ದೈವಸ್ಥಾನದ ಪ್ರತಿರೂಪ- ಪೆರುಂಕಳಿಯಾಟ ಮಹೋತ್ಸವಕ್ಕೆ ಈಗಿರುವ ದೈವಸ್ಥಾನದ ಪ್ರತಿರೂಪವನ್ನು ಬಿದಿರಿನಿಂದ ನಿರ್ಮಿಸಲಾಗಿದೆ. ಇದು ಈ ಕಳಿಯಾಟದ  ಪ್ರಮುಖ ಆಕರ್ಷಣೆಯಾಗಿದೆ. ಪೊಟ್ಟನ್ ದೈವ, ಗುರು ದೈವ, ರಕ್ತ ಚಾಮುಂಡಿ, ಭೈರವನ್,  ರಕ್ತೇಶ್ವರಿ ಹೀಗೆ ಸುಮಾರು 52 ದೈವಗಳ ದರ್ಶನ ಭಾಗ್ಯ ಭಕ್ತರಿಗೆ ದೊರೆಯಲಿದೆ.

ಅಮ್ಮನಿಗೆ ಮಾಂಗಲ್ಯ ಸೂತ್ರ ಧಾರಣೆ ಈ  ಪೆರುಂಕಳಿಯಾಟದ ಪ್ರಮುಖ ಕಾರ್ಯಕ್ರಮವಾಗಿದೆ.  ಡಿಸೆಂಬರ್ 29ರಂದು ಬೆಳಿಗ್ಗೆ  ಸಂಗ್ರಹಿಸಲಾದ   101 ಕಟ್ಟಿಗೆ ತುಂಡುಗಳಿಗೆ  ಅಗ್ನಿ  ಸ್ಪರ್ಶ ಬಳಿಕ ವಿಷ್ಣುಮೂರ್ತಿ ದೈವದ ಕೋಲ ನಡೆಯಲಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ಪೊಲೀಸ್ ವಶಕ್ಕೆ

Newsics.com ಕಲಬುರಗಿ : ಅಪಘಾತವನ್ನು ಕೊಲೆ ಯತ್ನ ಎಂದು ಕಥೆ ಕಟ್ಟಿದ್ದ ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​ ರನ್ನ ನಗರ ಠಾಣೆಯ ಪೊಲೀಸರು ಮತ್ತೆ ವಶಕ್ಕೆ...

ನಂದಿನಿ ಹಾಲಿನ ದರ ಮತ್ತೆ ಏರಿಕೆ..!!

Newsics.com ಬೆಂಗಳೂರು :  ರಾಜ್ಯದ ಜನತೆಗೆ ಮತ್ತೊಂದು ದರ ಏರಿಕೆಯ ಬಿಸಿ ಕಾದಿದೆ. ಹೌದು, ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (KMF) ಚಿಂತನೆ ನಡೆಸಿದೆ. ಈ ಕುರಿತು ಜನವರಿಯಲ್ಲಿ...

ಚಿನ್ನ, ಜಮೀನು, ಬಿಎಂಡಬ್ಲ್ಯೂ ಕಾರಿಗೆ ಬೇಡಿಕೆ : ಕೇರಳದ ವೈದ್ಯೆ ಆತ್ಮಹತ್ಯೆ

Newsics.com ಕೇರಳ : ಕೇರಳದ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಸ್ನಾತಕೋತ್ತರ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಆತ್ಮಹತ್ಯೆಗೆ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಮೃತ ವೈದ್ಯಳನ್ನು...
- Advertisement -
error: Content is protected !!