Newsics.com
ಮುಂಬೈ: ಅಮೆರಿಕದಲ್ಲಿ ಅಧ್ಯಕೀಯ ಚುನಾವಣೆಯ ಮತ ಎಣಿಕೆ ಆರಂಭವಾಗಿರುವಂತೆಯೇ ಮುಂಬೈ ಪೊಲೀಸರು ರಿಪಬ್ಲಿಕ್ ಸುದ್ದಿ ವಾಹಿನಿಯ ಮೇಲೆ ದಾಳಿ ನಡೆಸಿದರು.
ಮುಖ್ಯ ಸಂಪಾದಕ ಅರ್ನಾಬ್ ಗೋ ಸ್ವಾಮಿ ಮನೆಗೆ ಬೆಳಿಗ್ಗೆ ಆರು ಗಂಟೆಗೆ ಪ್ರವೇಶಿಸಿದ ಪೊಲೀಸರು ಪ್ರಾಥಮಿಕ ವಿಚಾರಣೆ ಬಳಿಕ ಅರ್ನಾಬ್ ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡರು.
ಅಮೆರಿಕ ಚುನಾವಣೆಯ ಫಲಿತಾಂಶದ ಪ್ರಸಾರಕ್ಕೆ ಭರದ ಸಿದ್ದತೆ ನಡೆಸಿದ್ದ ರಿಪಬ್ಲಿಕ್ ಸುದ್ದಿ ವಾಹಿನಿಗೆ ಇದು ಭಾರೀ ಹೊಡೆತವಾಗಿತ್ತು. ಅನಿವಾರ್ಯವಾಗಿ ಅಮೆರಿಕ ಚುನಾವಣೆಗಿಂತ ಹೆಚ್ಚಾಗಿ ಅರ್ನಾಬ್ ಬಂಧನ ಸುದ್ದಿ ಯನ್ನು ಪ್ರಸಾರ ಮಾಡಬೇಕಾಗಿ ಬಂತು.
ಇದೇ ವೇಳೆ ಅರ್ನಾಬ್ ಬಂಧನಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಸೇರಿದಂತೆ ಪ್ರಮುಖ ನಾಯಕರು ಬಂಧನವನ್ನು ಖಂಡಿಸಿದ್ದಾರೆ.