newsics.com
ಠಾಣೆ: ಸಾಮಾಜಿಕ ಜಾಲತಾಣಗಳಲ್ಲಿ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಕುರಿತು ಅವಹೇಳನಕಾರಿ ಪೋಸ್ಟ್ ಹಂಚಿಕೊಂಡಿರುವ ಆರೋಪದ ಮೇಲೆ ಮರಾಠಿ ನಟಿ ಕೆತಕಿ ಚಿತಳೆ ಅವರನ್ನು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪೋಸ್ಟ್ ನಲ್ಲಿ ಶಿವಸೇನೆ ಮತ್ತು ಕಾಂಗ್ರೆಸ್ ಜೊತೆಗೆ ಮಹಾರಾಷ್ಟ್ರದಲ್ಲಿ ಅಧಿಕಾರವನ್ನು ಹಂಚಿಕೊಂಡಿರುವ ಪವಾರ್ ಹೆಸರನ್ನು ಚಿತಳೆ ನಮೂದಿಸಿದ್ದು, ‘ನಿಮಗೆ ನರಕ ಕಾಯುತ್ತಿದೆ’ ಎಂದು ಬರೆಯಲಾಗಿದೆ. ಸ್ವಪ್ನಿಲ್ ನೆಟ್ಕೆ ಅವರು ನೀಡಿರುವ ದೂರಿನ ಆಧಾರದ ಮೇಲೆ ಚಿತಳೆ ಅವರನ್ನು ಬಂಧಿಸಲಾಗಿದೆ.